ETV Bharat / sitara

ಬುದ್ಧಿವಂತ-2 ಚಿತ್ರದಿಂದ ನಿರ್ದೇಶಕ ಡಿ.ಎನ್​. ಮೌರ್ಯ ಹೊರಕ್ಕೆ... ಜಯರಾಂ ಹೆಗಲಿಗೆ ಡೈರೆಕ್ಷನ್​

author img

By

Published : Sep 10, 2019, 2:42 PM IST

Updated : Sep 10, 2019, 2:50 PM IST

ಉಪೇಂದ್ರ ಅಭಿನಯದ ಬುದ್ಧಿವಂತ-2 ಸಿನಿಮಾದಿಂದ ನಿರ್ದೇಶಕ ಡಿ.ಎನ್​. ಮೌರ್ಯ ಹೊರ ನಡೆದಿದ್ದು ಇದೀಗ ಆ ಜಾಗಕ್ಕೆ ನಿರ್ದೇಶಕ ಜಯರಾಂ ಬಂದಿದ್ದಾರೆ. ಚಿತ್ರದ ನಿರ್ದೇಶಕರು ಬದಲಾಗಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಕೆಲವೊಂದು ಭಿನ್ನಾಭಿಪ್ರಾಯಗಳಿಂದ ಈ ಬದಲಾವಣೆ ಆಗಿದೆ ಎನ್ನಲಾಗ್ತಿದೆ.

ಉಪೇಂದ್ರ

ನಾನವನಲ್ಲ ನಾನವನಲ್ಲ... ಈ ಡೈಲಾಗ್ ಕೇಳಿದೊಡನೆ ನಮಗೆ ನೆನಪಾಗುವುದು ಉಪೇಂದ್ರ ಅಭಿನಯದ ಬುದ್ಧಿವಂತ ಸಿನಿಮಾ. 2008 ರಲ್ಲಿ ಬಿಡುಗಡೆಯಾಗಿದ್ದ ಬುದ್ಧಿವಂತ ಚಿತ್ರ ಒಳ್ಳೆಯ ಹೆಸರು ಮಾಡಿತ್ತು. ಸಿನಿಮಾ ಕಥೆ, ಹಾಡುಗಳು, ಡೈಲಾಗ್​​​​​​​​​​​​​​​​​​​​​​​​​​​ ಇಂದಿಗೂ ಫೇಮಸ್​​​.

ಇದೀಗ ಉಪೇಂದ್ರ ಅಭಿನಯದಲ್ಲಿ ಬುದ್ಧಿವಂತ ಸೀಕ್ವೆಲ್ ತಯಾರಾಗುತ್ತಿರುವುದು ತಿಳಿದಿರುವ ವಿಚಾರ. ಇನ್ನು ಉಪೇಂದ್ರ ಅವರಿಗೆ ಪ್ರತಿಯೊಂದು ಅಚ್ಚುಕಟ್ಟಾಗಿ ಆಗಬೇಕು. ಅವರನ್ನು ಮೆಚ್ಚಿಸುವುದು ಬಹಳ ಕಷ್ಟ ಎಂದೇ ಹೇಳಬಹುದು. ಕೆಲವೊಮ್ಮೆ ಎಷ್ಟೇ ನಿಭಾಯಿಸಿದರೂ ಕೆಲವೊಂದು ತಪ್ಪುಗಳಾಗಿ ಹೋಗುತ್ತವೆ. ಇದೀಗ ‘ಬುದ್ಧಿವಂತ -2‘ ವಿಷಯದಲ್ಲೂ ಆಗಿರುವುದು ಅದೇ. ಕೆಲವೊಂದು ಭಿನ್ನಾಭಿಪ್ರಾಯಗಳಿಂದ ‘ಬುದ್ಧಿವಂತ 2’ ನಿರ್ದೇಶ ಡಿ.ಎನ್​​​​. ಮೌರ್ಯ ಚಿತ್ರದಿಂದ ಹೊರನಡೆದಿದ್ದಾರೆ. ಇದೀಗ ಅವರ ಜಾಗಕ್ಕೆ ಜಯರಾಂ ಎಂಬ ಹೊಸ ನಿರ್ದೇಶಕ ಬಂದಿದ್ದಾರೆ. ಡಿ.ಎನ್​. ಮೌರ್ಯ ಸಿನಿಮಾದ ಕೆಲವೊಂದು ಭಾಗಗಳ ಚಿತ್ರೀಕರಣ ಮಾಡಿಮುಗಿಸಿದ್ದಾರೆ. ಇದೀಗ ಜಯರಾಂ ಉಳಿದ ಭಾಗದ ಚಿತ್ರೀಕರಣ ಮುಗಿಸಲಿದ್ದಾರೆ. ಜಯರಾಂ, ನಿರ್ದೇಶಕ ಆರ್​​.ಚಂದ್ರು ಅವರ ಸಹಾಯಕ ನಿರ್ದೇಶಕ. ಐ ಲವ್ ಯು ಸಿನಿಮಾ ಚಿತ್ರೀಕರಣದ ವೇಳೆ ಉಪೇಂದ್ರ ಅವರಿಗೆ ಜಯರಾಂ ಪರಿಚಯವಾಗಿತ್ತು.

ಮೈಸೂರಿನ ಕ್ರಿಸ್ಟಲ್ ಪಾರ್ಕ್ ಹೋಟೆಲ್ ಉದ್ಯಮಿ ಟಿ.ಆರ್. ಚಂದ್ರಶೇಖರ್ ಬುದ್ಧಿವಂತ-2 ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಟೈಟಲ್ ಕಾರ್ಡಿನಲ್ಲಿ ಮೌರ್ಯ ಅವರ ಹೆಸರು ಕೂಡಾ ಇರಲಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಉಪೇಂದ್ರ ಅವರದ್ದು ದ್ವಿಪಾತ್ರ. ಮೇಘನಾ ರಾಜ್ ಹಾಗೂ ಸೋನಾಲ್ ಮೊಂತೆರೋ ನಾಯಕಿಯರಾಗಿ ನಟಿಸಿದ್ದಾರೆ.

ನಾನವನಲ್ಲ ನಾನವನಲ್ಲ... ಈ ಡೈಲಾಗ್ ಕೇಳಿದೊಡನೆ ನಮಗೆ ನೆನಪಾಗುವುದು ಉಪೇಂದ್ರ ಅಭಿನಯದ ಬುದ್ಧಿವಂತ ಸಿನಿಮಾ. 2008 ರಲ್ಲಿ ಬಿಡುಗಡೆಯಾಗಿದ್ದ ಬುದ್ಧಿವಂತ ಚಿತ್ರ ಒಳ್ಳೆಯ ಹೆಸರು ಮಾಡಿತ್ತು. ಸಿನಿಮಾ ಕಥೆ, ಹಾಡುಗಳು, ಡೈಲಾಗ್​​​​​​​​​​​​​​​​​​​​​​​​​​​ ಇಂದಿಗೂ ಫೇಮಸ್​​​.

ಇದೀಗ ಉಪೇಂದ್ರ ಅಭಿನಯದಲ್ಲಿ ಬುದ್ಧಿವಂತ ಸೀಕ್ವೆಲ್ ತಯಾರಾಗುತ್ತಿರುವುದು ತಿಳಿದಿರುವ ವಿಚಾರ. ಇನ್ನು ಉಪೇಂದ್ರ ಅವರಿಗೆ ಪ್ರತಿಯೊಂದು ಅಚ್ಚುಕಟ್ಟಾಗಿ ಆಗಬೇಕು. ಅವರನ್ನು ಮೆಚ್ಚಿಸುವುದು ಬಹಳ ಕಷ್ಟ ಎಂದೇ ಹೇಳಬಹುದು. ಕೆಲವೊಮ್ಮೆ ಎಷ್ಟೇ ನಿಭಾಯಿಸಿದರೂ ಕೆಲವೊಂದು ತಪ್ಪುಗಳಾಗಿ ಹೋಗುತ್ತವೆ. ಇದೀಗ ‘ಬುದ್ಧಿವಂತ -2‘ ವಿಷಯದಲ್ಲೂ ಆಗಿರುವುದು ಅದೇ. ಕೆಲವೊಂದು ಭಿನ್ನಾಭಿಪ್ರಾಯಗಳಿಂದ ‘ಬುದ್ಧಿವಂತ 2’ ನಿರ್ದೇಶ ಡಿ.ಎನ್​​​​. ಮೌರ್ಯ ಚಿತ್ರದಿಂದ ಹೊರನಡೆದಿದ್ದಾರೆ. ಇದೀಗ ಅವರ ಜಾಗಕ್ಕೆ ಜಯರಾಂ ಎಂಬ ಹೊಸ ನಿರ್ದೇಶಕ ಬಂದಿದ್ದಾರೆ. ಡಿ.ಎನ್​. ಮೌರ್ಯ ಸಿನಿಮಾದ ಕೆಲವೊಂದು ಭಾಗಗಳ ಚಿತ್ರೀಕರಣ ಮಾಡಿಮುಗಿಸಿದ್ದಾರೆ. ಇದೀಗ ಜಯರಾಂ ಉಳಿದ ಭಾಗದ ಚಿತ್ರೀಕರಣ ಮುಗಿಸಲಿದ್ದಾರೆ. ಜಯರಾಂ, ನಿರ್ದೇಶಕ ಆರ್​​.ಚಂದ್ರು ಅವರ ಸಹಾಯಕ ನಿರ್ದೇಶಕ. ಐ ಲವ್ ಯು ಸಿನಿಮಾ ಚಿತ್ರೀಕರಣದ ವೇಳೆ ಉಪೇಂದ್ರ ಅವರಿಗೆ ಜಯರಾಂ ಪರಿಚಯವಾಗಿತ್ತು.

ಮೈಸೂರಿನ ಕ್ರಿಸ್ಟಲ್ ಪಾರ್ಕ್ ಹೋಟೆಲ್ ಉದ್ಯಮಿ ಟಿ.ಆರ್. ಚಂದ್ರಶೇಖರ್ ಬುದ್ಧಿವಂತ-2 ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಟೈಟಲ್ ಕಾರ್ಡಿನಲ್ಲಿ ಮೌರ್ಯ ಅವರ ಹೆಸರು ಕೂಡಾ ಇರಲಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಉಪೇಂದ್ರ ಅವರದ್ದು ದ್ವಿಪಾತ್ರ. ಮೇಘನಾ ರಾಜ್ ಹಾಗೂ ಸೋನಾಲ್ ಮೊಂತೆರೋ ನಾಯಕಿಯರಾಗಿ ನಟಿಸಿದ್ದಾರೆ.

ಬದಲಾದ್ರು ಬುದ್ದಿವಂತ 2 ನಿರ್ದೇಶಕ

ಸೂಪರ್ ಸ್ಟಾರ್ ಉಪೇಂದ್ರ ಅವರಿದ್ದ ಮೇಲೆ ಅಲ್ಲಿ ಎಲ್ಲವೂ ಸಾಂಗೋಪಾಂಗವಾಗಿ ಚಿತ್ರಕ್ಕಾಗಿ ಆಗುವುದು ಸಹಜ. ಉಪೇಂದ್ರ ಅವರು ಕೇವಲ ನಟ ಅಷ್ಟೇ ಆದರೂ ಅವರು ಪ್ರತಿಕ್ರಿಯೆಯನ್ನು ಅವರನ್ನು ನಿರ್ದೇಶಿಸುವವರು ಕೇಳುವುದು ಸಹಜ. ಅದಕ್ಕೆ ಕಾರಣ ಉಪೇಂದ್ರ ಅವರ ಖ್ಯಾತಿ ಉಪೇಂದ್ರ ನಟ ಹಾಗೂ ನಿರ್ದೇಶಕ ಆಗಿ ಪಡೆದಿರುವ ಖ್ಯಾತಿ. ಇದೆ ಪರಿಸ್ಥಿತಿ ವಿ ರವಿಚಂದ್ರನ್ ಅವರನ್ನು ಕೇವಲ ನಟರಾಗಿ ತೆಗೆದುಕೊಂಡಾಗಲು ಆಗುತ್ತದೆ.

ಇಂತಹ ಸಂದರ್ಭದಲ್ಲಿ ಉಪೇಂದ್ರ ಅವರನ್ನು ಮೆಚ್ಚಿಸುವುದು ಬಹಳ ಕಷ್ಟ. ಈ ಕಷ್ಟ ಕೆಲವು ಕಡೆ ನಿಭಾಯಿಸಿಕೊಂಡು ಹೋಗಿರುವುದು ಉಂಟು. ಆದರೆ ಕೆಲವು ಭಿನ್ನಭಿಪ್ರಾಯಗಳಿಂದ ಬುದ್ದಿವಂತ 2 ಚಿತ್ರಕ್ಕೆ ನಿರ್ದೇಶಕರೆ ಹೊರನಡೆದಿದ್ದಾರೆ. ಅವರೇ ನಿರ್ದೇಶಕ ಡಿ ಎನ್ ಮೌರ್ಯ. ಇವರ ಜಾಗಕ್ಕೆ ಜಯರಾಂ ಎಂಬ ಹೊಸ ವ್ಯಕ್ತಿ ನಿರ್ದೇಶನ ಪೂರ್ತಿಗೊಳಿಸಲು ಮುಂದಾಗಿದ್ದಾರೆ. ನಿರ್ದೇಶಕ ಡಿ ಎನ್ ಮೌರ್ಯ ಕೆಳೆವು ಭಾಗಗಳ ಚಿತ್ರೀಕರಣ ಮಾಡಿದ್ದು ಆಗಿದೆ. ಈ ಜಯರಾಂ ಎಂಬುವವರು ನಿರ್ದೇಶಕ ಆರ್ ಚಂದ್ರು ಅವರ ಸಹಾಯಕ. ಐ ಲವ್ ಯು ಚಿತ್ರೀಕರಣ ಸಂದರ್ಭದಲ್ಲಿ ಉಪೇಂದ್ರ ಅವರು ಜಯರಾಂ ಅವರನ್ನು ಗುರುತಿಸಿದ್ದರು.

ಬುದ್ದಿವಂತ 2 ಚಿತ್ರದ ನಿರ್ಮಾಪಕ ಯಶಸ್ವಿ ಚಿತ್ರಗಳನ್ನು ನೀಡಿದ ಮೈಸೂರಿನ ಕ್ರಿಸ್ಟಲ್ ಪಾರ್ಕ್ ಹೊಟೇಲ್ ಉಧ್ಯಮಿ ಟಿ ಆರ್ ಚಂದ್ರಶೇಖರ್. ಅಂದಹಾಗೆ ಈ ಬುದ್ದಿವಂತ 2 ಬದಲಾವಣೆಯನ್ನು ಒಪ್ಪಿಕೊಳ್ಳುವ ನಿರ್ಮಾಪಕ ಚಂದ್ರಶೇಖರ್ ಚಿತ್ರದ ಟೈಟಲ್ ಕಾರ್ಡ್ ಅಲ್ಲಿ ನಿರ್ದೇಶಕ ಮೌರ್ಯ ಅವರ ಹೆಸರು ಸಹ ಇರಲಿದೆ ಎಂದು ಹೇಳಿದ್ದಾರೆ.

ಬುದ್ದಿವಂತ 2 ಚಿತ್ರದಲ್ಲಿ ಉಪೇಂದ್ರ ಅವರದು ದ್ವಿಪಾತ್ರ. ಮೇಘನ ರಾಜ್ ಹಾಗೂ ಸೋನಲ್ ಮೊಂಟೆರಿ ಅವರಿಗೆ ನಾಯಕಿಯರು.

Last Updated : Sep 10, 2019, 2:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.