ETV Bharat / state

ಉಮೇಶ್​ ಕತ್ತಿ ಪಕ್ಷ ತೊರೆಯುವುದಿಲ್ಲ: ಕೆ.ಎಸ್.ಈಶ್ವರಪ್ಪ ಸ್ಪಷ್ಟನೆ - bagaloke political news

ಶಾಸಕ ಉಮೇಶ ಕತ್ತಿ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ರಾಜಕೀಯ ಸಂತ್ರಸ್ತರಾಗಿರುವ ಕಾಂಗ್ರೆಸ್​ ಮಾತಿಗೆ ಕಿವಿಗೊಡಬೇಡಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ನೇರವಾಗಿ ಕುಟುಕಿದ್ದಾರೆ.

ಸಚಿವ ಕೆ.ಎಸ್​.ಈಶ್ವರಪ್ಪ
author img

By

Published : Aug 22, 2019, 7:59 PM IST

ಬಾಗಲಕೋಟೆ: ಯಾವುದೇ ಕಾರಣಕ್ಕೂ ಶಾಸಕ ಉಮೇಶ್​ ಕತ್ತಿ ಪಕ್ಷ ತೊರೆಯುವುದಿಲ್ಲ. ಇಂತಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

ಇಲ್ಲಿನ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಠ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಸಚಿವ ಕೆ.ಎಸ್​.ಈಶ್ವರಪ್ಪ

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ನ ನಾಯಕರೂ ಸಂತ್ರಸ್ತರಾಗಿದ್ದಾರೆ. ಅವರ ಮಾತುಗಳಿಗೆ ಕಿವಿಗೊಡಬೇಡಿ. ಇಂತಹ ನಿರಾಶ್ರಿತರಿಗೆ ಉಮೇಶ ಕತ್ತಿ ನೆರವು

ನೀಡಬಹುದೇನೋ ಎಂದು ಕಾಂಗ್ರೆಸ್​ನವರು ಕರೆದಿರಬಹುದು ಎಂದು ವ್ಯಂಗ್ಯವಾಡಿದರು.

ರಾಜ್ಯದ ವಿಪಕ್ಷ ನಾಯಕರನ್ನು, ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಶಕ್ತಿ ಕಾಂಗ್ರೆಸ್​ಗೆ ಇಲ್ಲ ಎಂದು ಕುಟುಕಿದರು. ಇದೇ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದಡಿ ಭೋವಿ ಸಮಾಜಕ್ಕೆ ಸಚಿವ ಸ್ಥಾನ ಬೇಕು ಎಂದು ಶ್ರೀಗಳು ಒತ್ತಾಯಿಸಿದರು.

ಬಾಗಲಕೋಟೆ: ಯಾವುದೇ ಕಾರಣಕ್ಕೂ ಶಾಸಕ ಉಮೇಶ್​ ಕತ್ತಿ ಪಕ್ಷ ತೊರೆಯುವುದಿಲ್ಲ. ಇಂತಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

ಇಲ್ಲಿನ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಠ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಸಚಿವ ಕೆ.ಎಸ್​.ಈಶ್ವರಪ್ಪ

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ನ ನಾಯಕರೂ ಸಂತ್ರಸ್ತರಾಗಿದ್ದಾರೆ. ಅವರ ಮಾತುಗಳಿಗೆ ಕಿವಿಗೊಡಬೇಡಿ. ಇಂತಹ ನಿರಾಶ್ರಿತರಿಗೆ ಉಮೇಶ ಕತ್ತಿ ನೆರವು

ನೀಡಬಹುದೇನೋ ಎಂದು ಕಾಂಗ್ರೆಸ್​ನವರು ಕರೆದಿರಬಹುದು ಎಂದು ವ್ಯಂಗ್ಯವಾಡಿದರು.

ರಾಜ್ಯದ ವಿಪಕ್ಷ ನಾಯಕರನ್ನು, ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಶಕ್ತಿ ಕಾಂಗ್ರೆಸ್​ಗೆ ಇಲ್ಲ ಎಂದು ಕುಟುಕಿದರು. ಇದೇ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದಡಿ ಭೋವಿ ಸಮಾಜಕ್ಕೆ ಸಚಿವ ಸ್ಥಾನ ಬೇಕು ಎಂದು ಶ್ರೀಗಳು ಒತ್ತಾಯಿಸಿದರು.

Intro:AnchorBody:--ಬಾಗಲಕೋಟೆಯಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಠಕ್ಕೆ ನೂತನ ಸಚಿವರಾದ ಕೆ.ಎಸ್.ಈ ಶ್ವರಪ್ಪ ಭೇಟ್ಟಿ ನೀಡಿದರು.ಸಿದ್ದರಾಮೇಶ್ವರ ಶ್ರೀಗಳಿಗೆ ಸಕಲ ಕುಶೋಲೋಪಚಾರ ವಿಚಾರಿಸಿ,ಆರ್ಶಿವಾದ ಪಡೆದುಕೊಂಡರು. ಸ್ವಾಮೀಜಿ ಭೇಟಿ ಮಾಡಿ, ಚರ್ಚಿಸಿದ ನಂತರ ಮಾತನಾಡಿದ ಸಚಿವರು,
ಉಮೇಶ ಕತ್ತಿ ಪಕ್ಷ ಬಿಡುವ ವಿಚಾರ ಕೇವಲ ಊಹಾಪೋಹವಾಗಿದೆ.
ಇಂದು ಬೆಳಗ್ಗೆಯಷ್ಟೆ
ಅವರು, ನನ್ನ ಜೊತೆ ಮಾತನಾಡಿದ್ದಾರೆ.
ಕಾಂಗ್ರೆಸ್ಸಿಗರಿಗೆ ಬೇರೆ ಏನೂ ಗೊತ್ತಿಲ್ಲ.
ಜಲಪ್ರಳಯದಲ್ಲಿ ಜನರು ಹೇಗೆ ಸಂತ್ರಸ್ತರಾಗಿದ್ದಾರೋ,
ಹಾಗೆ ಕಾಂಗ್ರೆಸ್ಸಿಗರು ರಾಜಕೀಯವಾಗಿ ನಿರಾಶ್ರಿತರಾಗಿದ್ದಾರೆ ಎಂದು ಈ ಶ್ವರಪ್ಪನವರು ವ್ಯಂಗ್ಯ ಮಾಡಿದರು.ಇದೇ ಸಮಯದಲ್ಲಿ ಮಾತನಾಡಿದ ಅವರು,
ಸಿದ್ದರಾಮಯ್ಯ ಆದಿಯಾಗಿ ಅನೇಕರು ರಾಜಕೀಯ ನಿರಾಶ್ರಿತರಾಗಿದ್ದು, ಉಮೇಶ ಕತ್ತಿ ರಾಜಕೀಯ ನಿರಾಶ್ರಿತರ ಕೇಂದ್ರಕ್ಕೆ ನೆರವು ಏನಾದ್ರೂ ಕೊಡಬಹುದೇನೋ ಅನ್ನೋ ಅಪೇಕ್ಷೆಯಿಂದ ಕತ್ತಿ ಅವ್ರನ್ನ ಕರೆದಿರಬಹುದು ಎಂದರು.
ಆದ್ರೆ ಉಮೇಶ ಕತ್ತಿ ಪಕ್ಷ ಬಿಟ್ಟು ಹೋಗಲ್ಲ,ಅದು ಊಹಾಪೋಹವಷ್ಟೇ.
ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಏನಾಗಿದೆ ಗೊತ್ತಾ ಎಂದು ಛೇದಿಸಿದ ಅವರು,
ರಾಜ್ಯದ ವಿಪಕ್ಷ ನಾಯಕ ಅಷ್ಟೇ ಅಲ್ಲ, ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಮಾಡುವ ಶಕ್ತಿಯೂ ಅವರಿಗಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.
ಕಾಂಗ್ರೆಸ್ ನಾಯಕರಿಗೆ ಟೀಕೆ ಮಾಡೋದು ಒಂದೆ ಗೊತ್ತು, ಬೇರೇನು ಗೊತ್ತಿಲ್ಲ.
ನೂತನ ಸಚಿವರಿಗೆ ಖಾತೆ ಹಂಚಿಕೆ ಇವತ್ತಿಲ್ಲ, ನಾಳೆ ಅಗುತ್ತೆ ಬಿಡಿ ಎಂದರು.
ಇದೇ ಸಮಯದಲ್ಲಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿಗಳು ಮಾತನಾಡಿ,ಬಸವಣ್ಣನವರ ಅನುಭವ ಮಂಟಪ ಮಾದರಿಯ ಸಾಮಾಜಿಕ ನ್ಯಾಯದಡಿ ಸಚಿವ ಸಂಪುಟ ಇರಬೇಕು.ಇವತ್ತಿನ ಸರ್ಕಾರ ಇರಬೇಕಾದದ್ದು ಅದೇ ಮಾದರಿಯಲ್ಲಿ.
ಇದನ್ನು ಸಚಿವರಿಗೆ ಮನವರಿಕೆ ಮಾಡಿದ್ದೀವಿ.
ಈ ವಿಚಾರವನ್ನು ಹೈಕಮಾಂಡ್ ಮುಂದಿಡ್ತೀವಿ ಅಂತಾ ಈಶ್ವರಪ್ಪ ನವರು ಹೇಳಿದ್ದಾರೆ.ಸಾಮಾಜಿಕ ನ್ಯಾಯದಡಿ ಭೋವಿ ಸಮಾಜಕ್ಕೆ ಸಚಿವ ಸ್ಥಾನ ಬೇಕೆ ಬೇಕು ಎಂದು ಶ್ರೀಗಳು ಒತ್ತಾಯಿಸಿದರು.
ಸಮಾಜದ ಶಾಸಕರಿಗೆ ಮಂತ್ರಿ
ಮಾಡದೇ ಇದ್ರೆ, ಮುಂದಿನ ದಿನಗಳಲ್ಲಿ ಹೇಳುತ್ತೇವೆ ಎಂದು ಶ್ರೀಗಳು ಎಚ್ಚರಿಸಿದರು.
ಈ ಹಿನ್ನಲೆಯಲ್ಲಿ ಸಮಾಜದ ಪ್ರಮುಖರು ನಾಳೆ ಯಡಿಯೂರಪ್ಪ ಮನೆಗೆ ತೆರಳಿ ಚರ್ಚೆ ಮಾಡುತ್ತೇವೆ.
ಸದ್ಯ ಖಾಲಿ ಇರುವ ಸಚಿವ ಸ್ಥಾನಗಳನ್ನು
ಪ್ರಾಮಾಣಿಕರು, ದಕ್ಷರು, ಅರ್ಹರು ಯಾರಿದ್ದಾರೆ ಅವ್ರೆಲ್ಲಾ ಸಚಿವರಾಗಬೇಕಾಗಿದೆ ಎಂದು ತಿಳಿಸಿದರು.
ನೂತನ ಸಚಿವ ಸಂಪುಟದಲ್ಲಿ ಭೋವಿ ಸಮಾಜಕ್ಕೆ ಅನ್ಯಾಯ ಆಗಿದೆ ಎಂದು ಸ್ವಾಮೀಜಿ ಇದೇ ಸಮಯದಲ್ಲಿ ಬೇಸರ ವ್ಯಕ್ತ ಪಡಿಸಿದರು..Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.