ETV Bharat / state

ಬಂಧಿಸಿದ ಆರೋಪಿಗೆ ಕೊರೊನಾ‌: ಆ್ಯಂಬುಲೆನ್ಸ್​​ಗಾಗಿ ಸೋಂಕಿತ ಎಎಸ್​ಐ ಪರದಾಟ

author img

By

Published : Jul 8, 2020, 3:49 PM IST

ಬನಶಂಕರಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ ಆರೋಪಿ ಮತ್ತು ಕಾಮಾಕ್ಷಿಪಾಳ್ಯ ಠಾಣೆ ಎಎಸ್​​​ಐಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಎರಡು ಠಾಣೆಗಳನ್ನು ಸೀಲ್ ​ಡೌನ್​ ಮಾಡಲಾಗಿದೆ.

Kamakshipalya Station
ಕಾಮಾಕ್ಷಿ ಪಾಳ್ಯ ಠಾಣೆ

ಬೆಂಗಳೂರು: ಬಂಧಿಸಿದ ಆರೋಪಿಗೆ ಕೊರೊನಾ ಸೋಂಕು ಅಂಟಿದ್ದು, ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಬನಶಂಕರಿ ಪೊಲೀಸ್ ಠಾಣೆಯ 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕ್ವಾರಂಟೈನ್​ ಮಾಡಲಾಗಿದೆ.

ಭದ್ರುಲ್ ನಸ್ಕರ್ ಎಂಬ ಆರೋಪಿಯನ್ನು ಬಂಧಿಸಿದ ಬಳಿಕ ಕೊರೊನಾ ಪರೀಕ್ಷೆಗೆ ಒಳಪಡಿಸಲಾಯಿತು. ಇದೀಗ ವರದಿ ಬಂದಿದ್ದು, ಅದರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಿದ ಇನ್ಸ್​​ಪೆಕ್ಟರ್​​, ಸಬ್ ಇನ್ಸ್​​ಪೆಕ್ಟರ್​​, ಕಾನ್ಸ್‌ಟೇಬಲ್​​​​ ಸೋಂಕು ತಗಲುವ ಆತಂಕದಲ್ಲಿದ್ದಾರೆ. ಠಾಣೆಯನ್ನು ಸೀಲ್​​​ ಡೌನ್ ಮಾಡಲಾಗಿದೆ.

ಕಾಮಾಕ್ಷಿಪಾಳ್ಯ ಠಾಣೆ ಎಎಸ್​​​ಐ ಪರದಾಟ

ಸೋಂಕು ತಗುಲಿದ್ದ ಕಾಮಾಕ್ಷಿಪಾಳ್ಯ ಠಾಣೆ ಇನ್ಸ್​ಪೆಕ್ಟರ್ ಸಂಪರ್ಕದಲ್ಲಿದ್ದ ಎಎಸ್​​​ಐಗೆ ಕೊರೊನಾ ದೃಢವಾಗಿದೆ. ಠಾಣೆ ಮುಂದೆಯೇ ಹೊಯ್ಸಳದಲ್ಲಿ ಕುಳಿತು ಆ್ಯಂಬುಲೆನ್ಸ್​​ಗಾಗಿ‌ ಕಾಯುತ್ತಿದ್ದು, ಆ್ಯಂಬುಲೆನ್ಸ್ ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.‌ ಠಾಣೆಯನ್ನು ಸೀಲ್ ​ಡೌನ್ ಮಾಡಲಾಗಿದೆ.

Kamakshipalya Station
ಕಾಮಾಕ್ಷಿ ಪಾಳ್ಯ ಠಾಣೆ

ಕೋವಿಡ್​​​ ಭೀತಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಸೋಂಕು ವಿಪರೀತವಾಗಿ ಹರಡುತ್ತಿದೆ. ಅಲ್ಲದೆ ಬಂಧನಕ್ಕೆ ಒಳಗಾಗುತ್ತಿರುವ ಆರೋಪಿಗಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಮತ್ತಷ್ಟು ಆತಂಕ್ಕೆ ಕಾರಣವಾಗಿದೆ.

ಬೆಂಗಳೂರು: ಬಂಧಿಸಿದ ಆರೋಪಿಗೆ ಕೊರೊನಾ ಸೋಂಕು ಅಂಟಿದ್ದು, ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಬನಶಂಕರಿ ಪೊಲೀಸ್ ಠಾಣೆಯ 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕ್ವಾರಂಟೈನ್​ ಮಾಡಲಾಗಿದೆ.

ಭದ್ರುಲ್ ನಸ್ಕರ್ ಎಂಬ ಆರೋಪಿಯನ್ನು ಬಂಧಿಸಿದ ಬಳಿಕ ಕೊರೊನಾ ಪರೀಕ್ಷೆಗೆ ಒಳಪಡಿಸಲಾಯಿತು. ಇದೀಗ ವರದಿ ಬಂದಿದ್ದು, ಅದರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಿದ ಇನ್ಸ್​​ಪೆಕ್ಟರ್​​, ಸಬ್ ಇನ್ಸ್​​ಪೆಕ್ಟರ್​​, ಕಾನ್ಸ್‌ಟೇಬಲ್​​​​ ಸೋಂಕು ತಗಲುವ ಆತಂಕದಲ್ಲಿದ್ದಾರೆ. ಠಾಣೆಯನ್ನು ಸೀಲ್​​​ ಡೌನ್ ಮಾಡಲಾಗಿದೆ.

ಕಾಮಾಕ್ಷಿಪಾಳ್ಯ ಠಾಣೆ ಎಎಸ್​​​ಐ ಪರದಾಟ

ಸೋಂಕು ತಗುಲಿದ್ದ ಕಾಮಾಕ್ಷಿಪಾಳ್ಯ ಠಾಣೆ ಇನ್ಸ್​ಪೆಕ್ಟರ್ ಸಂಪರ್ಕದಲ್ಲಿದ್ದ ಎಎಸ್​​​ಐಗೆ ಕೊರೊನಾ ದೃಢವಾಗಿದೆ. ಠಾಣೆ ಮುಂದೆಯೇ ಹೊಯ್ಸಳದಲ್ಲಿ ಕುಳಿತು ಆ್ಯಂಬುಲೆನ್ಸ್​​ಗಾಗಿ‌ ಕಾಯುತ್ತಿದ್ದು, ಆ್ಯಂಬುಲೆನ್ಸ್ ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.‌ ಠಾಣೆಯನ್ನು ಸೀಲ್ ​ಡೌನ್ ಮಾಡಲಾಗಿದೆ.

Kamakshipalya Station
ಕಾಮಾಕ್ಷಿ ಪಾಳ್ಯ ಠಾಣೆ

ಕೋವಿಡ್​​​ ಭೀತಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಸೋಂಕು ವಿಪರೀತವಾಗಿ ಹರಡುತ್ತಿದೆ. ಅಲ್ಲದೆ ಬಂಧನಕ್ಕೆ ಒಳಗಾಗುತ್ತಿರುವ ಆರೋಪಿಗಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಮತ್ತಷ್ಟು ಆತಂಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.