ETV Bharat / sports

ಭಾರತ-ಶ್ರೀಲಂಕಾ ಮೊದಲ ಟಿ-20: ಆತಿಥೇಯರಿಗೆ ಗೆಲುವಿನ ಹುಮ್ಮಸ್ಸು; ಪ್ರವಾಸಿಗರಿಗೆ ಗಾಯದ ತಲೆನೋವು

author img

By

Published : Feb 24, 2022, 8:11 AM IST

ಉಭಯ ದೇಶಗಳ ಮಧ್ಯೆ ನಡೆದ 14 ಟಿ-20 ಪಂದ್ಯಗಳಲ್ಲಿ ಭಾರತ 11 ರಲ್ಲಿ ಗೆದ್ದಿದ್ದರೆ, ಲಂಕಾ 2 ರಲ್ಲಿ ವಿಜಯ ಸಾಧಿಸಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಇದು ಲಂಕಾ ವಿರುದ್ಧ ಭಾರತ ಚುಟುಕು ಪಂದ್ಯಗಳಲ್ಲಿ ಪ್ರಾಬಲ್ಯ ಸಾಧಿಸಿದ್ದನ್ನು ತೋರಿಸುತ್ತದೆ.

India
ಮೊದಲ ಟಿ-20 ಪಂದ್ಯ.

ಲಖನೌ: ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ-20 ಸರಣಿ ಇಂದು ಆರಂಭಗೊಳ್ಳಲಿದೆ. ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಮೊದಲ ಟಿ-20 ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಬಲಿಷ್ಠ ಭಾರತವನ್ನು ಶ್ರೀಲಂಕಾ ತಂಡ ಎದುರಿಸಲಿದೆ.

ಕಳೆದ ಬಾರಿಯ ಶ್ರೀಲಂಕಾ ಪ್ರವಾಸದ ವೇಳೆ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ 2 ಟಿ-20 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಉಭಯ ದೇಶಗಳ ಮಧ್ಯೆ ನಡೆದ 14 ಪಂದ್ಯಗಳಲ್ಲಿ ಭಾರತ 11 ರಲ್ಲಿ ಗೆದ್ದಿದ್ದರೆ, ಲಂಕಾ 2 ರಲ್ಲಿ ವಿಜಯ ಸಾಧಿಸಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಇದು ಲಂಕಾ ವಿರುದ್ಧ ಭಾರತ ಟಿ-20ಯಲ್ಲಿ ಪ್ರಾಬಲ್ಯ ಸಾಧಿಸಿದ್ದನ್ನು ತೋರಿಸುತ್ತದೆ.

ಭಾರತದ ಪರ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ, ವಿಕೆಟ್​ ಕೀಪರ್​ ರಿಷಬ್​ ಪಂತ್​, ಶಾರ್ದೂಲ್​ ಠಾಕೂರ್​ಗೆ ವಿಶ್ರಾಂತಿ ನೀಡಲಾಗಿದ್ದರೆ, ಸೂರ್ಯಕುಮಾರ್​ ಯಾದವ್​, ದೀಪಕ್​ ಚಹರ್​ ಗಾಯಗೊಂಡ ಸರಣಿಯಿಂದ ಹೊರಬಿದ್ದಿದ್ದಾರೆ.

ಲಂಕಾಗೆ ಗಾಯದ ಸಮಸ್ಯೆ: ಶ್ರೀಲಂಕಾ ತಂಡದ ಸ್ಟಾರ್​ ಸ್ಪಿನ್ನರ್​ ವಾನಿಂದು ಹಸರಂಗ ಕೊರೊನಾಗೆ ತುತ್ತಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಇದಲ್ಲದೇ, ಕುಶಾಲ್​ ಮೆಂಡಿಸ್​, ಕುಶಾಲ್​ ಪೆರೇರಾ, ಅವಿಷ್ಕಾ ಫೆರ್ನಾಂಡೋ ಗಾಯಗೊಂಡಿದ್ದು, ತಂಡದ ಬಲ ಕುಗ್ಗಿಸಿದೆ.

ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಸರಣಿಯನ್ನು ಕ್ಲೀನ್​ಸ್ವೀಪ್​ ಮಾಡಿರುವ ಭಾರತಕ್ಕೆ ಶ್ರೀಲಂಕಾ ವಿರುದ್ಧದ ಟೂರ್ನಿಯನ್ನು ಜಯಿಸುವ ಹುಮ್ಮಸ್ಸಿನಲ್ಲಿದೆ. ಗಾಯಗೊಂಡಿರುವ ಸೂರ್ಯಕುಮಾರ್​ ಯಾದವ್​ ಮತ್ತು ದೀಪಕ್​ ಚಹರ್​ ಸ್ಥಾನಕ್ಕೆ ಬದಲಿ ಆಟಗಾರರನ್ನು ಆಯ್ಕೆ ಮಾಡಲಾಗಿಲ್ಲ.

ಕಳೆದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವೆಂಕಟೇಶ್​ ಅಯ್ಯರ್​ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಲ್ಲದೇ ಋತುರಾಜ್​ ಗಾಯಕ್ವಾಡ್​ಗೆ ಅವಕಾಶ ಮಾಡಿಕೊಡುವ ಸಲುವಾಗಿ ನಾಯಕ ರೋಹಿತ್​ ಶರ್ಮಾ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧವೂ ಈ ಪ್ರಯೋಗ ಮಾಡಲಾಗಿತ್ತು.

ಸಂಭಾವ್ಯ ಭಾರತ ತಂಡ: ಇಶಾನ್​ ಕಿಶನ್​, ಋತುರಾಜ್​ ಗಾಯಕ್ವಾಡ್​, ಸಂಜು ಸ್ಯಾಮ್ಸನ್​, ರೋಹಿತ್​ ಶರ್ಮಾ(ನಾಯಕ),ಶ್ರೇಯಸ್​ ಅಯ್ಯರ್​, ವೆಂಕಟೇಶ್​ ಅಯ್ಯರ್​, ರವೀಂದ್ರ ಜಡೇಜಾ, ಹರ್ಷಲ್​ ಪಟೇಲ್​, ಭುವನೇಶ್ವರ್​ ಕುಮಾರ್​, ಯಜುವೇಂದ್ರ ಚಹಲ್​, ಜಸ್ಪ್ರೀತ್​ ಬೂಮ್ರಾ(ಉಪನಾಯಕ).

ಶ್ರೀಲಂಕಾ ತಂಡ: ಧನುಷ್ಕಾ ಗುಣತಿಲಕ, ಪಥುಮ ನಿಸ್ಸಂಕಾ, ಚರಿತಾ ಅಸಲಂಕಾ, ಜನಿತ ಲಿಯಾನಗೆ, ದಿನೇಶ್​ ಚಂಡಿಮಾಲ್​(ವಿಕೆಟ್​ ಕೀಪರ್​), ದಸುನ್​ ಶಾನಕ(ನಾಯಕ), ಚಾಮಿಕಾ ಕರುಣಾರತ್ನೆ, ದುಷ್ಮಂತ್​ ಚಾಮಿರಾ, ಜೆಫ್ರಿ ವಾಂಡೆರ್ಸೆ, ಬಿನುರಾ ಫೆರ್ನಾಂಡೋ, ಪ್ರವೀಣ್​ ಜಯವಿಕ್ರಮ.

ಪಂದ್ಯ ಸಮಯ ಸಂಜೆ 7ಕ್ಕೆ, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ಇದನ್ನೂ ಓದಿ: ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್ - ಡೆಲ್ಲಿ ದಬಾಂಗ್​ ಮಧ್ಯೆ ಫೈನಲ್​ ಪಂದ್ಯ

ಲಖನೌ: ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ-20 ಸರಣಿ ಇಂದು ಆರಂಭಗೊಳ್ಳಲಿದೆ. ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಮೊದಲ ಟಿ-20 ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಬಲಿಷ್ಠ ಭಾರತವನ್ನು ಶ್ರೀಲಂಕಾ ತಂಡ ಎದುರಿಸಲಿದೆ.

ಕಳೆದ ಬಾರಿಯ ಶ್ರೀಲಂಕಾ ಪ್ರವಾಸದ ವೇಳೆ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ 2 ಟಿ-20 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಉಭಯ ದೇಶಗಳ ಮಧ್ಯೆ ನಡೆದ 14 ಪಂದ್ಯಗಳಲ್ಲಿ ಭಾರತ 11 ರಲ್ಲಿ ಗೆದ್ದಿದ್ದರೆ, ಲಂಕಾ 2 ರಲ್ಲಿ ವಿಜಯ ಸಾಧಿಸಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಇದು ಲಂಕಾ ವಿರುದ್ಧ ಭಾರತ ಟಿ-20ಯಲ್ಲಿ ಪ್ರಾಬಲ್ಯ ಸಾಧಿಸಿದ್ದನ್ನು ತೋರಿಸುತ್ತದೆ.

ಭಾರತದ ಪರ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ, ವಿಕೆಟ್​ ಕೀಪರ್​ ರಿಷಬ್​ ಪಂತ್​, ಶಾರ್ದೂಲ್​ ಠಾಕೂರ್​ಗೆ ವಿಶ್ರಾಂತಿ ನೀಡಲಾಗಿದ್ದರೆ, ಸೂರ್ಯಕುಮಾರ್​ ಯಾದವ್​, ದೀಪಕ್​ ಚಹರ್​ ಗಾಯಗೊಂಡ ಸರಣಿಯಿಂದ ಹೊರಬಿದ್ದಿದ್ದಾರೆ.

ಲಂಕಾಗೆ ಗಾಯದ ಸಮಸ್ಯೆ: ಶ್ರೀಲಂಕಾ ತಂಡದ ಸ್ಟಾರ್​ ಸ್ಪಿನ್ನರ್​ ವಾನಿಂದು ಹಸರಂಗ ಕೊರೊನಾಗೆ ತುತ್ತಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಇದಲ್ಲದೇ, ಕುಶಾಲ್​ ಮೆಂಡಿಸ್​, ಕುಶಾಲ್​ ಪೆರೇರಾ, ಅವಿಷ್ಕಾ ಫೆರ್ನಾಂಡೋ ಗಾಯಗೊಂಡಿದ್ದು, ತಂಡದ ಬಲ ಕುಗ್ಗಿಸಿದೆ.

ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಸರಣಿಯನ್ನು ಕ್ಲೀನ್​ಸ್ವೀಪ್​ ಮಾಡಿರುವ ಭಾರತಕ್ಕೆ ಶ್ರೀಲಂಕಾ ವಿರುದ್ಧದ ಟೂರ್ನಿಯನ್ನು ಜಯಿಸುವ ಹುಮ್ಮಸ್ಸಿನಲ್ಲಿದೆ. ಗಾಯಗೊಂಡಿರುವ ಸೂರ್ಯಕುಮಾರ್​ ಯಾದವ್​ ಮತ್ತು ದೀಪಕ್​ ಚಹರ್​ ಸ್ಥಾನಕ್ಕೆ ಬದಲಿ ಆಟಗಾರರನ್ನು ಆಯ್ಕೆ ಮಾಡಲಾಗಿಲ್ಲ.

ಕಳೆದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವೆಂಕಟೇಶ್​ ಅಯ್ಯರ್​ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಲ್ಲದೇ ಋತುರಾಜ್​ ಗಾಯಕ್ವಾಡ್​ಗೆ ಅವಕಾಶ ಮಾಡಿಕೊಡುವ ಸಲುವಾಗಿ ನಾಯಕ ರೋಹಿತ್​ ಶರ್ಮಾ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧವೂ ಈ ಪ್ರಯೋಗ ಮಾಡಲಾಗಿತ್ತು.

ಸಂಭಾವ್ಯ ಭಾರತ ತಂಡ: ಇಶಾನ್​ ಕಿಶನ್​, ಋತುರಾಜ್​ ಗಾಯಕ್ವಾಡ್​, ಸಂಜು ಸ್ಯಾಮ್ಸನ್​, ರೋಹಿತ್​ ಶರ್ಮಾ(ನಾಯಕ),ಶ್ರೇಯಸ್​ ಅಯ್ಯರ್​, ವೆಂಕಟೇಶ್​ ಅಯ್ಯರ್​, ರವೀಂದ್ರ ಜಡೇಜಾ, ಹರ್ಷಲ್​ ಪಟೇಲ್​, ಭುವನೇಶ್ವರ್​ ಕುಮಾರ್​, ಯಜುವೇಂದ್ರ ಚಹಲ್​, ಜಸ್ಪ್ರೀತ್​ ಬೂಮ್ರಾ(ಉಪನಾಯಕ).

ಶ್ರೀಲಂಕಾ ತಂಡ: ಧನುಷ್ಕಾ ಗುಣತಿಲಕ, ಪಥುಮ ನಿಸ್ಸಂಕಾ, ಚರಿತಾ ಅಸಲಂಕಾ, ಜನಿತ ಲಿಯಾನಗೆ, ದಿನೇಶ್​ ಚಂಡಿಮಾಲ್​(ವಿಕೆಟ್​ ಕೀಪರ್​), ದಸುನ್​ ಶಾನಕ(ನಾಯಕ), ಚಾಮಿಕಾ ಕರುಣಾರತ್ನೆ, ದುಷ್ಮಂತ್​ ಚಾಮಿರಾ, ಜೆಫ್ರಿ ವಾಂಡೆರ್ಸೆ, ಬಿನುರಾ ಫೆರ್ನಾಂಡೋ, ಪ್ರವೀಣ್​ ಜಯವಿಕ್ರಮ.

ಪಂದ್ಯ ಸಮಯ ಸಂಜೆ 7ಕ್ಕೆ, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ಇದನ್ನೂ ಓದಿ: ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್ - ಡೆಲ್ಲಿ ದಬಾಂಗ್​ ಮಧ್ಯೆ ಫೈನಲ್​ ಪಂದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.