ETV Bharat / sitara

ಕಾಯ್ಕಿಣಿ ಕಥೆಗೆ ಕಾಸರವಳ್ಳಿ ನಿರ್ದೇಶನ - girish kasaravalli back to direction

ಏಳು ವರ್ಷಗಳ ಬಳಿಕ ಗಿರೀಶ್ ಕಾಸರವಳ್ಳಿ ಚಿತ್ರ ನಿರ್ದೇಶನಕ್ಕೆ ಮರಳಿದ್ದು, ಜಯಂತ್​ ಕಾಯ್ಕಿಣಿಯವರ ಕಥೆಗೆ ನಿರ್ದೇಶನ ಮಾಡಲು ಮುಂದಾಗಿದ್ದಾರೆ.

ಕಾಯ್ಕಿಣಿ
author img

By

Published : Aug 31, 2019, 10:15 AM IST

ಇಲ್ಲೊಂದು ಒಳ್ಳೆಯ ಸಿನಿಮಾ ಆಗುವ ಎಲ್ಲ ಲಕ್ಷಣ ಈ ಕಾಂಬಿನೇಷನ್​​ನಿಂದಲೇ ಕಂಡು ಬರುತ್ತಿದೆ. ಪದ್ಮಶ್ರೀ ಡಾ. ಗಿರೀಶ್ ಕಾಸರವಳ್ಳಿ ಅವರು ಮತ್ತೆ ಚಿತ್ರ ನಿರ್ದೇಶನಕ್ಕೆ ವಾಪಸ್ಸಾಗಿದ್ದಾರೆ. ಈ ಬಾರಿ ಅವರು ಹೆಸರಾಂತ ಸಾಹಿತಿ ಮುಂಗಾರು ಮಳೆ ಚಿತ್ರದಿಂದ ಮನೆ ಮಾತಾದ ಜಯಂತ್ ಕಾಯ್ಕಿಣಿ ಅವರ ರಚನೆಯ ‘ಹಾಲಿನ ಮೀಸೆ’ ಸಣ್ಣ ಮಕ್ಕಳ ಕಥೆಯಾಧಾರಿತ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಅಂದಹಾಗೆ ಗಿರೀಶ್​ ಕಾಸರವಳ್ಳಿ ಅವರು ಏಳು ವರ್ಷಗಳ ಬಳಿಕ ಸಿನಿಮಾ ನಿರ್ದೇಶನಕ್ಕೆ ಮರಳಿದ್ದಾರೆ. ಅವರ ಹಿಂದಿನ ಸಿನಿಮಾ ‘ಕೂರ್ಮಾವತಾರ’ 2012ರಲ್ಲಿ ಬಿಡುಗಡೆಯಾಗಿತ್ತು. ಅದಾದ ಮೇಲೆ 2015 ರಲ್ಲಿ ಕಾಸರವಳ್ಳಿ ಅವರು ಹೆಸರಾಂತ ಮಲಯಾಳಂ ನಿರ್ದೇಶಕ ಅಡೂರು ಗೋಪಾಲಕೃಷ್ಣ ಅವರ ಬಗ್ಗೆ ಸಾಕ್ಷ್ಯಚಿತ್ರ ನಿರ್ದೇಶನ ಮಾಡಿದ್ದರು. ಆಮೇಲೆ ವಿಧಾನಸೌಧ 60 ವರ್ಷ ತುಂಬಿದ ವಿಚಾರವಾಗಿ ಇವರಿಗೆ ಒಪ್ಪಿಸಿದ್ದ ಸಾಕ್ಷ್ಯಚಿತ್ರ ಕೆಲವು ಕಾರಣಗಳಿಂದ ಮುಂದುವರೆಯಲಿಲ್ಲ.

ಗಿರೀಶ್ ಕಾಸರವಳ್ಳಿ ಅವರು ಈ ಸಣ್ಣ ಕಥೆಗೆ ‘ಇಲ್ಲಿರಲಾರೆ...ಅಲ್ಲಿಗೆ ಹೋಗಲಾರೆ’ ಎಂಬ ಶೀರ್ಷಿಕೆ ಇಡಲು ನಿರ್ಧರಿಸಿದ್ದಾರೆ. ಚಿತ್ರಕಥೆ ಇನ್ನು ಬೆಳವಣಿಗೆಯ ಹಂತದಲ್ಲಿದೆ ಎನ್ನುತ್ತಾರೆ. ಗಿರೀಶ್ ಕಾಸರವಳ್ಳಿ ಅವರ ಸಿನಿಮಾವನ್ನು ಶಿವಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಹೆಚ್​.ಎಂ.ರಾಮಚಂದ್ರ ಛಾಯಾಗ್ರಹಣ ಮಾಡುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭ ಆಗುವ ಗಿರೀಶ್ ಕಾಸರವಳ್ಳಿ ಸಿನಿಮಾಕ್ಕೆ ತಾರಾಗಣದ ಆಯ್ಕೆ ನಡೆಯುತ್ತಿದೆ.

ಇಲ್ಲೊಂದು ಒಳ್ಳೆಯ ಸಿನಿಮಾ ಆಗುವ ಎಲ್ಲ ಲಕ್ಷಣ ಈ ಕಾಂಬಿನೇಷನ್​​ನಿಂದಲೇ ಕಂಡು ಬರುತ್ತಿದೆ. ಪದ್ಮಶ್ರೀ ಡಾ. ಗಿರೀಶ್ ಕಾಸರವಳ್ಳಿ ಅವರು ಮತ್ತೆ ಚಿತ್ರ ನಿರ್ದೇಶನಕ್ಕೆ ವಾಪಸ್ಸಾಗಿದ್ದಾರೆ. ಈ ಬಾರಿ ಅವರು ಹೆಸರಾಂತ ಸಾಹಿತಿ ಮುಂಗಾರು ಮಳೆ ಚಿತ್ರದಿಂದ ಮನೆ ಮಾತಾದ ಜಯಂತ್ ಕಾಯ್ಕಿಣಿ ಅವರ ರಚನೆಯ ‘ಹಾಲಿನ ಮೀಸೆ’ ಸಣ್ಣ ಮಕ್ಕಳ ಕಥೆಯಾಧಾರಿತ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಅಂದಹಾಗೆ ಗಿರೀಶ್​ ಕಾಸರವಳ್ಳಿ ಅವರು ಏಳು ವರ್ಷಗಳ ಬಳಿಕ ಸಿನಿಮಾ ನಿರ್ದೇಶನಕ್ಕೆ ಮರಳಿದ್ದಾರೆ. ಅವರ ಹಿಂದಿನ ಸಿನಿಮಾ ‘ಕೂರ್ಮಾವತಾರ’ 2012ರಲ್ಲಿ ಬಿಡುಗಡೆಯಾಗಿತ್ತು. ಅದಾದ ಮೇಲೆ 2015 ರಲ್ಲಿ ಕಾಸರವಳ್ಳಿ ಅವರು ಹೆಸರಾಂತ ಮಲಯಾಳಂ ನಿರ್ದೇಶಕ ಅಡೂರು ಗೋಪಾಲಕೃಷ್ಣ ಅವರ ಬಗ್ಗೆ ಸಾಕ್ಷ್ಯಚಿತ್ರ ನಿರ್ದೇಶನ ಮಾಡಿದ್ದರು. ಆಮೇಲೆ ವಿಧಾನಸೌಧ 60 ವರ್ಷ ತುಂಬಿದ ವಿಚಾರವಾಗಿ ಇವರಿಗೆ ಒಪ್ಪಿಸಿದ್ದ ಸಾಕ್ಷ್ಯಚಿತ್ರ ಕೆಲವು ಕಾರಣಗಳಿಂದ ಮುಂದುವರೆಯಲಿಲ್ಲ.

ಗಿರೀಶ್ ಕಾಸರವಳ್ಳಿ ಅವರು ಈ ಸಣ್ಣ ಕಥೆಗೆ ‘ಇಲ್ಲಿರಲಾರೆ...ಅಲ್ಲಿಗೆ ಹೋಗಲಾರೆ’ ಎಂಬ ಶೀರ್ಷಿಕೆ ಇಡಲು ನಿರ್ಧರಿಸಿದ್ದಾರೆ. ಚಿತ್ರಕಥೆ ಇನ್ನು ಬೆಳವಣಿಗೆಯ ಹಂತದಲ್ಲಿದೆ ಎನ್ನುತ್ತಾರೆ. ಗಿರೀಶ್ ಕಾಸರವಳ್ಳಿ ಅವರ ಸಿನಿಮಾವನ್ನು ಶಿವಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಹೆಚ್​.ಎಂ.ರಾಮಚಂದ್ರ ಛಾಯಾಗ್ರಹಣ ಮಾಡುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭ ಆಗುವ ಗಿರೀಶ್ ಕಾಸರವಳ್ಳಿ ಸಿನಿಮಾಕ್ಕೆ ತಾರಾಗಣದ ಆಯ್ಕೆ ನಡೆಯುತ್ತಿದೆ.

ಕಾಯ್ಕಿಣಿ ಕಥೆಗೆ ಕಾಸರವಳ್ಳಿ ನಿರ್ದೇಶನ

ಇಲ್ಲೊಂದು ಒಳ್ಳೆಯ ಸಿನಿಮಾ ಆಗುವ ಎಲ್ಲ ಲಕ್ಷಣ ಈ ಕಾಂಬಿನೇಷನ್ ಇಂದಲೇ ಕಂಡು ಬರುತ್ತಿದೆ. ಪದ್ಮಶ್ರೀ ಡಾ ಗಿರೀಷ್ ಕಾಸರವಳ್ಳಿ ಅವರು ಮತ್ತೆ ಚಿತ್ರ ನಿರ್ದೇಶನಕ್ಕೆ ವಾಪಸಗಿದ್ದಾರೆ. ಈ ಬಾರಿ ಅವರು ಹೆಸರಾಂತ ಸಾಹಿತಿ ಮುಂಗಾರು ಮಳೆ ಇಂದ ಮನೆ ಮಾತಾದ ಜಯಂತ್ ಕಾಯ್ಕಿಣಿ ಅವರ ರಚನೆಯ ಹಾಲಿನ ಮೀಸೆ ಸಣ್ಣ ಮಕ್ಕಳ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಅಂದಹಾಗೆ ಪದ್ಮಶ್ರೀ ಗಿರೀಷ್ ಕಾಸರವಳ್ಳಿ ಅವರು ಏಳು ವರ್ಷಗಳ ಬಳಿಕ ಸಿನಿಮಾ ನಿರ್ದೇಶನಕ್ಕೆ ಮರಳಿದ್ದಾರೆ. ಅವರ ಹಿಂದಿನ ಸಿನಿಮಾ ಕೂರ್ಮಾವತಾರ 2012 ರಲ್ಲಿ ಬಿಡುಗಡೆ ಆಗಿತ್ತು. ಅದಾದ ಮೇಲೆ 2015 ರಲ್ಲಿ ಕಾಸರವಳ್ಳಿ ಅವರು ಹೆಸರಾಂತ ಮಲಯಾಳಂ ನಿರ್ದೇಶಕ ಆಡೂರ್ ಗೋಪಾಲಕೃಷ್ಣ ಅವರ ಬಗ್ಗೆ ಸಾಕ್ಷ್ಯ ಚಿತ್ರ ನಿರ್ದೇಶನ ಮಾಡಿದ್ದರು. ಆಮೇಲೆ ವಿಧಾನ ಸೌಧ 60 ವರ್ಷ ತುಂಬಿದ ವಿಚಾರವಾಗಿ ಇವರಿಗೆ ಒಪ್ಪಿಸಿದ್ದ ಸಾಕ್ಷ್ಯ ಚಿತ್ರ ಕೆಲವು ಕಾರಣಗಳಿಂದ ಮುಂದುವರೆಯಲಿಲ್ಲ.

ಗಿರೀಷ್ ಕಾಸರವಳ್ಳಿ ಅವರು ಈ ಸಣ್ಣ ಕಥೆಗೆ ಇಲ್ಲಿರಲಾರೆ...ಅಲ್ಲಿಗೆ ಹೋಗಲಾರೆ ಎಂಬ ಶೀರ್ಷಿಕೆಯನ್ನು ನಿರ್ಧರಿಸಿದ್ದಾರೆ. ಚಿತ್ರಕಥೆ ಇನ್ನ ಬೆಳವಣಿಗೆಯ ಹಟದಲ್ಲಿದೆ ಎನ್ನುತ್ತಾರೆ. ಗಿರೀಷ್ ಕಾಸರವಳ್ಳಿ ಅವರ ಸಿನಿಮಾಕ್ಕೆ ಶಿವಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಡಾ ಜಯಮಾಲ ಅವರ ಪತಿ ಎಚ್ ಎಂ ರಾಮಚಂದ್ರ ಛಾಯಾಗ್ರಹಣ ಮಾಡುತ್ತಿದ್ದಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭ ಆಗುವ ಗಿರೀಷ್ ಕಾಸರವಳ್ಳಿ ಸಿನಿಮಾಕ್ಕೆ ತಾರಾಗಣದ ಆಯ್ಕೆ ನಡೆಯುತ್ತಿದೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.