ETV Bharat / state

ಅಂದು ಶೌಚಾಲಯ, ಇಂದು ಗ್ರಂಥಾಲಯ... ಯುವಕರ ಪರಿಸರ ಕಾಳಜಿ

author img

By

Published : Apr 4, 2019, 9:01 AM IST

ರಬಕವಿ- ಬನಹಟ್ಟಿ ತಾಲೂಕಿನ ಹೊಸೂರಿನ ಹರಿಜನಕೇರಿಯಲ್ಲಿ ನಿರುಪಯುಕ್ತ ಶೌಚಾಲಯವನ್ನೇ ಸ್ವಚ್ಛಗೊಳಿಸಿ ಗ್ರಂಥಾಲಯದ ರೂಪ ಕೊಟ್ಟಿದ್ದಾರೆ ಯುವಕರು.  ಜ್ಞಾನ ವೃದ್ಧಿಸಿಕೊಳ್ಳುವುದರ ಜೊತೆಗೆ ನೂರಾರೂ ಬಡ ಮಕ್ಕಳಿಗೆ ನಿತ್ಯ ಪಾಠ ಹೇಳುತ್ತಾ ಇಲ್ಲಿಯ ಯುವಕರು ಇತರೆ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.

ಶೌಚಾಲಯ- ಗ್ರಂಥಾಲಯ

ಬಾಗಲಕೋಟೆ: ವಿದ್ಯೆ ಕಲಿಯಲು ನಿರ್ಧಿಷ್ಟವಾದ ಸ್ಥಳ ಬೇಕೆಂದೇನಿಲ್ಲ. ಮನಸ್ಸೊಂದಿದ್ದರೆ ಎಲ್ಲಿ ಬೇಕಾದರೂ ಓದಿ ಸಾಧನೆ ಮಾಡಬಹುದು ಎಂಬುದನ್ನು ಹೊಸೂರು ಯುವಕರು ಮಾಡಿ ತೋರಿಸಿದ್ದಾರೆ.

ಶೌಚಾಲಯ ಬಂದ್​ ಮಾಡಿ ಬೇರೆ ಸುಸಜ್ಜಿತವಾದ ಶೌಚಾಲಯ ನಿರ್ಮಿಸಿದ್ದರಿಂದ ಇದು ನಿರುಪಯುಕ್ತವಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಇದನ್ನು ಮನಗಂಡ ಸ್ಥಳೀಯ ಯುವಕರು ಸಣ್ಣಪುಟ್ಟ ದುರಸ್ತಿಗಳನ್ನು ಮಾಡಿ, ಸ್ವಚ್ಛಗೊಳಿಸಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ನಿತ್ಯ ಓದಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ.

Library
ಶೌಚಾಲಯ- ಗ್ರಂಥಾಲಯ

ಶೌಚಾಲಯವೆಂದರೆ ಮೂಗುಮುರಿಯುವವರ ನಡುವೆ ಅಸಹ್ಯ ಪಟ್ಟುಕೊಳ್ಳದೆ ಅದನ್ನೇ ಜ್ಞಾನಾರ್ಜನೆ ಕೇಂದ್ರವನ್ನಾಗಿ ರೂಪಿಸಿದ್ದಾರೆ. ಬಿಎಡ್ ಮುಗಿಸಿದ ವಿದ್ಯಾವಂತ ಯುವಕರು ತಮ್ಮ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ನಿತ್ಯ ಪಾಠ ಮಾಡುತ್ತಾರೆ. ಪ್ರತಿ ಭಾನುವಾರ ಮನರಂಜನೆ ಮೂಲಕ ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆಗಳ ಕಡೆ ಒಲವು ಮೂಡಿಸುತ್ತಿದ್ದಾರೆ. ಇದರ ಜೊತೆಗೆ ಪರಿಸರದ ಬಗ್ಗೆ ಅರಿವು ಸಹ ಮೂಡಿಸಲಾಗುತ್ತಿದೆ.

ಕೆಲವೇ ದಾನಿಗಳು ಮಾತ್ರ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಉಡುಗರೆಯಾಗಿ ನೀಡಿದ್ದಾರೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಇವು ಸಾಲುವುದಿಲ್ಲ. ಒಂದು ದಿನ ಪತ್ರಿಕೆ ಮಾತ್ರವೇ ನಿತ್ಯ ಬರುತ್ತದೆ. ಹೆಚ್ಚಿನ ಕೊಡುಗೆ ನೀಡಲು ಯಾರದರೂ ಮುಂದೆ ಬಂದರೆ ತುಂಬಾ ಅನುಕೂಲವಾಗುತ್ತದೆ ಎನ್ನುತ್ತಾರೆ ಯುವಕರು.

ಬಾಗಲಕೋಟೆ: ವಿದ್ಯೆ ಕಲಿಯಲು ನಿರ್ಧಿಷ್ಟವಾದ ಸ್ಥಳ ಬೇಕೆಂದೇನಿಲ್ಲ. ಮನಸ್ಸೊಂದಿದ್ದರೆ ಎಲ್ಲಿ ಬೇಕಾದರೂ ಓದಿ ಸಾಧನೆ ಮಾಡಬಹುದು ಎಂಬುದನ್ನು ಹೊಸೂರು ಯುವಕರು ಮಾಡಿ ತೋರಿಸಿದ್ದಾರೆ.

ಶೌಚಾಲಯ ಬಂದ್​ ಮಾಡಿ ಬೇರೆ ಸುಸಜ್ಜಿತವಾದ ಶೌಚಾಲಯ ನಿರ್ಮಿಸಿದ್ದರಿಂದ ಇದು ನಿರುಪಯುಕ್ತವಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಇದನ್ನು ಮನಗಂಡ ಸ್ಥಳೀಯ ಯುವಕರು ಸಣ್ಣಪುಟ್ಟ ದುರಸ್ತಿಗಳನ್ನು ಮಾಡಿ, ಸ್ವಚ್ಛಗೊಳಿಸಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ನಿತ್ಯ ಓದಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ.

Library
ಶೌಚಾಲಯ- ಗ್ರಂಥಾಲಯ

ಶೌಚಾಲಯವೆಂದರೆ ಮೂಗುಮುರಿಯುವವರ ನಡುವೆ ಅಸಹ್ಯ ಪಟ್ಟುಕೊಳ್ಳದೆ ಅದನ್ನೇ ಜ್ಞಾನಾರ್ಜನೆ ಕೇಂದ್ರವನ್ನಾಗಿ ರೂಪಿಸಿದ್ದಾರೆ. ಬಿಎಡ್ ಮುಗಿಸಿದ ವಿದ್ಯಾವಂತ ಯುವಕರು ತಮ್ಮ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ನಿತ್ಯ ಪಾಠ ಮಾಡುತ್ತಾರೆ. ಪ್ರತಿ ಭಾನುವಾರ ಮನರಂಜನೆ ಮೂಲಕ ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆಗಳ ಕಡೆ ಒಲವು ಮೂಡಿಸುತ್ತಿದ್ದಾರೆ. ಇದರ ಜೊತೆಗೆ ಪರಿಸರದ ಬಗ್ಗೆ ಅರಿವು ಸಹ ಮೂಡಿಸಲಾಗುತ್ತಿದೆ.

ಕೆಲವೇ ದಾನಿಗಳು ಮಾತ್ರ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಉಡುಗರೆಯಾಗಿ ನೀಡಿದ್ದಾರೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಇವು ಸಾಲುವುದಿಲ್ಲ. ಒಂದು ದಿನ ಪತ್ರಿಕೆ ಮಾತ್ರವೇ ನಿತ್ಯ ಬರುತ್ತದೆ. ಹೆಚ್ಚಿನ ಕೊಡುಗೆ ನೀಡಲು ಯಾರದರೂ ಮುಂದೆ ಬಂದರೆ ತುಂಬಾ ಅನುಕೂಲವಾಗುತ್ತದೆ ಎನ್ನುತ್ತಾರೆ ಯುವಕರು.

Intro:Body:



ಶೌಚಾಲಯವೇ ಈ ಮಕ್ಕಳಿಗೆ ಜ್ಞಾನ ದೇಗುಲ ...!

* ಶೌಚಾಲಯವನ್ನೇ ಗ್ರಂಥಾಲಯವನ್ನಾಗಿಸಿದ ಯುವಕರು

* ಮಕ್ಕಳಲ್ಲಿ ಪರಿಸರ ಕಾಳಜಿ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ

* ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ವಿನಂತಿ 

 

ಬಾಗಲಕೋಟೆ-- ವಿದ್ಯೆ ಕಲಿಯಲು ನಿರ್ಧಿಷ್ಠವಾದ ಸ್ಥಳ ಬೇಕೆಂದೆನಿಲ್ಲ ಮನಸ್ಸೊಂದಿದ್ದರೆ ಎಲ್ಲಿ ಬೇಕಾದರೂ ಓದಿ ಸಾಧನೆ ಮಾಡಬಹುದು ಎಂಬುದನ್ನು ರಬಕವಿ-ಬನಹಟ್ಟಿ ತಾಲೂಕಿನ ಹೊಸೂರನ ಹರಿಜನಕೇರಿಯಲ್ಲಿನ ನಗರಸಭೆಯ ನಿರುಪಯುಕ್ತ ಶೌಚಾಲಯವನ್ನೇ ಸ್ವಚ್ಛಗೊಳಿಸಿ ಗ್ರಂಥಾಲಯವನ್ನಾಗಿಸಿಕೊಂಡು ಜ್ಞಾನ ವೃದ್ಧಿಸಿಕೊಳ್ಳುವುದರ ಜೊತೆಗೆ ನೂರಾರೂ ಬಡ ಮಕ್ಕಳಿಗೆ ನಿತ್ಯ ಪಾಠ ಹೇಳುತ್ತಾ ಇಲ್ಲಿಯ ಯುವಕರು ಮಾದರಿಯಾಗಿದ್ದಾರೆ.

    ಇತ್ತೀಚಿಗೆ ನಗರಭೆಯವರು ಇಲ್ಲಿನ ಶೌಚಾಲಯವನ್ನು ಬಂದ ಮಾಡಿ ಬೇರೆ ಸುಸಜ್ಜಿತವಾದ ಶೌಚಾಲಯವನ್ನು ನಿರ್ಮಿಸಿದ್ದರಿಂದ ಶೌಚಾಲಯ ನಿರುಪಯುಕ್ತವಾಗಿ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿತ್ತು. ಅದನ್ನು ಮನಗಂಡ ಇಲ್ಲಿನ ಸ್ಥಳಿಯ ವಿದ್ಯಾವಂತ ಯುವಕರ ತಂಡ ಶ್ರಮದಾನದಿಂದ ಸಣ್ಣ ಪುಟ್ಟ ದುರಸ್ತಿಗಳನ್ನು ಮಾಡಿ, ಸ್ವಚ್ಛ ಮಾಡಿಕೊಂಡು ನಿತ್ಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿಕೊಳ್ಳಲು ಅನುಕೂಲವಾಗುವಂತೆ ಮಾಡಿಕೊಂಡಿದ್ದಾರೆ. ಶೌಚಾಲಯವೆಂದು ಹೆಸಿಗೆ ಪಟ್ಟುಕೊಳ್ಳದೇ ಅದನ್ನೇ ಒಂದು ಸವಾಲಾಗಿ ಸ್ವೀಕರಿಸಿ ಇಂದು ಅದನ್ನು ವಿದ್ಯಾ ಕೇಂದ್ರವನ್ನಾಗಿ ರೂಪಿಸಿದ್ದಾರೆ. ಇಲ್ಲಿ ಬಿಎಡ್ ಮುಗಿಸಿದ ಕೆಲವು ಜನ ವಿದ್ಯಾರ್ಥಿಗಳಿದ್ದು ಅವರು ಕೂಡಾ ದಿನ ನಿತ್ಯ ಮಕ್ಕಳಿಗೆ ಉಚಿತವಾಗಿ ಪಾಠ ಹೇಳುವುದರೊಂದಿಗೆ ಪ್ರತಿ ರವಿವಾರ ಮಕ್ಕಳಿಗೆ ಮನರಂಜನೆ ಮೂಲಕ ವಿದ್ಯಾರ್ಥಿಗಳನ್ನು ಸೆಳೆದಿದ್ದಾರೆ. ಅಲ್ಲದೇ ಅವರಿಗೆ ಪರಿಸರ ಕುರಿತು ಕಾಳಜಿ ಹಾಘೂ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. 

    ಪ್ರತಿ ರವಿವಾರ 50 ರಿಂದ 60 ಜನ ಶಾಲಾ ಮಕ್ಕಳು ಹಾಗೂ ಓಣಿಯ ಜನರನ್ನು ಕೂಡಿಸಿಕೊಂಡು ನಗರ ಸ್ವಚ್ಛತೆಯನ್ನು ಕೂಡಾ ಮಾಡುತ್ತೇವೆ. ನಗರದ ವಿವಿದೆಡೆ ಅನೇಕ ಗಿಡಗಳನ್ನು ಹಚ್ಚಿದ್ದೇವೆ. 

    ಈ ಗ್ರಂಥಾಲಯಕ್ಕೆ ಬರಲು ಮೊದಲು ಸರಿಯಾದ ಕಾಲು ದಾರಿ ಸಹಿತ ಇರಲಿಲ್ಲ. ಈಗ ಅದನ್ನು ಕೂಡಾ ಸ್ವಚ್ಛ ಮಾಡಿ ಸುಗಮಗೊಳಿಸಿದ್ದೇವೆ. ಆದರೆ ಇದರ ಪಕ್ಕದಲ್ಲಿರುವ ಚರಂಡಿ ನೀರು ಸರಿಯಾಗಿ ಹರಿಯದೇ ದಿನನಿತ್ಯ ಸೋಳ್ಳೆಗಳ ಕಾಟ ವೀಪರೀತವಾಗಿದೆ. ಆದರೂ ವಿದ್ಯಾರ್ಥಿಗಳು ಶೌಚಾಲಯದ ವಿದ್ಯುತ್‍ನ್ನು ಬಳಸಿ ರಾತ್ರಿ 12 ಗಂಟೆವರೆಗೆ ಪರೀಕ್ಷಾ ತಯಾರಿ ನಡೆಸುತ್ತಾರೆ. 

    ಕೆಲವು ದಾನಿಗಳು ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿದ್ದಾರೆ. ಅವುಗಳನ್ನು ಇಲ್ಲಿ ಬರುವ ವಿದ್ಯಾರ್ಥಿಗಳು ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿ ಇಂದು ದಿನಪತ್ರಿಕೆ ಮಾತ್ರ ಬರುತ್ತದೆ. ದಾನಿಗಳು ಯಾರಾದರೂ ಇಲ್ಲಿಯ ಯುವಕರು ಸ್ಥಾಪಿಸಿದ ಗ್ರಂಥಾಲಯಕ್ಕೆ ಪುಸ್ತಕಗಳು, ದಿನಪತ್ರಿಕೆಗಳನ್ನು ಒದಗಿಸಿದ್ದಲ್ಲಿ ತುಂಬಾ ಅನುಕೂಲವಾಗುತ್ತದೆ. ಇದಕ್ಕೆ ಮೇಲ್ಛಾವಣಿ ಸರಿಯಾಗಿಲ್ಲ. ಸುತ್ತ ಮುತ್ತಲೀನ ಪರಿಸರದಲ್ಲಿ ಚರಂಡಿ ನೀರು ನಿಲ್ಲುತ್ತಿದ್ದು ನಗರಸಭೆಯವರು ಇದರ ಕುರಿತು ಹೆಚ್ಚಿನ ಗಮನ ಹರಿಸಿ ಸಮಸ್ಯೆ ನಿವಾರಿಸಿಕೊಡಬೇಕು ಎನ್ನುತ್ತಾರೆ ಯುವಕರು. 

    ಇದಕ್ಕೆಲ್ಲ ಇಲ್ಲಿನ ಕಾಡೇಶ ಇಂಗಳಗಿ, ಶಿವರಾಜ ಕೊಣ್ಣೂರ, ರವಿ ಜಗದಾಳ, ಮಂಜು ಡಾಳಗೋಳ, ರಾಘವೇಂದ್ರ ಇಂಗಳಗಾಂವಿ, ಶ್ರೀದೇವಿ ಗುಟಿ, ರುಕ್ಷ್ಮಿಣಿ ಮಿಳ್ಳಿ, ಚಂದು ಮಳ್ಳಿ ಸೇರಿದಂತೆ ಅನೇಕ ಯುವಕರು ಶೌಚಾಲಯವನ್ನೇ ಸ್ವಚ್ಛವಾಗಿಸಿ ಸುಂದರ ಗ್ರಂಥಾಲಯ ನಿರ್ಮಾಣ ಮಾಡಿ ಇತರರರಿಗೆ ಮಾದರಿಯಾಗಿದ್ದಾರೆ. 

    ನಮ್ಮದ್ದು ದೊಡ್ಡ ಬೇಡಿಕೆ ಏನಿಲ್ಲ. ಈ ಜಾಗದಲ್ಲಿ ನಮಗೆ ಓದಲು ಅನುಕೂಲಮಾಡಿ ಕೊಡಬೇಕು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದು ಒಂದು ಊರುಗೋಲಾದರೆ ಸಾಕು ಎನ್ನುತ್ತಾರೆ  ಎನ್ನುವ ಯುವಕರ ತಂಡ ಶಿಕ್ಷಣದ ಜೊತೆ ಪರಿಸರ ಕಾಳಜಿ ಹಾಗೂ ಸ್ವಚ್ಛತೆಯ ಮಹತ್ವವನ್ನು ಮಕ್ಕಳಿಗೆ ತಿಳಿಸುತ್ತಿರುವುದು ನಿಜಕ್ಕೂ ಶ್ಲ್ಯಾಘನೀಯವೇ ಸರಿ.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.