ETV Bharat / state

ಆಹಾರ ಸುರಕ್ಷತೆಗೆ ಬೇಕಿದೆ ಇನ್ನೂ ಹೆಚ್ಚಿನ ಆದ್ಯತೆ.. ದಿನಾಂಕ ಮುಗಿದ ಪದಾರ್ಥಗಳನ್ನ ತಿಂದ್ರೇ...

author img

By

Published : Apr 2, 2021, 4:09 PM IST

ಕಳೆದ ವರ್ಷಾರಂಭದಲ್ಲಿ ದೇಶಕ್ಕೆ ಕೊರೊನಾ ಲಗ್ಗೆಯಿಟ್ಟು ಹಲವು ಕ್ಷೇತ್ರಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದವು. ಅದರಲ್ಲೂ‌ ಆಹಾರದ್ಯೋಮಗಳು ತೀವ್ರ ಸಂಕಷ್ಟಕ್ಕೀಡಾಗಿದ್ದು, ಇದೀಗ ಹಂತ ಹಂತವಾಗಿ ಸುಧಾರಿಸಿಕೊಳ್ಳುತ್ತಿವೆ. ‌ ಆದ್ರೆ, ಅನ್​ಲಾಕ್​ ಆರಂಭದಲ್ಲಿ ದಿನಾಂಕ ಮುಗಿದ ಮತ್ತು ಕಳಪೆ ಮಟ್ಟದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಕೆಲವರು ಪ್ರಯತ್ನಿಸಿದ್ದು, ಅಧಿಕಾರಿಗಳು ಅದಕ್ಕೆ ಕಡಿವಾಣ ಹಾಕಿದ್ದಾರೆ.

government should give importance for safety of food
ಆಹಾರ ಸುರಕ್ಷತೆಗೆ ಬೇಕಿದೆ ಇನ್ನೂ ಹೆಚ್ಚಿನ ಆದ್ಯತೆ..ದಿನಾಂಕ ಮುಗಿದ ಆಹಾರ ಪದಾರ್ಥಗಳಿಂದ ದೂರವಿರಿ

ಬಳ್ಳಾರಿ/ಶಿವಮೊಗ್ಗ: ಕೊರೊನಾದಿಂದ ಲಾಕ್‌ಡೌನ್ ಆಗುತ್ತಿದ್ದಂತೆ ಆಹಾರೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಆದರೆ, ಅನ್​ಲಾಕ್​​ ನಂತರ ಕೆಲವರು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಎಸೆದ್ರೆ, ಮತ್ತೆ ಕೆಲವರು ತಿಂಡಿಗಳನ್ನು ಬಿಡಿಬಿಡಿಯಾಗಿ ವಿಂಗಡಿಸಿ ಅದನ್ನು ಮತ್ತೆ ಮಾರಾಟಕ್ಕೆ ಮುಂದಾಗಿದ್ದು ಬಯಲಾಗಿದೆ.

ಇದನ್ನ ಗಮನಿಸಿದ ಬಳ್ಳಾರಿ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ ಮತ್ತು ಹೊಸಪೇಟೆ ತಾಲೂಕಿನ ಅಂಕಿತ ಅಧಿಕಾರಿಗಳು, ವಿಶೇಷ ತಂಡಗಳನ್ನು ರಚಿಸಿ ದಿನಾಂಕ ಮುಗಿದ ಆಹಾರ ಪದಾರ್ಥಗಳು ಮಾರಾಟವಾಗದಂತೆ ನೋಡಿಕೊಳ್ಳಲು ಮುಂದಾದರು.

ಆಹಾರ ಸುರಕ್ಷತೆಗೆ ಬೇಕಿದೆ ಇನ್ನೂ ಹೆಚ್ಚಿನ ಆದ್ಯತೆ!

ಅವರ ಕಾರ್ಯಾಚರಣೆ ಪರಿಣಾಮ ಕಳಪೆ ಗುಣಮಟ್ಟದ ಆಹಾರ‌ ಪದಾರ್ಥ ಮಾರಾಟಕ್ಕೆ ಸಂಬಂಧಿಸಿದಂತೆ ಕೇವಲ 7 ಪ್ರಕರಣ ಪತ್ತೆಯಾಗಿವೆ. ಆದರೆ, ದಿನಾಂಕ ಮುಗಿದ ಆಹಾರ ಪದಾರ್ಥಗಳ ಮಾರಾಟ ಕಂಡು ಬಂದಿಲ್ಲ.

ಶಿವಮೊಗ್ಗದಲ್ಲಿ ಬೇಕರಿ ಉದ್ಯಮ ಹೊಸದಾಗಿ ಆರಂಭಿಸಿದಂತಾಗಿದೆ. ಲಾಕ್​ಡೌನ್​​ ಸಂದರ್ಭ ಎಲ್ಲವೂ ಹಾಳಾಗಿ ಬಹಳ ನಷ್ಟ ಅನುಭವಿಸಿದ್ದೇವೆ ಅಂತಾರೆ ಬೇಕರಿ ಮಾಲೀಕರು.

ಅನ್​ಲಾಕ್​ ನಂತರ ದಿನಾಂಕ ಮುಗಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಒಂದಿಷ್ಟು ಮಂದಿ ಪ್ರಯತ್ನಿಸಿದ್ದರೂ ಕೂಡ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಿದ್ದಾರೆ. ಸಾರ್ವಜನಿಕರು ಕೂಡ ಖರೀದಿ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಿದೆ.

ಬಳ್ಳಾರಿ/ಶಿವಮೊಗ್ಗ: ಕೊರೊನಾದಿಂದ ಲಾಕ್‌ಡೌನ್ ಆಗುತ್ತಿದ್ದಂತೆ ಆಹಾರೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಆದರೆ, ಅನ್​ಲಾಕ್​​ ನಂತರ ಕೆಲವರು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಎಸೆದ್ರೆ, ಮತ್ತೆ ಕೆಲವರು ತಿಂಡಿಗಳನ್ನು ಬಿಡಿಬಿಡಿಯಾಗಿ ವಿಂಗಡಿಸಿ ಅದನ್ನು ಮತ್ತೆ ಮಾರಾಟಕ್ಕೆ ಮುಂದಾಗಿದ್ದು ಬಯಲಾಗಿದೆ.

ಇದನ್ನ ಗಮನಿಸಿದ ಬಳ್ಳಾರಿ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ ಮತ್ತು ಹೊಸಪೇಟೆ ತಾಲೂಕಿನ ಅಂಕಿತ ಅಧಿಕಾರಿಗಳು, ವಿಶೇಷ ತಂಡಗಳನ್ನು ರಚಿಸಿ ದಿನಾಂಕ ಮುಗಿದ ಆಹಾರ ಪದಾರ್ಥಗಳು ಮಾರಾಟವಾಗದಂತೆ ನೋಡಿಕೊಳ್ಳಲು ಮುಂದಾದರು.

ಆಹಾರ ಸುರಕ್ಷತೆಗೆ ಬೇಕಿದೆ ಇನ್ನೂ ಹೆಚ್ಚಿನ ಆದ್ಯತೆ!

ಅವರ ಕಾರ್ಯಾಚರಣೆ ಪರಿಣಾಮ ಕಳಪೆ ಗುಣಮಟ್ಟದ ಆಹಾರ‌ ಪದಾರ್ಥ ಮಾರಾಟಕ್ಕೆ ಸಂಬಂಧಿಸಿದಂತೆ ಕೇವಲ 7 ಪ್ರಕರಣ ಪತ್ತೆಯಾಗಿವೆ. ಆದರೆ, ದಿನಾಂಕ ಮುಗಿದ ಆಹಾರ ಪದಾರ್ಥಗಳ ಮಾರಾಟ ಕಂಡು ಬಂದಿಲ್ಲ.

ಶಿವಮೊಗ್ಗದಲ್ಲಿ ಬೇಕರಿ ಉದ್ಯಮ ಹೊಸದಾಗಿ ಆರಂಭಿಸಿದಂತಾಗಿದೆ. ಲಾಕ್​ಡೌನ್​​ ಸಂದರ್ಭ ಎಲ್ಲವೂ ಹಾಳಾಗಿ ಬಹಳ ನಷ್ಟ ಅನುಭವಿಸಿದ್ದೇವೆ ಅಂತಾರೆ ಬೇಕರಿ ಮಾಲೀಕರು.

ಅನ್​ಲಾಕ್​ ನಂತರ ದಿನಾಂಕ ಮುಗಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಒಂದಿಷ್ಟು ಮಂದಿ ಪ್ರಯತ್ನಿಸಿದ್ದರೂ ಕೂಡ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಿದ್ದಾರೆ. ಸಾರ್ವಜನಿಕರು ಕೂಡ ಖರೀದಿ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.