ETV Bharat / sitara

'ಮಹಿಷಾಸುರ'ನಿಗೆ ವಿಶ್ ಮಾಡಿದ ಭಜರಂಗಿ ಭಕ್ತ! - ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಅವರು 'ಮಹಿಷಾಸುರ' ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭಕೋರಿದರು.

ಮಹಿಷಾಸುರ
author img

By

Published : Oct 4, 2019, 4:34 AM IST

ನವ ನಿರ್ದೇಶಕ ಉದಯ ಪ್ರಸನ್ನ ನಿರ್ದೇಶನದ "ಮಹಿಷಾಸುರ" ಚಿತ್ರದ ಲಿರಿಕಲ್ ವಿಡಿಯೋ ಸಾಂಗ್​ನ್ನು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.

ಮಹಿಷಾಸುರ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಹಲವು ನಿರ್ದೇಶಕರ ಜೊತೆ ದುಡಿದಿರುವ ನಿರ್ದೇಶಕ ಉದಯ ಪ್ರಸನ್ನ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ " ಮಹಿಷಾಸುರ " ಚಿತ್ರದ ಮೂಲಕ
ಬರುತ್ತಿದ್ದಾರೆ.

ಮಹಿಷಾಸುರ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ತನ್ನ ಪ್ರೀತಿಯ ಮೇಲೆ ವಕ್ರ ದೃಷ್ಟಿ ಬೀರಿದ ರಾಕ್ಷಸನನ್ನು ಮಟ್ಟ ಹಾಕಲು ನಾಯಕ ಮಹಿಷಾಸುರನ‌ ರೀತಿ ಉಗ್ರ
ರೂಪ ತಾಳುತ್ತಾನೆ. ಅದೇ ಕಾರಣಕ್ಕೆ ನಿರ್ದೇಶಕ ಉದಯ್ ಪ್ರಸನ್ನ ಈ ಚಿತ್ರಕ್ಕೆ" ಮಹಿಷಾಸುರ" ಎಂದು ಟೈಟಲ್ ಇಟ್ಟಿದ್ದಾರೆ.

ಇನ್ನು ಚಿತ್ರದಲ್ಲಿ ಇಬ್ಬರು ನಾಯಕರಿದ್ದು ನವ ನಟರಾದ ಮಂಜು ಹಾಗೂ ಸುದರ್ಶನ್ ಲೀಡ್ ರೋಲ್ ಪ್ಲೇ ಮಾಡಿದ್ದಾರೆ. ಚಿತ್ರಕ್ಕೆ ಬಿಂದು‌ ನಾಯಕಿಯಾಗಿ ನಟಿಸಿದ್ದು, ತುಷಾರ್, ಸಚಿನ್, ಶ್ರೀನಿವಾಸ್ ಆಚಾರಿ, ಹುಂಡ್ರಳ್ಳಿ ವೆಂಕಟೇಶ್ ಸೇರಿದಂತೆ ಅನೇಕ ಹಿರಿಯ-ಕಿರಿಯ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಇನ್ನು ಚಿತ್ರಕ್ಕೆ ರಾಘವೇಂದ್ರ ವೇಣು ಸಂಗೀತ ನೀಡಿದ್ದಾರೆ. ಲೀಲಾವತಿ ಸುರೇಶ್ ಕುಮಾರ್ ಹನುಮನಹಳ್ಳಿ ಬಂಡವಾಳ ಹೂಡಿದ್ದು ಸದ್ಯ ಮಹಿಷಾಸುರ ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿದೆ. ಅಲ್ಲದೆ ಈ ಚಿತ್ರದ ತೆಲುಗು, ತಮಿಳು, ಹಿಂದಿ ರಿಮೇಕ್ ಬಗ್ಗೆ ಮಾತುಕತೆ ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಹೊಸ ನಿರ್ದೇಶಕನ ಚಿತ್ರವೊಂದು ಪರಭಾಷೆಗೆ ಹಾರಲಿದೆ.

ನವ ನಿರ್ದೇಶಕ ಉದಯ ಪ್ರಸನ್ನ ನಿರ್ದೇಶನದ "ಮಹಿಷಾಸುರ" ಚಿತ್ರದ ಲಿರಿಕಲ್ ವಿಡಿಯೋ ಸಾಂಗ್​ನ್ನು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.

ಮಹಿಷಾಸುರ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಹಲವು ನಿರ್ದೇಶಕರ ಜೊತೆ ದುಡಿದಿರುವ ನಿರ್ದೇಶಕ ಉದಯ ಪ್ರಸನ್ನ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ " ಮಹಿಷಾಸುರ " ಚಿತ್ರದ ಮೂಲಕ
ಬರುತ್ತಿದ್ದಾರೆ.

ಮಹಿಷಾಸುರ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ತನ್ನ ಪ್ರೀತಿಯ ಮೇಲೆ ವಕ್ರ ದೃಷ್ಟಿ ಬೀರಿದ ರಾಕ್ಷಸನನ್ನು ಮಟ್ಟ ಹಾಕಲು ನಾಯಕ ಮಹಿಷಾಸುರನ‌ ರೀತಿ ಉಗ್ರ
ರೂಪ ತಾಳುತ್ತಾನೆ. ಅದೇ ಕಾರಣಕ್ಕೆ ನಿರ್ದೇಶಕ ಉದಯ್ ಪ್ರಸನ್ನ ಈ ಚಿತ್ರಕ್ಕೆ" ಮಹಿಷಾಸುರ" ಎಂದು ಟೈಟಲ್ ಇಟ್ಟಿದ್ದಾರೆ.

ಇನ್ನು ಚಿತ್ರದಲ್ಲಿ ಇಬ್ಬರು ನಾಯಕರಿದ್ದು ನವ ನಟರಾದ ಮಂಜು ಹಾಗೂ ಸುದರ್ಶನ್ ಲೀಡ್ ರೋಲ್ ಪ್ಲೇ ಮಾಡಿದ್ದಾರೆ. ಚಿತ್ರಕ್ಕೆ ಬಿಂದು‌ ನಾಯಕಿಯಾಗಿ ನಟಿಸಿದ್ದು, ತುಷಾರ್, ಸಚಿನ್, ಶ್ರೀನಿವಾಸ್ ಆಚಾರಿ, ಹುಂಡ್ರಳ್ಳಿ ವೆಂಕಟೇಶ್ ಸೇರಿದಂತೆ ಅನೇಕ ಹಿರಿಯ-ಕಿರಿಯ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಇನ್ನು ಚಿತ್ರಕ್ಕೆ ರಾಘವೇಂದ್ರ ವೇಣು ಸಂಗೀತ ನೀಡಿದ್ದಾರೆ. ಲೀಲಾವತಿ ಸುರೇಶ್ ಕುಮಾರ್ ಹನುಮನಹಳ್ಳಿ ಬಂಡವಾಳ ಹೂಡಿದ್ದು ಸದ್ಯ ಮಹಿಷಾಸುರ ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿದೆ. ಅಲ್ಲದೆ ಈ ಚಿತ್ರದ ತೆಲುಗು, ತಮಿಳು, ಹಿಂದಿ ರಿಮೇಕ್ ಬಗ್ಗೆ ಮಾತುಕತೆ ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಹೊಸ ನಿರ್ದೇಶಕನ ಚಿತ್ರವೊಂದು ಪರಭಾಷೆಗೆ ಹಾರಲಿದೆ.

Intro:ಮಹಿಷಾಸುರ"ನಿಗೆ ಸಾಥ್ ನೀಡಿದ ಭಜರಂಗಿ ಭಕ್ತ !!!!

ನವ ನಿರ್ದೇಶಕ ಉದಯ ಪ್ರಸನ್ನ ನಿರ್ದೇಶನದ " ಮಹಿಷಾಸುರ " ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಅನ್ನು ಅಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಹಲವು ನಿರ್ದೇಶಕರ ಜೊರೆ ದುಡಿದಿರುವ. ನಿರ್ದೇಶಕ ಉದಯ ಪ್ರಸನ್ನ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ " ಮಹಿಷಾಸುರ " ಚಿತ್ರದ ಮೂಲಕ
ಸ್ಯಾಂಡಲ್ ವುಡ್ ಪಾದಾರ್ಪಣೆ ಮಾಡುತ್ತಿದ್ದು , "ಮಹಿಷಾಸುರ " ನೈಜ ಘಟನೆ ಆಧಾರಿತ ಚಿತ್ರವಾಗಿದ್ದು.
ತನ್ನ ಪ್ರೀತಿಯ ಮೇಲೆ ವಕ್ರ ದೃಷ್ಟಿ ಬೀರಿದ ರಾಕ್ಷಸನನ್ನು ಮಟ್ಟ ಹಾಕಲು ನಾಯಕ ಮಹಿಷಾಸುರನ‌ರೀತಿ ಉಗ್ರ
ರೂಪ ತಾಳಿ ಬೇಕಾಗುತ್ತಾನೆ ಅದೇಕಾರಣಕ್ಕೆ ನಿರ್ದೇಶಕ ಉದಯ್ ಪ್ರಸನ್ನ ಈ ಚಿತ್ರಕ್ಕೆ" ಮಹಿಷಾಸುರ" ಎಂದು ಟೈಟಲ್ ಇಟ್ಟಿದ್ದು‌ ಚಿತ್ರದಲ್ಲಿ ಇಬ್ಬರು ನಾಯಕರಿದ್ದು ನವ ನಟರಾದ ಮಂಜು, ಹಾಗೂ ಸುದರ್ಶನ್, ಲೀಡ್ ರೋಲ್ ಪ್ಲೇ ಮಾಡಿದ್ದಾರೆ.Body:ಇನ್ನೂ ಚಿತ್ರದಲ್ಲ,ಇಬಿಂದು‌ ನಾಯಕಿಯಾಗಿ ನಟಿಸಿದ್ದು., ತುಷಾರ್, ಸಚಿನ್, ಶ್ರೀನಿವಾಸ್ ಆಚಾರಿ, ಹುಂಡ್ರಳ್ಳಿ ವೆಂಕಟೇಶ್ ಸೇರಿದಂತೆಅನೇಕ ಹಿರಿಯಕಿರಿಯ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.ಇನ್ನು ಈ ಚಿತ್ರಕ್ಕೆ ರಾಘವೇಂದ್ರ ವೇಣು ಸಂಗೀತ ನೀಡಿದ್ದು ಲೀಲಾವತಿ ಸುರೇಶ್ ಕುಮಾರ್ ಹನುಮನಹಳ್ಳಿ ಬಂಡವಾಳ ಹೂಡಿದ್ದು ಸದ್ಯ ಮಹಿಷಾಸುರ ಪೋಸ್ಟ್ ಪ್ರೋಡಕ್ಷನ್‌ ಹಂತದಲ್ಲಿದೆ.ಅಲ್ಲದೆ ಈ ಚಿತ್ರ ತೆಲುಗು, ತಮಿಳು ಹಿಂದಿ ರಿಮೇಕ್ ಮಾತುಕತೆ ನಡೆಯುತ್ತಿದ್ದು ಎಲ್ಲಾ ಅಂದು ಕೊಂಡಂತೆ ಅದ್ರೆ ಹೊಸ ನಿರ್ದೇಶಕನ ಚಿತ್ರವೊಂದು ಪರಭಾಷೆಗೆ ಹಾರಲಿದೆ.

ಸತೀಶ ಎಂಬಿ
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.