ಬೆಂಗಳೂರು: ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ರೋಡ್ ಶೋ ಹಿನ್ನೆಲೆ ಮೆರವಣಿಗೆ ಸಾಗಿದ ಹಾದಿಯುದ್ದಕ್ಕೂ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತಗೊಂಡು ವಾಹನ ಸವಾರರಿಗೆ ಕಿರಿಕಿರಿಯಾದ ಘಟನೆ ಆರ್.ಆರ್.ನಗರದಲ್ಲಿ ಕಂಡುಬಂತು.
![Traffic jam in Actor Darshan campaign, Traffic jam in Actor Darshan campaign in RR Nagar, RR Nagar by poll 2020, RR Nagar by poll 2020 news, ನಟ ದರ್ಶನ್ ಪ್ರಚಾರ ಹಿನ್ನೆಲೆ ಟ್ರಾಫಿಕ್ ಜಾಮ್, ಆರ್ಆರ್ ನಗರದಲ್ಲಿ ನಟ ದರ್ಶನ್ ಪ್ರಚಾರ ಹಿನ್ನೆಲೆ ಟ್ರಾಫಿಕ್ ಜಾಮ್, ಆರ್ಆರ್ ನಗರ ಉಪ ಚುನಾವಣೆ 2020, ಆರ್ಆರ್ ನಗರ ಉಪ ಚುನಾವನೆ 2020 ಸುದ್ದಿ,](https://etvbharatimages.akamaized.net/etvbharat/prod-images/kn-bng-06-roadshow-traffic-script-7208080_30102020160512_3010f_1604054112_122.jpg)
ಯಶವಂತಪುರ ರೈಲು ನಿಲ್ದಾಣದಿಂದ ಜೆಪಿ ಪಾರ್ಕ್, ಜಾಲಹಳ್ಳಿ ಗ್ರಾಮ, ಹೆಚ್.ಎಂ.ಟಿ, ಪೀಣ್ಯ ಮತ್ತು ಗೊರಗುಂಟೆಪಾಳ್ಯ ವ್ಯಾಪ್ತಿಯ ಗಲ್ಲಿ-ಗಲ್ಲಿಗಳಲ್ಲಿ ಮುನಿರತ್ನ ಪರ ನಟ ದರ್ಶನ್ ರೋಡ್ ಶೋ ನಡೆಸಿದರು.
ಆರ್ ಆರ್ ನಗರದಲ್ಲಿ ತೆರೆದ ವಾಹನದಲ್ಲಿ ದರ್ಶನ್ ನೇತೃತ್ವದಲ್ಲಿ ಬೃಹತ್ ಪ್ರಚಾರ ಱಲಿ ನಡೆಸಲಾಯಿತು. ಈ ವೇಳೆ ಪ್ರಚಾರದಲ್ಲಿ ಸಾಗಿದ ಮಾರ್ಗಗಳು ಚಿಕ್ಕದಾಗಿದ್ದು, ಬಹುತೇಕ ಎಲ್ಲ ಕಡೆಗಳಲ್ಲಿಯೂ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ವಾಹನ ಸವಾರರು ಹೈರಾಣಾಗಬೇಕಾಯಿತು. ಕೆಲಕಾಲ ಮಾತ್ರ ಟ್ರಾಫಿಕ್ ಸಮಸ್ಯೆ ಆಗಿದ್ದು, ಮೆರವಣಿಗೆ ಸಾಗುತ್ತಿದ್ದಂತೆ ಸಂಚಾರ ಸಮಸ್ಯೆ ಸರಿಪಡಿಸಲಾಯಿತು.