ETV Bharat / state

ಬೆಂಗಳೂರಲ್ಲಿ ಸುಪ್ರೀಂಕೋರ್ಟ್ ಪೀಠ ಸ್ಥಾಪಿಸಲು ಸಿಜೆಐಗೆ ಮನವಿ

author img

By

Published : Jul 26, 2021, 9:40 PM IST

ಭೌಗೋಳಿಕ ಪರಿಸರವು ಸಹ ಸುಪ್ರೀಂಕೋರ್ಟ್​ನ ದಕ್ಷಿಣ ಭಾರತದ ಪೀಠವನ್ನು ಸ್ಥಾಪಿಸಲು ಸೂಕ್ತವಾಗಿದೆ. ಆದ್ದರಿಂದ ಬೆಂಗಳೂರಿನಲ್ಲಿ ಸುಪ್ರೀಂಕೋರ್ಟ್​ನ ಪೀಠವನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ..

AAB appeals to CJI
ಸಿಜೆಐಗೆ ಎಎಬಿ ಮನವಿ

ಬೆಂಗಳೂರು : ನಗರದಲ್ಲಿ ಸುಪ್ರೀಂಕೋರ್ಟ್ ಪೀಠವನ್ನು ಸ್ಥಾಪಿಸುವಂತೆ ಬೆಂಗಳೂರು ವಕೀಲರ ಸಂಘ(ಎಎಬಿ) ಅಧ್ಯಕ್ಷ ಎ ಪಿ ರಂಗನಾಥ್ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠವನ್ನು ಸ್ಥಾಪಿಸಬೇಕು ಎಂಬುದು ಕಕ್ಷಿದಾರರು ಮತ್ತು ವಕೀಲರ ದೀರ್ಘಾವಧಿಯ ಮನವಿಯಾಗಿದೆ. ದೆಹಲಿಯಲ್ಲಿರುವ ಸುಪ್ರೀಂಕೋರ್ಟ್​ಗೆ ತೆರಳಿ ಅರ್ಜಿ ದಾಖಲಿಸಲು ಹಾಗೂ ವಿಚಾರಣೆ ಮುಂದುವರಿಸಿಕೊಂಡು ಹೋಗಲು ದಕ್ಷಿಣ ಭಾರತದ ಜನರು ಸಾಕಷ್ಟು ಹಣ ಭರಿಸಬೇಕಾಗುತ್ತಿದೆ.

ಜನರಿಗೆ ನ್ಯಾಯದಾನ ಪ್ರಕ್ರಿಯೆ ಸುಲಭವಾಗಿ ಲಭಿಸುವಂತೆ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಅಗತ್ಯ ಸುಧಾರಣೆ ತರಬೇಕಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಬೆಂಗಳೂರು ವಿಶ್ವದರ್ಜೆಯ ಮೂಲಸೌಕರ್ಯ ಹೊಂದಿದೆ. ದಕ್ಷಿಣ ಭಾರತದ ಜನರೆಲ್ಲರೂ ತ್ವರಿತವಾಗಿ ಭೇಟಿ ನೀಡಹುದಾದ ನಗರವಾಗಿದೆ.

ಭೌಗೋಳಿಕ ಪರಿಸರವು ಸಹ ಸುಪ್ರೀಂಕೋರ್ಟ್​ನ ದಕ್ಷಿಣ ಭಾರತದ ಪೀಠವನ್ನು ಸ್ಥಾಪಿಸಲು ಸೂಕ್ತವಾಗಿದೆ. ಆದ್ದರಿಂದ ಬೆಂಗಳೂರಿನಲ್ಲಿ ಸುಪ್ರೀಂಕೋರ್ಟ್​ನ ಪೀಠವನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.

ಇದನ್ನೂ ಓದಿ: ಇಂದು ಯಡಿಯೂರಪ್ಪಾಜಿ ಜೊತೆ ನನ್ನ ಪಯಣದ ಅತ್ಯಂತ ಬೇಸರದ ದಿನ: ರೇಣುಕಾಚಾರ್ಯ

ಬೆಂಗಳೂರು : ನಗರದಲ್ಲಿ ಸುಪ್ರೀಂಕೋರ್ಟ್ ಪೀಠವನ್ನು ಸ್ಥಾಪಿಸುವಂತೆ ಬೆಂಗಳೂರು ವಕೀಲರ ಸಂಘ(ಎಎಬಿ) ಅಧ್ಯಕ್ಷ ಎ ಪಿ ರಂಗನಾಥ್ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠವನ್ನು ಸ್ಥಾಪಿಸಬೇಕು ಎಂಬುದು ಕಕ್ಷಿದಾರರು ಮತ್ತು ವಕೀಲರ ದೀರ್ಘಾವಧಿಯ ಮನವಿಯಾಗಿದೆ. ದೆಹಲಿಯಲ್ಲಿರುವ ಸುಪ್ರೀಂಕೋರ್ಟ್​ಗೆ ತೆರಳಿ ಅರ್ಜಿ ದಾಖಲಿಸಲು ಹಾಗೂ ವಿಚಾರಣೆ ಮುಂದುವರಿಸಿಕೊಂಡು ಹೋಗಲು ದಕ್ಷಿಣ ಭಾರತದ ಜನರು ಸಾಕಷ್ಟು ಹಣ ಭರಿಸಬೇಕಾಗುತ್ತಿದೆ.

ಜನರಿಗೆ ನ್ಯಾಯದಾನ ಪ್ರಕ್ರಿಯೆ ಸುಲಭವಾಗಿ ಲಭಿಸುವಂತೆ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಅಗತ್ಯ ಸುಧಾರಣೆ ತರಬೇಕಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಬೆಂಗಳೂರು ವಿಶ್ವದರ್ಜೆಯ ಮೂಲಸೌಕರ್ಯ ಹೊಂದಿದೆ. ದಕ್ಷಿಣ ಭಾರತದ ಜನರೆಲ್ಲರೂ ತ್ವರಿತವಾಗಿ ಭೇಟಿ ನೀಡಹುದಾದ ನಗರವಾಗಿದೆ.

ಭೌಗೋಳಿಕ ಪರಿಸರವು ಸಹ ಸುಪ್ರೀಂಕೋರ್ಟ್​ನ ದಕ್ಷಿಣ ಭಾರತದ ಪೀಠವನ್ನು ಸ್ಥಾಪಿಸಲು ಸೂಕ್ತವಾಗಿದೆ. ಆದ್ದರಿಂದ ಬೆಂಗಳೂರಿನಲ್ಲಿ ಸುಪ್ರೀಂಕೋರ್ಟ್​ನ ಪೀಠವನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.

ಇದನ್ನೂ ಓದಿ: ಇಂದು ಯಡಿಯೂರಪ್ಪಾಜಿ ಜೊತೆ ನನ್ನ ಪಯಣದ ಅತ್ಯಂತ ಬೇಸರದ ದಿನ: ರೇಣುಕಾಚಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.