ETV Bharat / sports

ವಿಶ್ವಕಪ್​​ಗಾಗಿ ಭಾರತ ತಂಡದಲ್ಲಿ ಇತರ ನಾಲ್ವರು ವೇಗಿಗಳು, ನೆಟ್​ನಲ್ಲಿ ಕೊಹ್ಲಿ ಸೇನಾನಿಗಳಿಗೆ ಬೌಲಿಂಗ್​​! - ವಿರಾಟ್​ ಕೊಹ್ಲಿ

ವಿಶ್ವಕಪ್ ತಂಡದ ಆಯ್ಕೆ ವೇಳೆ ಚರ್ಚೆಗೆ ಬಂದ ನಾಲ್ವರು ಬೌಲರ್​ಗಳನ್ನ ಟೀಂ ಇಂಡಿಯಾ ಜತೆಗೆ ಇಂಗ್ಲೆಂಡ್​ಗೆ ಕಳಿಸಲು ಆಯ್ಕೆ ಸಮಿತಿ ನಿರ್ಧಾರ ಕೈಗೊಂಡಿದೆ.

ಖಲೀಲ್ ಅಹ್ಮದ್ ಹಾಗೂ ದೀಪಕ್ ಚಹರ್
author img

By

Published : Apr 16, 2019, 12:30 PM IST

ನವದೆಹಲಿ: ಮುಂಬರುವ ವಿಶ್ವಕಪ್​ಗಾಗಿ ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಕಟಗೊಂಡಿದೆ. ನಾಲ್ವರು ಆಲ್​ರೌಂಡರ್​ ಸೇರಿದಂತೆ ಹಿರಿಯ ಆಟಗಾರರು ಹಾಗೂ ಯುವ ಪ್ರತಿಭೆಗಳನ್ನೊಳಗೊಂಡ ತಂಡವನ್ನ ಆಯ್ಕೆ ಸಮಿತಿ ಘೋಷಣೆ ಮಾಡಿದೆ.

ಇದರ ಮಧ್ಯೆ ವಿಶ್ವಕಪ್ ತಂಡದ ಆಯ್ಕೆ ವೇಳೆ ಚರ್ಚೆಗೆ ಬಂದ ನಾಲ್ವರು ಬೌಲರ್​ಗಳನ್ನ ಟೀಂ ಇಂಡಿಯಾ ಜತೆಗೆ ಇಂಗ್ಲೆಂಡ್​ಗೆ ಕಳಿಸಲು ಆಯ್ಕೆ ಸಮಿತಿ ನಿರ್ಧಾರ ಕೈಗೊಂಡಿದೆ. ನೆಟ್​ನಲ್ಲಿ ತಂಡದ ಬ್ಯಾಟ್ಸ್​ಮನ್​ಗಳಿಗೆ ಬೌಲಿಂಗ್​ ಮಾಡಲಿದ್ದಾರೆ.

ವಿಶ್ವಕಪ್ ತಂಡದ ಜತೆ ನವ್​ದೀಪ್ ಸೈನಿ, ಆವೇಶ್ ಖಾನ್, ಎಡಗೈ ವೇಗಿ ಖಲೀಲ್ ಅಹ್ಮದ್ ಹಾಗೂ ದೀಪಕ್ ಚಹರ್ ತಂಡದ ಇತರ ವೇಗಿಗಳಾಗಿ ಆಯ್ಕೆಗೊಂಡಿದ್ದು, ಖಲೀಲ್ ಅಹ್ಮದ್ ಹಾಗೂ ನವ್​ದೀಪ್ ಸೈನಿ ಹೆಸರು ವಿಶ್ವಕಪ್ ತಂಡದ ಆಯ್ಕೆ ವೇಳೆ ಚರ್ಚೆಗೆ ಬಂದಿದ್ದವು. ಆದರೆ ಅನುಭವಿಗಳಾದ ಭುವನೇಶ್ವರ್​ ಕುಮಾರ್​,ಮೊಹಮ್ಮದ್​ ಶಮಿ ಹಾಗೂ ಜಸ್​ಪ್ರೀತ್​ ಬುಮ್ರಾಗೆ ಅವಕಾಶ ನೀಡಲಾಗಿದೆ.

ಇಂಗ್ಲೆಂಡ್​​ ನೆಲದಲ್ಲಿ ಟೀಂ ಇಂಡಿಯಾ 1983ರಲ್ಲಿ ಕಪಿಲ್​ ದೇವ್​ ನೇತೃತ್ವದಲ್ಲಿ ವಿಶ್ವಕಪ್​ಗೆ ಮುತ್ತಿಕ್ಕಿತ್ತು. ಇದೀಗ ಮತ್ತೊಮ್ಮೆ ಅದೇ ಸಾಧನೆ ಮಾಡಲು ವಿರಾಟ್​ ಕೊಹ್ಲಿ ಬಳಗ ಸನ್ನದ್ಧಗೊಂಡಿದೆ.

ನವದೆಹಲಿ: ಮುಂಬರುವ ವಿಶ್ವಕಪ್​ಗಾಗಿ ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಕಟಗೊಂಡಿದೆ. ನಾಲ್ವರು ಆಲ್​ರೌಂಡರ್​ ಸೇರಿದಂತೆ ಹಿರಿಯ ಆಟಗಾರರು ಹಾಗೂ ಯುವ ಪ್ರತಿಭೆಗಳನ್ನೊಳಗೊಂಡ ತಂಡವನ್ನ ಆಯ್ಕೆ ಸಮಿತಿ ಘೋಷಣೆ ಮಾಡಿದೆ.

ಇದರ ಮಧ್ಯೆ ವಿಶ್ವಕಪ್ ತಂಡದ ಆಯ್ಕೆ ವೇಳೆ ಚರ್ಚೆಗೆ ಬಂದ ನಾಲ್ವರು ಬೌಲರ್​ಗಳನ್ನ ಟೀಂ ಇಂಡಿಯಾ ಜತೆಗೆ ಇಂಗ್ಲೆಂಡ್​ಗೆ ಕಳಿಸಲು ಆಯ್ಕೆ ಸಮಿತಿ ನಿರ್ಧಾರ ಕೈಗೊಂಡಿದೆ. ನೆಟ್​ನಲ್ಲಿ ತಂಡದ ಬ್ಯಾಟ್ಸ್​ಮನ್​ಗಳಿಗೆ ಬೌಲಿಂಗ್​ ಮಾಡಲಿದ್ದಾರೆ.

ವಿಶ್ವಕಪ್ ತಂಡದ ಜತೆ ನವ್​ದೀಪ್ ಸೈನಿ, ಆವೇಶ್ ಖಾನ್, ಎಡಗೈ ವೇಗಿ ಖಲೀಲ್ ಅಹ್ಮದ್ ಹಾಗೂ ದೀಪಕ್ ಚಹರ್ ತಂಡದ ಇತರ ವೇಗಿಗಳಾಗಿ ಆಯ್ಕೆಗೊಂಡಿದ್ದು, ಖಲೀಲ್ ಅಹ್ಮದ್ ಹಾಗೂ ನವ್​ದೀಪ್ ಸೈನಿ ಹೆಸರು ವಿಶ್ವಕಪ್ ತಂಡದ ಆಯ್ಕೆ ವೇಳೆ ಚರ್ಚೆಗೆ ಬಂದಿದ್ದವು. ಆದರೆ ಅನುಭವಿಗಳಾದ ಭುವನೇಶ್ವರ್​ ಕುಮಾರ್​,ಮೊಹಮ್ಮದ್​ ಶಮಿ ಹಾಗೂ ಜಸ್​ಪ್ರೀತ್​ ಬುಮ್ರಾಗೆ ಅವಕಾಶ ನೀಡಲಾಗಿದೆ.

ಇಂಗ್ಲೆಂಡ್​​ ನೆಲದಲ್ಲಿ ಟೀಂ ಇಂಡಿಯಾ 1983ರಲ್ಲಿ ಕಪಿಲ್​ ದೇವ್​ ನೇತೃತ್ವದಲ್ಲಿ ವಿಶ್ವಕಪ್​ಗೆ ಮುತ್ತಿಕ್ಕಿತ್ತು. ಇದೀಗ ಮತ್ತೊಮ್ಮೆ ಅದೇ ಸಾಧನೆ ಮಾಡಲು ವಿರಾಟ್​ ಕೊಹ್ಲಿ ಬಳಗ ಸನ್ನದ್ಧಗೊಂಡಿದೆ.

Intro:Body:

ನವದೆಹಲಿ: ಮುಂಬರುವ ವಿಶ್ವಕಪ್​ಗಾಗಿ ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಕಟಗೊಂಡಿದೆ. ನಾಲ್ವರು ಆಲ್​ರೌಂಡರ್​ ಸೇರಿದಂತೆ ಹಿರಿಯ ಆಟಗಾರರು ಹಾಗೂ ಯುವ ಪ್ರತಿಭೆಗಳನ್ನೊಳಗೊಂಡ ತಂಡವನ್ನ ಆಯ್ಕೆ ಸಮಿತಿ ಘೋಷಣೆ ಮಾಡಿದೆ. 



ಇದರ ಮಧ್ಯೆ ವಿಶ್ವಕಪ್ ತಂಡದ ಆಯ್ಕೆ ವೇಳೆ ಚರ್ಚೆಗೆ ಬಂದ ನಾಲ್ವರು ಬೌಲರ್​ಗಳನ್ನ ಟೀಂ ಇಂಡಿಯಾ ಜತೆಗೆ ಇಂಗ್ಲೆಂಡ್​ಗೆ ಕಳಿಸಲು ಆಯ್ಕೆ ಸಮಿತಿ ನಿರ್ಧಾರ ಕೈಗೊಂಡಿದೆ. ನೆಟ್​ನಲ್ಲಿ ತಂಡದ ಬ್ಯಾಟ್ಸ್​ಮನ್​ಗಳಿಗೆ ಬೌಲಿಂಗ್​ ಮಾಡಲಿದ್ದಾರೆ.  



ವಿಶ್ವಕಪ್ ತಂಡದ ಜತೆ ನವ್​ದೀಪ್ ಸೈನಿ, ಆವೇಶ್ ಖಾನ್, ಎಡಗೈ ವೇಗಿ ಖಲೀಲ್ ಅಹ್ಮದ್ ಹಾಗೂ ದೀಪಕ್ ಚಹರ್ ತಂಡದ ಇತರ ವೇಗಿಗಳಾಗಿ ಆಯ್ಕೆಗೊಂಡಿದ್ದು, ಖಲೀಲ್ ಅಹ್ಮದ್ ಹಾಗೂ ನವ್​ದೀಪ್ ಸೈನಿ ಹೆಸರು ವಿಶ್ವಕಪ್ ತಂಡದ ಆಯ್ಕೆ ವೇಳೆ ಚರ್ಚೆಗೆ ಬಂದಿದ್ದವು. ಆದರೆ ಅನುಭವಿಗಳಾದ ಭುವನೇಶ್ವರ್​ ಕುಮಾರ್​,ಮೊಹಮ್ಮದ್​ ಶಮಿ ಹಾಗೂ ಜಸ್​ಪ್ರೀತ್​ ಬುಮ್ರಾಗೆ ಅವಕಾಶ ನೀಡಲಾಗಿದೆ.



ಇಂಗ್ಲೆಂಡ್​​ ನೆಲದಲ್ಲಿ ಟೀಂ ಇಂಡಿಯಾ 1983ರಲ್ಲಿ ಕಪಿಲ್​ ದೇವ್​ ನೇತೃತ್ವದಲ್ಲಿ ವಿಶ್ವಕಪ್​ಗೆ ಮುತ್ತಿಕ್ಕಿತ್ತು. ಇದೀಗ ಮತ್ತೊಮ್ಮೆ ಅದೇ ಸಾಧನೆ ಮಾಡಲು ವಿರಾಟ್​ ಕೊಹ್ಲಿ ಬಳಗ ಸನ್ನದ್ಧಗೊಂಡಿದೆ. 


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.