ಬೆಂಗಳೂರು: ಮರದ ಕೊಂಬೆವೊಂದು ಉರುಳಿ ಪೊಲೀಸರ ತಾತ್ಕಾಲಿಕ ಚೆಕ್ಪೋಸ್ಟ್ ಮೇಲೆ ಬಿದ್ದು, ಓರ್ವನಿಗೆ ಗಾಯವಾಗಿರುವ ಘಟನೆ ನಡೆದಿದೆ.
ಪಶ್ಚಿಮ ವಿಭಾಗ ಪೊಲೀಸ್ ವಿಭಾಗದ ವ್ಯಾಪ್ತಿಯ ನೈಸ್ ರಸ್ತೆಯ ಬಳಿ ಈ ಘಟನೆ ನಡೆದಿದೆ. ರಭಸದ ಗಾಳಿಯಿಂದ ಮಾವಿನ ಮರದ ಕೊಂಬೆ ಮುರಿದಿದೆ ಎಂದು ಪಶ್ಚಿಮ ವಿಭಾಗದ ಡಿ.ಸಿ.ಪಿ ತಿಳಿಸಿದ್ದಾರೆ.
ಕೂದಲೆಳೆ ಅಂತರದಲ್ಲಿ ಹೋಂ ಸಿಬ್ಬಂದಿ ಪಾರಾಗಿದ್ದು, ಘಟನೆಯಲ್ಲಿ ಮಹೇಶ್ ಎನ್ನುವ ಹೋಂ ಗಾರ್ಡ್ಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.