ETV Bharat / city

ಹಣದ ಆಮಿಷ ತೋರಿಸಿ ನಾಮಪತ್ರ ವಾಪಾಸ್ ಪಡೆಯಲು ಒತ್ತಡ: ಈ ಅಭ್ಯರ್ಥಿ ಮಾಡಿದ್ದೇನು ಗೊತ್ತಾ? - ದಾವಣಗೆರೆ ಕಮ್ಯುನಿಸ್ಟ್​​ ಪಕ್ಷದ ಅಭ್ಯರ್ಥಿ ಕುರಿತ ಸುದ್ದಿ

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ರಂಗೇರುತ್ತಿದ್ದು, ಕಮ್ಯುನಿಸ್ಟ್ ಪಕ್ಷದಿಂದ ಕಣಕ್ಕೆ ಇಳಿದಿರುವ ಅಭ್ಯರ್ಥಿಗೆ ಹಣದ ಆಮಿಷ ತೋರಿಸಿ ನಾಮಪತ್ರ ವಾಪಾಸ್ ಪಡೆಯುವಂತೆ ಒತ್ತಡ ಹೇರಲಾಗಿರುವ ಆರೋಪ ಕೇಳಿ ಬಂದಿದೆ.

ಕಮ್ಯುನಿಸ್ಟ್​​ ಪಕ್ಷದ ಅಭ್ಯರ್ಥಿ ಎಂ ಜಿ ಶ್ರೀಕಾಂತ್
author img

By

Published : Nov 5, 2019, 5:48 PM IST

ದಾವಣಗೆರೆ: ಹಣದ ಆಮಿಷ ತೋರಿಸಿ ನಾಮಪತ್ರ ವಾಪಾಸ್ ಪಡೆಯುವಂತೆ ಒತ್ತಡ ಹೇರಿದ ಹಿನ್ನೆಲೆ ದಾವಣಗೆರೆಯ 17ನೇ ವಾರ್ಡಿನ ಕಮ್ಯುನಿಸ್ಟ್​​ ಪಕ್ಷದ ಅಭ್ಯರ್ಥಿ ಮೊಬೈಲ್ ಸ್ವಿಚ್ ಆಫ್ ಮಾಡಿ ಪರ ಊರಿಗೆ ತೆರಳಿ, ನಾಮಪತ್ರ ವಾಪಸ್ ಪಡೆಯುವ ಸಮಯ ಮುಗಿದ ಬಳಿಕ ಹಿಂದಿರುಗಿದ್ದಾರೆ.

ಕಮ್ಯುನಿಸ್ಟ್​​ ಪಕ್ಷದ ಅಭ್ಯರ್ಥಿ ಎಂ ಜಿ ಶ್ರೀಕಾಂತ್

ಹೌದು.. ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ರಂಗೇರುತ್ತಿದ್ದು, ಅದರಲ್ಲೂ 17 ನೇ ವಾರ್ಡಿನಲ್ಲಿ ಕಾಂಗ್ರೆಸ್​​ನಿಂದ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಹಾಗೂ ಬಿಜೆಪಿಯಿಂದ ಪ್ರಭಾವಿ ಯುವ ಮುಖಂಡ ಅಜಯ್ ಕುಮಾರ್ ಸ್ಪರ್ಧಿಸುತ್ತಿದ್ದು, ಭಾರಿ ಪೈಪೋಟಿ ನಡೆಯುತ್ತಿದೆ. ಜೊತೆಯಲ್ಲಿ ಸಾಮಾಜಿಕ ಹೋರಾಟಗಳಿಂದ ಗುರುತಿಸಿಕೊಂಡಿರುವ ಎಂ ಜಿ ಶ್ರೀಕಾಂತ್ ಸಹ ಕಮ್ಯುನಿಸ್ಟ್ ಪಕ್ಷದಿಂದ ಕಣಕ್ಕೆ ಇಳಿದಿರುವುದು ಎರಡು ಪಕ್ಷಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಈ ಹಿನ್ನಲೆ ನಾಮಪತ್ರ ಹಿಂದಕ್ಕೆ ಪಡೆಯುವಂತೆ ವಿಪರೀತ ಒತ್ತಡದ ಜೊತೆಗೆ ಹಣದ ಆಮಿಷ ಬಂದ ಹಿನ್ನೆಲೆ ಮೊಬೈಲ್ ಸ್ವಿಚ್ ಆಫ್ ಮಾಡಿ ಪರ ಊರಿಗೆ ತೆರಳಿದ್ದ ಶ್ರೀಕಾಂತ್, ನಾಮಪತ್ರ ವಾಪಸ್ ಪಡೆಯುವ ಸಮಯ ಮುಗಿದ ಬಳಿಕ ನಿನ್ನೆ ಸಂಜೆ ದಾವಣಗೆರೆಗೆ ವಾಪಾಸ್ ಆಗಿದ್ದಾರೆ.

ಸಾಮಾಜಿಕ ಹೋರಾಟ ಮಾಡುತ್ತಾ ಬಂದಿರುವ ನನಗೆ ಜನ ಶ್ರೀರಕ್ಷೆ ನೀಡುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇನೆ. ನಾಮಪತ್ರ ವಾಪಾಸ್ ತೆಗೆದುಕೊಳ್ಳುವಂತೆ ಒತ್ತಡ, ಹಣದ ಆಮಿಷ ತೋರಿಸಲಾಗಿತ್ತು. ಇನ್ನೂ ಕೆಲವೆಡೆ ನಾಮಪತ್ರ ವಾಪಾಸ್ ತೆಗೆದುಕೊಂಡಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದ್ಯಾವುದಕ್ಕೂ ಬಗ್ಗದೇ ನಾಮಪತ್ರ ವಾಪಸ್ ಪಡೆದಿಲ್ಲ, ಇಂದಿನಿಂದ ಪ್ರಚಾರ ಶುರು ಮಾಡುತ್ತೇನೆ. ನನ್ನ ಹೋರಾಟ, ಸಾಮಾಜಿಕ ಕೆಲಸ ಗುರುತಿಸಿ ಜನ ಗೆಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಈಟಿವಿ ಭಾರತ್​ಗೆ ಶ್ರೀಕಾಂತ್ ಹೇಳಿಕೆ ನೀಡಿದ್ದಾರೆ.

ದಾವಣಗೆರೆ: ಹಣದ ಆಮಿಷ ತೋರಿಸಿ ನಾಮಪತ್ರ ವಾಪಾಸ್ ಪಡೆಯುವಂತೆ ಒತ್ತಡ ಹೇರಿದ ಹಿನ್ನೆಲೆ ದಾವಣಗೆರೆಯ 17ನೇ ವಾರ್ಡಿನ ಕಮ್ಯುನಿಸ್ಟ್​​ ಪಕ್ಷದ ಅಭ್ಯರ್ಥಿ ಮೊಬೈಲ್ ಸ್ವಿಚ್ ಆಫ್ ಮಾಡಿ ಪರ ಊರಿಗೆ ತೆರಳಿ, ನಾಮಪತ್ರ ವಾಪಸ್ ಪಡೆಯುವ ಸಮಯ ಮುಗಿದ ಬಳಿಕ ಹಿಂದಿರುಗಿದ್ದಾರೆ.

ಕಮ್ಯುನಿಸ್ಟ್​​ ಪಕ್ಷದ ಅಭ್ಯರ್ಥಿ ಎಂ ಜಿ ಶ್ರೀಕಾಂತ್

ಹೌದು.. ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ರಂಗೇರುತ್ತಿದ್ದು, ಅದರಲ್ಲೂ 17 ನೇ ವಾರ್ಡಿನಲ್ಲಿ ಕಾಂಗ್ರೆಸ್​​ನಿಂದ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಹಾಗೂ ಬಿಜೆಪಿಯಿಂದ ಪ್ರಭಾವಿ ಯುವ ಮುಖಂಡ ಅಜಯ್ ಕುಮಾರ್ ಸ್ಪರ್ಧಿಸುತ್ತಿದ್ದು, ಭಾರಿ ಪೈಪೋಟಿ ನಡೆಯುತ್ತಿದೆ. ಜೊತೆಯಲ್ಲಿ ಸಾಮಾಜಿಕ ಹೋರಾಟಗಳಿಂದ ಗುರುತಿಸಿಕೊಂಡಿರುವ ಎಂ ಜಿ ಶ್ರೀಕಾಂತ್ ಸಹ ಕಮ್ಯುನಿಸ್ಟ್ ಪಕ್ಷದಿಂದ ಕಣಕ್ಕೆ ಇಳಿದಿರುವುದು ಎರಡು ಪಕ್ಷಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಈ ಹಿನ್ನಲೆ ನಾಮಪತ್ರ ಹಿಂದಕ್ಕೆ ಪಡೆಯುವಂತೆ ವಿಪರೀತ ಒತ್ತಡದ ಜೊತೆಗೆ ಹಣದ ಆಮಿಷ ಬಂದ ಹಿನ್ನೆಲೆ ಮೊಬೈಲ್ ಸ್ವಿಚ್ ಆಫ್ ಮಾಡಿ ಪರ ಊರಿಗೆ ತೆರಳಿದ್ದ ಶ್ರೀಕಾಂತ್, ನಾಮಪತ್ರ ವಾಪಸ್ ಪಡೆಯುವ ಸಮಯ ಮುಗಿದ ಬಳಿಕ ನಿನ್ನೆ ಸಂಜೆ ದಾವಣಗೆರೆಗೆ ವಾಪಾಸ್ ಆಗಿದ್ದಾರೆ.

ಸಾಮಾಜಿಕ ಹೋರಾಟ ಮಾಡುತ್ತಾ ಬಂದಿರುವ ನನಗೆ ಜನ ಶ್ರೀರಕ್ಷೆ ನೀಡುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇನೆ. ನಾಮಪತ್ರ ವಾಪಾಸ್ ತೆಗೆದುಕೊಳ್ಳುವಂತೆ ಒತ್ತಡ, ಹಣದ ಆಮಿಷ ತೋರಿಸಲಾಗಿತ್ತು. ಇನ್ನೂ ಕೆಲವೆಡೆ ನಾಮಪತ್ರ ವಾಪಾಸ್ ತೆಗೆದುಕೊಂಡಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದ್ಯಾವುದಕ್ಕೂ ಬಗ್ಗದೇ ನಾಮಪತ್ರ ವಾಪಸ್ ಪಡೆದಿಲ್ಲ, ಇಂದಿನಿಂದ ಪ್ರಚಾರ ಶುರು ಮಾಡುತ್ತೇನೆ. ನನ್ನ ಹೋರಾಟ, ಸಾಮಾಜಿಕ ಕೆಲಸ ಗುರುತಿಸಿ ಜನ ಗೆಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಈಟಿವಿ ಭಾರತ್​ಗೆ ಶ್ರೀಕಾಂತ್ ಹೇಳಿಕೆ ನೀಡಿದ್ದಾರೆ.

Intro:
ದಾವಣಗೆರೆ; ಹಣದ ಆಮಿಷ ತೋರಿಸಿ ನಾಮಪತ್ರ ವಾಪಾಸ್ ಪಡೆಯುವಂತೆ ಒತ್ತಡ ಏರಿದ ಹಿನ್ನಲೆ ದಾವಣಗೆರೆಯ 17ನೇ ವಾರ್ಡಿನ ಕಮ್ಯೂನಿಷ್ಟ್ ಅಭ್ಯರ್ಥಿ ಮೊಬೈಲ್ ಸ್ವಿಚ್ ಆಫ್ ಮಾಡಿ ಪರ ಊರಿಗೆ ತೆರಳಿದ ಪ್ರಸಂಗ ನಡೆದಿದೆ..




Body:ಹೌದು.. ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ರಂಗೇರುತ್ತಿದ್ದು, ಅದರಲ್ಲೂ 17 ನೇ ವಾರ್ಡಿನಲ್ಲಿ ಕಾಂಗ್ರೆಸ್ ನಿಂದ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಹಾಗೂ ಬಿಜೆಪಿಯಿಂದ ಪ್ರಭಾವಿ ಯುವ ಮುಖಂಡ ಅಜಯ್ ಕುಮಾರ್ ಸ್ಪರ್ಧಿಸುತ್ತಿದ್ದು, ಭಾರೀ ಪೈಪೋಟಿ ನಡೆಯುತ್ತಿದೆ. ಜೊತೆಯಲ್ಲಿ ಸಾಮಾಜಿಕ ಹೋರಾಟಗಳಿಂದ ಗುರುತಿಸಿಕೊಂಡಿರುವ ಎಂಜಿ ಶ್ರೀಕಾಂತ್ ಸಹ ಕಮ್ಯೂನಿಷ್ಟ್ ಪಕ್ಷದಿಂದ ಕಣಕ್ಕೆ ಇಳಿದಿದ್ದು, ಎರಡು ಪಕ್ಷಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಈ ಹಿನ್ನಲೆ ನಾಮಪತ್ರ ಹಿಂದಕ್ಕೆ ಪಡೆಯುವಂತೆ ವಿಪರೀತ ಒತ್ತಡ ಜೊತೆಗೆ ಹಣದ ಆಮಿಷ ಬಂದ ಹಿನ್ನಲೆ ಮೊಬೈಲ್ ಸ್ವೀಚ್ ಆಫ್ ಮಾಡಿ ಪರ ಊರಿಗೆ ತೆರಳಿ ನಾಮಪತ್ರ ವಾಪಸ್ ಪಡೆಯುವ ಸಮಯ ಮುಗಿದ ಬಳಿಕ ನಿನ್ನೆ ಸಂಜೆ ದಾವಣಗೆರೆಗೆ ಶ್ರೀಕಾಂತ್ ವಾಪಾಸ್ ಆಗಿದ್ದಾರೆ..


Conclusion:ಸಾಮಾಜಿಕ ಹೋರಾಟ ಮಾಡುತ್ತಾ ಬಂದಿರುವ ನನಗೆ ಜನ ಶ್ರೀರಕ್ಷೆ ನೀಡುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇನೆ, ವಾಪಾಸ್ ತೆಗೆದುಕೊಳ್ಳುವಂತೆ ಒತ್ತಡ, ಹಣದ ಆಮಿಷ ತೋರಿಸಲಾಗಿತ್ತು. ಇನ್ನೂ ಕೆಲವೆಡೆ ನಾಮಪತ್ರ ವಾಪಾಸ್ ತೆಗೆದುಕೊಂಡಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದ್ಯಾವುದಕ್ಕೂ ಬಗ್ಗದೇ ನಾಮಪತ್ರ ವಾಪಸ್ ಪಡೆದಿಲ್ಲ, ಇಂದಿನಿಂದ ಪ್ರಚಾರ ಶುರು ಮಾಡುತ್ತೇನೆ, ನನ್ನ ಹೋರಾಟ, ಸಾಮಾಜಿಕ ಕೆಲಸ ಗುರುತಿಸಿ ಜನ ಗೆಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಈಟಿವಿ ಭಾರತ್ ಗೆ ಶ್ರೀಕಾಂತ್ ಹೇಳಿಕೆ ನೀಡಿದ್ದಾರೆ..

ಪ್ಲೊ..

ಎಂಜಿ ಶ್ರೀಕಾಂತ್.. ಕಮ್ಯೂನಿಷ್ಟ್ ಅಭ್ಯರ್ಥಿ..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.