ETV Bharat / state

ಬಳ್ಳಾರಿ: ವೇದಾವತಿ ನದಿಯಲ್ಲಿ ಪ್ರಾಣ ಭೀತಿಗೆ ಸಿಲುಕಿದ್ದ 24 ಜನರ ರಕ್ಷಣೆ - Etv Bharat Kannada

ಹೂವು ಕೀಳಲು ಹೋಗಿದ್ದ ಸಂದರ್ಭದಲ್ಲಿ ನದಿಯಲ್ಲಿ ದಿಢೀರ್ ನೀರಿನ ಹರಿವು ಹೆಚ್ಚಾಗಿದ್ದು ಪ್ರಾಣ ಭೀತಿಯಲ್ಲಿದ್ದ 24 ಜನರನ್ನು ರಕ್ಷಣೆ ಮಾಡಲಾಗಿದೆ.

bly_01_Rescue_vis01.mp4
ವೇದಾವತಿ ನದಿಯಲ್ಲಿ ಸಿಲುಕು ಭೀತಿಯಲ್ಲದ್ದ 24 ಜನರ ರಕ್ಷಣೆ
author img

By

Published : Aug 2, 2022, 6:43 PM IST

ಬಳ್ಳಾರಿ: ತೋಟದಲ್ಲಿ ಹೂವು ಕೀಳಲು ಹೋಗಿ ನದಿಯಲ್ಲಿ ಸಿಲುಕಿಕೊಳ್ಳುವ ಭೀತಿಯಲ್ಲಿದ್ದ 24 ಜನರನ್ನು ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿಯ ತಂಡ ರಕ್ಷಿಸಿದೆ. ಈ ಘಟನೆ ತಾಲೂಕಿನ ವೈ.ಕಗ್ಗಲ್ ಗ್ರಾಮದಲ್ಲಿ ನಡೆದಿದೆ. ವೇದಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದುದಕ್ಕೆ ಕಗ್ಗಲ್ ಗ್ರಾಮದ ಜನರು ನದಿ ದಾಟಿ ಹೂವು ಕೀಳುವುದಕ್ಕೆ ತೋಟಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ದಿಢೀರ್‌ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ನದಿ ದಾಟಲಾಗದೆ ಜನರು ಜೀವಭಯದಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆ ಪಿ.ಡಿ.ಹಳ್ಳಿ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಬೋಟ್‌ ಮೂಲಕ ಜನರನ್ನು ರಕ್ಷಿಸಿದರು.

ನದಿಯಲ್ಲಿ ಸಿಲುಕುವ ಭೀತಿಯಲ್ಲಿದ್ದ 24 ಜನರ ರಕ್ಷಣೆ

ಇದನ್ನೂ ಓದಿ: ಆನೇಕಲ್‌: ಕುಡಿದ ಮತ್ತಿನಲ್ಲಿ ಮಹಿಳೆಯ‌ ಕೊಲೆಗೈದ ವ್ಯಕ್ತಿ

ಬಳ್ಳಾರಿ: ತೋಟದಲ್ಲಿ ಹೂವು ಕೀಳಲು ಹೋಗಿ ನದಿಯಲ್ಲಿ ಸಿಲುಕಿಕೊಳ್ಳುವ ಭೀತಿಯಲ್ಲಿದ್ದ 24 ಜನರನ್ನು ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿಯ ತಂಡ ರಕ್ಷಿಸಿದೆ. ಈ ಘಟನೆ ತಾಲೂಕಿನ ವೈ.ಕಗ್ಗಲ್ ಗ್ರಾಮದಲ್ಲಿ ನಡೆದಿದೆ. ವೇದಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದುದಕ್ಕೆ ಕಗ್ಗಲ್ ಗ್ರಾಮದ ಜನರು ನದಿ ದಾಟಿ ಹೂವು ಕೀಳುವುದಕ್ಕೆ ತೋಟಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ದಿಢೀರ್‌ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ನದಿ ದಾಟಲಾಗದೆ ಜನರು ಜೀವಭಯದಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆ ಪಿ.ಡಿ.ಹಳ್ಳಿ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಬೋಟ್‌ ಮೂಲಕ ಜನರನ್ನು ರಕ್ಷಿಸಿದರು.

ನದಿಯಲ್ಲಿ ಸಿಲುಕುವ ಭೀತಿಯಲ್ಲಿದ್ದ 24 ಜನರ ರಕ್ಷಣೆ

ಇದನ್ನೂ ಓದಿ: ಆನೇಕಲ್‌: ಕುಡಿದ ಮತ್ತಿನಲ್ಲಿ ಮಹಿಳೆಯ‌ ಕೊಲೆಗೈದ ವ್ಯಕ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.