ETV Bharat / state

ಕಾಂಗ್ರೆಸ್​ ವಿರುದ್ಧ ಮಾಜಿ ಸ್ಪೀಕರ್​ ತೀವ್ರ ಅಸಮಾಧಾನ

ಕಾಂಗ್ರೆಸ್​ನ ಇವತ್ತಿನ ಪರಿಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಕಾಂಗ್ರೆಸ್ ನಿಂತ ನೀರಾಗಿದೆ ಎಂದು ಹೇಳಿದ್ದಾರೆ.

author img

By

Published : Jan 27, 2020, 5:57 PM IST

KB Koliwada
ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ

ಬೆಂಗಳೂರು: ಕಾಂಗ್ರೆಸ್ ಪರಿಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಕಾಂಗ್ರೆಸ್ ನಿಂತ ನೀರಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್​ ಪಕ್ಷದ ಚಟುವಟಿಕೆಗಳು ಕುಂಠಿತವಾಗಿದೆ. ಅತ್ತ ಕಡೆ ಕೆಪಿಸಿಸಿ ಅಧ್ಯಕ್ಷರ ರಾಜೀನಾಮೆ ಅಂಗೀಕಾರವೂ ಆಗಿಲ್ಲ, ತಿರಸ್ಕಾರವೂ ಆಗಿಲ್ಲ. ಹಾಗಾಗಿ ಎಲ್ಲವೂ ಹೈಕಮಾಂಡ್ ನಿರ್ಧಾರ ಎಂದು ನಾಯಕರು ಹೇಳುತ್ತಾರೆ. ಆದರೆ ತಾವೇ ಹೈಕಮಾಂಡ್​ಗೆ ಹೋಗಿ ಕಂಡಿಷನ್ ಹಾಕಿ ಬರ್ತಾರೆ. ಏನೇ ಕಂಡೀಷನ್ ಹಾಕಿ ಬಂದಿರಲಿ. ಆದರೆ, ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಹಿತದೃಷ್ಠಿಯಿಂದ ಎಲ್ಲ ನಾಯಕರು ಹೈಕಮಾಂಡ್​ಗೆ ಸಂಪೂರ್ಣ ಅಧಿಕಾರವನ್ನು ಬಿಟ್ಟುಕೊಡಬೇಕೆಂದು ಕಾಂಗ್ರೆಸ್​ನ ಕಾರ್ಯಕರ್ತನಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ

ಇನ್ನು ಕಾಂಗ್ರೆಸ್​ ಹೈಕಮಾಂಡ್​ ಯಾವಾಗಲೂ ಅತ್ಯಂತ ಶಕ್ತಿಯುತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗುಂಪುಗಾರಿಕೆ ಮಾಡುವವರೆಲ್ಲರೂ ಸಂಪೂರ್ಣ ಸ್ವಾತಂತ್ರ್ಯವನ್ನು ಹೈಕಮಾಂಡ್​ಗೆ ಬಿಟ್ಟುಕೊಟ್ಟರೆ ಪಕ್ಷಕ್ಕೆ ಒಳ್ಳೆಯದು, ಇದನ್ನೇ ಮುಂದುವರಿಸಿಕೊಂಡು ಹೋದರೆ ಪಕ್ಷದಲ್ಲಿ ಕ್ರಾಂತಿಯನ್ನೇ ಮಾಡಬೇಕಾಗುತ್ತದೆ ಎಂದರು.

ಬೆಂಗಳೂರು: ಕಾಂಗ್ರೆಸ್ ಪರಿಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಕಾಂಗ್ರೆಸ್ ನಿಂತ ನೀರಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್​ ಪಕ್ಷದ ಚಟುವಟಿಕೆಗಳು ಕುಂಠಿತವಾಗಿದೆ. ಅತ್ತ ಕಡೆ ಕೆಪಿಸಿಸಿ ಅಧ್ಯಕ್ಷರ ರಾಜೀನಾಮೆ ಅಂಗೀಕಾರವೂ ಆಗಿಲ್ಲ, ತಿರಸ್ಕಾರವೂ ಆಗಿಲ್ಲ. ಹಾಗಾಗಿ ಎಲ್ಲವೂ ಹೈಕಮಾಂಡ್ ನಿರ್ಧಾರ ಎಂದು ನಾಯಕರು ಹೇಳುತ್ತಾರೆ. ಆದರೆ ತಾವೇ ಹೈಕಮಾಂಡ್​ಗೆ ಹೋಗಿ ಕಂಡಿಷನ್ ಹಾಕಿ ಬರ್ತಾರೆ. ಏನೇ ಕಂಡೀಷನ್ ಹಾಕಿ ಬಂದಿರಲಿ. ಆದರೆ, ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಹಿತದೃಷ್ಠಿಯಿಂದ ಎಲ್ಲ ನಾಯಕರು ಹೈಕಮಾಂಡ್​ಗೆ ಸಂಪೂರ್ಣ ಅಧಿಕಾರವನ್ನು ಬಿಟ್ಟುಕೊಡಬೇಕೆಂದು ಕಾಂಗ್ರೆಸ್​ನ ಕಾರ್ಯಕರ್ತನಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ

ಇನ್ನು ಕಾಂಗ್ರೆಸ್​ ಹೈಕಮಾಂಡ್​ ಯಾವಾಗಲೂ ಅತ್ಯಂತ ಶಕ್ತಿಯುತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗುಂಪುಗಾರಿಕೆ ಮಾಡುವವರೆಲ್ಲರೂ ಸಂಪೂರ್ಣ ಸ್ವಾತಂತ್ರ್ಯವನ್ನು ಹೈಕಮಾಂಡ್​ಗೆ ಬಿಟ್ಟುಕೊಟ್ಟರೆ ಪಕ್ಷಕ್ಕೆ ಒಳ್ಳೆಯದು, ಇದನ್ನೇ ಮುಂದುವರಿಸಿಕೊಂಡು ಹೋದರೆ ಪಕ್ಷದಲ್ಲಿ ಕ್ರಾಂತಿಯನ್ನೇ ಮಾಡಬೇಕಾಗುತ್ತದೆ ಎಂದರು.

Intro:newsBody:ಕಾಂಗ್ರೆಸ್ ನಾಯಕರ ವಿರುದ್ಧವೇ ತೀವ್ರ ಹರಿಹಾಯ್ದ ಕೆ ಬಿ ಕೋಳಿವಾಡ


ಬೆಂಗಳೂರು: ಕಾಂಗ್ರೆಸ್ ಪರಿಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸ್ಪೀಕರ್ ಕೆ ಬಿ ಕೋಳಿವಾಡ ಕಾಂಗ್ರೆಸ್ ನಿಂತ ನೀರಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪಕ್ಷದ ಚಟುವಟಿಕೆಗಳು ಕುಂಠಿತವಾಗಿದೆ. ಅತ್ತ ಕಡೆ ಕೆಪಿಸಿಸಿ ಅಧ್ಯಕ್ಷರ ರಾಜೀನಾಮೆ ಅಂಗೀಕಾರವೇ ಆಗಿಲ್ಲ, ತಿರಸ್ಕಾರವೂ ಆಗಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರ ಅಂತಾರೆ ನಾಯಕರು. ಆದರೆ ತಾವೇ ಹೈಕಮಾಂಡ್ ಗೆ ಹೋಗಿ ಕಂಡಿಷನ್ ಹಾಕಿ ಬರ್ತಾರೆ. ಇಂಥವರೇ ಅಧ್ಯಕ್ಷರಾಗಬೇಕು, ಇಂಥವರೇ ಕಾರ್ಯಾಧ್ಯಕ್ಷ ಆಗಬೇಕು ಅಂತಾರೆ. ವಿಪಕ್ಷ ಸಿಎಲ್ಪಿ ಪ್ರತ್ಯೇಕ ಆಗಬಾರದು ಅಂತಾರೆ. ಹೈಕಮಾಂಡ್ ಗೂ ಬಹಳ ಆಲೋಚನೆಯಾಗಿದೆ. ಹೈಕಮಾಂಡ್ ಗೆ ಸಂಪೂರ್ಣ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಅನುಕೂಲ ಆಗುತ್ತದೆ. ಕಂಡಿಷನ್ ಹಾಕಿ ಬಂದು ಇಲ್ಲಿ ಬಂದು ಎಲ್ಲ ಅವರದ್ದೇ ಅಂದ್ರೆ ಹೇಗೆ? ಏನೇ ಕಂಡಿಷನ್ ಹಾಕಿ ಬಂದಿರಲಿ, ಆದರೆ ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು ಎಂದರು.
ಮಲ್ಲಿಕಾರ್ಜುನ ಖರ್ಗೆ ಎಲ್ಲದಕ್ಕೂ ಲೀಡ್ ತೆಗೆದುಕೊಳ್ಳಬೇಕು. ಪಕ್ಷದ ಹಿತದೃಷ್ಟಿಯಿಂದ ನಾನು ಎಲ್ಲ ನಾಯಕರನ್ನು ಭೇಟಿ ಮಾಡ್ತಿದ್ದೇನೆ. ದೆಹಲಿಗೆ ಹೋಗಿ ಬಂದ ನಾಯಕರೆಲ್ಲ ಒಗ್ಗಟ್ಟು ಪ್ರದರ್ಶಿಸಲಿ. ಒಮ್ಮತದ ಧ್ವನಿಯನ್ನು ಹೈಕಮಾಂಡ್ ಗೆ ತಿಳಿಸಿ. ಭಿನ್ನಮತದ ಧ್ವನಿ ಯನ್ನು ಎಲ್ಲರೂ ಮರೆಯಬೇಕು ಎಂದರು.
ಅಧಿಕಾರಕ್ಕಾಗಿ ಇದ್ದರೆ ಪ್ರಯೋಜನವಿಲ್ಲ
ಕೇವಲ ಅಧಿಕಾರಕ್ಕಾಗಿ ಕಾಂಗ್ರೆಸ್ ನಲ್ಲಿದ್ದರೆ ಪ್ರಯೋಜನವಿಲ್ಲ. ಪಕ್ಷದ ಹಿತಕ್ಕಾಗಿ ನಾಯಕರು ತ್ಯಾಗ ಮಾಡಬೇಕಿದೆ. ಒಬ್ಬೊಬ್ಬರು ಒಂದೊಂದು ಗುಂಪು ಮಾಡಿಕೊಂಡು ಲಾಬಿ ಮಾಡಿದ್ದಾರೆ. ಒಬ್ಬರು ಒಂದು ಕಡೆ ಜಗ್ಗಿದರೆ ಇನ್ನೊಬ್ಬರು ಇನ್ನೊಙದು ಕಡೆ ಜಗ್ಗುತ್ತಿದ್ದಾರೆ. ಲಾಬಿ ಮಾಡಿದವರೆಲ್ಲ ನಿಜವಾದ ಕಾಂಗ್ರೆಸ್ ನಾಯಕರಾದರೆ ಹೈಕಮಾಂಡ್ ಗೆ ಒಮ್ಮತದ ಅಭಿಪ್ರಾಯ ಹೇಳಬೇಕು. ಗುಂಪುಗಾರಿಕೆ ನಾಯಕರಿಲ್ಲದೆ. ತಿಪ್ಪೆ ಮೇಲಿದ್ದವರನ್ನು ಉಪ್ಪರಿಗೆ ಮೇಲ ಕೂರಿಸುತ್ತದೆ. ಉಪ್ಪರಿಗೆ ಮೇಲಿದ್ದವರನ್ನು ತಿಪ್ಪೆ ಮೇಲೆ ಕೂರಿಸುತ್ತದೆ. ಕಾಂಗ್ರೆಸ್ ಹೈಕಮಾಂಡ್ ಬಹಳ ಸ್ಟ್ರಾಂಗ್ ಇದೆ. ಇವರೆಲ್ಲ ದೊಡ್ಡ ಮನುಷ್ಯರು ಅಂತಾರಲ್ಲ ಅವರೆಲ್ಲ ಕಾಂಗ್ರೆಸ್ ಬಿಟ್ಟು ಹೋಗಲಿ ನೋಡೋಣ ಎಂದು ಹೇಳಿದರು.
ದೆಹಲಿಯಲ್ಲಿ ಎಲ್ಲರೂ ತಮ್ಮದೇ ಲಾಬಿ ಮಾಡಿ ಬಂದಿದ್ದಾರೆ. ಲಾಬಿಯನ್ನ ಬಿಟ್ಟು ಎಲ್ಲರ ಒಟ್ಟಾಬಿಪ್ರಾಯಕ್ಕೆ ಒತ್ತು ನೀಡಬೇಕು. ಕೆಲವರು ತಂಡ ಕಟ್ಟಿಕೊಂಡು ಅಭಿಪ್ರಾಯ ನೀಡಿ ಬಂದಿದ್ದಾರೆ. ದೇವರಾಜ ಅರಸು ಕತೆ ಏನಾಯ್ತು? ಇಂದಿರಾ ವಿರುದ್ಧ ಹೋಗಿ ಬಂಗಾರಪ್ಪ ಏನಾದ್ರು? ವೀರೇಂದ್ರ ಪಾಟೀಲರ ಕತೆ ಏನಾಯ್ತು? ಅದಕ್ಕೆ ನಮ್ಮ ಹೈಕಮಾಂಡ್ ಬಹಳ ಸ್ಟ್ರಾಂಗ್ ಇದೆ ಎಂದರು.
ಗುಂಪುಗಾರಿಕೆ ನಡೆಯುತ್ತಿದೆ
ಅಧಿಕಾರಕ್ಕಾಗಿ ಪಕ್ಷದಲ್ಲಿರೋದು ಬೇಡ. ಅಂತವರು ಪಕ್ಷದಲ್ಲಿ ಮುಂದುವರಿಯೋದು ಸರಿಯಲ್ಲ. ಪಕ್ಷದಲ್ಲಿ ಗುಂಪುಗಾರಿಕೆ ನಡೆಯುತ್ತಿದೆ. ಒಬ್ಬರು ಈಕಡೆ ಜಗ್ತಾರೆ,ಮತ್ತೊಬ್ಬರು ಇನ್ನೊಂದು ಕಡೆ ಜಗ್ತಾರೆ. ಇದು ಸರಿಯಲ್ಲ, ಇದು ಪಕ್ಷದ ಅವನತಿಗೆ ಕಾರಣ. ಹಾಗಾಗಿ ಎಲ್ಲರೂ ವೈಯುಕ್ತಿಕ ನಿಲುವು ಹೊರಗಿಡಬೇಕು. ಭಿನ್ನಾಬಿಪ್ರಾಯ ಬಿಟ್ಟು ಪಕ್ಷಕ್ಕೆ ದುಡಿಯಬೇಕು ಎಂದು ಲಾಬಿ ಮಾಡುವ ಕಾಂಗ್ರೆಸ್ಸಿಗರಿಗೆ ಕೋಳಿವಾಡ ತಿರುಗೇಟು ನೀಡಿದರು.
ವಲಸಿಗ, ಮೂಲಕಾಂಗ್ರೆಸ್ಸಿಗರು ಎಂಬುದಿಲ್ಲ. ಪಕ್ಷವನ್ನ ಬೆನ್ನಿಗಿಟ್ಟುಕೊಂಡು ಹೋದ್ರೆ ಮಾತ್ರ ನಾಯಕ. ಪಕ್ಷವನ್ನ ಹೊರತುಪಡಿಸಿ ಯಾರೂ ನಾಯಕರಲ್ಲ. ಅಧಿಕಾರಕ್ಕಾಗಿ ಕೋಳಿವಾಡ ಹೀಗೆ ಹೇಳ್ತಾನೆ ಅಂತ ಬೇಕಿಲ್ಲ. ನನಗೆ ಯಾವ ಸ್ಥಾನಮಾನವೂ ಬೇಡ. ಅಧಿಕಾರ, ಪದಾಧಿಕಾರವೂ ಬೇಡ. ಪಕ್ಷ ಉಳಿಯಬೇಕು, ಅದಕ್ಕೆ ಎಲ್ಲರೂ ಒಟ್ಟಾಗಬೇಕು. ಅಹಂ ಬಿಟ್ಟು ಪಕ್ಷಕ್ಕಾಗಿ ಎಲ್ಲರೂ ದುಡಿಯಬೇಕು ಎಂದು ವಿವರಿಸಿದರು.
ಸಮಸ್ಯೆ ಸೃಷ್ಟಿಯಾಗಿದೆ
ಸಿದ್ದರಾಮಯ್ಯ ದಿನೇಶ್ ಗುಂಡೂರಾವ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಾಗಿಂದಲೇ ಸಮಸ್ಯೆ ಸೃಷ್ಟಿಯಾಗಿದೆ. ಮಹಾನ್ ಲೀಡರ್ ಗಳು ಮೈನಸ್ ಕಾಂಗ್ರೆಸ್ ಅಂತ ಬರಲಿ ಆಗ ಇವರದ್ದೆಲ್ಲ ಗೊತ್ತಾಗತ್ತೆ. ಕಾಂಗ್ರೆಸ್ ಅನ್ನ ಸೋಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ನವರೇ ಕಾಂಗ್ರೆಸ್ ಸೋಲಿಸಬೇಕು ಎಂದು ವಿವರಿಸಿದರು.
ಮೇಲ್ಮನೆ ಇರಬೇಕು
ಆಂಧ್ರ ಮೇಲ್ಮನೆ ರದ್ಧುಪಡಿಸುವ ವಿಚಾರ ಮಾತನಾಡಿ, ಮೇಲ್ಮನೆ ಇರಬೇಕು, ಇದು ನನ್ನ ಅಭಿಪ್ರಾಯ. ಕಾರ್ಯಕರ್ತರಿಗೆ ಅಕಮಿಡೇಟ್ ಮಾಡಬೇಕೆಂಬುದಕ್ಕಲ್ಲ. ಕೆಳಮನೆಯಲ್ಲಿ ಆದ ಕಾನೂನು ಕೂಲಂಕುಶ ಚರ್ಚೆಗೆ ಬೇಕು. ಆದರೆ ಇತ್ತೀಚೆಗೆ ಅಕಮಿಡೇಶನ್ ಮಾಡೋಕೆ ಬಳಕೆಯಾಗ್ತಿದೆ. ಅಂತಹ ವ್ಯವಸ್ಥೆ ಮರೆಯಾಗಬೇಕಷ್ಟೇ. ಆದರೆ ಮೇಲ್ಮನೆ ಇದ್ದರೆ ಉಪಯೋಗವಾಗಲಿದೆ ಎಂದರು.
ಹಿರಿಯರಿಗೆ ಬೆಲೆ ಇಲ್ಲ
ಹಿರಿಯರನ್ನ ಮೂಲೆಗುಂಪು ಮಾಡ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರಿಗೆ ಬೆಲೆಯಿಲ್ಲ. ಯಾವುದೇ ಸಭೆಗಳಿಗೆ ನಮ್ಮನ್ನ ಕರೆಯುತ್ತಿಲ್ಲ. ನಮ್ಮನ್ನ ಕರೆದಿದ್ದ ಪಕ್ಷದ ಬಗ್ಗೆ ಸಲಹೆ ಕೊಡ್ತಿದ್ದೆವು. ನಾನು,ಖರ್ಗೆ,ಕಾಗೋಡು ಪಕ್ಷದ ಹಿರಿಯರು ಎಂದು ವಿವರಿಸಿದರು.




Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.