ETV Bharat / state

ವಿಧ್ವಂಸಕ ಕೃತ್ಯವೆಸಗಲು ಮಾಸ್ಟರ್ ಪ್ಲಾನ್: ಎ1 ಆರೋಪಿಗೆ ಸಿಸಿಬಿ ಶೋಧ - ಎ1 ಆರೋಪಿಗೆ ಸಿಸಿಬಿ ಶೋಧ

ತಲೆ ಮರೆಸಿಕೊಂಡಿರವ ಮೆಹಬೂಬ್ ಪಾಷ ಬೇರೆ ಯಾರು ಅಲ್ಲ. ಸಿಲಿಕಾನ್ ಸಿಟಿಯ ಸದ್ದುಗುಂಟೆಪಾಳ್ಯದ ನಿವಾಸಿ. ಈತ ಅಲ್ಪಸಂಖ್ಯಾತರನ್ನು ಜಿಹಾದ್​ಗೆ ಸೆಳೆಯಲು ಸ್ಕೆಚ್ ಹಾಕಿದ್ದು, ಜಿಹಾದಿ ಗ್ಯಾಂಗ್ ನ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿಸುತ್ತಿದ್ದನಂತೆ.

ವಿಧ್ವಂಸಕ ಕೃತ್ಯವೆಸಗಲು ಮಾಸ್ಟರ್ ಪ್ಲಾನ್,  Master plan to commit Sabotage : CCB search for A1 accused
ವಿಧ್ವಂಸಕ ಕೃತ್ಯವೆಸಗಲು ಮಾಸ್ಟರ್ ಪ್ಲಾನ್
author img

By

Published : Jan 12, 2020, 11:16 AM IST

ಬೆಂಗಳೂರು: ಸಿಸಿಬಿ ಸಹಕಾರದೊಂದಿಗೆ ಮೂವರು ಶಂಕಿತ ಉಗ್ರರನ್ನು ಈಗಾಗಲೇ ಬಂಧಿಸಲಾಗಿದ್ದು, ಇವರ ವಿಚಾರಣೆಯಿಂದ ಕೆಲವು ಸ್ಪೋಟಕ ವಿಚಾರಗಳು ಬಯಲಾಗಿದೆ.

ಅಲ್-ಉಮಾ ಸಂಘಟನೆ ಸದಸ್ಯರು, ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಸಕ್ರಿಯವಾಗಲು ಸಿದ್ಧತೆ‌ ಮಾಡುತ್ತಿದ್ದರು ಹಾಗೂ ರಾಜ್ಯದಲ್ಲಿನ ಕೆಲ ಹಿಂದೂ ಮುಖಂಡರ ಹತ್ಯೆಗೆ ಪ್ಲಾನ್​ ಮಾಡಿದ್ದಲ್ಲದೇ ಜೊತೆಗೆ ಇತ್ತೀಚೆಗೆ ಬೆಳಕಿಗೆ ಬಂದ ಪೌರತ್ವ ಕಿಚ್ಚು ಗಲಾಟೆಯನ್ನು ಬಳಸಿಕೊಂಡು ಕರ್ನಾಟಕದಲ್ಲಿ ಸರಣಿ ವಿಧ್ವಂಸಕ ಕೃತ್ಯ ಮಾಡಲು ಯೋಜನೆ ಹಾಕಿದ್ದರು ಎಂಬ ವಿಚಾರವನ್ನು ಈಗಾಗಲೇ ಬಂಧಿತರಾಗಿರುವ ಮೊಹಮ್ಮದ್ ಹನೀಫ್ ಖಾನ್(29), ಇಮ್ರಾಾನ್ ಖಾನ್(32), ಉಸ್ಮಾನ್ ಗನಿ(24) ಬಾಯ್ಬಿಟ್ಟಿದ್ದಾರೆ.

ಈ ಕೃತ್ಯದ ಮಾಸ್ಟರ್ ಮೈಂಡ್ ಯಾರು ಅನ್ನುವ ವಿಚಾರವನ್ನು ಕೂಡ ತಿಳಿಸಿದ್ದಾರೆ. ಹೀಗಾಗಿ ಸಿಸಿಬಿ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್ಐಆರ್ ದಾಖಲಿಸಿ, ತಲೆಮರೆಸಿಕೊಂಡಿರುವ ಪ್ರಕರಣದ ಮಾಸ್ಟರ್ ಮೈಂಡ್ ಮೆಹಬೂಬ್ ಪಾಷಾಗೆ ಬಲೆ ಬೀಸಿದ್ದಾರೆ.

ಮೆಹಬೂಬ್ ಪಾಷಾ ಬೇರೆ ಯಾರು ಅಲ್ಲ. ಸಿಲಿಕಾನ್ ಸಿಟಿಯ ಸದ್ದುಗುಂಟೆಪಾಳ್ಯದ ನಿವಾಸಿ. ಈತ ಅಲ್ಪಸಂಖ್ಯಾತರನ್ನು ಜಿಹಾದ್​ಗೆ ಸೆಳೆಯಲು ಸ್ಕೆಚ್ ಹಾಕಿದ್ದು, ಜಿಹಾದಿ ಗ್ಯಾಂಗ್​ನ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನಂತೆ. ಹಾಗೆಯೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಐಸಿಸ್ ನೇಮಕಾತಿಗೆ ಯೋಜನೆ ಹಾಕಿ ಮೊದಲು ಸದಸ್ಯರ ನೇಮಕ ಮಾಡುತ್ತಿದ್ದ ಎನ್ನಲಾಗಿದೆ.

ಇಷ್ಟೇ ಅಲ್ಲದೆ, ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸಿಕೊಂಡಿರುವ ಪಾಷ, ಬೆಂಗಳೂರು ಹೊರವಲಯ, ಮಡಿಕೇರಿಯ ‌ಗೋಣಿಕೊಪ್ಪದ‌ ಸುತ್ತಮುತ್ತಲಿನ ಪ್ರದೇಶ ದಟ್ಟಾರಣ್ಯವಾಗಿರೋ ಕಾರಣ ಈ ಭಾಗವನ್ನೇ ಆಯ್ಕೆ ಮಾಡಿಕೊಂಡು, ಅಲ್ಲಿ ಹೊಸದಾಗಿ ಜಿಹಾದಿಗೆ ಸೇರುವವರಿಗೆ ತರಬೇತಿ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಗೋಣಿಕೊಪ್ಪದಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆ ಹಾಗೂ ವಾಹನ ಸಂಚಾರ ಅಧಿಕವಾಗಿರೋ ನಿಟ್ಟಿನಲ್ಲಿ ಈ ಭಾಗದ ಅರಣ್ಯ ಪ್ರದೇಶವನ್ನೇ ತರಬೇತಿಗೆ ಬಳಕೆ ಮಾಡಿಕೊಂಡಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರು: ಸಿಸಿಬಿ ಸಹಕಾರದೊಂದಿಗೆ ಮೂವರು ಶಂಕಿತ ಉಗ್ರರನ್ನು ಈಗಾಗಲೇ ಬಂಧಿಸಲಾಗಿದ್ದು, ಇವರ ವಿಚಾರಣೆಯಿಂದ ಕೆಲವು ಸ್ಪೋಟಕ ವಿಚಾರಗಳು ಬಯಲಾಗಿದೆ.

ಅಲ್-ಉಮಾ ಸಂಘಟನೆ ಸದಸ್ಯರು, ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಸಕ್ರಿಯವಾಗಲು ಸಿದ್ಧತೆ‌ ಮಾಡುತ್ತಿದ್ದರು ಹಾಗೂ ರಾಜ್ಯದಲ್ಲಿನ ಕೆಲ ಹಿಂದೂ ಮುಖಂಡರ ಹತ್ಯೆಗೆ ಪ್ಲಾನ್​ ಮಾಡಿದ್ದಲ್ಲದೇ ಜೊತೆಗೆ ಇತ್ತೀಚೆಗೆ ಬೆಳಕಿಗೆ ಬಂದ ಪೌರತ್ವ ಕಿಚ್ಚು ಗಲಾಟೆಯನ್ನು ಬಳಸಿಕೊಂಡು ಕರ್ನಾಟಕದಲ್ಲಿ ಸರಣಿ ವಿಧ್ವಂಸಕ ಕೃತ್ಯ ಮಾಡಲು ಯೋಜನೆ ಹಾಕಿದ್ದರು ಎಂಬ ವಿಚಾರವನ್ನು ಈಗಾಗಲೇ ಬಂಧಿತರಾಗಿರುವ ಮೊಹಮ್ಮದ್ ಹನೀಫ್ ಖಾನ್(29), ಇಮ್ರಾಾನ್ ಖಾನ್(32), ಉಸ್ಮಾನ್ ಗನಿ(24) ಬಾಯ್ಬಿಟ್ಟಿದ್ದಾರೆ.

ಈ ಕೃತ್ಯದ ಮಾಸ್ಟರ್ ಮೈಂಡ್ ಯಾರು ಅನ್ನುವ ವಿಚಾರವನ್ನು ಕೂಡ ತಿಳಿಸಿದ್ದಾರೆ. ಹೀಗಾಗಿ ಸಿಸಿಬಿ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್ಐಆರ್ ದಾಖಲಿಸಿ, ತಲೆಮರೆಸಿಕೊಂಡಿರುವ ಪ್ರಕರಣದ ಮಾಸ್ಟರ್ ಮೈಂಡ್ ಮೆಹಬೂಬ್ ಪಾಷಾಗೆ ಬಲೆ ಬೀಸಿದ್ದಾರೆ.

ಮೆಹಬೂಬ್ ಪಾಷಾ ಬೇರೆ ಯಾರು ಅಲ್ಲ. ಸಿಲಿಕಾನ್ ಸಿಟಿಯ ಸದ್ದುಗುಂಟೆಪಾಳ್ಯದ ನಿವಾಸಿ. ಈತ ಅಲ್ಪಸಂಖ್ಯಾತರನ್ನು ಜಿಹಾದ್​ಗೆ ಸೆಳೆಯಲು ಸ್ಕೆಚ್ ಹಾಕಿದ್ದು, ಜಿಹಾದಿ ಗ್ಯಾಂಗ್​ನ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನಂತೆ. ಹಾಗೆಯೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಐಸಿಸ್ ನೇಮಕಾತಿಗೆ ಯೋಜನೆ ಹಾಕಿ ಮೊದಲು ಸದಸ್ಯರ ನೇಮಕ ಮಾಡುತ್ತಿದ್ದ ಎನ್ನಲಾಗಿದೆ.

ಇಷ್ಟೇ ಅಲ್ಲದೆ, ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸಿಕೊಂಡಿರುವ ಪಾಷ, ಬೆಂಗಳೂರು ಹೊರವಲಯ, ಮಡಿಕೇರಿಯ ‌ಗೋಣಿಕೊಪ್ಪದ‌ ಸುತ್ತಮುತ್ತಲಿನ ಪ್ರದೇಶ ದಟ್ಟಾರಣ್ಯವಾಗಿರೋ ಕಾರಣ ಈ ಭಾಗವನ್ನೇ ಆಯ್ಕೆ ಮಾಡಿಕೊಂಡು, ಅಲ್ಲಿ ಹೊಸದಾಗಿ ಜಿಹಾದಿಗೆ ಸೇರುವವರಿಗೆ ತರಬೇತಿ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಗೋಣಿಕೊಪ್ಪದಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆ ಹಾಗೂ ವಾಹನ ಸಂಚಾರ ಅಧಿಕವಾಗಿರೋ ನಿಟ್ಟಿನಲ್ಲಿ ಈ ಭಾಗದ ಅರಣ್ಯ ಪ್ರದೇಶವನ್ನೇ ತರಬೇತಿಗೆ ಬಳಕೆ ಮಾಡಿಕೊಂಡಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Intro:ವಿಧ್ವಂಸಕ ಕೃತ್ಯ ವೆಸಗಲು ಮಾಸ್ಟರ್ ಫ್ಲಾನ್
ಪ್ರಕರಣದ ಪ್ರಮುಖ ಆರೋಪಿಗೆ ಸಿಸಿಬಿ ಶೋಧ

ಸಿಸಿಬಿ ಸಹಕಾರದೊಂದಿಗೆ ಮೂವರು ಶಂಕಿತ ಉಗ್ರರನ್ನು ಈಗಾಗ್ಲೇ ಬಂಧಿಸಲಾಗಿದ್ದು ಇವರ ವಿಚಾರಣೆಯಿಂದ ಕೆಲವು ಸ್ಪೋಟಕ ವಿಚಾರಗಳು ಬಯಲಾಗಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಮತ್ತೆ ಅಲ್-ಉಮಾ’ ಸಂಘಟನೆ ಸದಸ್ಯರು ಸಕ್ರಿಯವಾಗಲು ಸಿದ್ದತೆ‌ ಹಾಗೂ ರಾಜ್ಯದಲ್ಲಿನ ಕೆಲ ಹಿಂದೂ ಮುಖಂಡರ ಹತ್ಯೆ, ಇದರ ಜೊತೆಗೆ ಇತ್ತಿಚ್ಚೆಗೆ ಬೆಳಕಿಗೆ ಬಂದ ಪೌರತ್ವ ಕಿಚ್ಚು ಗಲಾಟೆ ಬಳಸಿ ಕರ್ನಾಟಕದಲ್ಲಿ ಸರಣಿ ವಿಧ್ವಂಸಕ ಕೃತ್ಯ ಮಾಡಲು ಸ್ಕೆಚ್ ಹಾಕಿರುವ ವಿಚಾರ ಈಗಾಗ್ಲೇ ಬಂಧಿತರಾಗಿರುವ ಮೊಹಮ್ಮದ್ ಹನೀಫ್ ಖಾನ್(29),ಇಮ್ರಾಾನ್ ಖಾನ್(32), ಉಸ್ಮಾನ್ ಗನಿ(24) ಬಾಯಿ
ಬಿಟ್ಟಿದ್ದಾರೆ.

ಆದರೆ ಈ ಕೃತ್ಯದ ಮಾಸ್ಟರ್ ಮೈಂಡ್ ಯಾರೋ ಅನ್ನೋದ್ರ ವಿಚಾರ ಕೂಡ ತಿಳಿಸಿದ್ದಾರೆ. ಹೀಗಾಗಿ ಸಿಸಿಬಿ ಪೊಲೀಸರು ಪ್ರಕರಣ ಸಂಬಂಧ ಪಟ್ಟಂತೆ ಎಫ್ಐ ಆರ್ ದಾಖಲಿಸಿ ತಲೆ ಮರೆಸಿಕೊಂಡಿರುವ ಪ್ರಕರಣದ ಮಾಸ್ಟರ್ ಮೈಂಡ್ ಮೆಹಬೂಬ್ ಪಾಷಗೆ ಬಲೆ ಬೀಸಿದ್ದಾರೆ.

ಇನ್ನು ಈ ವಿಧ್ವಂಸಕ‌ ಕೃತ್ಯದ ಮಾಸ್ಟರ್ ಮೈಂಡ್ ಮೆಹಬೂಬ್ ಪಾಷ ಈತ ಬೇರೆ ಯಾರು ಅಲ್ಲ.. ಸಿಲಿಕಾನ್ ಸಿಟಿಯ ಸದ್ದುಗುಂಟೆಪಾಳ್ಯದ ನಿವಾಸಿಯಾಗಿದ್ದು , ಈತ ಅಲ್ಪ ಸಂಖ್ಯಾತರನ್ನು ಜಿಹಾದ್ ಗೆ ಸೆಳೆಯಲು ಸ್ಕೆಚ್ ಮಾಡಿ ಜಿಹಾದಿ ಗ್ಯಾಂಗ್ ನ ಕಮ್ಯಾಂಡರ್ ಆಗಿ ಕಾರ್ಯ ನಿರ್ವಹಿಸಿಸುತ್ತಿದ್ದ.. ಹಾಗೆ
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಐಸಿಸ್ ನೇಮಕಾತಿಗೆ ಸ್ಕೆಚ್ ಹಾಕಿ ಮೊದಲು ಸದಸ್ಯರ ನೇಮಕ ಮಾಡ್ತಿದ್ದ.

ನಂತರ ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸಿ ಬೆಂಗಳೂರು ಹೊರವಲಯ, ಮಡಿಕೇರಿಯ ‌ಗೋಣಿಕೊಪ್ಪದ‌ ಸುತ್ತಮುತ್ತಲಿನ ಪ್ರದೇಶ ದಟ್ಟಾರಣ್ಯವಾಗಿರೋ ಕಾರಣ ಈ ಭಾಗವನ್ನೇ ಆಯ್ಕೆ ಮಾಡಿಕೊಂಡು ಅಲ್ಲಿ ಹೊಸದಾಗಿ ಜಿಹಾದಿಗೆ ಸೇರುವವರಿಗೆ ಈತ ತರಬೇತಿ ನೀಡುತ್ತಿದ್ದ.. ಅಲ್ಲದೆ ಗೋಣಿಕೊಪ್ಪ, ಕೇರಳಕ್ಕೆ ನಿಕಟ ಸಂಪರ್ಕ ಹೊಂದಿದ್ದು ಕೇರಳದಿಂದ ಅರಣ್ಯ‌ ಮಾರ್ಗವಾಗಿಯೂ ಗೋಣಿಕೊಪ್ಪಕ್ಕೆ ಸಂಪರ್ಕ ಮಾಡಬಹುದಾಗಿದೆ. ಗೋಣಿಕೊಪ್ಪದಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆ ಹಾಗೂ ವಾಹನ ಸಂಚಾರ ಅಧಿಕವಾಗಿರೋ ನಿಟ್ಟಿನಲ್ಲಿ ಈ ಭಾಗವೇ ಆಯ್ಕೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ .. ಸದ್ಯ ಪ್ರಕರಣದ ಮಾಸ್ಟರ್ ಮೈಂಡ್ ತಲೆ ಮರೆಸಿಕೊಂಡಿದ್ದು ಆರೋಪಿಗಾಗಿ ಸಿಸಿಬಿ ಪೊಲಿಸರು ಹುಡುಕಾಟ ನಡೆಸಿದ್ದಾರೆ
Body:KN_BNG_01_CCB_7204498Conclusion:KN_BNG_01_CCB_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.