ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೊಂಕು ಪತ್ತೆಯಾದ ಹಿನ್ನೆಲೆ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದರು ಮಾಂಸದ ಅಂಗಡಿಗಳು ತೆರೆದಿವೆ.
ಜಿಲ್ಲೆಯ ಟಿಪ್ಪು ನಗರ, ಕೊಡದವಾಡಿ, ಗೋಪಸಂದ್ರ ಸೇರಿದಂತೆ ಹಲವೆಡೆ ಮಾಂಸದಂಗಡಿಗಳು ತೆರೆದಿದ್ದು, ಮಾಂಸಕ್ಕಾಗಿ ಜನತೆ ಕ್ಯೂ ನಿಂತಿದ್ದಾರೆ. ಕೊಡದವಾಡಿ ಗ್ರಾಮದ ರಸ್ತೆ ಪಕ್ಕದಲ್ಲೇ ಬೆಳಗ್ಗೆ 4 ರಿಂದ ಮಾಂಸದಂಗಡಿ ತೆರೆದಿವೆ.
ಈಗಾಗಲೇ ಜಿಲ್ಲೆಯ ಗೌರಿಬಿದನೂರು, ಶಿಡ್ಲಘಟ್ಟ, ಬಾಗೆಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿಯಲ್ಲಿ ಸಾರ್ವಜನಿಕರು ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸುತ್ತಿದ್ದಾರೆ. ಆದರೆ ಇತ್ತ ಮಾಂಸದಂಗಡಿಗಳನ್ನು ತೆರೆದು ಸರ್ಕಾರದ ಆದೇಶವನ್ನು ಉಂಲಘಿಸಿದ್ದಾರೆ.