ETV Bharat / state

ಬಳ್ಳಾರಿಯ ರೈತ ಮುಖಂಡರ ಸಭೆಯಲ್ಲಿ ಡಿಸಿ ನಕುಲ್​​ ಗರಂ - ballary D.C. S.S.Nakul

ಸ್ಥಳೀಯ ಸಮಸ್ಯೆಗಳನ್ನು ಹೇಳಲು ಮುಂದಾದಾಗ ಸಿಪಿಎಂ ಮುಖಂಡ ಹಾಗೂ ಜಿಲ್ಲಾಧಿಕಾರಿ ನಡುವೆ ಮಾತಿನ ಚಕಮಕಿ ನಡೆಯಿತು.

ಬಳ್ಳಾರಿ ಡಿ.ಸಿ.ನಕುಲ್ ಮಾತನಾಡಿದರು.
author img

By

Published : Oct 20, 2019, 11:12 AM IST

ಬಳ್ಳಾರಿ: ನಾವಿಲ್ಲಿ ಬಂದಿರುವುದು ಕೂಗಾಡುವುದಕ್ಕೆ ಅಲ್ಲ. ಸುಮ್ಮನೆ ಕೂಗಾಡಿದ್ರೆ ಏನೂ ಪ್ರಯೋಜನವಿಲ್ಲ. ನೀವು ಎತ್ತಿರೋ ಸಮಸ್ಯೆ ಸ್ಥಳೀಯವಾಗಿವೆ. ಅದನ್ನು ನಾವು ಬಗೆಹರಿಸುತ್ತೇವೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಸಿಪಿಎಂ ಮುಖಂಡನ ಶಿವಶಂಕರ್ ಅವರಿಗೆ ಹೇಳಿದರು.

ರೈತ ಮುಖಂಡರ ಸಭೆ

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರೊಂದಿಗೆ ಜಿಲ್ಲಾ ರೈತ ಮುಖಂಡರ ಸಲಹೆ, ಸೂಚನೆ ಹಾಗೂ ಅಭಿಪ್ರಾಯ ಸಂಗ್ರಹಿಸುವ ಸಭೆಯಲ್ಲಿ ಸಿಪಿಎಂ ಮುಖಂಡ ವಿ.ಎಸ್.ಶಿವಶಂಕರ್ ಹಾಗೂ ಡಿಸಿ ನಕುಲ್​ ನಡುವೆ ಮಾತಿನ ಚಕಮಕಿ ನಡೆಯಿತು.

ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿಲ್ಲ. ಹೊರ-ಒಳ ಹೋಗುವ ದಾಸ್ತಾನನ್ನು ತೂಕ ಮಾಡಲು ವ್ಹೇ ಬ್ರಿಡ್ಜ್ ವ್ಯವಸ್ಥೆ ಮಾಡಿಲ್ಲ ಎಂಬ ಸಣ್ಣಪುಟ್ಟ ಸಮಸ್ಯೆಗಳ ಕುರಿತು ಹೇಳಿದಾಗ, ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ಕೆ.ಮೋಹನ್​​ ಉತ್ತರ ನೀಡಲು ಮುಂದಾದರು. ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದರು.

ವ್ಹೇ ಬ್ರಿಡ್ಜ್ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಕುರಿತು ಹೇಳುವ ಮುನ್ನವೇ ಮಧ್ಯಪ್ರವೇಶಿಸಿದ ಸಿಪಿಎಂ ಮುಖಂಡ ಶಿವಶಂಕರ, ಏರು ಧ್ವನಿಯಲ್ಲೇ ಮಾತಾಡಲು ಆರಂಭಿಸಿದಾಗ ಅದಕ್ಕೆ ಸಿಡಿಮಿಡಿಗೊಂಡ ಡಿಸಿ‌ ನಕುಲ್, ನಾವಿಲ್ಲಿ ಬಂದಿರುವುದು ಕೂಗಾಡಲಿಕ್ಕಲ್ಲ. ನನಗೂ ಕೂಗಾಡಲಿಕ್ಕೆ ಬರುತ್ತೆ.‌ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಬಂದಿದ್ದಾರೆ. ಅವರ ಬಳಿ ಚರ್ಚಿಸೋಣ ಎಂದರು.

ನಮ್ಮಲ್ಲಿ ಒಂದು ವಾಡಿಕೆ ಇದೆ. ರುದ್ರಭೂಮಿಗೆ ಹೋದ ಹೆಣ, ಎಪಿಎಂಸಿ ಮಾರುಕಟ್ಟೆಗೆ ಹೋದ ರೈತನ ದಾಸ್ತಾನು ವಾಪಾಸ್ ಬರೋದಿಲ್ಲ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದ್ರು.

ರೈತನ ಮನೆ ಬಾಗಿಲಿಗೆ ಮಾರುಕಟ್ಟೆ: ಮಾರುಕಟ್ಟೆ ಬಾಗಿಲಿಗೆ ರೈತನ ಬೆಳೆಗಳ ದಾಸ್ತಾನು ಎಂಬಂತಿತ್ತು. ಆದರೆ, ಇನ್ಮುಂದೆ ಅದು ಬದಲಾಗಲಿದೆ. ರೈತನ ಮನೆ ಬಾಗಿಲಿಗೆ ಮಾರುಕಟ್ಟೆ ಎಂಬಂತಾಗಲಿದೆ. ಇದು ನಮ್ಮ ಗುರಿಯಾಗಿದೆ. ರೈತನ ಮನೆ ಬಾಗಿಲಿಗೆ ಮಾರುಕಟ್ಟೆ ಹೋದ್ರೂ ಎಪಿಎಂಸಿ ಮಾರುಕಟ್ಟೆಯ ಕಣ್ಗಾವಲಿನಲ್ಲೇ ವ್ಯವಹಾರ ನಡೆಯಲಿದೆ. ಅದರಲ್ಲಿ ಯಾರಾದರು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಳ್ಳಾರಿ: ನಾವಿಲ್ಲಿ ಬಂದಿರುವುದು ಕೂಗಾಡುವುದಕ್ಕೆ ಅಲ್ಲ. ಸುಮ್ಮನೆ ಕೂಗಾಡಿದ್ರೆ ಏನೂ ಪ್ರಯೋಜನವಿಲ್ಲ. ನೀವು ಎತ್ತಿರೋ ಸಮಸ್ಯೆ ಸ್ಥಳೀಯವಾಗಿವೆ. ಅದನ್ನು ನಾವು ಬಗೆಹರಿಸುತ್ತೇವೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಸಿಪಿಎಂ ಮುಖಂಡನ ಶಿವಶಂಕರ್ ಅವರಿಗೆ ಹೇಳಿದರು.

ರೈತ ಮುಖಂಡರ ಸಭೆ

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರೊಂದಿಗೆ ಜಿಲ್ಲಾ ರೈತ ಮುಖಂಡರ ಸಲಹೆ, ಸೂಚನೆ ಹಾಗೂ ಅಭಿಪ್ರಾಯ ಸಂಗ್ರಹಿಸುವ ಸಭೆಯಲ್ಲಿ ಸಿಪಿಎಂ ಮುಖಂಡ ವಿ.ಎಸ್.ಶಿವಶಂಕರ್ ಹಾಗೂ ಡಿಸಿ ನಕುಲ್​ ನಡುವೆ ಮಾತಿನ ಚಕಮಕಿ ನಡೆಯಿತು.

ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿಲ್ಲ. ಹೊರ-ಒಳ ಹೋಗುವ ದಾಸ್ತಾನನ್ನು ತೂಕ ಮಾಡಲು ವ್ಹೇ ಬ್ರಿಡ್ಜ್ ವ್ಯವಸ್ಥೆ ಮಾಡಿಲ್ಲ ಎಂಬ ಸಣ್ಣಪುಟ್ಟ ಸಮಸ್ಯೆಗಳ ಕುರಿತು ಹೇಳಿದಾಗ, ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ಕೆ.ಮೋಹನ್​​ ಉತ್ತರ ನೀಡಲು ಮುಂದಾದರು. ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದರು.

ವ್ಹೇ ಬ್ರಿಡ್ಜ್ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಕುರಿತು ಹೇಳುವ ಮುನ್ನವೇ ಮಧ್ಯಪ್ರವೇಶಿಸಿದ ಸಿಪಿಎಂ ಮುಖಂಡ ಶಿವಶಂಕರ, ಏರು ಧ್ವನಿಯಲ್ಲೇ ಮಾತಾಡಲು ಆರಂಭಿಸಿದಾಗ ಅದಕ್ಕೆ ಸಿಡಿಮಿಡಿಗೊಂಡ ಡಿಸಿ‌ ನಕುಲ್, ನಾವಿಲ್ಲಿ ಬಂದಿರುವುದು ಕೂಗಾಡಲಿಕ್ಕಲ್ಲ. ನನಗೂ ಕೂಗಾಡಲಿಕ್ಕೆ ಬರುತ್ತೆ.‌ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಬಂದಿದ್ದಾರೆ. ಅವರ ಬಳಿ ಚರ್ಚಿಸೋಣ ಎಂದರು.

ನಮ್ಮಲ್ಲಿ ಒಂದು ವಾಡಿಕೆ ಇದೆ. ರುದ್ರಭೂಮಿಗೆ ಹೋದ ಹೆಣ, ಎಪಿಎಂಸಿ ಮಾರುಕಟ್ಟೆಗೆ ಹೋದ ರೈತನ ದಾಸ್ತಾನು ವಾಪಾಸ್ ಬರೋದಿಲ್ಲ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದ್ರು.

ರೈತನ ಮನೆ ಬಾಗಿಲಿಗೆ ಮಾರುಕಟ್ಟೆ: ಮಾರುಕಟ್ಟೆ ಬಾಗಿಲಿಗೆ ರೈತನ ಬೆಳೆಗಳ ದಾಸ್ತಾನು ಎಂಬಂತಿತ್ತು. ಆದರೆ, ಇನ್ಮುಂದೆ ಅದು ಬದಲಾಗಲಿದೆ. ರೈತನ ಮನೆ ಬಾಗಿಲಿಗೆ ಮಾರುಕಟ್ಟೆ ಎಂಬಂತಾಗಲಿದೆ. ಇದು ನಮ್ಮ ಗುರಿಯಾಗಿದೆ. ರೈತನ ಮನೆ ಬಾಗಿಲಿಗೆ ಮಾರುಕಟ್ಟೆ ಹೋದ್ರೂ ಎಪಿಎಂಸಿ ಮಾರುಕಟ್ಟೆಯ ಕಣ್ಗಾವಲಿನಲ್ಲೇ ವ್ಯವಹಾರ ನಡೆಯಲಿದೆ. ಅದರಲ್ಲಿ ಯಾರಾದರು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಾಗುವುದು ಎಂದರು.

Intro:ಸಿಪಿಎಂ ಮುಖಂಡನ ವಿರುದ್ಧ ಡಿಸಿ ನಕುಲ್ ಗರಂ: ನಾವಿಲ್ಲಿ ಕೂಗಾಡಲಿಕ್ಕಲ್ಲ ಬಂದಿರೋದು..!
ಬಳ್ಳಾರಿ: ನಾವಿಲ್ಲಿ ಕೂಗಾಡಲಿಕ್ಕಲ್ಲ ಬಂದಿರೋದು. ಸುಮ್ಮನೆ ಕೂಗಾಡ್ರೆ ಏನೂ ಪ್ರಯೋಜನವಿಲ್ಲ. ನೀವು ಎತ್ತಿರೋ ಸಮಸ್ಯೆ ಲೋಕಲ್ ಆಗಿದೆ. ಅದನ್ನ ನಾವು ಬಗೆಹರಿಸುತ್ತೇವೆ. ಇವಾಗ ನನ್ನ ಗಮನಕ್ಕೆ ತಂದೀರಿ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಸಿಪಿಎಂ ಮುಖಂಡನ ವಿರುದ್ಧ ಗರಂ ಆದರು.
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರೊಂದಿಗೆ ಜಿಲ್ಲಾ ರೈತ ಮುಖಂಡರ ಸಲಹೆ, ಸೂಚನೆ ಹಾಗೂ ಅಭಿಪ್ರಾಯ ಸಂಗ್ರಹಿಸುವ ಸಭೆಯಲ್ಲಿ ಏರುಧ್ವನಿ ಯಲ್ಲೇ ಮಾತನಾಡಲು ಶುರುಮಾಡಿದ ಸಿಪಿಎಂ ಮುಖಂಡ ವಿ.ಎಸ್.ಶಿವಶಂಕರ ಅವರು, ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಸಿಕ್ಯಾಮರಾ ಅಳವಡಿಸಿಲ್ಲ. ಹೊರ - ಒಳ ಹೋಗುವ ದಾಸ್ತಾನನ್ನು ತೂಕ ಮಾಡಲು ವ್ಹೇ ಬ್ರಿಡ್ಜ್ ವ್ಯವಸ್ಥೆ ಮಾಡಿಲ್ಲ ಎಂಬ ಸಣ್ಣಪುಟ್ಟ ಸಮಸ್ಯೆಗಳ ಕುರಿತ ಸಭೆಯ ಗಮನ ಸೆಳೆ ದಾಗ, ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ಕೆ.ಮೋಹನ ಅವರು, ಉತ್ತರ ನೀಡಲು ಮೇಲೆದ್ದರು. ಸಿಸಿಕ್ಯಾಮರಾಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ವ್ಹೇ ಬ್ರಿಡ್ಜ್ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಕುರಿತು ಹೇಳುವ ಮುನ್ನವೇ ಮಧ್ಯೆ ಪ್ರವೇಶಿಸಿದ ಸಿಪಿಎಂ ಮುಖಂಡ ಶಿವಶಂಕರ, ಏರು ಧ್ವನಿಯಲ್ಲೇ ಮಾತಾಡಲು ಶುರು ಮಾಡಿದ್ರು. ಅದಕ್ಕೆ ಸಿಡಿ ಮಿಡಿಗೊಂಡ ಡಿಸಿ‌ ನಕುಲ್, ನಾವಿಲ್ಲಿ ಕೂಗಾಡಲಿಕ್ಕಲ್ಲ ಬಂದಿರೋದು. ನನಗೂ ಕೂಗಾಡಲಿಕ್ಕೆ ಬರುತ್ತೆ.‌ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಬಂದಿದ್ದಾರೆ. ಅವ್ರು ಅವರ ವರ್ಸನ್ ಹೇಳಲಿ. ನೀವು ನಿಮ್ಮ ವರ್ಸನ್ ಹೇಳಲಿ. ನೀವು ತಂದಿರೋ ಸಮಸ್ಯೆಗಳು ಲೋಕಲ್ ಆಗಿವೆ. ಹಂತಹಂತವಾಗಿ ಬಗೆಹರಿಸು ವುದಾಗಿ ಹೇಳಿದ್ರು.
ಮೇಲಾಗಿ, ನೀವು ಈ ಸಮಸ್ಯೆಗಳನ್ನು ಇವಾಗ ನನ್ನ ಗಮನಕ್ಕೆ ತಂದೀರಿ.‌ ನಿಮ್ಮದೇನಿದೆ ಅಂತಾ ನನಗೆ ಕೊಡಿ. ಅದನ್ನು ಪರಿ ಶೀಲಿಸಿ‌ ಬಗೆಹರಿಸುವೆ. ಅಷ್ಟೇಲ್ಲಾ ಹೇಳಿದ್ರೂ ಕೂಡ ಏರುಧ್ವನಿ ಯಲ್ಲೇ ಮಾತನಾಡೋ ಮೂಲಕ ಶಿವಶಂಕರ ಅವರು ತಮ್ಮ ನೈಜ ವರ್ತನೆಯನ್ನು ಪ್ರದರ್ಶನ ಮಾಡಿದ್ರು. ನಾನು ನಿಮಗೆ ಕೊಡಲ್ಲ. ಸಿಎಂ ಯಡಿಯೂರಪ್ಪನವ್ರಿಗೆ ಕೊಡುವೆ. ಅಲ್ಲಿ
ಕೊಟ್ರೆ ನಮ್ಮ ಕಚೇರಿಗೆ ಬರೋದು ಎರಡು‌‌ ತಿಂಗಳಾಗುತ್ತೆ. ಆಗಾಗಿ, ಇಲ್ಲೇ ಕೊಡಿ. ಯಾಕೆಂದ್ರೆ ಸ್ಥಳೀಯ ಸಮಸ್ಯೆಗಳಷ್ಟೇ?. ಇಲ್ಲೇ ಬಗೆಹರಿಸಬಹುದು ಎಂದರು.
ನನಗೆಲ್ಲ ಗೊತ್ತು ರೀ...: ಹತ್ತು ಕ್ವಿಂಟಾಲ್ ಶೇಂಗಾ ಬೀಜ ಮಳೆ ನೀರಿಗೆ ಕೊಚ್ಚಿಹೋಗಿದೆ ಎಂದು ಏರುಧ್ವನಿಯಲ್ಲೇ ಸಿಪಿಎಂ ನ ಮುಖಂಡ ಶಿವಶಂಕರ ಮಾತನಾಡಿದಾಗ, ನನಗೆಲ್ಲಾ ಗೊತ್ತು ರೀ. ಸುಮ್ಮನೆ ಕೂಡಿ ಎಂದು ಗದರಿದ ಪ್ರಸಂಗವು ನಡೆಯಿತು.



Body:ರೂದ್ರಭೂಮಿಗೆ ಹೋದ ಹೆಣ; ಮಾರುಕಟ್ಟೆಗೆ ಹೋದ ದಾಸ್ತಾನು ವಾಪಾಸ್ ಬರಲ್ಲ: ನಮ್ಮಲ್ಲಿ ಒಂದು ವಾಡಿಕೆ ಇದೆ. ಅದೇನು ಅಂದ್ರೆ. ರುದ್ರಭೂಮಿಗೆ ಹೋದ ಹೆಣ; ಎಪಿಎಂಸಿ ಮಾರುಕಟ್ಟೆಗೆ ಹೋದ ರೈತನ ದಾಸ್ತಾನು ವಾಪಾಸ್ ಬರೋ ದಿಲ್ಲ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅಭಿಪ್ರಾಯಪಟ್ಟರು.
ರೈತನ ಮನೆ ಬಾಗಿಲಿಗೆ ಮಾರುಕಟ್ಟೆ: ಮಾರುಕಟ್ಟೆ ಬಾಗಿಲಿಗೆ ರೈತನ ಬೆಳೆಗಳ ದಾಸ್ತಾನು ಎಂಬಂತಿತ್ತು. ಆದರೆ, ಇನ್ಮುಂದೆ ಅದು ಬದಲಾಗಲಿದೆ. ರೈತನ ಮನೆ ಬಾಗಿಲಿಗೆ ಮಾರುಕಟ್ಟೆ ಎಂಬಂತಾಗಲಿದೆ. ಇದು ನಮ್ಮ ಗುರಿಯಾಗಿದೆ. ರೈತನ ಮನೆ ಬಾಗಿಲಿಗೆ ಮಾರುಕಟ್ಟೆ ಹೋದ್ರೂ ಎಪಿಎಂಸಿ ಮಾರುಕಟ್ಟೆಯ ಕಣ್ಗಾವಲಿನಲ್ಲೇ ನಡೆಯಲಿದೆ. ಅದರಲ್ಲಿ ಯಾರಾದ್ರೂ ತಪ್ಪು ಮಾಡಿದ್ರೆ ಕೋಳ ತೊಡಿಸೋಣ. ಅದು ಬೇರೆ ಮಾತು ಎಂದರು ಹನುಮನಗೌಡ್ರು.



Conclusion:ತುಂಗಭದ್ರ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಮಾತನಾಡಿ, ಎಪಿಎಂಸಿ ಮಾರುಕಟ್ಟೆ ಸಮಿತಿಯ ನಿರ್ದೇಶಕರ ಹಾಗೂ ದಲ್ಲಾಳಿಗಳ ಮತ್ತು ವರ್ತಕರ ಸಭೆಯನ್ನು ಜಿಲ್ಲಾಡಳಿತ ಕೂಡಲೇ ಕರೆಯಬೇಕೆಂದು ಮನವಿ‌ ಮಾಡಿಕೊಂಡರು.
ಜಿಲ್ಲಾ ಕೃಷಿ ಇಲಾಖೆ ಜಂಟಿ‌ ನಿರ್ದೇಶಕ ಡಾ.ಮಲ್ಲಿಕಾರ್ಜುನ, ರೈತರಾದ ಜಾಲಿಹಾಳು ಶ್ರೀಧರಗೌಡ, ಶಾನವಾಸಪುರ ಶರಣ ಬಸವನಗೌಡ, ದಿವಾಕರಗೌಡ ಸೇರಿದಂತೆ ‌ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

KN_BLY_2_KRUSHI_BELE_AYOGADA_PRESIDENT_MEETING_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.