ಬೆಂಗಳೂರು: ಕರೊನಾ ಕರ್ಪ್ಯೂನಿಂದಾಗಿ ಎಲ್ಲ ಸ್ತರದ ಜನರು ತೊಂದರೆಗೀಡಾಗಿದ್ದಾರೆ. ಅದರಲ್ಲೂ ರಾಜ್ಯ ಸರಕಾರದಿಂದ ದಿನಸಿ ಸಾಮಗ್ರಿಗಳನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಹೊಂದದೇ ಇರುವವರ ಪರಿಸ್ಥಿತಿ ಬಹಳ ಗಂಭೀರವಾಗಿದೆ.
ಇಂತಹ ಬಿಪಿಎಲ್ ಕಾರ್ಡ್ ಇಲ್ಲದೇ ಇರುವ ಹಾಗೂ ನೂರಾರು ಕುಟುಂಬಗಳಿಗೆ ಇನ್ಪೋಸಿಸ್ ಫೌಂಡೇಶನ್ ವತಿಯಿಂದ ದಿನಸಿ ವಸ್ತುಗಳನ್ನು ಹೊಂದಿರುವ ಕಿಟ್ ವಿತರಿಸಲಾಯಿತು. ಇದಲ್ಲದೇ ವಿಶೇಷ ಚೇತನರಿಗೆ ಕೂಡಾ ದಿನಸಿ ವಸ್ತುಗಳನ್ನು ವಿತರಿಸಲಾಯಿತು.
ರಮೇಶ್ ರೆಡ್ಡಿ ನೇತೃತ್ವದ ತಂಡ ಇಂದು ನಗರದ ತಲಘಟ್ಟಪುರ ಪೊಲೀಸ್ ಠಾಣೆಯ ಬಳಿ ಸುಮಾರು 500 ಕುಟುಂಬಗಳಿಗೆ ರೇಷನ್ ಕಿಟ್ಗಳನ್ನು ವಿತರಿಸಿದರು.
ಶ್ರೀಮತಿ ಸುಧಾಮೂರ್ತಿ ಅವರ ನೇತೃತ್ವದಲ್ಲಿ ಇನ್ಪೋಸಿಸ್ ಫೌಂಡೇಶನ್ ವತಿಯಿಂದ ರಾಜ್ಯಾದ್ಯಂತ ಕರೊನಾದಿಂದ ತೊಂದರೆಗೀಡಾಗಿರುವ ಕುಟುಂಬಗಳಿಗೆ ಅಗತ್ಯ ದಿನ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ.