ETV Bharat / state

ದ್ವಿತೀಯ ಪಿಯು ಪರೀಕ್ಷೆ: ಕಿಂಗ್​ಪಿನ್​ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಚಿವರ ಸೂಚನೆ

author img

By

Published : Oct 16, 2019, 7:37 PM IST

ಪಿಯುಸಿ ಪರೀಕ್ಷೆ ಮಾರ್ಚ್​ ತಿಂಗಳಿನಲ್ಲಿ ಆರಂಭವಾಗಲಿದ್ದು, ಈ ಬಾರಿಯ ಎಲ್ಲಾ ಸಿದ್ಧತೆಗಳ ಕುರಿತು ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್​ ಸುದ್ದಿಗೋಷ್ಟಿ ನಡೆಸಿದ್ದಾರೆ.

ಸುರೇಶ್ ಕುಮಾರ್

ಬೆಂಗಳೂರು: ಪಿಯುಸಿ ಪರೀಕ್ಷೆಯು ಮಾರ್ಚ್ ತಿಂಗಳಲ್ಲಿ ನಡೆಯಲಿದ್ದು, ಈ‌ ಕುರಿತು ಸಂಪೂರ್ಣವಾಗಿ ಪರಿಶೀಲನೆ ಮಾಡಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುರೇಶ್​ ಕುಮಾರ್​ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಿಯು ಪರೀಕ್ಷೆ ಹಿನ್ನೆಲೆ, ಮೂರು ಹಂತಗಳಲ್ಲಿ ಈ ವರ್ಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೇಪರ್ ಸೋರಿಕೆ ಆಗದಂತೆ, ಸಾಮೂಹಿಕ ನಕಲಿಗೆ ಅವಕಾಶ ಕೊಡದಂತೆ ಹಾಗೂ ಮೌಲ್ಯ ಮಾಪನದಲ್ಲಿ ಅನ್ಯಾಯ ಆಗದಂತೆ ನೋಡಿಕೊಳ್ಳಲು ಸಭೆ ನಡೆಸಿರುವುದಾಗಿ ಹೇಳಿದರು.

ಇನ್ನು ಕಳೆದ 4 ವರ್ಷದ ಹಿಂದೆ ಪಿಯು ಕೆಮಿಸ್ಟ್ರಿ ಪರೀಕ್ಷೆ ಎಷ್ಟು ದೊಡ್ಡ ಸಮಸ್ಯೆ ಆಗಿತ್ತು ಎಂಬುದನ್ನ ನೋಡಿದ್ದೇವೆ. ಇಂದಿಗೂ ಅದನ್ನ ನೆನಪು ಮಾಡಿಕೊಂಡರೆ ಗಾಬರಿ ಆಗುತ್ತೆ. ನಿನ್ನೆ ಕೂಡ ಈ ಸಂಬಂಧ ಪೊಲೀಸ್ ಇಲಾಖೆ ಜೊತೆ ಮಾತಾಡಿದ್ದೇನೆ. ಈ ಕಿಂಗ್​ಪಿನ್​ಗಳ ಕುರಿತು ಎಚ್ಚರ ವಹಿಸಲು ಹೇಳಿದ್ದೇನೆ. ಇನ್ನು ಜನವರಿಯಲ್ಲಿ ಪೊಲೀಸ್​ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಜೊತೆಗೆ ಜಂಟಿ ಸಭೆ ನಡೆಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ರು.

ಇನ್ನು, ಮೌಲ್ಯಮಾಪನ ಸಂದರ್ಭದಲ್ಲಿ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸುವ ವಿಚಾರವಾಗಿ ಮಾತನಾಡಿದ ಸಚಿವರು, ಎಲ್ಲಾ ಮೌಲ್ಯಮಾಪಕರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಬಹಿಷ್ಕಾರ ಮಾಡಬೇಡಿ, ನಾನು ನಿಮ್ಮ ಜೊತೆ ಸಭೆ ಕರೆದು ಮಾತನಾಡುತ್ತೇನೆ. ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದ್ರು.

ಬೆಂಗಳೂರು: ಪಿಯುಸಿ ಪರೀಕ್ಷೆಯು ಮಾರ್ಚ್ ತಿಂಗಳಲ್ಲಿ ನಡೆಯಲಿದ್ದು, ಈ‌ ಕುರಿತು ಸಂಪೂರ್ಣವಾಗಿ ಪರಿಶೀಲನೆ ಮಾಡಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುರೇಶ್​ ಕುಮಾರ್​ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಿಯು ಪರೀಕ್ಷೆ ಹಿನ್ನೆಲೆ, ಮೂರು ಹಂತಗಳಲ್ಲಿ ಈ ವರ್ಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೇಪರ್ ಸೋರಿಕೆ ಆಗದಂತೆ, ಸಾಮೂಹಿಕ ನಕಲಿಗೆ ಅವಕಾಶ ಕೊಡದಂತೆ ಹಾಗೂ ಮೌಲ್ಯ ಮಾಪನದಲ್ಲಿ ಅನ್ಯಾಯ ಆಗದಂತೆ ನೋಡಿಕೊಳ್ಳಲು ಸಭೆ ನಡೆಸಿರುವುದಾಗಿ ಹೇಳಿದರು.

ಇನ್ನು ಕಳೆದ 4 ವರ್ಷದ ಹಿಂದೆ ಪಿಯು ಕೆಮಿಸ್ಟ್ರಿ ಪರೀಕ್ಷೆ ಎಷ್ಟು ದೊಡ್ಡ ಸಮಸ್ಯೆ ಆಗಿತ್ತು ಎಂಬುದನ್ನ ನೋಡಿದ್ದೇವೆ. ಇಂದಿಗೂ ಅದನ್ನ ನೆನಪು ಮಾಡಿಕೊಂಡರೆ ಗಾಬರಿ ಆಗುತ್ತೆ. ನಿನ್ನೆ ಕೂಡ ಈ ಸಂಬಂಧ ಪೊಲೀಸ್ ಇಲಾಖೆ ಜೊತೆ ಮಾತಾಡಿದ್ದೇನೆ. ಈ ಕಿಂಗ್​ಪಿನ್​ಗಳ ಕುರಿತು ಎಚ್ಚರ ವಹಿಸಲು ಹೇಳಿದ್ದೇನೆ. ಇನ್ನು ಜನವರಿಯಲ್ಲಿ ಪೊಲೀಸ್​ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಜೊತೆಗೆ ಜಂಟಿ ಸಭೆ ನಡೆಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ರು.

ಇನ್ನು, ಮೌಲ್ಯಮಾಪನ ಸಂದರ್ಭದಲ್ಲಿ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸುವ ವಿಚಾರವಾಗಿ ಮಾತನಾಡಿದ ಸಚಿವರು, ಎಲ್ಲಾ ಮೌಲ್ಯಮಾಪಕರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಬಹಿಷ್ಕಾರ ಮಾಡಬೇಡಿ, ನಾನು ನಿಮ್ಮ ಜೊತೆ ಸಭೆ ಕರೆದು ಮಾತನಾಡುತ್ತೇನೆ. ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದ್ರು.

Intro:ಕಿಂಗ್ ಪಿನ್ ಗಳ ಕುರಿತು ಎಚ್ಚರಿಕೆ ವಹಿಸಬೇಕು; ಶಿಕ್ಷಣ ಸಚಿವ ಸುರೇಶ್ ಕುಮಾರ್..

ಬೆಂಗಳೂರು: ಪಿಯುಸಿ ಪರೀಕ್ಷೆಯು ಮಾರ್ಚ್ ತಿಂಗಳಲ್ಲಿ ನಡೆಯಲಿದ್ದು, ಈ‌ ಕುರಿತು ಸಂಪೂರ್ಣ ವಾಗಿ ರಿವ್ಯೂ ಮಾಡಿದ್ದೇನೆ ಅಂತ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು..‌
ಪಿಯು ಪರೀಕ್ಷೆ ಹಿನ್ನೆಲೆ, ಮೂರು ಹಂತದಲ್ಲಿ ಈ ವರ್ಷ ಸಿದ್ದತೆ ಮಾಡಿಕೊಳ್ಳಲಾಗಿದೆ. ಪೇಪರ್ ಲೀಕ್ ಆಗದಂತೆ, ಸಾಮೂಹಿಕ ನಕಲಿಗೆ ಅವಕಾಶ ಕೊಡದಂತೆ ಹಾಗೂ ಮೌಲ್ಯ ಮಾಪನದಲ್ಲಿ ಅನ್ಯಾಯ ಆಗಬಾರದಂತೆ ಈ ಕುರಿತು ಸಭೆ ನಡೆಸಿರುವುದಾಗಿ ತಿಳಿಸಿದರು..

ಇನ್ನು ಕಳೆದ 4 ವರ್ಷದ ಹಿಂದೆ ಪಿಯು ಕೆಮಿಸ್ಟ್ರಿ
ಪರೀಕ್ಷೆ ಎಷ್ಟು ದೊಡ್ಡ ಸಮಸ್ಯೆ ಆಗಿದೆ ಎಂಬುದನ್ನ ನೋಡಿದ್ದೇವೆ..‌ ಇಂದಿಗೂ ಅದನ್ನ ನೆನಪು ಮಾಡಿಕೊಂಡರೆ ಗಾಬರಿ ಆಗುತ್ತೆ..‌ನಿನ್ನೆ ಕೂಡ ಈ ಸಂಬಂಧ ಪೊಲೀಸ್ ಇಲಾಖೆ ಜೊತೆ ಮಾತಾಡಿದ್ದೇನೆ..‌ ಈ ಕಿಂಗ್ ಪಿನ್ ಗಳ ಕುರಿತು ಎಚ್ಚರ ವಹಿಸಲು ಹೇಳಿದ್ದೇನೆ.. ಇನ್ನು ಜನವರಿಯಲ್ಲಿ ಪೋಲಿಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಜೊತೆಗೆ ಜಂಟಿ ಸಭೆ ನಡೆಸಲಾಗುವುದು ಅಂತ ಮಾಹಿತಿ ನೀಡಿದರು..

ಇನ್ನು ಮೌಲ್ಯಮಾಪನ ಸಂದರ್ಭದಲ್ಲಿ ಉಪನ್ಯಾಸಕರಿಂದ ಮೌಲ್ಯಮಾಪನ ಬಹಿಷ್ಕಾರ ಮಾಡುವ ವಿಚಾರವಾಗಿ ಮಾತಾನಾಡಿದ ಅವರು, ಎಲ್ಲಾ ಮೌಲ್ಯಮಾಪಕರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ.. ಯಾವುದೇ ಕಾರಣಕ್ಕೂ ಬಹಿಷ್ಕಾರ ಮಾಡಬೇಡಿ, ನಾನು ನಿಮ್ಮ ಜೊತೆ ಸಭೆ ಕರೆದು ಮಾತನಾಡುತ್ತೇನೆ..ನಿಮ್ಮ ಬೇಡಿಕೆಗಳ ಈಡೇರಿಸುತ್ತೇನೆ ಇದೇ ವೇಳೆ ಭರವಸೆ ನೀಡಿದರು..

========================

*ಫಲಿತಾಂಶ ಹೆಚ್ಚಿಸಲು ಹಿಂದಿನ ಡೈರೆಕ್ಟರ್, ಕಮಿಷನರ್ ಮೊರೆ*

ಪರೀಕ್ಷಾ ಫಲಿತಾಂಶ, ಮಾಸ್ ಕಾಫಿ, ಪೇಪರ್ ಲೀಕ್ ತಡೆಗಟ್ಟಲು, ಹಳೆಯ ಅಧಿಕಾರಿಗಳ‌ ಮೊರೆ ಹೋಗಲಿದ್ದಾರೆ, ಸುರೇಶ್ ಕುಮಾರ್..
ಪಿಯುಸಿ ಹಿಂದಿನ‌ ಡೈರೆಕ್ಟರ್ ಸಿ ಶಿಖಾ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಾಫರ್ ಸೇರಿದಂತೆ ಹಲವು ಹಿಂದಿನ ಡೈರೆಕ್ಟರ್ ಗಳ ಸಭೆ ಕರೆದು ಚರ್ಚೆ ನಡೆಸಲಿದ್ದಾರೆ.. ಅವರು‌ ನೀಡುವ ಸಲಹೆಗಳನ್ನು ಪರಿಗಣಿಸುವುದಾಗಿ ಹೇಳಿದ್ದಾರೆ..

**ನೆರೆ ಪೀಡಿತ ಮಕ್ಕಳಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಆಗಬೇಕು**

ನೆರೆ ಪೀಡಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ.. ಡಿಡಿಪಿಐ , ಬಿಇಓ ವಾರದಲ್ಲಿ ಕನಿಷ್ಟ ೫ ಶಾಲೆಗೆ ಹೋಗಬೇಕು..ಬೆಳಗಾವಿ, ಚಿಕ್ಕೂಡಿ ಸೇರಿದಂತೆ ೪ ಜಿಲ್ಲೆಗಳಿಗೆ ಪ್ರವಾಸ ಮಾಡಲಿದ್ದು, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುವುದು ಅಂತ ಹೇಳಿದರು..

***ಶಿಕ್ಷಣ ಇಲಾಖೆಗೆ ಮಕ್ಕಳ‌ ಹಕ್ಕುಗಳ ರಕ್ಷಣಾ ಆಯೋಗದಿಂದ‌ ನೋಟೀಸ್***

ಈ ಶೈಕ್ಷಣಿಕ ವರ್ಷದಿಂದ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಹಿನ್ನಲೆ, ಇದು ಕಡ್ಡಾಯ ಉಚಿತ ಶಿಕ್ಷಣಕ್ಕೆ ವಿರುದ್ದವಾಗಿದೆ ಎಂದು ನೋಟಿಸ್ ನೀಡಲಾಗಿತ್ತು.. ಈ ಸಂಬಂಧ ಪ್ರತಿಕ್ರಿಯಿಸಿದ ಸಚಿವರು‌ನಂಗೆ ನೋಟೀಸ್ ಬಂದಿಲ್ಲಾ, ಇಲಾಖೆ‌ಯ ಪ್ರಧಾನ ಕಾರ್ಯದರ್ಶಿಗೆ ಬಂದಿದೆ ಅಂತ ತಿಳಿಸಿದರು..‌

ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮಾಹಿತಿ‌ ನೀಡಿ,‌‌ ನೋಟೀಸ್ ಕುರಿತು ಸಚಿವರಿಗೆ ಗೊತ್ತಿಲ್ಲಾ.. ಈ ಕುರಿತು ಸಚಿವರ ಜೊತೆ ಸಭೆ ನಡೆಸಿ ನಂತರ ಸಚಿವರ ಮೂಲಕ‌ ಪ್ರತಿಕ್ರಿಯೆ ನೀಡಲಾಗುವುದು ಅಂತ ತಿಳಿಸಿದರು...

ಇನ್ನು ಇಂದು ಶಿಕ್ಷಣ ಇಲಾಖಾ ಸಚಿವಾಲಯದಲ್ಲಿ ಕಡತ ವಿಲೇವಾರಿ ಕುರಿತಂತೆ ಪ್ರಗತಿ ಪರಿಶೀಲನೆಯನ್ನು ನಡೆಸಿ ಇಲಾಖೆಯಲ್ಲಿ ಬಾಕಿ ಉಳಿಯುತ್ತಿರುವ ಪ್ರಸ್ತಾವನೆಗಳು ಕಾಲಮಿತಿಯಲ್ಲಿ‌ ಇತ್ಯರ್ಥಗೊಳಿಸಲು ಸ್ಪಷ್ಟ ಸೂಚನೆಗಳನ್ನು ನೀಡಿದರು.

೫೦೯೯ ಕಡತಗಳು ಇನ್ನೂ ನಮ್ಮ ಇಲಾಖೆಯಲ್ಲಿ ಬಾಕಿಯಾಗಿವೆ.. ೪೫ ದಿನದ ಅವಧಿಯಲ್ಲಿ ೧೭೩ ಫೈಲ್ ಒಪನ್ ಮಾಡಲಾಗಿದೆ.. ಅದೆ ೪೫ ದಿನದಲ್ಲಿ ೪೦೦ ಪೈಲ್ ಕ್ಲೀಯರ್ ಮಾಡಲಾಗಿದೆ..
ಕಡತ ವಿಲೇವಾರಿಗೆ ಮುಖ್ಯ ಕಾರಣ ಅಧಿಕಾರಿಗಳ ಕೊರತೆ, ಸೆಕ್ಷನ್ ಇನ್ ಚಾರ್ಜ್ ಇಲ್ಲದೇ ಇರೋದು ಅಂತ‌ ಸುರೇಶ್ ಕುಮಾರ್ ತಿಳಿಸಿದರು..

KN_BNG_2_EDUCATION_PC_MINISTER_SCRIPT_7201801
Body:.Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.