ETV Bharat / state

ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್​ ಸಂಪತ್ ರಾಜ್​​ ಬಂಧನಕ್ಕೆ ಸಿಸಿಬಿ‌ ತಲಾಷ್

author img

By

Published : Nov 5, 2020, 9:53 AM IST

ಡಿ. ಜೆ. ಹಳ್ಳಿ, ಕೆ. ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಪತ್​ ರಾಜ್​ ಬಂಧನಕ್ಕೆ ಸಿಸಿಬಿ ಪೊಲೀಸರು ತಲಾಷ್​ ನಡೆಸಿದ್ದಾರೆ. ಇದಕ್ಕಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದು, ಆತ ಮುಂಬೈ ಕಡೆಗೆ ಪ್ರಯಾಣ ಮಾಡಿರುವ ಗುಮಾನಿ ಮೇರೆಗೆ ಒಂದು ತಂಡ ಮುಂಬೈಗೆ ತೆರಳಿ ಶೋಧ ನಡೆಸುತ್ತಿದೆ ಎಂದು ಹೇಳಲಾಗ್ತಿದೆ.

dj-hlli-riot-case-ccb-search-for-sampath-raj
ಮೂರು ವಿಶೇಷ ತಂಡ ಸಂಪತ್​​ ರಾಜ್​​ ಬೆನ್ನತ್ತಿದೆ, ಆತ ಮುಂಬೈ ಕಡೆಗೆ ಪ್ರಯಾಣ ಮಾಡಿರುವ ಗುಮಾನಿ ಮೇರೆಗೆ ಒಂದು ತಂಡ ಮುಂಬೈಗೆ ತೆರಳಿ ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಡಿ.ಜೆ. ಹಳ್ಳಿ, ಕೆ. ಜಿ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಮಾಜಿ ‌ಮೇಯರ್ ಸಂಪತ್ ರಾಜ್​​ಗೆ ಸಿಸಿಬಿ‌ ಎಲ್ಲೆಡೆ ತಲಾಷ್ ನಡೆಸಿದೆ.

ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಂಪತ್​​ ರಾಜ್​ ಮೈಸೂರಿಗೆ ತೆರಳಿ ಅಲ್ಲಿ ಖಾಸಗಿ ಹೋಟೆಲ್​​​ನಲ್ಲಿ ತಂಗಿದ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಹೋಟೆಲ್ ಮೇಲೆ ನಿನ್ನೆ ತಡರಾತ್ರಿ ಸಿಸಿಬಿ ದಾಳಿ ನಡೆಸಿ ಪರಿಶೀಲನೆ ಮಾಡಿದಾಗ ಸಂಪತ್​ ರಾಜ್​​ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ. ಅಲ್ಲಿಂದ ಸಂಪತ್ ರಾಜ್​​ ಮತ್ತೆ ಪರಾರಿ ಆಗಿದ್ದಾರೆ ಎನ್ನಲಾಗುತ್ತಿದೆ.

ಮೂರು ವಿಶೇಷ ತಂಡಗಳು ಸಂಪತ್​​ ರಾಜ್​​ ಬೆನ್ನಟ್ಟಿವೆ, ಮಾಜಿ ಮೇಯರ್​ ಮುಂಬೈ ಕಡೆಗೆ ಪ್ರಯಾಣ ಬೆಳೆಸಿರುವ ಗುಮಾನಿ ಮೇರೆಗೆ ಒಂದು ತಂಡ ಮುಂಬೈಗೆ ತೆರಳಿ ಶೋಧ ನಡೆಸುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಮತ್ತೊಂದೆಡೆ ಆಸ್ಪತ್ರೆಯಿಂದ ತೆರಳುವ ಸಿಸಿಟಿವಿ ದೃಶ್ಯಗಳನ್ನು ಕೂಡ ಜಪ್ತಿ ಮಾಡಿದ್ದು, ಆತ ತೆರಳಿದ ಮಾರ್ಗಗಳು ಲೋಕೇಷನ್ ಆಧಾರದ ಮೇರೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸದ್ಯ ತಲೆಮರೆಸಿಕೊಂಡಿರುವ, ಸಂಪತ್​ ರಾಜ್​​ಗೆ ನ್ಯಾಯಾಲಯ ಕೂಡ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿದೆ. ಹೀಗಾಗಿ ಸಂಪತ್​​ ತಾನೇ ಖುದ್ದಾಗಿ ಬಂದು ವಿಚಾರಣೆಗೆ ಹಾಜರಾಗಬೇಕು. ಅಥವಾ ಸಿಸಿಬಿ ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದಾಗ ವಿಚಾರಣೆಗೆ ಸಹಕಾರ ನೀಡಬೇಕಾದದ್ದು ಅನಿವಾರ್ಯವಾಗಲಿದೆ.

ಬೆಂಗಳೂರು: ಡಿ.ಜೆ. ಹಳ್ಳಿ, ಕೆ. ಜಿ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಮಾಜಿ ‌ಮೇಯರ್ ಸಂಪತ್ ರಾಜ್​​ಗೆ ಸಿಸಿಬಿ‌ ಎಲ್ಲೆಡೆ ತಲಾಷ್ ನಡೆಸಿದೆ.

ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಂಪತ್​​ ರಾಜ್​ ಮೈಸೂರಿಗೆ ತೆರಳಿ ಅಲ್ಲಿ ಖಾಸಗಿ ಹೋಟೆಲ್​​​ನಲ್ಲಿ ತಂಗಿದ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಹೋಟೆಲ್ ಮೇಲೆ ನಿನ್ನೆ ತಡರಾತ್ರಿ ಸಿಸಿಬಿ ದಾಳಿ ನಡೆಸಿ ಪರಿಶೀಲನೆ ಮಾಡಿದಾಗ ಸಂಪತ್​ ರಾಜ್​​ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ. ಅಲ್ಲಿಂದ ಸಂಪತ್ ರಾಜ್​​ ಮತ್ತೆ ಪರಾರಿ ಆಗಿದ್ದಾರೆ ಎನ್ನಲಾಗುತ್ತಿದೆ.

ಮೂರು ವಿಶೇಷ ತಂಡಗಳು ಸಂಪತ್​​ ರಾಜ್​​ ಬೆನ್ನಟ್ಟಿವೆ, ಮಾಜಿ ಮೇಯರ್​ ಮುಂಬೈ ಕಡೆಗೆ ಪ್ರಯಾಣ ಬೆಳೆಸಿರುವ ಗುಮಾನಿ ಮೇರೆಗೆ ಒಂದು ತಂಡ ಮುಂಬೈಗೆ ತೆರಳಿ ಶೋಧ ನಡೆಸುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಮತ್ತೊಂದೆಡೆ ಆಸ್ಪತ್ರೆಯಿಂದ ತೆರಳುವ ಸಿಸಿಟಿವಿ ದೃಶ್ಯಗಳನ್ನು ಕೂಡ ಜಪ್ತಿ ಮಾಡಿದ್ದು, ಆತ ತೆರಳಿದ ಮಾರ್ಗಗಳು ಲೋಕೇಷನ್ ಆಧಾರದ ಮೇರೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸದ್ಯ ತಲೆಮರೆಸಿಕೊಂಡಿರುವ, ಸಂಪತ್​ ರಾಜ್​​ಗೆ ನ್ಯಾಯಾಲಯ ಕೂಡ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿದೆ. ಹೀಗಾಗಿ ಸಂಪತ್​​ ತಾನೇ ಖುದ್ದಾಗಿ ಬಂದು ವಿಚಾರಣೆಗೆ ಹಾಜರಾಗಬೇಕು. ಅಥವಾ ಸಿಸಿಬಿ ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದಾಗ ವಿಚಾರಣೆಗೆ ಸಹಕಾರ ನೀಡಬೇಕಾದದ್ದು ಅನಿವಾರ್ಯವಾಗಲಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.