ETV Bharat / sitara

ಮಹಿಷಾಸುರನಿಗೆ ಸಾಥ್​ ನೀಡಿದ ಹನುಮನ ಭಕ್ತ ಧ್ರುವ ಸರ್ಜಾ.. - druva sarja support mahishasura team

ಮಹಿಷಾಸುರ ಸಿನಿಮಾದ ಲಿರಿಕಲ್ ವಿಡಿಯೋವನ್ನ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಈ ಸಿನಿಮಾಕ್ಕೆ ಉದಯ ಪ್ರಸನ್ನ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಮಹಿಷಾಸುರಿನಿಗೆ ಸಾಥ್​ ನೀಡಿದ ಹನುಮ ಭಕ್ತ ಧ್ರುವ ಸರ್ಜಾ
author img

By

Published : Oct 9, 2019, 9:36 PM IST

ಸ್ಯಾಂಡಲ್‌ವುಡ್​ನಲ್ಲಿ ಹೊಸ ನಟರು ಹಾಗೂ ಯುವ ನಿರ್ದೇಶಕರಿಗೆ ಸ್ಟಾರ್​ಗಳು ಸಾಥ್​ ನೀಡುವುದು ಸಾಮಾನ್ಯವಾಗಿದೆ. ಚೊಚ್ಚಲಾಗಿ ಸಿನಿ ರಂಗಕ್ಕೆ ಎಂಟ್ರಿಕೊಟ್ಟು ಬೆಳೆಯಬೇಕೆಂದಿರುವ ಪ್ರತಿಭೆಗಳಿಗೆ ಈ ಸ್ಟಾರ್​ ನಟರ ಸಹಾಯ ಮುಖ್ಯವಾಗಿರುತ್ತದೆ.

ಸದ್ಯ ಗಾಂಧಿನಗರದಲ್ಲಿ 'ಮಹಿಷಾಸುರ'ಅಂತಾ ಟೈಟಲ್ ಇಟ್ಟುಕೊಂಡು ಸಿನಿಮಾ ಬರ್ತಾ ಇದೆ. ಇಬ್ಬರು ಸ್ನೇಹಿತರು ಹಾಗೂ ಯುವತಿಯ ನಡುವಿನ ತ್ರಿಕೋನ ಪ್ರೇಮ ಕಥಾ ಹಂದರ ಹೊಂದಿರುವ ಮಹಿಷಾಸುರ ಚಿತ್ರದ ಬಹುತೇಕ ಕೆಲಸ ಮುಗಿದಿದ್ದು ರಿಲೀಸ್​ಗೆ ರೆಡಿಯಾಗಿದೆ.

dhruva sarja release mahishasura movie lyrical video
ಮಹಿಷಾಸುರ ತಂಡ ಮತ್ತು ಧ್ರುವ ಸರ್ಜಾ
dhruva sarja release mahishasura movie lyrical video
ಮಹಿಷಾಸುರ ತಂಡ ಮತ್ತು ಧ್ರುವ ಸರ್ಜಾ
dhruva sarja release mahishasura movie lyrical video
ಮಹಿಷಾಸುರ ತಂಡ ಮತ್ತು ಧ್ರುವ ಸರ್ಜಾ

ಮಹಿಷಾಸುರ ಸಿನಿಮಾದ ಲಿರಿಕಲ್ ವಿಡಿಯೋವನ್ನ ಧ್ರುವ ಸರ್ಜಾ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಈ ಸಿನಿಮಾಕ್ಕೆ ಉದಯ ಪ್ರಸನ್ನ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಈ ಸಿನಿಮಾದಲ್ಲಿ ಅರ್ಜುನ್, ಮಂಜು, ಬಿಂದುಶ್ರೀ, ಸುದರ್ಶನ್, ರಘುಪಾಂಡೆ, ಶ್ವೇತ, ರಾಕ್‍ಲೈನ್ ಸುಧಾಕರ್, ತುಷಾರ್, ಶ್ರೀನಿವಾಸಚಾರಿ, ರವೀಂದ್ರ, ಚಂದ್ರಣ್ಣ, ರವಿ ಮೆಳೇಕೋಟೆ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಕಾಣಲಿದ್ದಾರೆ.

ಮಹಿಷಾಸುರಿನಿಗೆ ಸಾಥ್​ ನೀಡಿದ ಹನುಮ ಭಕ್ತ ಧ್ರುವ ಸರ್ಜಾ

ಮಹಿಷಾಸುರನಿಗೆ ಕೃಷ್ಣ ಛಾಯಾಗ್ರಹಣ, ಆರ್.ಆರ್.ರಾಘವೇಂದ್ರ, ಸಾಯಿಕಿರಣ್, ಸುನೀಲ್ ಜೋಷಿಯ ಸಂಗೀತ, ರಾಕಿ ರಮೇಶ್ ಸಾಹಸ, ವೆಂಕಿ ಯುಡಿವಿ ಸಂಕಲನ, ವೇಣು ಸಾಹಿತ್ಯ, ಸುಜೀತ್- ಕಿಶೋರ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಮೇಲುಕೋಟೆ ಟೂರಿಂಗ್ ಟಾಕೀಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಸದ್ಯ ಸೆನ್ಸಾರ್​ಗೆ ತೆರಳಿರುವ ಮಹಿಷಾಸುರ ಚಿತ್ರವು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇನ್ನು, ಲಿರಿಕಲ್​ ವಿಡಿಯೋವನ್ನು ಬಿಡುಗಡೆ ಮಾಡಿದ ಧ್ರುವ ಸರ್ಜಾಗೆ ಮಹಿಷಾಸುರ ಚಿತ್ರತಂಡ ಆಂಜನೇಯನ ವಿಗ್ರಹ ನೀಡಿ ಗೌರವಿಸಿದೆ.

ಸ್ಯಾಂಡಲ್‌ವುಡ್​ನಲ್ಲಿ ಹೊಸ ನಟರು ಹಾಗೂ ಯುವ ನಿರ್ದೇಶಕರಿಗೆ ಸ್ಟಾರ್​ಗಳು ಸಾಥ್​ ನೀಡುವುದು ಸಾಮಾನ್ಯವಾಗಿದೆ. ಚೊಚ್ಚಲಾಗಿ ಸಿನಿ ರಂಗಕ್ಕೆ ಎಂಟ್ರಿಕೊಟ್ಟು ಬೆಳೆಯಬೇಕೆಂದಿರುವ ಪ್ರತಿಭೆಗಳಿಗೆ ಈ ಸ್ಟಾರ್​ ನಟರ ಸಹಾಯ ಮುಖ್ಯವಾಗಿರುತ್ತದೆ.

ಸದ್ಯ ಗಾಂಧಿನಗರದಲ್ಲಿ 'ಮಹಿಷಾಸುರ'ಅಂತಾ ಟೈಟಲ್ ಇಟ್ಟುಕೊಂಡು ಸಿನಿಮಾ ಬರ್ತಾ ಇದೆ. ಇಬ್ಬರು ಸ್ನೇಹಿತರು ಹಾಗೂ ಯುವತಿಯ ನಡುವಿನ ತ್ರಿಕೋನ ಪ್ರೇಮ ಕಥಾ ಹಂದರ ಹೊಂದಿರುವ ಮಹಿಷಾಸುರ ಚಿತ್ರದ ಬಹುತೇಕ ಕೆಲಸ ಮುಗಿದಿದ್ದು ರಿಲೀಸ್​ಗೆ ರೆಡಿಯಾಗಿದೆ.

dhruva sarja release mahishasura movie lyrical video
ಮಹಿಷಾಸುರ ತಂಡ ಮತ್ತು ಧ್ರುವ ಸರ್ಜಾ
dhruva sarja release mahishasura movie lyrical video
ಮಹಿಷಾಸುರ ತಂಡ ಮತ್ತು ಧ್ರುವ ಸರ್ಜಾ
dhruva sarja release mahishasura movie lyrical video
ಮಹಿಷಾಸುರ ತಂಡ ಮತ್ತು ಧ್ರುವ ಸರ್ಜಾ

ಮಹಿಷಾಸುರ ಸಿನಿಮಾದ ಲಿರಿಕಲ್ ವಿಡಿಯೋವನ್ನ ಧ್ರುವ ಸರ್ಜಾ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಈ ಸಿನಿಮಾಕ್ಕೆ ಉದಯ ಪ್ರಸನ್ನ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಈ ಸಿನಿಮಾದಲ್ಲಿ ಅರ್ಜುನ್, ಮಂಜು, ಬಿಂದುಶ್ರೀ, ಸುದರ್ಶನ್, ರಘುಪಾಂಡೆ, ಶ್ವೇತ, ರಾಕ್‍ಲೈನ್ ಸುಧಾಕರ್, ತುಷಾರ್, ಶ್ರೀನಿವಾಸಚಾರಿ, ರವೀಂದ್ರ, ಚಂದ್ರಣ್ಣ, ರವಿ ಮೆಳೇಕೋಟೆ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಕಾಣಲಿದ್ದಾರೆ.

ಮಹಿಷಾಸುರಿನಿಗೆ ಸಾಥ್​ ನೀಡಿದ ಹನುಮ ಭಕ್ತ ಧ್ರುವ ಸರ್ಜಾ

ಮಹಿಷಾಸುರನಿಗೆ ಕೃಷ್ಣ ಛಾಯಾಗ್ರಹಣ, ಆರ್.ಆರ್.ರಾಘವೇಂದ್ರ, ಸಾಯಿಕಿರಣ್, ಸುನೀಲ್ ಜೋಷಿಯ ಸಂಗೀತ, ರಾಕಿ ರಮೇಶ್ ಸಾಹಸ, ವೆಂಕಿ ಯುಡಿವಿ ಸಂಕಲನ, ವೇಣು ಸಾಹಿತ್ಯ, ಸುಜೀತ್- ಕಿಶೋರ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಮೇಲುಕೋಟೆ ಟೂರಿಂಗ್ ಟಾಕೀಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಸದ್ಯ ಸೆನ್ಸಾರ್​ಗೆ ತೆರಳಿರುವ ಮಹಿಷಾಸುರ ಚಿತ್ರವು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇನ್ನು, ಲಿರಿಕಲ್​ ವಿಡಿಯೋವನ್ನು ಬಿಡುಗಡೆ ಮಾಡಿದ ಧ್ರುವ ಸರ್ಜಾಗೆ ಮಹಿಷಾಸುರ ಚಿತ್ರತಂಡ ಆಂಜನೇಯನ ವಿಗ್ರಹ ನೀಡಿ ಗೌರವಿಸಿದೆ.

Intro:ಹೊಸಬರ ಸಿನಿಮಾಗೆ ಹನುಮಂತನ ಭಕ್ತನ ಸಪೋರ್ಟ್!!

ಸ್ಯಾಂಡಲ್ ವುಡ್ ನಲ್ಲಿ ಹೊಸ ನಟರು ಹಾಗು ಯುವ ನಿರ್ದೇಶಕರಿಗೆ ಸ್ಟಾರ್ ಆ ಸಿನಿಮಾದ ಆಡಿಯೋ ರಿಲೀಸ್ ಹಾಗು ಮುಹೂರ್ತಕ್ಕೆ ಬಂದು ಸಪೋರ್ಟ್ ಮಾಡ್ತಾರೆ.. ಸದ್ಯ ಗಾಂಧಿನಗರದಲ್ಲಿ ಮಹಿಷಾಸುರು ಅಂತಾ ಟೈಟಲ್ ಇಟ್ಟುಕೊಂಡು, ಸಿನಿಮಾ ಬರ್ತಾ ಇದೆ..ಇಬ್ಬರು ಸ್ನೇಹಿತರು ಹಾಗೂ ಯುವತಿಯ ನಡುವಿನ ತ್ರಿಕೋನ ಪ್ರೇಮ ಕಥಾ ಹಂದರ ಹೊಂದಿರುವ ಮಹಿಷಾಸುರ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು ರಿಲೀಸ್ ಗೆ ರೆಡಿಯಾಗಿದೆ.. ಇದೀಗ ಮಹಿಷಾಸುರ ಸಿನಿಮಾದ ಲಿರಿಕಲ್ ವಿಡಿಯೋವನ್ನ, ಹನುಮಂತನ ಭಕ್ತ ಧ್ರುವ ಸರ್ಜಾ ಬಿಡುಗಡೆ ಮಾಡಿ ಈ ಚಿತ್ರಕ್ಕೆ ಶುಭಾ ಹಾರೈಯಿಸಿದ್ದಾರೆ..ಉದಯ ಪ್ರಸನ್ನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಅರ್ಜುನ್, ಮಂಜು, ಬಿಂದುಶ್ರೀ ಮುಖ್ಯ ಭೂಮಿಕೆಯಲ್ಲಿದ್ದಾರೆ..ಇನ್ನು ಸುದರ್ಶನ್, ರಘುಪಾಂಡೆ, ಶ್ವೇತ, ರಾಕ್‍ಲೈನ್ ಸುಧಾಕರ್, ತುಷಾರ್, ಶ್ರೀನಿವಾಸಚಾರಿ, ರವೀಂದ್ರ, ಚಂದ್ರಣ್ಣ, ರವಿ ಮೆಳೇಕೋಟೆ ಇನ್ನೂ ಮುಂತಾದವರು ಈ‌ ಚಿತ್ರದಲ್ಲಿ ಅಭಿನಯಿಸಿದ್ದಾರೆ..Body:ಈ ಚಿತ್ರಕ್ಕೆ ಕೃಷ್ಣ ಛಾಯಾಗ್ರಹಣ, ಆರ್.ಆರ್.ರಾಘವೇಂದ್ರ, ಸಾಯಿಕಿರಣ್, ಸುನೀಲ್ ಜೋಷಿ ಸಂಗೀತ, ರಾಕಿ ರಮೇಶ್ ಸಾಹಸ, ವೆಂಕಿ ಯು.ಡಿ.ವಿ. ಸಂಕಲನ, ವೇಣು ಸಾಹಿತ್ಯ, ಸುಜೀತ್- ಕಿಶೋರ್ ನೃತ್ಯ ನಿರ್ದೇಶನವಿದೆ. ಮೇಲುಕೋಟೆ ಟೂರಿಂಗ್ ಟಾಕೀಸ್ ಲಾಂಛನದಲ್ಲಿ, ಈ ಚಿತ್ರ ನಿರ್ಮಾಣ ಮಾಡಗಿದೆ..ಸದ್ಯದಲ್ಲೇ ಸೆನ್ಸಾರ್‍ಗೆ ತೆರಳಿರುವ ಮಹಿಷಾಸುರ ಚಿತ್ರವು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.ಈ ಸಂದರ್ಭದಲ್ಲಿ ಮಹಿಷಾಸುರ ಚಿತ್ರತಂಡ ಆಂಜನೇಯ ವಿಗ್ರಹವನ್ನ ಧ್ರುವ ಸರ್ಜಾಗೆ ನೀಡಲಾಗಿದೆ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.