ETV Bharat / entertainment

ಹಿಂದಿ ಬಿಗ್​ ಬಾಸ್​ ಒಟಿಟಿ ಗ್ರ್ಯಾಂಡ್ ಫಿನಾಲೆಗೆ ಒಂದೇ ವಾರ.. ಜಡ್ ಹದಿದ್, ಅವಿನಾಶ್ ಸಚ್‌ದೇವ್ ಮನೆಯಿಂದ ಔಟ್​

author img

By

Published : Aug 7, 2023, 1:26 PM IST

ಹಿಂದಿ ಬಿಗ್​ ಬಾಸ್​ ಓಟಿಟಿ 2ರ 56 ನೇ ಸಂಚಿಕೆಯಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್​ ಆಗಿದ್ದಾರೆ.

ಜಡ್ ಹದಿದ್, ಅವಿನಾಶ್ ಸಚ್‌ದೇವ್
ಜಡ್ ಹದಿದ್, ಅವಿನಾಶ್ ಸಚ್‌ದೇವ್

ಹೈದರಾಬಾದ್: ಸಲ್ಮಾನ್​ ಖಾನ್​ ನಡೆಸಿಕೊಡುತ್ತಿರುವ ಹಿಂದಿ ಬಿಗ್​ ಬಾಸ್​ ಓಟಿಟಿ 2 ರ 51ನೇ ಸಂಚಿಕೆಯು ಭಾನುವಾರ ನಡೆದಿದ್ದು, ಬಿಗ್​ ಬಾಸ್​ ಪ್ರೇಕ್ಷಕರಿಗೆ ಶಾಕ್​ ಮೇಲೆ ಶಾಕ್​ ನೀಡಲಾಯಿತು. ಬಿಗ್ ಬಾಸ್ OTT 2 ಗ್ರ್ಯಾಂಡ್ ಫಿನಾಲೆಗೆ ಕೇವಲ 1 ವಾರವಿದ್ದು ನಿನ್ನೆ ನಡೆದ ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ 2 ಸ್ಪರ್ಧಿಗಳು ಎಲಿಮಿನೇಟ್​ ಆಗುವ ಮೂಲಕ ಮನೆಯಿಂದ ಹೊರ ನಡೆದರು.

ಹೌದು, ಭಾನುವಾರ ನಡೆದ ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಸ್ಪರ್ಧಿಗಳಾದ ಜಡ್ ಹದಿದ್ ಮತ್ತು ಅವಿನಾಶ್ ಸಚ್‌ದೇವ್ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಕಳೆದ ವಾರ ಎಲಿಮಿನೇಟ್​ಗೆ ಅವಿನಾಶ್, ಜಾಡ್, ಜಿಯಾ ಶಂಕರ್ ಮತ್ತು ಮನೀಶಾ ರಾಣಿ ನಾಮಿನೇಟ್​ ಆಗಿದ್ದರು. ಆದರೆ ನಾಯಕನಾಗಿ ಆಯ್ಕೆಯಾದ ಅಭಿಷೇಕ್ ಮಲ್ಹಾನ್ ಮೊದಲ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಅಂತಿಮ ವಾರಕ್ಕೆ ಬೇಬಿಕಾ ಧುರ್ವೆ, ಮನಿಶಾ, ಎಲ್ವಿಶ್ ಯಾದವ್, ಪೂಜಾ ಭಟ್ ಮತ್ತು ಜಿಯಾ ಸ್ಪರ್ಧಿಗಳು ಮುಂದುವರೆದಿದ್ದಾರೆ.

ಇನ್ನು, ಅವಿನಾಶ್ ಮತ್ತು ಜಾಡ್ ಅವರು ಮನೆಯಿಂದ ಹೊರನಡೆದ ನಂತರ ಅಭಿಷೇಕ್ ಮಲ್ಹಾನ್ ಎಲ್ವಿಶ್ ಯಾದವ್ ವಿರುದ್ಧ ದೂರಿದ್ದಾರೆ. ಮನೀಶಾ ಮತ್ತು ಎಲ್ವಿಶ್ ಅವರು ಅಭಿಷೇಕ್ ಅವರ ತಾಯಿಯೊಂದಿಗೆ ನಡೆಸಿದ ಸಂಭಾಷಣೆಯ ಬಗ್ಗೆ ಗೇಲಿ ಮಾಡಿದ್ದರು. ಇದನ್ನು ವೀಕೆಂಡ್​ ಕಾ ವಾರ್ ಸಂಚಿಕೆಯಲ್ಲಿ ಪ್ರಸಾರ ಮಾಡಲಾಯಿತು. ಅಭಿಷೇಕ್ ಮಲ್ಹಾನ್ ಎಲ್ವಿಶ್ ತಂಡವು ಮಾಧ್ಯಮಗಳಲ್ಲಿ ನಿಂದಿಸುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ ಎಂದು ಆರೋಪಿಸಿದರು. ಆದರೆ ಈ ಹೇಳಿಕೆಯನ್ನು ಎಲ್ವಿಶ್ ನಿರಾಕರಿಸಿದ್ದಾರೆ.

ಪ್ಯಾಚ್ ಅಪ್ ಆದ ಅಭಿಷೇಕ್ ಮತ್ತು ಬೇಬಿಕಾ: ಕಳೆದ ವಾರ ಅಭಿಷೇಕ್ ಫ್ರೆಂಡ್‌ಶಿಪ್ ಟಾಸ್ಕ್ ಸಮಯದಲ್ಲಿ ಬೇಬಿಕಾ ಧುರ್ವೆ ಚಿತ್ರವನ್ನು ಚೂರುಚೂರು ಮಾಡಿದ್ದು, ಆಕೆಯನ್ನು ಎಂದಿಗೂ ಬಿಗ್​ಬಾಸ್​ ಕಾರ್ಯಕ್ರಮದ ನಂತರ ಭೇಟಿಯಾಗುವುದಿಲ್ಲವೆಂದು ಹೇಳಿದ್ದರು. ಆದರೆ ನಿನ್ನೆ ಅವರಿಬ್ಬರು ತಮ್ಮಲ್ಲಿದ್ದ ಮನಸ್ತಾಪವನ್ನು ಬಗೆಹರಿಸಿಕೊಂಡು, ಇಬ್ಬರು ಕ್ಷಮೆಯಾಚಿಸಿ ಅಪ್ಪಿಕೊಂಡರು. ಭಿನ್ನಾಭಿಪ್ರಾಯ ಬದಿಗಿಟ್ಟು ಮಾತನಾಡಿದ್ದಾರೆ. ಹೀಗಾಗಿ ಈ ಶೋ ನಂತರವೂ ಸಂಪರ್ಕದಲ್ಲಿರುತ್ತಾರೆ ಎಂದು ಭಾವಿಸಲಾಗಿದೆ.

ಬೇಸರ ವ್ಯಕ್ತಪಡಿಸಿದ ಎಲ್ವಿಶ್ ಯಾದವ್: ಎಲ್ವಿಶ್ ಯಾದವ್ ಜಿಯಾ ಶಂಕರ್‌ ಬಳಿ 'ವೈಲ್ಡ್ ಕಾರ್ಡ್ ಸ್ಪರ್ಧಿ ಎಂದಿಗೂ ವಿಜೇತನಾಗಲು ಸಾಧ್ಯವಿಲ್ಲವೆಂದು' ಅಭಿಷೇಕ್ ಹೇಳಿದಾಗ ನಾನು ಅದರಿಂದ ತುಂಬಾ ಮನನೊಂದಿದ್ದೇನೆ ಎಂದು ಹೇಳಿಕೊಂಡರು. ಅಲ್ಲದೆ, ಅಭಿಷೇಕ್ ವಿಜೇತನಾಗಬಹುದು ಎಂದು ನಾನು ನಂಬಿದ್ದೇನೆ. ಆದರೆ ಆತ ಮಾತ್ರ ನನ್ನ ಭಗ್ಗೆ ಆ ಅಭಿಪ್ರಾಯವನ್ನು ಹೊಂದಿಲ್ಲ. ಅಭಿಷೇಕ್ ಹೇಳಿಕೆಯು ನನಗೆ ಮನೆಯ ಜಗಳ ಮತ್ತು ಮನೆಯ ಸದಸ್ಯರಗಿಂತ ಹೆಚ್ಚು ನೋವುಂಟು ಮಾಡಿದೆ. ಹಾಗಂತ ನಾನು ಅಭಿಷೇಕ್ ಮೇಲೆ ಋಣಾತ್ಮಕ ಹೇಳಿಕೆಗಳನ್ನು ಹೇಳಿದರೆ ಮನೆಯಲ್ಲಿ ನಾನು ಶತ್ರು ಆಗುತ್ತೇನೆ ಎಂದು ಜಿಯಾ ಶಂಕರ್‌ ಬಳಿ ಹೇಳಿಕೊಂಡರು.

ಇದನ್ನೂ ಓದಿ: Bigg Boss OTT 2: ಕುಟುಂಬದ ಸದಸ್ಯರನ್ನು ಭೇಟಿಯಾದ ಬಿಗ್​ ಬಾಸ್​ ಸ್ಪರ್ಧಿಗಳು.. ಮೂರು ಸ್ಟಾರ್​ ಪಡೆದ ಪೂಜಾ ಭಟ್​

ಹೈದರಾಬಾದ್: ಸಲ್ಮಾನ್​ ಖಾನ್​ ನಡೆಸಿಕೊಡುತ್ತಿರುವ ಹಿಂದಿ ಬಿಗ್​ ಬಾಸ್​ ಓಟಿಟಿ 2 ರ 51ನೇ ಸಂಚಿಕೆಯು ಭಾನುವಾರ ನಡೆದಿದ್ದು, ಬಿಗ್​ ಬಾಸ್​ ಪ್ರೇಕ್ಷಕರಿಗೆ ಶಾಕ್​ ಮೇಲೆ ಶಾಕ್​ ನೀಡಲಾಯಿತು. ಬಿಗ್ ಬಾಸ್ OTT 2 ಗ್ರ್ಯಾಂಡ್ ಫಿನಾಲೆಗೆ ಕೇವಲ 1 ವಾರವಿದ್ದು ನಿನ್ನೆ ನಡೆದ ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ 2 ಸ್ಪರ್ಧಿಗಳು ಎಲಿಮಿನೇಟ್​ ಆಗುವ ಮೂಲಕ ಮನೆಯಿಂದ ಹೊರ ನಡೆದರು.

ಹೌದು, ಭಾನುವಾರ ನಡೆದ ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಸ್ಪರ್ಧಿಗಳಾದ ಜಡ್ ಹದಿದ್ ಮತ್ತು ಅವಿನಾಶ್ ಸಚ್‌ದೇವ್ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಕಳೆದ ವಾರ ಎಲಿಮಿನೇಟ್​ಗೆ ಅವಿನಾಶ್, ಜಾಡ್, ಜಿಯಾ ಶಂಕರ್ ಮತ್ತು ಮನೀಶಾ ರಾಣಿ ನಾಮಿನೇಟ್​ ಆಗಿದ್ದರು. ಆದರೆ ನಾಯಕನಾಗಿ ಆಯ್ಕೆಯಾದ ಅಭಿಷೇಕ್ ಮಲ್ಹಾನ್ ಮೊದಲ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಅಂತಿಮ ವಾರಕ್ಕೆ ಬೇಬಿಕಾ ಧುರ್ವೆ, ಮನಿಶಾ, ಎಲ್ವಿಶ್ ಯಾದವ್, ಪೂಜಾ ಭಟ್ ಮತ್ತು ಜಿಯಾ ಸ್ಪರ್ಧಿಗಳು ಮುಂದುವರೆದಿದ್ದಾರೆ.

ಇನ್ನು, ಅವಿನಾಶ್ ಮತ್ತು ಜಾಡ್ ಅವರು ಮನೆಯಿಂದ ಹೊರನಡೆದ ನಂತರ ಅಭಿಷೇಕ್ ಮಲ್ಹಾನ್ ಎಲ್ವಿಶ್ ಯಾದವ್ ವಿರುದ್ಧ ದೂರಿದ್ದಾರೆ. ಮನೀಶಾ ಮತ್ತು ಎಲ್ವಿಶ್ ಅವರು ಅಭಿಷೇಕ್ ಅವರ ತಾಯಿಯೊಂದಿಗೆ ನಡೆಸಿದ ಸಂಭಾಷಣೆಯ ಬಗ್ಗೆ ಗೇಲಿ ಮಾಡಿದ್ದರು. ಇದನ್ನು ವೀಕೆಂಡ್​ ಕಾ ವಾರ್ ಸಂಚಿಕೆಯಲ್ಲಿ ಪ್ರಸಾರ ಮಾಡಲಾಯಿತು. ಅಭಿಷೇಕ್ ಮಲ್ಹಾನ್ ಎಲ್ವಿಶ್ ತಂಡವು ಮಾಧ್ಯಮಗಳಲ್ಲಿ ನಿಂದಿಸುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ ಎಂದು ಆರೋಪಿಸಿದರು. ಆದರೆ ಈ ಹೇಳಿಕೆಯನ್ನು ಎಲ್ವಿಶ್ ನಿರಾಕರಿಸಿದ್ದಾರೆ.

ಪ್ಯಾಚ್ ಅಪ್ ಆದ ಅಭಿಷೇಕ್ ಮತ್ತು ಬೇಬಿಕಾ: ಕಳೆದ ವಾರ ಅಭಿಷೇಕ್ ಫ್ರೆಂಡ್‌ಶಿಪ್ ಟಾಸ್ಕ್ ಸಮಯದಲ್ಲಿ ಬೇಬಿಕಾ ಧುರ್ವೆ ಚಿತ್ರವನ್ನು ಚೂರುಚೂರು ಮಾಡಿದ್ದು, ಆಕೆಯನ್ನು ಎಂದಿಗೂ ಬಿಗ್​ಬಾಸ್​ ಕಾರ್ಯಕ್ರಮದ ನಂತರ ಭೇಟಿಯಾಗುವುದಿಲ್ಲವೆಂದು ಹೇಳಿದ್ದರು. ಆದರೆ ನಿನ್ನೆ ಅವರಿಬ್ಬರು ತಮ್ಮಲ್ಲಿದ್ದ ಮನಸ್ತಾಪವನ್ನು ಬಗೆಹರಿಸಿಕೊಂಡು, ಇಬ್ಬರು ಕ್ಷಮೆಯಾಚಿಸಿ ಅಪ್ಪಿಕೊಂಡರು. ಭಿನ್ನಾಭಿಪ್ರಾಯ ಬದಿಗಿಟ್ಟು ಮಾತನಾಡಿದ್ದಾರೆ. ಹೀಗಾಗಿ ಈ ಶೋ ನಂತರವೂ ಸಂಪರ್ಕದಲ್ಲಿರುತ್ತಾರೆ ಎಂದು ಭಾವಿಸಲಾಗಿದೆ.

ಬೇಸರ ವ್ಯಕ್ತಪಡಿಸಿದ ಎಲ್ವಿಶ್ ಯಾದವ್: ಎಲ್ವಿಶ್ ಯಾದವ್ ಜಿಯಾ ಶಂಕರ್‌ ಬಳಿ 'ವೈಲ್ಡ್ ಕಾರ್ಡ್ ಸ್ಪರ್ಧಿ ಎಂದಿಗೂ ವಿಜೇತನಾಗಲು ಸಾಧ್ಯವಿಲ್ಲವೆಂದು' ಅಭಿಷೇಕ್ ಹೇಳಿದಾಗ ನಾನು ಅದರಿಂದ ತುಂಬಾ ಮನನೊಂದಿದ್ದೇನೆ ಎಂದು ಹೇಳಿಕೊಂಡರು. ಅಲ್ಲದೆ, ಅಭಿಷೇಕ್ ವಿಜೇತನಾಗಬಹುದು ಎಂದು ನಾನು ನಂಬಿದ್ದೇನೆ. ಆದರೆ ಆತ ಮಾತ್ರ ನನ್ನ ಭಗ್ಗೆ ಆ ಅಭಿಪ್ರಾಯವನ್ನು ಹೊಂದಿಲ್ಲ. ಅಭಿಷೇಕ್ ಹೇಳಿಕೆಯು ನನಗೆ ಮನೆಯ ಜಗಳ ಮತ್ತು ಮನೆಯ ಸದಸ್ಯರಗಿಂತ ಹೆಚ್ಚು ನೋವುಂಟು ಮಾಡಿದೆ. ಹಾಗಂತ ನಾನು ಅಭಿಷೇಕ್ ಮೇಲೆ ಋಣಾತ್ಮಕ ಹೇಳಿಕೆಗಳನ್ನು ಹೇಳಿದರೆ ಮನೆಯಲ್ಲಿ ನಾನು ಶತ್ರು ಆಗುತ್ತೇನೆ ಎಂದು ಜಿಯಾ ಶಂಕರ್‌ ಬಳಿ ಹೇಳಿಕೊಂಡರು.

ಇದನ್ನೂ ಓದಿ: Bigg Boss OTT 2: ಕುಟುಂಬದ ಸದಸ್ಯರನ್ನು ಭೇಟಿಯಾದ ಬಿಗ್​ ಬಾಸ್​ ಸ್ಪರ್ಧಿಗಳು.. ಮೂರು ಸ್ಟಾರ್​ ಪಡೆದ ಪೂಜಾ ಭಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.