ಹೌದು ಕೆಜಿ ರಸ್ತೆಯ ತ್ರಿವೇಣಿ ಚಿತ್ರಮಂದಿರಲ್ಲಿ 'ಐ ಲವ್ ಯೂ' ಚಿತ್ರ ಇದೇ ವಾರ ರಿಲೀಸ್ ಆಗ್ತಿದ್ದು, ಚಿತ್ರಮಂದಿರದ ಮುಂದೆ ಉಪ್ಪಿಯ ಬೃಹತ್ ಕಟೌಟ್ ತಲೆ ಎತ್ತಿದೆ. ಚಿತ್ರದ ಬಿಡುಗಡೆಗೆ ಇನ್ನೂ ನಾಲ್ಕು ದಿನ ಇರುವಾಗಲೇ ಥಿಯೇಟರ್ ಬಳಿ ಉಪ್ಪಿ ಅಭಿಮಾನಿಗಳು ಕಟೌಟ್ ನಿಲ್ಲಿಸಿ, ಥಿಯೇಟರ್ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಬ್ರಹ್ಮ ಚಿತ್ರದ ನಂತರ ಉಪ್ಪಿ ಮತ್ತು ಆರ್.ಚಂದ್ರು ಮತ್ತೆ ಒಟ್ಟಿಗೆ ಬರ್ತಿದ್ದು, ಚಿತ್ರದ ಮೇಲೆ ಅಭಿಮಾನಿಗಳ ಕ್ರೇಜ್ ಸಖತ್ ಜೋರಾಗಿದೆ.
'ಐ ಲವ್ ಯೂ' ಚಿತ್ರದ ಹಾಡುಗಳು ಈಗಾಗಲೇ ಸಿನಿಪ್ರಿಯರ ಬಾಯಲ್ಲಿ ಗುನುಗುತಿದ್ದು. ಉಪ್ಪಿ ಮತ್ತೆ ಈ ಚಿತ್ರದ ಮೂಲಕ ಒಂದೊಳ್ಳೆ ಬ್ರೇಕ್ ಸಿಗುವ ಭರವಸೆಯಲ್ಲಿದ್ದಾರೆ. ಇನ್ನೂ ಉಪ್ಪಿಯ ಈ ಪ್ರೇಮ ಕಾವ್ಯವನ್ನು ಅವರ ಭಕ್ತಗಣ ಯಾವರೀತಿ ಅಪ್ಪಿಕೊಳ್ತಾರೆ ಅನ್ನೋದು ಕಾದು ನೋಡಬೇಕಿದೆ.