ETV Bharat / sitara

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಮುಂದುವರೆಸಿದ ಧನಂಜಯ್

author img

By

Published : Aug 23, 2019, 10:57 PM IST

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನಟ ಡಾಲಿ ಧನಂಜಯ್ ಅಭಿನಯಿಸುತ್ತಿರುವ 'ಬಡವ ರಾಸ್ಕಲ್', ಹಾಗೂ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರತಂಡದಿಂದ ನೆರವು ನೀಡಲಾಗುತ್ತಿದೆ.

actor dhananjaya

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಬಡವ ರಾಸ್ಕಲ್ ಹಾಗೂ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರತಂಡಗಳು ನೆರವು ನೀಡಲು ಮುಂದಾಗಿವೆ.

ಕಳೆದ ಎರಡು ದಿನಗಳ ಹಿಂದೆ ನಟ ಧನಂಜಯ್ ನನ್ನ ಹುಟ್ಟುಹಬ್ಬಕ್ಕೆ ಕೇಕ್, ಹಾರ ಪಟಾಕಿಗಳಿಗೆ ಖರ್ಚು ಮಾಡುವ ಬದಲಾಗಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದರು. ಈ ಮನವಿಗೆ ಸ್ಪಂದಿಸಿರುವ ಡಾಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬರ್ತ್​​​ಡೇ ಸರಳವಾಗಿ ಆಚರಿಸಿ, ಅದಕ್ಕೆ ಮೀಸಲಿಟ್ಟಿದ್ದ ಹಣ ವನ್ನು ಸಂತ್ರಸ್ತರಿಗೆ ನೀಡಲು ಮುಂದಾಗಿದ್ದಾರೆ.

ಇಂದು ಬಡವ ರಾಸ್ಕಲ್ ಚಿತ್ರದ ಮುಹೂರ್ತದ ವೇಳೆ ಈಟಿವಿ ಭಾರತ ಜೊತೆ ಈ ಬಗ್ಗೆ ಮಾತಾಡಿರುವ ಧನಂಜಯ್, ಬಡವ ರಾಸ್ಕಲ್, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರತಂಡಗಳು ಹಾಗೂ ನನ್ನ ಅಭಿಮಾನಿಗಳು ಸೇರಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದಿಷ್ಟು ಹಣ ನೀಡಲು ಮುಂದಾಗಿದ್ದೇವೆ. ಭಾನುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಹಣ ನೀಡುವುದಾಗಿ ತಿಳಿಸಿದರು.

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಧನಂಜಯ್ ನೆರವು

ಇನ್ನು ಈಗಾಗಲೇ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಧನಂಜಯ್ ಹಾಗೂ ಅವರ ಅಭಿಮಾನಿಗಳು ಸಾಕಷ್ಟು ಸಹಾಯ ಮಾಡಿದ್ದಾರೆ. ಇದೀಗ ಮತ್ತೆ ನೆರವಿನ ಹಸ್ತ ಚಾಚುತ್ತಿರುವುದು ಶ್ಲಾಘನೀಯ.

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಬಡವ ರಾಸ್ಕಲ್ ಹಾಗೂ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರತಂಡಗಳು ನೆರವು ನೀಡಲು ಮುಂದಾಗಿವೆ.

ಕಳೆದ ಎರಡು ದಿನಗಳ ಹಿಂದೆ ನಟ ಧನಂಜಯ್ ನನ್ನ ಹುಟ್ಟುಹಬ್ಬಕ್ಕೆ ಕೇಕ್, ಹಾರ ಪಟಾಕಿಗಳಿಗೆ ಖರ್ಚು ಮಾಡುವ ಬದಲಾಗಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದರು. ಈ ಮನವಿಗೆ ಸ್ಪಂದಿಸಿರುವ ಡಾಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬರ್ತ್​​​ಡೇ ಸರಳವಾಗಿ ಆಚರಿಸಿ, ಅದಕ್ಕೆ ಮೀಸಲಿಟ್ಟಿದ್ದ ಹಣ ವನ್ನು ಸಂತ್ರಸ್ತರಿಗೆ ನೀಡಲು ಮುಂದಾಗಿದ್ದಾರೆ.

ಇಂದು ಬಡವ ರಾಸ್ಕಲ್ ಚಿತ್ರದ ಮುಹೂರ್ತದ ವೇಳೆ ಈಟಿವಿ ಭಾರತ ಜೊತೆ ಈ ಬಗ್ಗೆ ಮಾತಾಡಿರುವ ಧನಂಜಯ್, ಬಡವ ರಾಸ್ಕಲ್, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರತಂಡಗಳು ಹಾಗೂ ನನ್ನ ಅಭಿಮಾನಿಗಳು ಸೇರಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದಿಷ್ಟು ಹಣ ನೀಡಲು ಮುಂದಾಗಿದ್ದೇವೆ. ಭಾನುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಹಣ ನೀಡುವುದಾಗಿ ತಿಳಿಸಿದರು.

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಧನಂಜಯ್ ನೆರವು

ಇನ್ನು ಈಗಾಗಲೇ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಧನಂಜಯ್ ಹಾಗೂ ಅವರ ಅಭಿಮಾನಿಗಳು ಸಾಕಷ್ಟು ಸಹಾಯ ಮಾಡಿದ್ದಾರೆ. ಇದೀಗ ಮತ್ತೆ ನೆರವಿನ ಹಸ್ತ ಚಾಚುತ್ತಿರುವುದು ಶ್ಲಾಘನೀಯ.

Intro:ಉತ್ತರಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಿಗೆ ಧಾವಿಸಿದ "ಬಡವ ರಾಸ್ಕಲ್ "ಮಂಕಿ ಟೈಗರ್"!!!!!!

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ದಲಿತ್ ಧನಂಜಯ್ ಅಭಿನಯದ ಬಡವ ರಾಸ್ಕಲ್ ಹಾಗೂ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರತಂಡಗಳು ನೆರವು ನೀಡುವುದಾಗಿ
ಡಾಲಿಧನಂಜಯ್ ತಿಳಿಸಿದ್ದಾರೆ. ಇಂದು ಧನಂಜಯ್ ಅಭಿನಯದ ಹೊಸ ಚಿತ್ರ ಬಡವ ರಸ್ಕಲ್ ಚಿತ್ರದ ಮುಹೂರ್ತದಲಿ ಈಟಿವಿ ಭಾರ ಜೊತೆ ಮಾತನಾಡಿದ ಡಾಲಿ ಧನಂಜಯ್ ಸಂತ್ರಸ್ತರಿಗೆ ನೆರವಾಗುವುದಾಗಿ ಹೇಳಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಡಾಲಿ ಧನಂಜಯ್ ನನ್ನ ಹುಟ್ಟುಹಬ್ಬಕ್ಕೆ ಕೇಕ್ ಹಾರ ಪಟಾಕಿಗಳ ಬದಲಾಗಿ ನೆರೆ ಸಂತ್ರಸ್ಥರಿಗೆ ನೆರವಾಗಿ ಎಂದು ಅವರ ಅಭಿಮಾನಿಗಳಿಗೆ ಕರೆಕೊಟ್ಟಿದ್ದರು. ಈಗ ಡಾಲಿ ಹೇಳಿದಂತೆ ಅವರ ಅಭಿಮಾನಿಗಳು ಧನಂಜಯ್ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ ಅದಕ್ಕೆ ಮೀಸಲಿಟ್ಟಿದ್ದ ಹಣವನ್ನು ಸಂತ್ರಸ್ತರಿಗೆ ನೀಡಲು ಮುಂದಾಗಿದ್ದಾರೆ.


Body:ಅಲ್ಲದೆ ಇದರ ಜೊತೆಗೆ "ಬಡವ ರಾಸ್ಕಲ್" ಚಿತ್ರತಂಡ ಹಾಗೂ ಸುಕ್ಕ ಸೂರಿ ನಿರ್ದೇಶನದ "ಪಾಪ್ ಕಾರ್ನ್ ಮಂಕಿ ಟೈಗರ್ "ಚಿತ್ರತಂಡಗಳು ಹಾಗೂ ಡಾಲಿ ಅಭಿಮಾನಿಗಳು ಸೇರಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದಷ್ಟು ಹಣವನ್ನು ನೀಡಲು ಮುಂದಾಗಿದ್ದಾರೆ. ನೆರೆಹಾವಳಿಯಿಂದ ಜನರು ಮನೆ-ಮಠಗಳನ್ನು ಕಳೆದುಕೊಂಡು ದಿಕ್ಕಾಪಾಲಾಗಿ ದ್ದಾರೆ ಅವರ ನೆರವಿಗೆ ಬರುವುದು ನಮ್ಮ ಕರ್ತವ್ಯ, ಅದರ ಜೊತೆಗೆ ನಾವು ನೀಡಿದ ಒಂದು ನೆರವು ಸಂತ್ರಸ್ತರಿಗೆ ಸರಿಯಾಗಿ ಸೇರಿಸ
ಬೇಕಾಗಿರುವುದು ಅಷ್ಟೇ ನಮ್ಮ ಕರ್ತವ್ಯವಾಗಿದೆ ಹಾಗಾಗಿ ಭಾನುವಾರ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡುವುದಾಗಿ ನಟ ಡಾಲಿ ಧನಂಜಯ್ ಈಟಿವಿ ಭಾರತಗೆ ತಿಳಿಸಿದರು.

ಸತೀಶ ಎಂಬಿ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.