ಬಳ್ಳಾರಿ: ರಥದ ಗಾಲಿಗೆ ಸಿಲುಕಿ ಭಕ್ತನೊಬ್ಬ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಸುರೇಶ್ (45) ಎಂದು ಗುರುತಿಸಲಾಗಿದೆ. ನಾರದಮುನಿ ಸ್ವಾಮಿಯ ರಥೋತ್ಸವ ಸಾಗುತ್ತಿದ್ದಾಗ ಹಗ್ಗ ಹಿಡಿದುಕೊಂಡು ಸಾಗುತ್ತಿದ್ದ ಈತ ನೂಕಾಟದಲ್ಲಿ ಗಾಲಿಯ ಕೆಳಗೆ ಸಿಲುಕಿದ್ದಾನೆ. ತಕ್ಷಣ ರಥೋತ್ಸವ ಸ್ಥಗಿತಗೊಳಿಸಿ ಅವರನ್ನು ಹೊರ ತೆಗೆಯಲಾಯಿತು. ಚಿಗಟೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕಾಟನ್ಪೇಟೆಯಲ್ಲಿ ಅಡಗಿದ್ದ ಹುಬ್ಬಳ್ಳಿ ಗಲಭೆಕೋರರು ಪೊಲೀಸ್ ವಶಕ್ಕೆ