ನವದೆಹಲಿ: ಟೀಂ ಇಂಡಿಯಾದ ಉನ್ನತ ಕ್ರಮಾಂಕದ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ 2019ರ ಅಮಾನತು ಶಿಕ್ಷೆಯ ಬಳಿಕ ತನ್ನ ವೃತ್ತಿಜೀವನವನ್ನು ಹೇಗೆ ಮತ್ತೆ ಪ್ರಾರಂಭಿಸಿದರು ಎಂಬುದರ ಕುರಿತು ಮನದಾಳ ಹಂಚಿಕೊಂಡಿದ್ದಾರೆ.
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹೆಣ್ಣಿನ ಕುರಿತು ಕೀಳು ಮಟ್ಟದ ಹೇಳಿಕೆ ನೀಡಿದ ಬಳಿಕ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ತೀವ್ರ ಟೀಕೆಗೆ ಗುರಿಯಾಗಿದ್ದರು ಮತ್ತು ಬಿಸಿಸಿಐನ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಇಬ್ಬರನ್ನೂ ಕೆಲ ಪಂದ್ಯಗಳಿಂದ ಸಸ್ಪೆಂಡ್ ಮಾಡಿತ್ತು.
ನನ್ನ ಸ್ಥಿರವಾದ ಕಾರ್ಯಕ್ಷಮತೆಗೆ ಸಾಕಷ್ಟು ಮನ್ನಣೆ ಇದೆ. ಅಮಾನತುಗೊಳಿಸಿದ ಬಳಿಕ ನಾನು ಪ್ರಲೋಭನೆಗೆ ಒಳಗಾಗಿದ್ದೆ ಮತ್ತು ಒಂದು ರೀತಿಯಲ್ಲಿ ಸ್ವಾರ್ಥಿಯಾಗಿ, ನನಗೋಸ್ಕರ ಆಡಲು ತೀರ್ಮಾನಿಸಿದ್ದೇನೆ. ನಮ್ಮ ವೃತ್ತಿಜೀವನದಲ್ಲಿ ಹೆಚ್ಚು ಸಮಯ ಇರುವುದಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. 2019 ರ ನಂತರ ನನ್ನಲ್ಲಿ 12 ಅಥವಾ 11 ವರ್ಷಗಳು ಉಳಿದಿವೆ. ಈ ಅವಧಿಯಲ್ಲಿ ಆಟಗಾರ ಮತ್ತು ತಂಡದ ವ್ಯಕ್ತಿಯಾಗಲು ನನ್ನ ಸಮಯ ಮತ್ತು ಶಕ್ತಿಯನ್ನು ನಾನು ಅರ್ಪಿಸಬೇಕಾಗಿದೆ ಎಂದು ರಾಹುಲ್ ಹೇಳಿದ್ದಾರೆ.