ETV Bharat / state

ಯುಗಾದಿ ವರ್ಷತೊಡಕಿಗೆ ಅತ್ತೆ ಮನೆಗೆ ಬಂದ ಅಳಿಮಯ್ಯ..ಚಾಕುವಿನಿಂದ ಅತ್ತೆ-ಮಾವನಿಗೆ ಇರಿದ! - ದೊಡ್ಡಬಳ್ಳಾಪುರದಲ್ಲಿ ಇಬ್ಬರಿಗೆ ಚಾಕು ಇರಿತ

ಹೆಂಡತಿ ಮೇಲಿನ ಕೋಪಕ್ಕೆ ವ್ಯಕ್ತಿಯೊಬ್ಬ ಅತ್ತೆ-ಮಾವನ ಮೇಲೆ ದಾಳಿ ಮಾಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.

Man stabbed two persons in Doddaballapur
ದೊಡ್ಡಬಳ್ಳಾಪುರದಲ್ಲಿ ಇಬ್ಬರಿಗೆ ಚಾಕು ಇರಿ
author img

By

Published : Apr 15, 2021, 6:10 PM IST

Updated : Apr 15, 2021, 9:59 PM IST

ದೊಡ್ಡಬಳ್ಳಾಪುರ: ಗಂಡನ ಕುಡಿತದ ಚಟಕ್ಕೆ ಬೇಸತ್ತು ಪತ್ನಿ ತವರು ಮನೆಗೆ ಬಂದ್ದಿದ್ದಳು. ಇದೇ ಕೋಪದಲ್ಲಿ ಯುಗಾದಿಯಂದು ಹೆಂಡತಿಯ ಮನೆಗೆ ಬಂದ ಗಂಡ ಅತ್ತೆ-ಮಾವ ಇಬ್ಬರಿಗೂ ಚಾಕುವಿನಿಂದ ಇರಿದಿದ್ದಾನೆ.

ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಶ್ರೀನಿವಾಸ್ (65), ಜಯಮ್ಮ (60) ಅಳಿಯನಿಂದ ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಮಂಜುನಾಥ್ (40)ನನ್ನು ದೊಡ್ಡಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ: ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿಯ ನಿವಾಸಿಗಳಾದ ಶ್ರೀನಿವಾಸ್ ಮತ್ತು ಜಯಮ್ಮ ದಂಪತಿ ತಮ್ಮ ಮಗಳಾದ ಅನುಸೂಯಳನ್ನು ಗೌರಿಬಿದನೂರು ನಗರದ ಮಂಜುನಾಥ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಇಬ್ಬರಿಗೂ ಮದುವೆಯಾಗಿ 22 ವರ್ಷಗಳಾಗಿದ್ದು, ಮಕ್ಕಳೊಂದಿಗೆ ಗೌರಿಬಿದನೂರಿನ ಧೋಬಿ ಕಾಲೋನಿಯಲ್ಲಿ ವಾಸವಾಗಿದ್ದರು. ಕಟಿಂಗ್​ ಶಾಪ್ ಇಟ್ಟುಕೊಂಡಿದ್ದ ಮಂಜುನಾಥ್ ಸಂಪಾದನೆಯ ಹಣವನ್ನು ಕುಡಿದು ಮುಗಿಸುತ್ತಿದ್ದನಂತೆ. ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಅನುಸೂಯ ಸಂಸಾರದ ಹೊರೆ ಹೊತ್ತಿದ್ದಳು. ಇಷ್ಟಾದರು ಮಂಜುನಾಥ್ ಹೆಂಡತಿಯ ನಡೆಯ ಬಗ್ಗೆ ಸಂಶಯಪಟ್ಟು ಜಗಳ ಮಾಡುತ್ತಿದ್ದನಂತೆ. ಇದರಿಂದ ಬೇಸತ್ತ ಅನುಸೂಯ 9 ದಿನಗಳ ಹಿಂದೆ ತವರು ಮನೆಗೆ ಬಂದಿದ್ದಳು.

ಓದಿ : ಅಪ್ರಾಪ್ತೆಯರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಕಾಮುಕ ಅಂದರ್

ಯುಗಾದಿಯಂದು ಹೆಂಡತಿ ಮನೆಗೆ ಬಂದ ಮಂಜುನಾಥ್ ಆಕೆಗೆ ಚಾಕುವಿನಿಂದ ಇರಿಯಲು ಮುಂದಾಗಿದ್ದ. ಈ ವೇಳೆ ಅಡ್ಡ ಬಂದ ಅತ್ತೆ-ಮಾವನಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತಕ್ಕೆ ಒಳಗಾದ ಶ್ರೀನಿವಾಸ್ ಮತ್ತು ಜಯಮ್ಮರನ್ನು ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮಂಜುನಾಥ್​ನನ್ನು ಬಂಧಿಸಲಾಗಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುಗಾದಿ ವರ್ಷತೊಡಕಿಗೆ ಅತ್ತೆ ಮನೆಗೆ ಬಂದ ಅಳಿಮಯ್ಯ..ಚಾಕುವಿನಿಂದ ಅತ್ತೆ-ಮಾವನಿಗೆ ಇರಿದ!

ದೊಡ್ಡಬಳ್ಳಾಪುರ: ಗಂಡನ ಕುಡಿತದ ಚಟಕ್ಕೆ ಬೇಸತ್ತು ಪತ್ನಿ ತವರು ಮನೆಗೆ ಬಂದ್ದಿದ್ದಳು. ಇದೇ ಕೋಪದಲ್ಲಿ ಯುಗಾದಿಯಂದು ಹೆಂಡತಿಯ ಮನೆಗೆ ಬಂದ ಗಂಡ ಅತ್ತೆ-ಮಾವ ಇಬ್ಬರಿಗೂ ಚಾಕುವಿನಿಂದ ಇರಿದಿದ್ದಾನೆ.

ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಶ್ರೀನಿವಾಸ್ (65), ಜಯಮ್ಮ (60) ಅಳಿಯನಿಂದ ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಮಂಜುನಾಥ್ (40)ನನ್ನು ದೊಡ್ಡಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ: ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿಯ ನಿವಾಸಿಗಳಾದ ಶ್ರೀನಿವಾಸ್ ಮತ್ತು ಜಯಮ್ಮ ದಂಪತಿ ತಮ್ಮ ಮಗಳಾದ ಅನುಸೂಯಳನ್ನು ಗೌರಿಬಿದನೂರು ನಗರದ ಮಂಜುನಾಥ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಇಬ್ಬರಿಗೂ ಮದುವೆಯಾಗಿ 22 ವರ್ಷಗಳಾಗಿದ್ದು, ಮಕ್ಕಳೊಂದಿಗೆ ಗೌರಿಬಿದನೂರಿನ ಧೋಬಿ ಕಾಲೋನಿಯಲ್ಲಿ ವಾಸವಾಗಿದ್ದರು. ಕಟಿಂಗ್​ ಶಾಪ್ ಇಟ್ಟುಕೊಂಡಿದ್ದ ಮಂಜುನಾಥ್ ಸಂಪಾದನೆಯ ಹಣವನ್ನು ಕುಡಿದು ಮುಗಿಸುತ್ತಿದ್ದನಂತೆ. ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಅನುಸೂಯ ಸಂಸಾರದ ಹೊರೆ ಹೊತ್ತಿದ್ದಳು. ಇಷ್ಟಾದರು ಮಂಜುನಾಥ್ ಹೆಂಡತಿಯ ನಡೆಯ ಬಗ್ಗೆ ಸಂಶಯಪಟ್ಟು ಜಗಳ ಮಾಡುತ್ತಿದ್ದನಂತೆ. ಇದರಿಂದ ಬೇಸತ್ತ ಅನುಸೂಯ 9 ದಿನಗಳ ಹಿಂದೆ ತವರು ಮನೆಗೆ ಬಂದಿದ್ದಳು.

ಓದಿ : ಅಪ್ರಾಪ್ತೆಯರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಕಾಮುಕ ಅಂದರ್

ಯುಗಾದಿಯಂದು ಹೆಂಡತಿ ಮನೆಗೆ ಬಂದ ಮಂಜುನಾಥ್ ಆಕೆಗೆ ಚಾಕುವಿನಿಂದ ಇರಿಯಲು ಮುಂದಾಗಿದ್ದ. ಈ ವೇಳೆ ಅಡ್ಡ ಬಂದ ಅತ್ತೆ-ಮಾವನಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತಕ್ಕೆ ಒಳಗಾದ ಶ್ರೀನಿವಾಸ್ ಮತ್ತು ಜಯಮ್ಮರನ್ನು ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮಂಜುನಾಥ್​ನನ್ನು ಬಂಧಿಸಲಾಗಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Apr 15, 2021, 9:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.