ಬೆಳಗಾವಿ : ಕೊರೊನಾಗೆ ಹೆದರಿ ಸಿಟಿಯಿಂದ ಹಳ್ಳಿಗಳತ್ತ ಜನರು ವಲಸೆ ಬರುತ್ತಿರುವ ಹಿನ್ನೆಲೆ ಸಿಟಿ ಜನರು ಹಳ್ಳಿಗಳಿಗೆ ಬರುತ್ತಿರುವುದನ್ನು ವಿರೋಧಿಸಿದ ರೈತನ ವಿಡಿಯೋವೊಂದು ವೈರಲ್ ಆಗಿದೆ. ಕೊರೊನಾಗೆ ಹೆದರಿ ಗ್ರಾಮೀಣ ಪ್ರದೇಶಕ್ಕೆ ಬರುವ ಸಿಟಿ ಜನರನ್ನು ಈ ವಿಡಿಯೋದಲ್ಲಿ ರೈತರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೈಲಹೊಂಗಲ ತಾಲೂಕಿನ ರೈತ ಕೊರೊನಾ ವೈರಸ್ ಹಿನ್ನೆಲೆ ಹೆದರಿ ಗ್ರಾಮೀಣ ಪ್ರದೇಶಕ್ಕೆ ಬರುತ್ತಿರುವ ಯುವಕರನ್ನು ವಿರೋಧಿಸಿ ಹೊಲದಲ್ಲಿ ನಿಂತು ಮಾತನಾಡಿದ್ದಾರೆ.
ಡಾ.ರಾಜಕುಮಾರ್ ಹಾಡು ನೆನಪಿಸಿಕೊಂಡು ಹಳ್ಳಿಗಳತ್ತ ಮುಖ ಮಾಡುತ್ತಿರುವ ಸಿಟಿ ಜನರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಣ್ಣಾವ್ರ ಆಕಸ್ಮಿಕ ಚಿತ್ರದ ಹಾಡಿನ ಸಿಟಿ ಜನರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ಯಾಗ್ ಎಸೆದು ಆಕ್ರೋಶಭರಿತವಾಗಿ ಗದ್ದೆಯಲ್ಲಿ ನಿಂತು ಮಾತನಾಡಿದ್ದಾರೆ.