ETV Bharat / state

ಖಾಸಗಿ ಆಸ್ಪತ್ರೆಗಳ ಬೆಡ್​ಗಳಲ್ಲಿ ಕೇವಲ ಶೇ 20 ರಷ್ಟು ಉಳಿಸಿಕೊಳ್ಳಲು ತೀರ್ಮಾನ - The decision to retain

ಖಾಸಗಿ ಆಸ್ಪತ್ರೆಗಳಿಂದ ಶೇ 50 ರಷ್ಟು ಅಂದರೆ 13 ಸಾವಿರ ಬೆಡ್​ಗಳನ್ನು ಸರ್ಕಾರ ತೆಗೆದುಕೊಂಡಿತ್ತು. ಇದರಲ್ಲಿ ಕೆಲವು ಬೆಡ್​ಗಳನ್ನು ಬಿಟ್ಟುಕೊಡುವ ಬಗ್ಗೆ ಚರ್ಚೆ ಆಗಿದೆ. ಸಾಮಾನ್ಯ ಬೆಡ್​ಗಳಲ್ಲಿ ಶೇ 20 ರಷ್ಟು ಮಾತ್ರ ಉಳಿಸಿಕೊಳ್ಳುವ ಚಿಂತನೆ ಇದೆ. ಉಳಿದಂತೆ ಐಸಿಯು, ವೆಂಟಿಲೇಟರ್​ಗಳ ಅಗತ್ಯ ಬೀಳುತ್ತದೆ. ಈ ಬಗ್ಗೆ ಇಂದು ಅಂತಿಮ ನಿರ್ಧಾರ ಆಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.

the-decision-to-retain-only-20-percent-of-the-beds-of-private-hospitals
the-decision-to-retain-only-20-percent-of-the-beds-of-private-hospitals
author img

By

Published : Jun 10, 2021, 2:48 PM IST

ಬೆಂಗಳೂರು: ಬಿಬಿಎಂಪಿ ಕ್ರೀಡಾ ಪಟುಗಳಿಗೆ ಇಂದು ವ್ಯಾಕ್ಸಿನ್ ವಿತರಣೆ ಮಾಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಿಬಿಎಂಪಿ‌ ಹಾಗೂ ಒಲಂಪಿಕ್‌ ಸಂಸ್ಥೆ ಸಹಯೋಗದಲ್ಲಿ ಎರಡು ದಿನಗಳ ಕಾಲ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಉಚಿತ ಲಸಿಕಾಕರಣ ಕಾರ್ಯಕ್ರಮಕ್ಕೆ ಸಚಿವ ಕೆ.ಸಿ ನಾರಾಯಣಗೌಡ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಗೌರವ್ ಗುಪ್ತ, ಅನ್​ಲಾಕ್ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ತರಲಾಗಿದೆ. ಆದರೆ ಲಾಕ್​ಡೌನ್ ಸಡಿಲಿಕೆ ಮಾಡುವುದಾದರೆ ಹಂತಹಂತವಾಗಿ ಮಾಡಬೇಕಿದೆ. ಕೆಲವು ಚಟುವಟಿಕೆಗಳಿಗೆ ಮಾತ್ರ ಮೊದಲ ಹಂತದಲ್ಲಿ ಅನುಮತಿ ನೀಡಬೇಕಾಗುತ್ತದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯ ಆಯುಕ್ತ ಗೌರವ್ ಗುಪ್ತ

ಖಾಸಗಿ ಬೆಡ್ ಮೀಸಲಾತಿ ಕಡಿಮೆ ಮಾಡಲು ಚಿಂತನೆ
ಖಾಸಗಿ ಆಸ್ಪತ್ರೆಗಳಿಂದ ಶೇ 50 ರಷ್ಟು ಅಂದರೆ 13 ಸಾವಿರ ಬೆಡ್​ಗಳನ್ನು ಸರ್ಕಾರ ತೆಗೆದುಕೊಂಡಿತ್ತು. ಇದರಲ್ಲಿ ಕೆಲವು ಬೆಡ್​ಗಳನ್ನು ಬಿಟ್ಟುಕೊಡುವ ಬಗ್ಗೆ ಚರ್ಚೆ ಆಗಿದೆ. ಸಾಮಾನ್ಯ ಬೆಡ್​ಗಳಲ್ಲಿ ಶೇ 20 ರಷ್ಟು ಮಾತ್ರ ಉಳಿಸಿಕೊಳ್ಳುವ ಚಿಂತನೆ ಇದೆ. ಉಳಿದಂತೆ ಐಸಿಯು, ವೆಂಟಿಲೇಟರ್​ಗಳ ಅಗತ್ಯ ಬೀಳುತ್ತದೆ. ಈ ಬಗ್ಗೆ ಇಂದು ಅಂತಿಮ ನಿರ್ಧಾರ ಆಗಲಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ತೀರ್ಮಾನ ಆಗಲಿದೆ ಎಂದರು.

ಪ್ರತಿನಿತ್ಯ 70 ಸಾವಿರ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ಹೊರಜಿಲ್ಲೆಗಳಿಂದ ಬರುವವರಿಗೆ ಟೆಸ್ಟಿಂಗ್ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಬೇಕಿದೆ ಎಂದರು.

ಬೆಂಗಳೂರು: ಬಿಬಿಎಂಪಿ ಕ್ರೀಡಾ ಪಟುಗಳಿಗೆ ಇಂದು ವ್ಯಾಕ್ಸಿನ್ ವಿತರಣೆ ಮಾಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಿಬಿಎಂಪಿ‌ ಹಾಗೂ ಒಲಂಪಿಕ್‌ ಸಂಸ್ಥೆ ಸಹಯೋಗದಲ್ಲಿ ಎರಡು ದಿನಗಳ ಕಾಲ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಉಚಿತ ಲಸಿಕಾಕರಣ ಕಾರ್ಯಕ್ರಮಕ್ಕೆ ಸಚಿವ ಕೆ.ಸಿ ನಾರಾಯಣಗೌಡ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಗೌರವ್ ಗುಪ್ತ, ಅನ್​ಲಾಕ್ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ತರಲಾಗಿದೆ. ಆದರೆ ಲಾಕ್​ಡೌನ್ ಸಡಿಲಿಕೆ ಮಾಡುವುದಾದರೆ ಹಂತಹಂತವಾಗಿ ಮಾಡಬೇಕಿದೆ. ಕೆಲವು ಚಟುವಟಿಕೆಗಳಿಗೆ ಮಾತ್ರ ಮೊದಲ ಹಂತದಲ್ಲಿ ಅನುಮತಿ ನೀಡಬೇಕಾಗುತ್ತದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯ ಆಯುಕ್ತ ಗೌರವ್ ಗುಪ್ತ

ಖಾಸಗಿ ಬೆಡ್ ಮೀಸಲಾತಿ ಕಡಿಮೆ ಮಾಡಲು ಚಿಂತನೆ
ಖಾಸಗಿ ಆಸ್ಪತ್ರೆಗಳಿಂದ ಶೇ 50 ರಷ್ಟು ಅಂದರೆ 13 ಸಾವಿರ ಬೆಡ್​ಗಳನ್ನು ಸರ್ಕಾರ ತೆಗೆದುಕೊಂಡಿತ್ತು. ಇದರಲ್ಲಿ ಕೆಲವು ಬೆಡ್​ಗಳನ್ನು ಬಿಟ್ಟುಕೊಡುವ ಬಗ್ಗೆ ಚರ್ಚೆ ಆಗಿದೆ. ಸಾಮಾನ್ಯ ಬೆಡ್​ಗಳಲ್ಲಿ ಶೇ 20 ರಷ್ಟು ಮಾತ್ರ ಉಳಿಸಿಕೊಳ್ಳುವ ಚಿಂತನೆ ಇದೆ. ಉಳಿದಂತೆ ಐಸಿಯು, ವೆಂಟಿಲೇಟರ್​ಗಳ ಅಗತ್ಯ ಬೀಳುತ್ತದೆ. ಈ ಬಗ್ಗೆ ಇಂದು ಅಂತಿಮ ನಿರ್ಧಾರ ಆಗಲಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ತೀರ್ಮಾನ ಆಗಲಿದೆ ಎಂದರು.

ಪ್ರತಿನಿತ್ಯ 70 ಸಾವಿರ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ಹೊರಜಿಲ್ಲೆಗಳಿಂದ ಬರುವವರಿಗೆ ಟೆಸ್ಟಿಂಗ್ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಬೇಕಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.