ಬೆಂಗಳೂರು: ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡ ಕ್ಷಣಮಾತ್ರದಲ್ಲಿ ಬೈಕ್ನಲ್ಲಿ ಬಂದ ಕಳ್ಳರ ತಂಡ ಲಕ್ಷಾಂತರ ರೂಪಾಯಿ ದುಡ್ಡನ್ನು ಎಗರಿಸಿದೆ.
ಇಲ್ಲಿನ ವಿಜ್ಞಾನ ನಗರದ ಮುಖ್ಯ ರಸ್ತೆಯಲ್ಲಿರುವ ಬ್ಯಾಂಕ್ನಿಂದ ಸಂಜಯಕುಮಾರ್ ಎಂಬುವವರು ಡಿಸೆಂಬರ್ 24ರಂದು ₹ 4 ಲಕ್ಷ ಹಣ ಡ್ರಾ ಮಾಡಿದ್ದಾರೆ. ನಂತರ ₹ 50 ಸಾವಿರ ಜೇಬಿನಲ್ಲಿಟ್ಟು, ಉಳಿದ ಹಣವನ್ನು ದ್ವಿಚಕ್ರ ವಾಹನದಲ್ಲಿ ಇಟ್ಟಿದ್ದಾರೆ. ಇದನ್ನೇ ಕಾಯುತ್ತಿದ್ದ ಕಳ್ಳರು ಅವರ ಬೆನ್ನುಬಿದ್ದಿದ್ದಾರೆ. ಕೊಂಚ ದೂರದಲ್ಲಿನ ಅಂಗಡಿ ಮಾಲೀಕರಿಗೆ ಜೇಬಿನಲ್ಲಿದ್ದ ₹50 ಸಾವಿರ ಹಣ ಕೊಡಲು ಹೋಗಿ ಬರುವಷ್ಟರಲ್ಲಿ ಉಳಿದ ಹಣ ಎಗರಿಸಿ ಕಳ್ಳರು ಮಾಯವಾಗಿದ್ದಾರೆ.
6 ಜನರ ಖದೀಮರ ತಂಡ ಈ ಕೃತ್ಯದಲ್ಲಿ ಪಾಳ್ಗೊಂಡಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.