ETV Bharat / state

​​​​​​​ಪರಮೇಶ್ವರ್​ಗೆ ಎದುರಾಗಲಿದೆ ಇ.ಡಿ ಸಂಕಷ್ಟ: ಹವಾಲಾ ಹಣದ ತನಿಖೆ..?

ಮಾಜಿ ಡಿಸಿಎಂ ಪರಮೇಶ್ವರ ಅವರ ಮನೆ, ಕಚೇರಿ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದು, ಹವಾಲಾ ಹಣ ಪತ್ತೆಯಾದ ಕುರಿತು ಆದಾಯ ತೆರಿಗೆ ಇಲಾಖೆ ಪ್ರಕಟಣೆ ನೀಡಿತ್ತು. ಇದರಿಂದ ಇಡಿ ಕೂಡಾ ವಿಚಾರಣೆ ನಡೆಸುವ ಸಾಧ್ಯತೆಗಳು ದಟ್ಟವಾಗಿವೆ.

author img

By

Published : Oct 12, 2019, 9:43 AM IST

ಮಾಜಿ ಡಿಸಿಎಂ ಪರಮೇಶ್ವರ್

ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರ ಸ್ವಗೃಹ, ಕಚೇರಿ ಮೇಲೆ ಈಗಾಗಲೇ ಐಟಿ ದಾಳಿ ನಡೆಸಿದ್ದು, ಎರಡು ದಿನಗಳಿಂದ ಅವರ ಒಡೆತನದ ವಿದ್ಯಾಸಂಸ್ಥೆಗಳ ಮೇಲೂ ಐಟಿ ದಾಳಿ ನಡೆಯುತ್ತಿದೆ.

Former DCM parameshwar face ED  Inquiry
ಆದಾಯ ತೆರಿಗೆ ಇಲಾಖೆ ಪ್ರಕಟಿಸಿದ

ಸದ್ಯ ಮನೆಯ ಮೇಲಿನ ದಾಳಿ ಮುಕ್ತಾಯವಾಗಿದ್ದು, ಅಕ್ಟೋಬರ್ 11ರಂದು ಐಟಿ ಇಲಾಖೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, ಹವಾಲಾ ಹಣದ ಬಗ್ಗೆ ಉಲ್ಲೇಖ ಮಾಡಿದೆ. ಹೀಗಾಗಿ ಹವಾಲಾ ವ್ಯವಹಾರ ಕಂಡು ಬಂದ ಹಿನ್ನಲೆ ಇ.ಡಿ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಪರಮೇಶ್ವರ್ ಅವರು ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಮಾತ್ರವಲ್ಲದೇ, ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿಚಾರಣೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ, ‌ಪಿಎಂಎಲ್​​ಎ ಕಾಯ್ದೆಯ ಅಡಿಯಲ್ಲಿ ಹವಾಲಾ ಹಣದ ತನಿಖೆಯನ್ನ ಇ.ಡಿ ಕೈಗೆತ್ತಿಕೊಳ್ಳಲಿದೆ. ಹೀಗಾಗಿ ಪರಮೇಶ್ವರ್​ಗೆ ಇ.ಡಿ ಸಂಕಷ್ಟ ಖಚಿತ ಎಂದು ಉನ್ನತ ಮೂಲಗಳು ತಿಳಿಸಿವೆ.

ಒಂದು ವೇಳೆ ಪಿಎಂಎಲ್​ಎ ಕಾಯ್ದೆಯ ಅಡಿಯಲ್ಲಿ ಇ.ಡಿ ಪ್ರಕರಣ ದಾಖಲಿಸಿ ಪ್ರಕರಣ ಕೈಗೆತ್ತಿಕೊಂಡರೆ ಪರಮೇಶ್ವರ್​ಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.

ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನೆ, ಕಚೇರಿ ಮೇಲೆ ಮೊದಲು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ನಂತರ, ಪ್ರಕರಣವನ್ನು ಇಡಿಗೆ ವರ್ಗಾವಣೆ ಮಾಡಿತ್ತು. ಸದ್ಯ ಪರಮೇಶ್ವರ್ ಪ್ರಕರಣವನ್ನ ಕೂಡ ಇಡಿಗೆ ಆದಾಯ ತೆರಿಗೆ ವರ್ಗಾವಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ.

ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರ ಸ್ವಗೃಹ, ಕಚೇರಿ ಮೇಲೆ ಈಗಾಗಲೇ ಐಟಿ ದಾಳಿ ನಡೆಸಿದ್ದು, ಎರಡು ದಿನಗಳಿಂದ ಅವರ ಒಡೆತನದ ವಿದ್ಯಾಸಂಸ್ಥೆಗಳ ಮೇಲೂ ಐಟಿ ದಾಳಿ ನಡೆಯುತ್ತಿದೆ.

Former DCM parameshwar face ED  Inquiry
ಆದಾಯ ತೆರಿಗೆ ಇಲಾಖೆ ಪ್ರಕಟಿಸಿದ

ಸದ್ಯ ಮನೆಯ ಮೇಲಿನ ದಾಳಿ ಮುಕ್ತಾಯವಾಗಿದ್ದು, ಅಕ್ಟೋಬರ್ 11ರಂದು ಐಟಿ ಇಲಾಖೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, ಹವಾಲಾ ಹಣದ ಬಗ್ಗೆ ಉಲ್ಲೇಖ ಮಾಡಿದೆ. ಹೀಗಾಗಿ ಹವಾಲಾ ವ್ಯವಹಾರ ಕಂಡು ಬಂದ ಹಿನ್ನಲೆ ಇ.ಡಿ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಪರಮೇಶ್ವರ್ ಅವರು ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಮಾತ್ರವಲ್ಲದೇ, ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿಚಾರಣೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ, ‌ಪಿಎಂಎಲ್​​ಎ ಕಾಯ್ದೆಯ ಅಡಿಯಲ್ಲಿ ಹವಾಲಾ ಹಣದ ತನಿಖೆಯನ್ನ ಇ.ಡಿ ಕೈಗೆತ್ತಿಕೊಳ್ಳಲಿದೆ. ಹೀಗಾಗಿ ಪರಮೇಶ್ವರ್​ಗೆ ಇ.ಡಿ ಸಂಕಷ್ಟ ಖಚಿತ ಎಂದು ಉನ್ನತ ಮೂಲಗಳು ತಿಳಿಸಿವೆ.

ಒಂದು ವೇಳೆ ಪಿಎಂಎಲ್​ಎ ಕಾಯ್ದೆಯ ಅಡಿಯಲ್ಲಿ ಇ.ಡಿ ಪ್ರಕರಣ ದಾಖಲಿಸಿ ಪ್ರಕರಣ ಕೈಗೆತ್ತಿಕೊಂಡರೆ ಪರಮೇಶ್ವರ್​ಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.

ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನೆ, ಕಚೇರಿ ಮೇಲೆ ಮೊದಲು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ನಂತರ, ಪ್ರಕರಣವನ್ನು ಇಡಿಗೆ ವರ್ಗಾವಣೆ ಮಾಡಿತ್ತು. ಸದ್ಯ ಪರಮೇಶ್ವರ್ ಪ್ರಕರಣವನ್ನ ಕೂಡ ಇಡಿಗೆ ಆದಾಯ ತೆರಿಗೆ ವರ್ಗಾವಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ.

Intro:ಪರಮೇಶ್ವರ್ ಗೆ ಎದುರಾಗಲಿದೆ ಇ.ಡಿ ಸಂಕಷ್ಟ
ಐಟಿ ದಾಳಿಯ ನಂತರ ಪರಮೇಶ್ವರ್ ಗೆ ಮತ್ತೊಂದು ಶಾಕ್

ಪರಮೇಶ್ವರ್ ಮನೆ ಕಚೇರಿ ಶಿಕ್ಷಣ ಸಂಸ್ಥೆಗಳ ಮೇಲೆ ಈಗಾಗ್ಲೇ ಐಟಿ ದಾಳಿ ಮಾಡಿದ್ದು ಕಳೆದ ಎರಡು ದಿನಗಳಿಂದ ಪರಮೇಶ್ವರ್ ಒಡೆತನದ ವಿದ್ಯಾಸಂಸ್ಥೆಗಳಲ್ಲಿ ಐಟಿ ದಾಳಿ ನಡೆಯುತ್ತಿದೆ .

ಸದ್ಯ ಮನೆಯ ಮೇಲಿನ ದಾಳಿ ಮುಕ್ತಾಯವಾಗಿದ್ದು ನಿನ್ನೆ ಐಟಿ ಇಲಾಖೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಹವಾಲಾ ಹಣದ ಬಗ್ಗೆ ಉಲ್ಲೇಖ ಮಾಡಿದೆ. ಹೀಗಾಗಿ ಹವಾಲ ವ್ಯವಹಾರ ಕಂಡು ಬಂದ ಹಿನ್ನಲೆ ಇ.ಡಿ ಪ್ರಕರಣವನ್ನ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಪರಮೇಶ್ವರ್ ಅವರು ಆದಾಯತೆರಿಗೆ ಇಲಾಖೆ ವಿಚಾರಣೆಗೆ ಮಾತ್ರವಲ್ಲದೇ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿಚಾರಣೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ‌ಪಿಎಂಎಲ್ ಎ ಕಾಯ್ದೆಯ ಆಡಿಯಲ್ಲಿ ಹವಾಲ ಹಣದ ತನಿಖೆಯನ್ನ ಇ.ಡಿ ಮಾಡುತ್ತೆ ಹೀಗಾಗಿ ಪರಮೇಶ್ವರ್ ಗೆ ಇ.ಡಿ ಸಂಕಷ್ಟ ಖಚಿತ ಎಂದು ಉನ್ನತ ಮೂಲಗಳು ತಿಳಿದು ಬಂದಿದೆ. ಒಂದು ವೇಳೆ ಪಿಎಂಎಲ್ ಎ ಕಾಯ್ದೆಯ ಆಡಿಯಲ್ಲಿ ಇಡಿ ಪ್ರಕರಣ ದಾಖಲಿಸಿ ಪ್ರಕರಣ ಕೈಗೆತ್ತಿಕೊಂಡರೆ ಪರಂಮೇಶ್ವರ್ಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ

ಇದಕ್ಕಿಂತ ಹಿಂದೆ ಈಗಾಗ್ಲೇ ಬಂಧನವಾಗಿರುವ ಡಿಕೆ ಶಿವಕುಮಾರ್ ಮನೆ ಕಚೇರಿ ಮೇಲೆ ಮೊದಲು ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿತ್ತು. ನಂತ್ರ ಪ್ರಕರಣವನ್ನ ಇಡಿಗೆ ಪ್ರಕರಣ ವರ್ಗಾವಣೆ ಮಾಡಿತ್ತು. ಸದ್ಯ ಪರಮೇಶ್ವರ್ ಪ್ರಕರಣವನ್ನ ಕೂಡ ಇಡಿಗೆ ಆದಾಯತೆರಿಗೆ ವರ್ಗಾವಣೆ ಮಾಡುವ ಎಲ್ಲಾ ಲಕ್ಷಣ ಕಾಣುತ್ತಿದೆBody:Kn_BNG_02_ED_7204498Conclusion:Kn_BNG_02_ED_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.