ETV Bharat / sitara

ಚಂದನವನಕ್ಕೆ ರೀ ಎಂಟ್ರಿ ಕೊಟ್ಟ ನಿರ್ದೇಶಕ ಮಹೇಂದರ್​​​... ನಾಯಕನಾಗಿ ನಟನೆ! - ನಿರ್ದೇಶಕ ಮಹೇಂದರ್​​​

ʻಶಬ್ದʼ ಅನ್ನೋ ಸಿನಿಮಾದ ಮೂಲಕ ನಿರ್ದೇಶಕ ಮಹೇಂದರ್​​​​ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

director mahendar re entry to sandalwood
ಚಂದನವನಕ್ಕೆ ರೀ ಎಂಟ್ರಿ ಕೊಟ್ಟ ನಿರ್ದೇಶಕ ಮಹೇಂದರ್​​​
author img

By

Published : Dec 16, 2019, 1:16 PM IST

Updated : Dec 16, 2019, 3:59 PM IST

ಕಣ್ಣೀರಿನ ನಿರ್ದೇಶಕ ಎಂದು ಹೆಸರು ಪಡೆದಿರುವ ಮಹೇಂದರ್‌ ತಮ್ಮ ಸಂಸಾರಿಕ ಜೀವನದಲ್ಲಾದ ಏಳುಬೀಳುಗಳಿಂದ ಚಿತ್ರರಂಗದಿಂದ ಕೊಂಚ ದೂರ ಸರಿದಿದ್ರು. ಇವರು ನಿರ್ದೇಶನ ಮಾಡಿದ ಒನ್ಸ್‌ ಮೋರ್‌ ಕೌರವ ಸಿನಿಮಾ ಕೂಡ ಹೇಳಿಕೊಳ್ಳುವಷ್ಟು ಯಶಸ್ಸು ತರಲಿಲ್ಲ. ಇದಾದ ಮೇಲೆ ಮಹೇಂದರ್​ ಎಲ್ಲಿಗೆ ಹೋದ್ರು ಎಂಬ ಬಗ್ಗೆ ಚರ್ಚೆ ಕೂಡ ಶುರುವಾಗಿತ್ತು. ಆದ್ರೆ ಇದೀಗ ಇದಕ್ಕೆಲ್ಲ ಉತ್ತರ ಕೊಡೋಕೆ ನಿರ್ದೇಶಕ ಮಹೇಂದರ್​​​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇದೀಗ ʻಶಬ್ದʼ ಅನ್ನೋ ಸಿನಿಮಾದ ಮೂಲಕ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೋಡಿಯಾಗಿ ಸೋನುಗೌಡ ಕಾಣಿಸಿಕೊಳ್ಳಲಿದ್ದಾರೆ. ʻಶಬ್ದʼ ಒಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಸೋನುಗೌಡ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಮಹೇಂದರ್​​​ 2001ರಲ್ಲಿ ರಿಲೀಸ್​ ಆಗಿದ್ದ ಗಟ್ಟಿಮೇಳ ಸಿನಿಮಾದಲ್ಲಿ ನಾಯಕನಾಗಿ ಯಶಸ್ಸು ಕಂಡಿದ್ದರು. ಆ ನಂತರದಲ್ಲಿ ಯಾವುದೇ ಸಿನಿಮಾದಲ್ಲೂ ನಾಯಕನಾಗಿ ಕಾಣಿಸಿಕೊಳ್ಳಲಿಲ್ಲ.

ಕಣ್ಣೀರಿನ ನಿರ್ದೇಶಕ ಎಂದು ಹೆಸರು ಪಡೆದಿರುವ ಮಹೇಂದರ್‌ ತಮ್ಮ ಸಂಸಾರಿಕ ಜೀವನದಲ್ಲಾದ ಏಳುಬೀಳುಗಳಿಂದ ಚಿತ್ರರಂಗದಿಂದ ಕೊಂಚ ದೂರ ಸರಿದಿದ್ರು. ಇವರು ನಿರ್ದೇಶನ ಮಾಡಿದ ಒನ್ಸ್‌ ಮೋರ್‌ ಕೌರವ ಸಿನಿಮಾ ಕೂಡ ಹೇಳಿಕೊಳ್ಳುವಷ್ಟು ಯಶಸ್ಸು ತರಲಿಲ್ಲ. ಇದಾದ ಮೇಲೆ ಮಹೇಂದರ್​ ಎಲ್ಲಿಗೆ ಹೋದ್ರು ಎಂಬ ಬಗ್ಗೆ ಚರ್ಚೆ ಕೂಡ ಶುರುವಾಗಿತ್ತು. ಆದ್ರೆ ಇದೀಗ ಇದಕ್ಕೆಲ್ಲ ಉತ್ತರ ಕೊಡೋಕೆ ನಿರ್ದೇಶಕ ಮಹೇಂದರ್​​​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇದೀಗ ʻಶಬ್ದʼ ಅನ್ನೋ ಸಿನಿಮಾದ ಮೂಲಕ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೋಡಿಯಾಗಿ ಸೋನುಗೌಡ ಕಾಣಿಸಿಕೊಳ್ಳಲಿದ್ದಾರೆ. ʻಶಬ್ದʼ ಒಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಸೋನುಗೌಡ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಮಹೇಂದರ್​​​ 2001ರಲ್ಲಿ ರಿಲೀಸ್​ ಆಗಿದ್ದ ಗಟ್ಟಿಮೇಳ ಸಿನಿಮಾದಲ್ಲಿ ನಾಯಕನಾಗಿ ಯಶಸ್ಸು ಕಂಡಿದ್ದರು. ಆ ನಂತರದಲ್ಲಿ ಯಾವುದೇ ಸಿನಿಮಾದಲ್ಲೂ ನಾಯಕನಾಗಿ ಕಾಣಿಸಿಕೊಳ್ಳಲಿಲ್ಲ.

ಮಹೇಂದರ್ ನಟನೆಗೆ ಮರಳಿದರು

ಯಶಸ್ವಿ ನಿರ್ದೇಶಕ ಎಸ್ ಮಹೇಂದರ್ ಮಾಜಿ ಪತ್ನಿ ಶ್ರುತಿ ಅವರ ಜೊತೆ ಗಟ್ಟಿ ಮೇಳ (2001) ಸಿನಿಮಾ ಆದ ಮೇಲೆ ನಟನೆಗೆ ಹೆಚ್ಚು ಒತ್ತು ಕೊಡಲಿಲ್ಲ. ನಿರ್ದೇಶನದ ಜವಾಬ್ದಾರಿ ಸಾಕು ಅಂತ ಸುಮ್ಮನಾದರು. ಕನ್ನಡ ಮೇಷ್ಟ್ರು ಅಂತ ಸಿನಿಮಾ ಸಹ ಶುರು ಮಾಡಿದರು ಎಸ್ ಮಹೇಂದರ್. ಆಮೇಲೆ ಅದೇನಾಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಎಸ್ ಮಹೇಂದರ್ ನಿರ್ದೇಶನದ ಹಿಂದಿನ ಸಿನಿಮಾ ಒನ್ಸ್ ಮೋರ್ ಕೌರವ ಹೆಚ್ಚಾಗಿ ಯಶಸ್ಸು ಕಾಣಲಿಲ್ಲ, ಮಹೇಂದರ್ ಸಹ ನೃತ್ಯ ನಿರ್ದೇಶಕ ಮಾಲೂರ್ ಶ್ರೀನಿವಾಸ್ ಸ್ಥಾಪಿಸಿರುವ ನಟನ ತರಬೇತಿ ಕೇಂದ್ರದ ಬಗ್ಗೆ ಒಲವು ತೋರಿದರು. ಈಗ ಮತ್ತು ಅಭಿನಯದ ಬಗ್ಗೆ ಆಸಕ್ತಿ ಎಸ್ ಮಹೇಂದರ್ ಅವರಿಗೆ ಬಂದಿದೆ. 19 ವರ್ಷಗಳ ಬಳಿಕ ಅವರು ಅಭಿನಯಕ್ಕೆ ಮರಳಿದ್ದಾರೆ ಗಡ್ಡ ವಿಜಯ್ ನಿರ್ದೇಶನದ ಶಬ್ದಸಿನಿಮಾ ಮೂಲಕ.

ಗಡ್ಡ ವಿಜಯ್ ನಿರ್ದೇಶನದ ಪ್ಲಸ್ ಸಿನಿಮಾ ವಿಭಿನ್ನವಾಗಿದ್ದರು ಯಶಸ್ಸು ಕಾಣಲಿಲ್ಲ. ನಾಲ್ಕು ವರ್ಷಗಳ ಬಳಿಕ ಅವರು ನಿರ್ದೇಶನಕ್ಕೆ ಮರಳುತ್ತಿದ್ದಾರೆ.

ಎಸ್ ಮಹೇಂದರ್ ಅಂತಹ 25 ಸಿನಿಮಾಗಳ ನಿರ್ದೇಶಕ ನಟನೆಗೆ ಒಪ್ಪಿಕೊಳ್ಳಲಾಳು ಕಾರಣ ಚಿತ್ರದ ಥ್ರಿಲ್ಲರ್ ಕಥಾವಸ್ತು. ಇಲ್ಲಿ ಪ್ರಯೋಗ ಸಹ ಮಾಡುತ್ತಿದ್ದಾರೆ ಗಡ್ಡ ವಿಜಯ್.

ಪೊಲೀಸ್ ವಸ್ತ್ರ ತೊಡದೆ ಪೊಲೀಸ್ ಕೆಲಸವನ್ನು ಸೋನು ಗೌಡ  ಕಥಾ ನಾಯಕಿ ಆಗಿ ನಿರ್ವಹಿಸುತ್ತಿದ್ದಾರೆ. ರಾಜೇಶ್ ನಟರಂಗ ಸಹ ಮುಖ್ಯ ಪಾತ್ರದಲ್ಲಿದ್ದಾರೆ.

ಕನ್ನಡದಲ್ಲಿ ತಯಾರಾದ ಈ ಸಿನಿಮಾ ತಮಿಳು, ತೆಲುಗು, ಹಿಂದಿ, ಮರಾಠಿ, ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿ ಬರಲಿದೆ. 

Last Updated : Dec 16, 2019, 3:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.