ETV Bharat / sitara

'ಆ ದೃಶ್ಯ' ವಿಶೇಷ ಪ್ರೀಮಿಯರ್ ಶೋ...ಸೆಲಬ್ರಿಟಿಗಳು ಹೇಳಿದ್ದೇನು...?

'ಆ ದೃಶ್ಯ' ಚಿತ್ರತಂಡ ಸೆಲಬ್ರಿಟಿಗಳಿಗಾಗಿ ವಿಶೇಷ ಪ್ರೀಮಿಯರ್ ಶೋ ಆಯೋಜಿಸಿತ್ತು. ಚಿತ್ರದಲ್ಲಿ ಡಾ. ರವಿಚಂದ್ರನ್ ಯಂಗ್ ಲುಕ್​​ನಲ್ಲಿ ಮಿಂಚಿದ್ದು ನಾನು ಹೇಗೆ ಕಾಣುತ್ತಿದ್ದೇನೆ ಎಂಬುದನ್ನು ನೋಡಲು ಇಂದು ಇಲ್ಲಿಗೆ ಬಂದೆ ಎಂದು ಹೇಳಿಕೊಂಡರು.

author img

By

Published : Nov 8, 2019, 3:01 PM IST

'ಆ ದೃಶ್ಯ'

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ 'ಆ ದೃಶ್ಯ' ಇಂದು ರಾಜ್ಯಾದ್ಯಂತ ಸುಮಾರು 180 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ನಿನ್ನೆ ಚಿತ್ರತಂಡ ಸೆಲಬ್ರಿಟಿಗಳಿಗಾಗಿ ವಿಶೇಷ ಪ್ರೀಮಿಯರ್ ಶೋ ಆಯೋಜಿಸಿತ್ತು. ಸ್ಯಾಂಡಲ್​​​ವುಡ್​​​ನ ನಟಿಯರು ಹಾಗೂ ನಿರ್ದೇಶಕರು ಈ ಶೋಗೆ ಆಗಮಿಸಿ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

'ಆ ದೃಶ್ಯ' ವಿಶೇಷ ಪ್ರೀಮಿಯರ್ ಶೋ

ಈ ಶೋಗೆ ಕ್ರೇಜಿಸ್ಟಾರ್ ರವಿಚಂದ್ರನ್​​, ತಮ್ಮ ಪುತ್ರರಾದ ಮನೋರಂಜನ್ ಹಾಗೂ ವಿಕ್ರಂ ಜೊತೆ ಆಗಮಿಸಿ ಸಿನಿಮಾ ನೋಡಿ ಎಂಜಾಯ್ ಮಾಡಿದರು. ಸಿನಿಮಾ ನೋಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕ್ರೇಜಿಸ್ಟಾರ್, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ನೋಡಬೇಕಾದರೆ ನಮ್ಮಲ್ಲಿ ಒಂದು ಕುತೂಹಲ ಮೂಡಬೇಕು. ಸೀಟಿನ ತುದಿಯಲ್ಲಿ ಕುಳಿತು ನೋಡುವ ಹಾಗೆ ಈ ಚಿತ್ರ ಮೂಡಿ ಬಂದಿದೆ. ಅಲ್ಲದೆ ಕ್ಲೈಮ್ಯಾಕ್ಸ್​​​​ನಲ್ಲಿ ಸಾಮಾನ್ಯವಾಗಿ ಇಂತಹ ಚಿತ್ರಗಳಲ್ಲಿ ಯಾರೂ ಹಾಡನ್ನು ಸೇರಿಸುವುದಿಲ್ಲ. ಆದರೆ ಈ ಚಿತ್ರದಲ್ಲಿ ನಿರ್ದೇಶಕರು ಆ ಪ್ರಯೋಗ ಮಾಡಿದ್ದಾರೆ. ಕ್ಲೈಮಾಕ್ಸ್ ನಲ್ಲಿ ಆ ಹಾಡು ಬರುವಾಗ ಎಲ್ಲರೂ ಎದ್ದು ಹೋಗುತ್ತಾರೆ ಎಂದುಕೊಂಡಿದ್ದೆ. ಆದರೆ ಯಾರೂ ಕೂಡಾ ಎದ್ದು ಹೋಗದೆ ಚಿತ್ರವನ್ನು ನೋಡಿದರು. ನಮ್ಮ ಪ್ರಯೋಗ ವರ್ಕೌಟ್​ ಆಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಕ್ರೇಜಿಸ್ಟಾರ್ ಹೇಳಿದರು.

Aa Drushya premiere show, ಆ ದೃಶ್ಯ ಪ್ರೀಮಿಯರ್ ಶೋ
ಗೌತಮ್ ಶ್ರೀವಾತ್ಸವ್, ರೂಪಾ ಅಯ್ಯರ್

ಈ ಚಿತ್ರದಲ್ಲಿ ನಿರ್ದೇಶಕ, ನಿರ್ಮಾಪಕರು ಸೇರಿ ನನ್ನನ್ನು ಬಹಳ ಯಂಗ್ ಆಗಿ ತೋರಿಸಿದ್ದಾರೆ. ಚಿತ್ರದಲ್ಲಿ ನಾನು ಹೇಗೆ ಕಾಣುತ್ತಿದ್ದೇನೆ ಎಂಬುದನ್ನು ನೋಡಲು ಇಂದು ಇಲ್ಲಿಗೆ ಬಂದೆ. ಸಿನಿಮಾ ನೋಡಿದ ಮೇಲೆ ನನಗೂ ತೃಪ್ತಿಯಾಯಿತು ಎಂದು ಕ್ರೇಜಿಸ್ಟಾರ್ 'ಆ ದೃಶ್ಯ' ಚಿತ್ರದ ಬಗ್ಗೆ ಹೇಳಿದರು. ಈ ಚಿತ್ರವನ್ನು 'ಜಿಗರ್​ಥಂಡ' ಸಿನಿಮಾಗೆ ನಿರ್ದೇಶಿಸಿದ್ದ ಶಿವಗಣೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ಯಶಸ್ಸಿನ ಹಾದಿಯಲ್ಲಿ ಸಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.

Aa Drushya movie released today,ಆ ದೃಶ್ಯ ಇಂದು ಬಿಡುಗಡೆ
ದಯಾಳ್ ಪದ್ಮನಾಭನ್, ಪ್ರಿಯಾ ವಾರಿಯರ್, ಕೆ.ಮಂಜು

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ 'ಆ ದೃಶ್ಯ' ಇಂದು ರಾಜ್ಯಾದ್ಯಂತ ಸುಮಾರು 180 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ನಿನ್ನೆ ಚಿತ್ರತಂಡ ಸೆಲಬ್ರಿಟಿಗಳಿಗಾಗಿ ವಿಶೇಷ ಪ್ರೀಮಿಯರ್ ಶೋ ಆಯೋಜಿಸಿತ್ತು. ಸ್ಯಾಂಡಲ್​​​ವುಡ್​​​ನ ನಟಿಯರು ಹಾಗೂ ನಿರ್ದೇಶಕರು ಈ ಶೋಗೆ ಆಗಮಿಸಿ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

'ಆ ದೃಶ್ಯ' ವಿಶೇಷ ಪ್ರೀಮಿಯರ್ ಶೋ

ಈ ಶೋಗೆ ಕ್ರೇಜಿಸ್ಟಾರ್ ರವಿಚಂದ್ರನ್​​, ತಮ್ಮ ಪುತ್ರರಾದ ಮನೋರಂಜನ್ ಹಾಗೂ ವಿಕ್ರಂ ಜೊತೆ ಆಗಮಿಸಿ ಸಿನಿಮಾ ನೋಡಿ ಎಂಜಾಯ್ ಮಾಡಿದರು. ಸಿನಿಮಾ ನೋಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕ್ರೇಜಿಸ್ಟಾರ್, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ನೋಡಬೇಕಾದರೆ ನಮ್ಮಲ್ಲಿ ಒಂದು ಕುತೂಹಲ ಮೂಡಬೇಕು. ಸೀಟಿನ ತುದಿಯಲ್ಲಿ ಕುಳಿತು ನೋಡುವ ಹಾಗೆ ಈ ಚಿತ್ರ ಮೂಡಿ ಬಂದಿದೆ. ಅಲ್ಲದೆ ಕ್ಲೈಮ್ಯಾಕ್ಸ್​​​​ನಲ್ಲಿ ಸಾಮಾನ್ಯವಾಗಿ ಇಂತಹ ಚಿತ್ರಗಳಲ್ಲಿ ಯಾರೂ ಹಾಡನ್ನು ಸೇರಿಸುವುದಿಲ್ಲ. ಆದರೆ ಈ ಚಿತ್ರದಲ್ಲಿ ನಿರ್ದೇಶಕರು ಆ ಪ್ರಯೋಗ ಮಾಡಿದ್ದಾರೆ. ಕ್ಲೈಮಾಕ್ಸ್ ನಲ್ಲಿ ಆ ಹಾಡು ಬರುವಾಗ ಎಲ್ಲರೂ ಎದ್ದು ಹೋಗುತ್ತಾರೆ ಎಂದುಕೊಂಡಿದ್ದೆ. ಆದರೆ ಯಾರೂ ಕೂಡಾ ಎದ್ದು ಹೋಗದೆ ಚಿತ್ರವನ್ನು ನೋಡಿದರು. ನಮ್ಮ ಪ್ರಯೋಗ ವರ್ಕೌಟ್​ ಆಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಕ್ರೇಜಿಸ್ಟಾರ್ ಹೇಳಿದರು.

Aa Drushya premiere show, ಆ ದೃಶ್ಯ ಪ್ರೀಮಿಯರ್ ಶೋ
ಗೌತಮ್ ಶ್ರೀವಾತ್ಸವ್, ರೂಪಾ ಅಯ್ಯರ್

ಈ ಚಿತ್ರದಲ್ಲಿ ನಿರ್ದೇಶಕ, ನಿರ್ಮಾಪಕರು ಸೇರಿ ನನ್ನನ್ನು ಬಹಳ ಯಂಗ್ ಆಗಿ ತೋರಿಸಿದ್ದಾರೆ. ಚಿತ್ರದಲ್ಲಿ ನಾನು ಹೇಗೆ ಕಾಣುತ್ತಿದ್ದೇನೆ ಎಂಬುದನ್ನು ನೋಡಲು ಇಂದು ಇಲ್ಲಿಗೆ ಬಂದೆ. ಸಿನಿಮಾ ನೋಡಿದ ಮೇಲೆ ನನಗೂ ತೃಪ್ತಿಯಾಯಿತು ಎಂದು ಕ್ರೇಜಿಸ್ಟಾರ್ 'ಆ ದೃಶ್ಯ' ಚಿತ್ರದ ಬಗ್ಗೆ ಹೇಳಿದರು. ಈ ಚಿತ್ರವನ್ನು 'ಜಿಗರ್​ಥಂಡ' ಸಿನಿಮಾಗೆ ನಿರ್ದೇಶಿಸಿದ್ದ ಶಿವಗಣೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ಯಶಸ್ಸಿನ ಹಾದಿಯಲ್ಲಿ ಸಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.

Aa Drushya movie released today,ಆ ದೃಶ್ಯ ಇಂದು ಬಿಡುಗಡೆ
ದಯಾಳ್ ಪದ್ಮನಾಭನ್, ಪ್ರಿಯಾ ವಾರಿಯರ್, ಕೆ.ಮಂಜು
Intro:ಆ ದೃಶ್ಯ ಸೆಲೆಬ್ರಿಟಿ ಶೋ ಯಂಗ್ ಲುಕ್ ನಲ್ಲಿ ಮಿಂಚಿದ ರವಿಮಾಮಾ..!

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಆ ದೃಶ್ಯ ನಾಳೆ ರಾಜ್ಯಾದ್ಯಂತ ಸುಮಾರು 180 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗ್ತಿದ್ದು. ಇಂದು ಚಿತ್ರತಂಡ ಸೆಲೆಬ್ರಿಟಿ ಗಳಿಗಾಗಿ ವಿಶೇಷ ಪ್ರೀಮಿಯರ್ ಶೋ ಆಯೋಜಿಸಿತ್ತು. ಈ ಪ್ರಿಮಿಯರ್ ಶೋಗೆ ಸ್ಯಾಂಡಲ್ವುಡ್ನ ನಟ-ನಟಿಯರು ಹಾಗೂ ನಿರ್ದೇಶಕರುಗಳು ಆಗಮಿಸಿ ಆ ದೃಶ್ಯ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಕ್ರೇಜಿಸ್ಟಾರ್ ರವಿಚಂದ್ರನ್ ತನ್ನ ಪುತ್ರರಾದ ಮನೋರಂಜನ್ ಹಾಗೂ ವಿಕ್ರಂ ಜೊತೆ ಆಗಮಿಸಿ ಸಿನಿಮಾ ನೋಡಿ ಎಂಜಾಯ್ ಮಾಡಿದರು. ಸಿನಿಮಾ ನೋಡಿದ ನಂತರ ಮಧ್ಯಮಗತಿ ಮಾತನಾಡಿದ ಕ್ರೇಜಿಸ್ಟಾರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ನೋಡಬೇಕಾದರೆ ನಮ್ಮಲ್ಲಿ ಒಂದು ಕುತೂಹಲ ಮೂಡಬೇಕು. ಸೀಟಿನ ತುದಿಯಲ್ಲಿ ಕುಳಿತು ನೋಡುವ ಹಾಗೆ ಈ ಚಿತ್ರ ಮೂಡಿ ಬಂದಿದೆ. ಅಲ್ಲದೆ ಕ್ಲೈಮ್ಯಾಕ್ಸ್ನಲ್ಲಿ ಸಾಮಾನ್ಯವಾಗಿ ಇಂತಹ ಚಿತ್ರಗಳಲ್ಲಿ ಹಾಡನ್ನು ಇಡುವುದಿಲ್ಲ. ಆದರೆ ಈ ಚಿತ್ರದಲ್ಲಿ ಒಂದು ಎಕ್ಸ್ಪರಿಮೆಂಟ್ ಅನ್ನು ನಿರ್ದೇಶಕರು ಮಾಡಿದ್ದಾರೆ. ಕ್ಲೈಮಾಕ್ಸ್ ನಲ್ಲಿ ಆ ಹಾಡು ಬರುವಾಗ ಜನರು ಎಲ್ಲಿ ಎದ್ದು ಹೋಗ್ತಾರೆ ಎಂದುಕೊಂಡಿದ್ದೆ ಆದರೆ ಯಾರೂ ಸಹ ಎದ್ದು ಹೋಗದೆ ಚಿತ್ರವನ್ನು ನೋಡಿದ್ರು. ಇದು ನಮ್ಮ ಪ್ರಯೋಗ ವರ್ಕ್ ಔಟ್ ಆಗಿದೆ ಎಂಬುದಕ್ಕೆ ಸಾಕ್ಷಿ ಎಂದು ಕ್ರೇಜಿಸ್ಟಾರ್ ಹೇಳಿದರು. Body:ಅಲ್ಲದೆ ನಿರ್ದೇಶಕರು ಹಾಗೂ ನಿರ್ಮಾಪಕರು ನನ್ನನ್ನು ಈ ಚಿತ್ರದಲ್ಲಿ ಯಂಗಾಗಿ ಮಾಡಿದ್ದಾರೆ. ಅವರು ನನ್ನನ್ನು ಹೆಂಗೆ ತೋರಿಸಿದ್ದಾರೆ ಎಂಬುದನ್ನು ನೋಡಲು ಬಂದಿದ್ದೆ. ಸಿನಿಮಾ ನೋಡಿದ ಮೇಲೆ ನನಗೂ ತೃಪ್ತಿಯಾಯಿತು ಎಂದು ಕ್ರೇಜಿಸ್ಟಾರ್ ಆದೃಶ್ಯ ಚಿತ್ರದ ಬಗ್ಗೆ ಹೇಳಿದರು.
ಇನ್ನು ನಾಳೆ ಸುಮಾರು 180 ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರಮಂದಿರದವರು ಬಂದಿದ್ದರು. ಆದರೆ ನಾನೇ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವುದುಬೇಡವೆಂದು
ತೀರ್ಮಾನ ಮಾಡಿದ್ದೇನೆ. ಹೆಚ್ಚು ಚಿತ್ರಗಳೆಂದರೆ ಗಳಲ್ಲಿ ರಿಲೀಸ್ ಮಾಡಿ ಲಾಂಗ್ ರನ್ ಹಾಗುವ ಚಿತ್ರವನ್ನು ಮಾಡುವುದು ಬೇಡ ಎಂಬ ಕಾರಣಕ್ಕೆ ನಾನು ಸಿ ಸೆಂಟರ್ ಗಳಲ್ಲಿ ಹೆಚ್ಚಿಗೆ ಚಿತ್ರವನ್ನು ರಿಲೀಸ್ ಮಾಡ್ತಿಲ್ಲ ಎಂದು ನಿರ್ಮಾಪಕ ಕೆ ಮಂಜು ತಿಳಿಸಿದರು. ಇನ್ನು ಈ ಚಿತ್ರವನ್ನು ಜಿಗರ್ ಥಂಡ ಚಿತ್ರವನ್ನು ನಿರ್ದೇಶನಮಾಡಿದ್ದ
ಶಿವ ಗಣೇಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು. ತುಂಬಾ ಕುತೂಹಲಕಾರಿಯಾಗಿ ಆದೃಶ್ಯ ಮೂಡಿ ಬಂದಿದ್ದು " ದೃಶ್ಯ" ಚಿತ್ರದ ಯಶಸ್ಸಿನ ಹಾದಿಯಲ್ಲೇ ಈ ಚಿತ್ರವು ಸಾಗಲಿದೆಯ ಎಂಬುದನ್ನು ಕಾದು ನೋಡಬೇಕಿದೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.