ETV Bharat / sports

ಆಂಗ್ಲರ ವಿರುದ್ಧ ಸೋಲು... ಬಾಂಗ್ಲಾ ಜೊತೆಗಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಆಗುತ್ತಾ ಬದಲಾವಣೆ? - undefined

ವಿಶ್ವಕಪ್​ ಟೂರ್ನಿಯಲ್ಲಿ ಇಂಗ್ಲೆಂಡ್​ ವಿರುದ್ಧ ಸೋಲುಂಡ ಟೀಂ ಇಂಡಿಯಾ ಮುಂಬರುವ ಪಂದ್ಯಗಳಿಗೆ ತಂಡದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆಯಿದೆ. ಬ್ಯಾಟಿಂಗ್​​ನಲ್ಲಿ ಹೇಳಿಕೊಳ್ಳುವಂತಹ​ ಪ್ರದರ್ಶನ ನೀಡುವಲ್ಲಿ ವಿಫಲರಾದ ಕೇದಾರ್​​ ಜಾಧವ್​ ಬದಲಿಗೆ ಮತ್ತೋರ್ವ ಆಟಗಾರ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಟೀಂ ಇಂಡಿಯಾ
author img

By

Published : Jul 1, 2019, 5:22 PM IST

ಲಂಡನ್​: ವಿಶ್ವಕಪ್​ ಕ್ರಿಕೆಟ್​​ ಟೂರ್ನಿಯಲ್ಲಿ ಸತತ 6 ಪಂದ್ಯಗಳಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದ ಕೊಹ್ಲಿ ಪಡೆಗೆ ಇಂಗ್ಲೆಂಡ್​ ವಿರುದ್ಧ ಭಾನುವಾರ ಸೋಲು ಎದುರಾಗಿದೆ. ಇಂಗ್ಲೆಂಡ್​ ವಿರುದ್ಧದ ಸೋಲು ಕ್ರಿಕೆಟ್​ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಆಂಗ್ಲರು ನೀಡಿದ್ದ 338 ರನ್​ಗಳ ಬೃಹತ್​ ಟಾರ್ಗೆಟ್​ ತಲುಪುವಲ್ಲಿ ವಿಫಲರಾದ ಟೀಂ ಇಂಡಿಯಾ ಬ್ಯಾಟಿಂಗ್​ ವೈಫಲ್ಯ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಕೇದಾರ್ ಜಾಧವ್​ ಹಾಗೂ ಮಾಜಿ ನಾಯಕ ಎಂ ಎಸ್​ ಧೋನಿ ಬ್ಯಾಟಿಂಗ್​ ಕುರಿತು ತೀವ್ರ ಟೀಕೆ ವ್ಯಕ್ತವಾಗಿದೆ. ಅಲ್ಲದೆ, ಜಾಧವ್​ ಅವ​ರನ್ನು ಮುಂಬರುವ ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಿಂದ ಕೈಬಿಡುವ ಸಾಧ್ಯತೆಯಿದೆ.

ನಿನ್ನೆಯ ಪಂದ್ಯದಲ್ಲಿ ಕೊನೆಯ 5.1 ಓವರ್​ಗಳಲ್ಲಿ 71 ರನ್​ ಗಳಿಸಬೇಕಿದ್ದಾಗ ಕೇದಾರ್​ ಕ್ರೀಸ್​ಗೆ​ ಆಗಮಿಸಿದ್ದರು. ಆದರೆ, ಧೋನಿ ಜೊತೆಗೂಡಿ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯಲು ಯತ್ನಿಸುವಲ್ಲಿಯೂ ಅವರು ವಿಫಲರಾಗಿದ್ದರು. ಇಷ್ಟು ರನ್​ ಸೇರಿಸುವುದು ಸುಲಭವಲ್ಲವಾದರೂ ಬರ್ಮಿಂಗ್ಯಾಮ್​ನ ಪ್ಲಾಟ್​ ಪಿಚ್​ ಹಾಗೂ ಚಿಕ್ಕ ಗ್ರೌಂಡ್​ನಲ್ಲಿ ಮೇಲುಗೈ ಸಾಧಿಸಬಹುದಿತ್ತು ಎಂಬುದು ಟೀಕಾಕಾರರ ವಾದವಾಗಿದೆ.

ಧೋನಿ 31 ಎಸೆತಗಳಲ್ಲಿ 42 ರನ್​ ಗಳಿಸಿದ್ದರೂ ಅದರಲ್ಲಿ 7 ಡಾಟ್​ ಬಾಲ್​ ಹಾಗೂ 20 ಸಿಂಗಲ್ಸ್​​ ಗಳಿಸಿದ್ದರು. ಕೊನೆಯ ಓವರ್​ನಲ್ಲಿ ಒಂದು ಸಿಕ್ಸರ್​ ಸಿಡಿಸಿದ್ದು, ಬಿಟ್ಟರೆ ತಂಡವನ್ನು ಜಯದತ್ತ ಕೊಂಡೊಯ್ಯುವ ಯಾವುದೇ ಪ್ರಯತ್ನ ಅವರ ಬ್ಯಾಟಿಂಗ್​ನಲ್ಲಿ ಕಂಡುಬರಲಿಲ್ಲ. ಅಲ್ಲದೆ ಜಾಧವ್​ ಕೂಡ 13 ಎಸೆತಗಳಲ್ಲಿ ಕೇವಲ 12 ರನ್​ ಗಳಿಸಿದ್ದರು. ಈ ಹಿಂದೆಯೂ ಕೂಡ ಅಪ್ಘಾನಿಸ್ತಾನ ವಿರುದ್ಧ ಧೋನಿ ಹಾಗೂ ಜಾಧವ್​ ನಿಧಾನಗತಿಯ ಬ್ಯಾಟಿಂಗ್​ ನಡೆದಿದ್ದ ಬಗ್ಗೆ ಸಚಿನ್​ ಸೇರಿದಂತೆ ಹಲವರಿಂದ ಟೀಕೆ ವ್ಯಕ್ತವಾಗಿತ್ತು. ನಿನ್ನೆಯ ಪಂದ್ಯದ ಬಗ್ಗೆ ಮಾಜಿ ನಾಯಕ ಗಂಗೂಲಿ ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಇನ್ನು ಟೀಂ ಇಂಡಿಯಾ ಸೆಮಿಫೈನಲ್​ ಕನಸಿಗೆ ಇಂಗ್ಲೆಂಡ್​​ ವಿರುದ್ಧ ಸೋಲಿನಿಂದ ಯಾವುದೇ ಪರಿಣಾಮವಿಲ್ಲದಿದ್ದರೂ ಕೂಡ ಮುಂಬರುವ ಪಂದ್ಯಗಳಲ್ಲಿ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ. ಇನ್ನು ನಾಳಿನ ಬಾಂಗ್ಲಾ ವಿರುದ್ಧದ ಪಂದ್ಯದಿಂದ ಜಾಧವ್​ರನ್ನು ಕೈಬಿಡುವ ಸಾಧ್ಯತೆಯಿದೆ. ರವೀಂದ್ರ ಜಡೆಜಾಗೆ 11ರ ಬಳಗದಲ್ಲಿ ಸ್ಥಾನ ಸಿಗಬಹುದಾಗಿದೆ. ಜಡೇಜಾ ಇದುವರೆಗೂ ಕೂಡ ಪ್ರಸಕ್ತ ವಿಶ್ವಕಪ್​ನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ.

ಲಂಡನ್​: ವಿಶ್ವಕಪ್​ ಕ್ರಿಕೆಟ್​​ ಟೂರ್ನಿಯಲ್ಲಿ ಸತತ 6 ಪಂದ್ಯಗಳಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದ ಕೊಹ್ಲಿ ಪಡೆಗೆ ಇಂಗ್ಲೆಂಡ್​ ವಿರುದ್ಧ ಭಾನುವಾರ ಸೋಲು ಎದುರಾಗಿದೆ. ಇಂಗ್ಲೆಂಡ್​ ವಿರುದ್ಧದ ಸೋಲು ಕ್ರಿಕೆಟ್​ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಆಂಗ್ಲರು ನೀಡಿದ್ದ 338 ರನ್​ಗಳ ಬೃಹತ್​ ಟಾರ್ಗೆಟ್​ ತಲುಪುವಲ್ಲಿ ವಿಫಲರಾದ ಟೀಂ ಇಂಡಿಯಾ ಬ್ಯಾಟಿಂಗ್​ ವೈಫಲ್ಯ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಕೇದಾರ್ ಜಾಧವ್​ ಹಾಗೂ ಮಾಜಿ ನಾಯಕ ಎಂ ಎಸ್​ ಧೋನಿ ಬ್ಯಾಟಿಂಗ್​ ಕುರಿತು ತೀವ್ರ ಟೀಕೆ ವ್ಯಕ್ತವಾಗಿದೆ. ಅಲ್ಲದೆ, ಜಾಧವ್​ ಅವ​ರನ್ನು ಮುಂಬರುವ ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಿಂದ ಕೈಬಿಡುವ ಸಾಧ್ಯತೆಯಿದೆ.

ನಿನ್ನೆಯ ಪಂದ್ಯದಲ್ಲಿ ಕೊನೆಯ 5.1 ಓವರ್​ಗಳಲ್ಲಿ 71 ರನ್​ ಗಳಿಸಬೇಕಿದ್ದಾಗ ಕೇದಾರ್​ ಕ್ರೀಸ್​ಗೆ​ ಆಗಮಿಸಿದ್ದರು. ಆದರೆ, ಧೋನಿ ಜೊತೆಗೂಡಿ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯಲು ಯತ್ನಿಸುವಲ್ಲಿಯೂ ಅವರು ವಿಫಲರಾಗಿದ್ದರು. ಇಷ್ಟು ರನ್​ ಸೇರಿಸುವುದು ಸುಲಭವಲ್ಲವಾದರೂ ಬರ್ಮಿಂಗ್ಯಾಮ್​ನ ಪ್ಲಾಟ್​ ಪಿಚ್​ ಹಾಗೂ ಚಿಕ್ಕ ಗ್ರೌಂಡ್​ನಲ್ಲಿ ಮೇಲುಗೈ ಸಾಧಿಸಬಹುದಿತ್ತು ಎಂಬುದು ಟೀಕಾಕಾರರ ವಾದವಾಗಿದೆ.

ಧೋನಿ 31 ಎಸೆತಗಳಲ್ಲಿ 42 ರನ್​ ಗಳಿಸಿದ್ದರೂ ಅದರಲ್ಲಿ 7 ಡಾಟ್​ ಬಾಲ್​ ಹಾಗೂ 20 ಸಿಂಗಲ್ಸ್​​ ಗಳಿಸಿದ್ದರು. ಕೊನೆಯ ಓವರ್​ನಲ್ಲಿ ಒಂದು ಸಿಕ್ಸರ್​ ಸಿಡಿಸಿದ್ದು, ಬಿಟ್ಟರೆ ತಂಡವನ್ನು ಜಯದತ್ತ ಕೊಂಡೊಯ್ಯುವ ಯಾವುದೇ ಪ್ರಯತ್ನ ಅವರ ಬ್ಯಾಟಿಂಗ್​ನಲ್ಲಿ ಕಂಡುಬರಲಿಲ್ಲ. ಅಲ್ಲದೆ ಜಾಧವ್​ ಕೂಡ 13 ಎಸೆತಗಳಲ್ಲಿ ಕೇವಲ 12 ರನ್​ ಗಳಿಸಿದ್ದರು. ಈ ಹಿಂದೆಯೂ ಕೂಡ ಅಪ್ಘಾನಿಸ್ತಾನ ವಿರುದ್ಧ ಧೋನಿ ಹಾಗೂ ಜಾಧವ್​ ನಿಧಾನಗತಿಯ ಬ್ಯಾಟಿಂಗ್​ ನಡೆದಿದ್ದ ಬಗ್ಗೆ ಸಚಿನ್​ ಸೇರಿದಂತೆ ಹಲವರಿಂದ ಟೀಕೆ ವ್ಯಕ್ತವಾಗಿತ್ತು. ನಿನ್ನೆಯ ಪಂದ್ಯದ ಬಗ್ಗೆ ಮಾಜಿ ನಾಯಕ ಗಂಗೂಲಿ ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಇನ್ನು ಟೀಂ ಇಂಡಿಯಾ ಸೆಮಿಫೈನಲ್​ ಕನಸಿಗೆ ಇಂಗ್ಲೆಂಡ್​​ ವಿರುದ್ಧ ಸೋಲಿನಿಂದ ಯಾವುದೇ ಪರಿಣಾಮವಿಲ್ಲದಿದ್ದರೂ ಕೂಡ ಮುಂಬರುವ ಪಂದ್ಯಗಳಲ್ಲಿ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ. ಇನ್ನು ನಾಳಿನ ಬಾಂಗ್ಲಾ ವಿರುದ್ಧದ ಪಂದ್ಯದಿಂದ ಜಾಧವ್​ರನ್ನು ಕೈಬಿಡುವ ಸಾಧ್ಯತೆಯಿದೆ. ರವೀಂದ್ರ ಜಡೆಜಾಗೆ 11ರ ಬಳಗದಲ್ಲಿ ಸ್ಥಾನ ಸಿಗಬಹುದಾಗಿದೆ. ಜಡೇಜಾ ಇದುವರೆಗೂ ಕೂಡ ಪ್ರಸಕ್ತ ವಿಶ್ವಕಪ್​ನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.