ETV Bharat / sports

ಐಪಿಎಲ್ 2021.. ಚೆನ್ನೈನಲ್ಲಿ ತರಬೇತಿ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು - ರ್​ಸಿಬಿ ಡೈರೆಕ್ಟರ್​ ಮೈಕೆಲ್ ಹೆಸನ್​

ಆರ್​ಸಿಬಿ ಡೈರೆಕ್ಟರ್​ ಮೈಕೆಲ್ ಹೆಸನ್​, ಕೋಚ್ ಸೈಮನ್ ಕ್ಯಾಟಿಚ್ ನೇತೃತ್ವದಲ್ಲಿ 9 ದಿನಗಳ ಕಾಲ ಈ ತರಬೇತಿ ಶಿಬಿರ ನಡೆಯಲಿದೆ..

ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು
author img

By

Published : Mar 30, 2021, 7:24 PM IST

ಚೆನ್ನೈ : ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮಂಗಳವಾರದಿಂದ ಚೆನ್ನೈನ ಶ್ರೀ ರಾಮಚಂದ್ರ ಇನ್ಸಿಟಿಟ್ಯೂಟ್​ ಆಫ್​ ಹೈಯರ್ ಎಜುಕೇಶನ್ ಅಂಡ್​ ರೀಸರ್ಚ್​ ಕಾಲೇಜು ಕ್ರೀಡಾಂಗಣದಲ್ಲಿ ತರಬೇತಿ ಆರಂಭಿಸಿದೆ.

ಯುಜ್ವೇಂದ್ರ ಚಹಾಲ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಹರ್ಷೆಲ್ ಪಟೇಲ್, ಶಹಬಾಜ್ ಅಹ್ಮದ್​, ಪವನ್ ದೇಶಪಾಂಡೆ, ಮೊಹಮ್ಮದ್ ಅಜರುದ್ದೀನ್​, ರಜತ್ ಪಾಟಿದಾರ್​, ಸಚಿನ್ ಬೇಬಿ, ಸುಯಾಸ್ ಪ್ರಭುದೇಶಾಯಿ ಮತ್ತು ಕೆ ಎಸ್​ ಭರತ್​ ಮೊದಲ ತರಬೇತಿ ಕ್ಯಾಂಪ್​ನಲ್ಲಿ ಭಾಗವಹಿಸಿದ್ದರು.

ಉಳಿದ ಆಟಗಾರರು 7 ದಿನಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿದ ನಂತರ ​ಕ್ಯಾಂಪ್​ ಸೇರಿಕೊಳ್ಳಲಿದ್ದಾರೆ ಎಂದು ಆರ್​ಸಿಬಿ ಹೇಳಿಕೆ ಬಿಡುಗಡೆ ಮಾಡಿದೆ. ಆರ್​ಸಿಬಿ ಡೈರೆಕ್ಟರ್​ ಮೈಕೆಲ್ ಹೆಸನ್​, ಕೋಚ್ ಸೈಮನ್ ಕ್ಯಾಟಿಚ್ ನೇತೃತ್ವದಲ್ಲಿ 9 ದಿನಗಳ ಕಾಲ ಈ ತರಬೇತಿ ಶಿಬಿರ ನಡೆಯಲಿದೆ. ಸಂಜಯ್ ಬಂಗಾರ್, ಎಸ್​ ಶ್ರೀಧರನ್​, ಆ್ಯಡಂ ಗ್ರಿಫ್ಟನ್​, ಶಂಕರ್ ಬಸು ಮತ್ತು ಮಲೋಲನ್​ ರಂಗರಾಜನ್​ ಕೂಡ ಕ್ಯಾಂಪ್​ನಲ್ಲಿರುವ ಇನ್ನಿತರೆ ಕೋಚಿಂಗ್ ಸಿಬ್ಬಂದಿಯಿದ್ದಾರೆ.

ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ಪ್ಲೇಆಫ್​ ತಲುಪಿತ್ತಾದರೂ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ 6 ವಿಕೆಟ್​ಗಳ ಸೋಲುಂಡಿತ್ತು.

ಇದನ್ನು ಓದಿ:ಐಪಿಎಲ್​ನಲ್ಲಿ 1000 ರನ್​ ಸಿಡಿಸಿದ ಮೊದಲ ಬ್ಯಾಟ್ಸ್​ಮನ್ ನಾನಾಗಬೇಕು.. ರಾಬಿನ್ ಉತ್ತಪ್ಪ

ಚೆನ್ನೈ : ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮಂಗಳವಾರದಿಂದ ಚೆನ್ನೈನ ಶ್ರೀ ರಾಮಚಂದ್ರ ಇನ್ಸಿಟಿಟ್ಯೂಟ್​ ಆಫ್​ ಹೈಯರ್ ಎಜುಕೇಶನ್ ಅಂಡ್​ ರೀಸರ್ಚ್​ ಕಾಲೇಜು ಕ್ರೀಡಾಂಗಣದಲ್ಲಿ ತರಬೇತಿ ಆರಂಭಿಸಿದೆ.

ಯುಜ್ವೇಂದ್ರ ಚಹಾಲ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಹರ್ಷೆಲ್ ಪಟೇಲ್, ಶಹಬಾಜ್ ಅಹ್ಮದ್​, ಪವನ್ ದೇಶಪಾಂಡೆ, ಮೊಹಮ್ಮದ್ ಅಜರುದ್ದೀನ್​, ರಜತ್ ಪಾಟಿದಾರ್​, ಸಚಿನ್ ಬೇಬಿ, ಸುಯಾಸ್ ಪ್ರಭುದೇಶಾಯಿ ಮತ್ತು ಕೆ ಎಸ್​ ಭರತ್​ ಮೊದಲ ತರಬೇತಿ ಕ್ಯಾಂಪ್​ನಲ್ಲಿ ಭಾಗವಹಿಸಿದ್ದರು.

ಉಳಿದ ಆಟಗಾರರು 7 ದಿನಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿದ ನಂತರ ​ಕ್ಯಾಂಪ್​ ಸೇರಿಕೊಳ್ಳಲಿದ್ದಾರೆ ಎಂದು ಆರ್​ಸಿಬಿ ಹೇಳಿಕೆ ಬಿಡುಗಡೆ ಮಾಡಿದೆ. ಆರ್​ಸಿಬಿ ಡೈರೆಕ್ಟರ್​ ಮೈಕೆಲ್ ಹೆಸನ್​, ಕೋಚ್ ಸೈಮನ್ ಕ್ಯಾಟಿಚ್ ನೇತೃತ್ವದಲ್ಲಿ 9 ದಿನಗಳ ಕಾಲ ಈ ತರಬೇತಿ ಶಿಬಿರ ನಡೆಯಲಿದೆ. ಸಂಜಯ್ ಬಂಗಾರ್, ಎಸ್​ ಶ್ರೀಧರನ್​, ಆ್ಯಡಂ ಗ್ರಿಫ್ಟನ್​, ಶಂಕರ್ ಬಸು ಮತ್ತು ಮಲೋಲನ್​ ರಂಗರಾಜನ್​ ಕೂಡ ಕ್ಯಾಂಪ್​ನಲ್ಲಿರುವ ಇನ್ನಿತರೆ ಕೋಚಿಂಗ್ ಸಿಬ್ಬಂದಿಯಿದ್ದಾರೆ.

ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ಪ್ಲೇಆಫ್​ ತಲುಪಿತ್ತಾದರೂ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ 6 ವಿಕೆಟ್​ಗಳ ಸೋಲುಂಡಿತ್ತು.

ಇದನ್ನು ಓದಿ:ಐಪಿಎಲ್​ನಲ್ಲಿ 1000 ರನ್​ ಸಿಡಿಸಿದ ಮೊದಲ ಬ್ಯಾಟ್ಸ್​ಮನ್ ನಾನಾಗಬೇಕು.. ರಾಬಿನ್ ಉತ್ತಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.