ETV Bharat / state

ನಕಲಿ‌ ಆಧಾರ್, ಪ್ಯಾನ್ ಕಾರ್ಡ್ ಪ್ರಿಂಟ್ ಮಾಡುವ ಬೃಹತ್ ಜಾಲ ಪತ್ತೆ; 10 ಖದೀಮರು ಅಂದರ್ - ಬೆಂಗಳೂರಿನಲ್ಲಿ ನಕಲಿ ಗುರುತಿನ ಚೀಟಿ ಪ್ರಿಂಟ್​ ಆರೋಪಿಗಳ ಬಂಧನ

ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೊನೊಗ್ರಾಮ್ ಬಳಸಿ ನಕಲಿ ಆಧಾರ್​ ಕಾರ್ಡ್​, ಪಾನ್​ ಕಾರ್ಡ್​ ಮುದ್ರಿಸುತ್ತಿದ್ದ ಅಡ್ಡೆ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

ccb police arrests fake adhar and pan card printer
ನಕಲಿ‌ ಆಧಾರ್ ಕಾರ್ಡ್, ಪಾನ್ ಕಾರ್ಡ್ ಪ್ರಿಂಟ್
author img

By

Published : Jan 4, 2021, 3:59 PM IST

ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೊನೊಗ್ರಾಮ್ ಬಳಸಿ ನಕಲಿ‌ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವಾಹನದ ಆರ್​ಸಿ ಬುಕ್​ಗಳನ್ನು ತಯಾರಿಸುತ್ತಿದ್ದ 10 ಜನ ವಂಚಕರನ್ನು ಬಂಧಿಸಲಾಗಿದೆ.

ನಕಲಿ‌ ಆಧಾರ್ ಕಾರ್ಡ್, ಪಾನ್ ಕಾರ್ಡ್ ಪ್ರಿಂಟ್

ಬಂಧಿತರಿಂದ ಸಾವಿರಾರು ನಕಲಿ ಐಡಿ ಕಾರ್ಡುಗಳು ಮತ್ತು ಲ್ಯಾಪ್​ಟಾಪ್ ಪ್ರಿಂಟರ್ ವಶಕ್ಕೆ ಪಡೆಯಲಾಗಿದೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಮಲೇಶ್ ಎಂಬ ವ್ಯಕ್ತಿಯು ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ತನ್ನ ‌ಮನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ಸಾರ್ವಜನಿಕರಿಗೆ ವಿತರಿಸಬೇಕಾಗಿರುವ ಆಧಾರ್ ಕಾರ್ಡ್, ಪ್ಯಾನ್​ ಕಾರ್ಡ್, ವಾಹನದ ಆರ್​ಸಿ ಬುಕ್ ಮತ್ತು ಡ್ರೈವಿಂಗ್ ಲೈಸನ್ಸ್ ಅನಧಿಕೃತವಾಗಿ ಪ್ರಿಂಟ್​ ಮಾಡಿ ಬೇರೆ ಬೇರೆ ವ್ಯಕ್ತಿಗಳಿಗೆ ಸಾಗಿಸುತ್ತಿದ್ದನಂತೆ.

ಈ ಮಾಹಿತಿ ಸಂಗ್ರಹಿಸಿದ ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದ ತಂಡ ಇಂದು ದಾಳಿ‌ ಮಾಡಿದೆ. ಮೊದಲು ಕಮಲೇಶ ಕುಮಾರ್ ಭವಾಲಿಯಾ ಎಂಬಾತನನ್ನು ಬಂಧಿಸಿದ್ದು, ಈತನ ಮನೆಯಲ್ಲಿ ಮಷಿನ್ ಬಳಸಿಕೊಂಡು ಈ ಕೃತ್ಯ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಈತನ ಮಾಹಿತಿ ಮೇರೆಗೆ ಲೊಕೇಶ್, ಸುದರ್ಶನ್, ನಿರ್ಮಲ್, ದರ್ಶನ್, ಶ್ರೀಧರ, ಚಂದ್ರಪ್ಪ, ಅಭಿಲಾಷ್​ ಹಾಗೂ ತೇಜಸ್​ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಸದ್ಯ ಈ ಆರೋಪಿಗಳ ಬಳಿಯಿಂದ 9000 ಆಧಾರ್ ಕಾರ್ಡ್, 9000 ಪ್ಯಾನ್ ಕಾರ್ಡ್, 12,200 ಆರ್​ಸಿ ಬುಕ್, 250 ನಕಲಿ ಆರ್​ಸಿ ಕಾರ್ಡ್, 6240 ನಕಲಿ ಚುನಾವಣಾ ಗುರುತಿನ ಚೀಟಿ, ಹೆಸರು, ವಿಳಾಸ, ಸರ್ಕಾರದ ಚಿಹ್ನೆಗಳನ್ನು ಮುದ್ರಿಸಿರುವ 28,000 ಚುನಾವಣಾ ಗುರುತಿನ ಕಾರ್ಡ್, ಮೂರು ಲ್ಯಾಪ್​ಟಾಪ್, 3 ಪ್ರಿಂಟರ್ ಜೊತೆಗೆ ನಗದು ಹಣ ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಕಳ್ಳತನದ ವಾಹನಗಳಿಗೂ ಆರ್​ಸಿ ಬುಕ್​ ​ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳ ಪೈಕಿ ಲೋಕೇಶ್ ಹಾಗೂ ಮತ್ತಿತರ ಆರೋಪಿಗಳು ಕೆಲವು ಸರ್ಕಾರಿ ಇಲಾಖೆಯ ಕಾರ್ಡುಗಳನ್ನು ಪ್ರಿಂಟ್ ಮಾಡಿಕೊಡಲು ಅಲ್ಲಿಂದ ಡೇಟಾವನ್ನು ಗುತ್ತಿಗೆ ನೀಡಿರುವ ಕಂಪನಿಯ ನೌಕರರಿಂದ ತೆಗೆದು ಪರ್ಯಾಯವಾಗಿ ಕಾರ್ಡ್​ ಮುದ್ರಿಸಿ ವಿತರಣೆ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ಆರೋಪಿಗಳು ಕಳೆದ ಎರಡು ವರ್ಷದಿಂದ ಈ ಕೃತ್ಯದಲ್ಲಿ ತೊಡಗಿದ್ರು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೊನೊಗ್ರಾಮ್ ಬಳಸಿ ನಕಲಿ‌ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವಾಹನದ ಆರ್​ಸಿ ಬುಕ್​ಗಳನ್ನು ತಯಾರಿಸುತ್ತಿದ್ದ 10 ಜನ ವಂಚಕರನ್ನು ಬಂಧಿಸಲಾಗಿದೆ.

ನಕಲಿ‌ ಆಧಾರ್ ಕಾರ್ಡ್, ಪಾನ್ ಕಾರ್ಡ್ ಪ್ರಿಂಟ್

ಬಂಧಿತರಿಂದ ಸಾವಿರಾರು ನಕಲಿ ಐಡಿ ಕಾರ್ಡುಗಳು ಮತ್ತು ಲ್ಯಾಪ್​ಟಾಪ್ ಪ್ರಿಂಟರ್ ವಶಕ್ಕೆ ಪಡೆಯಲಾಗಿದೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಮಲೇಶ್ ಎಂಬ ವ್ಯಕ್ತಿಯು ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ತನ್ನ ‌ಮನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ಸಾರ್ವಜನಿಕರಿಗೆ ವಿತರಿಸಬೇಕಾಗಿರುವ ಆಧಾರ್ ಕಾರ್ಡ್, ಪ್ಯಾನ್​ ಕಾರ್ಡ್, ವಾಹನದ ಆರ್​ಸಿ ಬುಕ್ ಮತ್ತು ಡ್ರೈವಿಂಗ್ ಲೈಸನ್ಸ್ ಅನಧಿಕೃತವಾಗಿ ಪ್ರಿಂಟ್​ ಮಾಡಿ ಬೇರೆ ಬೇರೆ ವ್ಯಕ್ತಿಗಳಿಗೆ ಸಾಗಿಸುತ್ತಿದ್ದನಂತೆ.

ಈ ಮಾಹಿತಿ ಸಂಗ್ರಹಿಸಿದ ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದ ತಂಡ ಇಂದು ದಾಳಿ‌ ಮಾಡಿದೆ. ಮೊದಲು ಕಮಲೇಶ ಕುಮಾರ್ ಭವಾಲಿಯಾ ಎಂಬಾತನನ್ನು ಬಂಧಿಸಿದ್ದು, ಈತನ ಮನೆಯಲ್ಲಿ ಮಷಿನ್ ಬಳಸಿಕೊಂಡು ಈ ಕೃತ್ಯ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಈತನ ಮಾಹಿತಿ ಮೇರೆಗೆ ಲೊಕೇಶ್, ಸುದರ್ಶನ್, ನಿರ್ಮಲ್, ದರ್ಶನ್, ಶ್ರೀಧರ, ಚಂದ್ರಪ್ಪ, ಅಭಿಲಾಷ್​ ಹಾಗೂ ತೇಜಸ್​ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಸದ್ಯ ಈ ಆರೋಪಿಗಳ ಬಳಿಯಿಂದ 9000 ಆಧಾರ್ ಕಾರ್ಡ್, 9000 ಪ್ಯಾನ್ ಕಾರ್ಡ್, 12,200 ಆರ್​ಸಿ ಬುಕ್, 250 ನಕಲಿ ಆರ್​ಸಿ ಕಾರ್ಡ್, 6240 ನಕಲಿ ಚುನಾವಣಾ ಗುರುತಿನ ಚೀಟಿ, ಹೆಸರು, ವಿಳಾಸ, ಸರ್ಕಾರದ ಚಿಹ್ನೆಗಳನ್ನು ಮುದ್ರಿಸಿರುವ 28,000 ಚುನಾವಣಾ ಗುರುತಿನ ಕಾರ್ಡ್, ಮೂರು ಲ್ಯಾಪ್​ಟಾಪ್, 3 ಪ್ರಿಂಟರ್ ಜೊತೆಗೆ ನಗದು ಹಣ ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಕಳ್ಳತನದ ವಾಹನಗಳಿಗೂ ಆರ್​ಸಿ ಬುಕ್​ ​ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳ ಪೈಕಿ ಲೋಕೇಶ್ ಹಾಗೂ ಮತ್ತಿತರ ಆರೋಪಿಗಳು ಕೆಲವು ಸರ್ಕಾರಿ ಇಲಾಖೆಯ ಕಾರ್ಡುಗಳನ್ನು ಪ್ರಿಂಟ್ ಮಾಡಿಕೊಡಲು ಅಲ್ಲಿಂದ ಡೇಟಾವನ್ನು ಗುತ್ತಿಗೆ ನೀಡಿರುವ ಕಂಪನಿಯ ನೌಕರರಿಂದ ತೆಗೆದು ಪರ್ಯಾಯವಾಗಿ ಕಾರ್ಡ್​ ಮುದ್ರಿಸಿ ವಿತರಣೆ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ಆರೋಪಿಗಳು ಕಳೆದ ಎರಡು ವರ್ಷದಿಂದ ಈ ಕೃತ್ಯದಲ್ಲಿ ತೊಡಗಿದ್ರು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.