ETV Bharat / city

ಒಮ್ಮೆ ಚಿಕಿತ್ಸೆ ಸರಿಯಿಲ್ಲ, ಮತ್ತೊಮ್ಮೆ ಸರಿಯಿದೆ ಅಂತ U ಟರ್ನ್ ಹೊಡೆದ ಕೊರೊನಾ ಸೋಂಕಿತ - jindal covid care center

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಶೇರ್​ ಮಾಡಿದ ಕೊರೊನಾ ಸೋಂಕಿತನೋರ್ವ ಕೋವಿಡ್ ಕೇರ್ ಸೆಂಟರ್​​ ಬಗ್ಗೆ ಅನಗತ್ಯ ಗೊಂದಲ‌ ಸೃಷ್ಟಿಸಿದ್ದಾನೆ.

Videos shared by Corona patient goes viral
ಯೂಟರ್ನ್ ಹೊಡೆದ ಕೊರೊನಾ ಸೋಂಕಿತ
author img

By

Published : Aug 1, 2020, 4:41 PM IST

ಬಳ್ಳಾರಿ: ಒಂದು ಬಾರಿ ಚಿಕಿತ್ಸೆ ಸರಿಯಲ್ಲ ಎಂದು, ಮತ್ತೊಂದು ಬಾರಿ ಚಿಕಿತ್ಸೆ ಸರಿಯಾಗಿದೆ ಅಂತ ಎರಡು ವಿಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಕೋವಿಡ್ ಕೇರ್ ಸೆಂಟರ್​​ನ ಬಗ್ಗೆ ಅನಗತ್ಯ ಗೊಂದಲ‌ ಸೃಷ್ಟಿಸಲು ಹೋಗಿ ಕೊರೊನಾ ಸೋಂಕಿತನೋರ್ವ ತಾನೇ ಗೊಂದಲದಲ್ಲಿ ಸಿಲುಕಿದ್ದಾನೆ.

ಯೂಟರ್ನ್ ಹೊಡೆದ ಕೊರೊನಾ ಸೋಂಕಿತ

ವಿದ್ಯಾನಗರ ಬಳಿಯಿರುವ ಜಿಂದಾಲ್ ಸಮೂಹ ಸಂಸ್ಥೆಯ ಕೋವಿಡ್ ಕೇರ್ ಸೆಂಟರ್​​ನಲ್ಲಿ ದಾಖಲಾದ ನಾಲ್ಕು ತಾಸುಗಳಲ್ಲಿಯೇ 56 ನಿಮಿಷದ ವಿಡಿಯೊವೊಂದನ್ನು ಸೋಂಕಿತ ಯುವಕ ರೆಕಾರ್ಡ್ ಮಾಡಿದ್ದಾನೆ.

'ಇಲ್ಲಿ ಯಾವುದೂ ಸರಿಯಾಗಿಲ್ಲ. ಗ್ಲುಕೋಸ್ ಹಾಕಿ ಹೋದ ವೈದ್ಯರು ಅದು ಖಾಲಿಯಾಗಿ ನಾಲ್ಕು ಗಂಟೆಗಳಾದರೂ ಇತ್ತ ಮರಳಿಲ್ಲ' ಎಂದು ಆರೋಪಿಸಿರುವ ವಿಡಿಯೊ ತುಣುಕನ್ನು ಸೋಷಿಯಲ್​ ಮಿಡಿಯಾದಲ್ಲಿ ಹರಿಬಿಟ್ಟಿದ್ದಾನೆ.

ಮಾರನೇ ದಿನ ಮತ್ತೊಂದು ವಿಡಿಯೊ ಮಾಡಿರುವ ಆತ, ನಿನ್ನೆ ನನಗೆ ನಾಲ್ಕೈದು ತಾಸು ಸ್ವಲ್ಪ ಸಮಸ್ಯೆ ಆಯಿತು. ಆ ಮೇಲೆ ವೈದ್ಯರು ಬಂದು ಚಿಕಿತ್ಸೆ ನೀಡಿದ್ರು. ನಾನು ಸ್ವಲ್ಪ ಸುಧಾರಿಸಿದೆ. ವೈದ್ಯರಲ್ಲಿ ನಾನು ಕೈಮುಗಿದು ಕೇಳಿಕೊಳ್ಳುವೆ, ಇಲ್ಲಿ ಊಟ ತಿಂಡಿ ಎಲ್ಲವೂ ಸರಿಯಾಗಿ ಕೊಡ್ತಾರೆ. ನನ್ನಿಂದ ಏನಾದ್ರೂ ತಪ್ಪಾದರೆ ದಯವಿಟ್ಟು ಕ್ಷಮೆ ಇರಲಿ ಎಂದು ಪದೇ ಪದೇ ಹೇಳಿದ್ದು, ಅದನ್ನು ವಾಟ್ಸಾಪ್ ಗ್ರೂಪ್​​ಗಳಲ್ಲಿ ಹಂಚಿಕೊಂಡಿದ್ದಾನೆ.

ಮೊದಲಿಗೆ ಈ ಯುವಕ ಪರವಾಗಿ ನಿಂತ ಕರ್ನಾಟಕ ಜನಸೈನ್ಯ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಯರಿಸ್ವಾಮಿ ಅವರು, ಸೋಂಕಿತನು ಮೊದಲು ಹರಿಬಿಟ್ಟ ವಿಡಿಯೊ ಶೇರ್​ ಮಾಡಿ, ಜಿಂದಾಲ್ ವರ್ತನೆಯನ್ನ ಖಂಡಿಸಿದ್ದಾರೆ.

ಬಳ್ಳಾರಿ: ಒಂದು ಬಾರಿ ಚಿಕಿತ್ಸೆ ಸರಿಯಲ್ಲ ಎಂದು, ಮತ್ತೊಂದು ಬಾರಿ ಚಿಕಿತ್ಸೆ ಸರಿಯಾಗಿದೆ ಅಂತ ಎರಡು ವಿಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಕೋವಿಡ್ ಕೇರ್ ಸೆಂಟರ್​​ನ ಬಗ್ಗೆ ಅನಗತ್ಯ ಗೊಂದಲ‌ ಸೃಷ್ಟಿಸಲು ಹೋಗಿ ಕೊರೊನಾ ಸೋಂಕಿತನೋರ್ವ ತಾನೇ ಗೊಂದಲದಲ್ಲಿ ಸಿಲುಕಿದ್ದಾನೆ.

ಯೂಟರ್ನ್ ಹೊಡೆದ ಕೊರೊನಾ ಸೋಂಕಿತ

ವಿದ್ಯಾನಗರ ಬಳಿಯಿರುವ ಜಿಂದಾಲ್ ಸಮೂಹ ಸಂಸ್ಥೆಯ ಕೋವಿಡ್ ಕೇರ್ ಸೆಂಟರ್​​ನಲ್ಲಿ ದಾಖಲಾದ ನಾಲ್ಕು ತಾಸುಗಳಲ್ಲಿಯೇ 56 ನಿಮಿಷದ ವಿಡಿಯೊವೊಂದನ್ನು ಸೋಂಕಿತ ಯುವಕ ರೆಕಾರ್ಡ್ ಮಾಡಿದ್ದಾನೆ.

'ಇಲ್ಲಿ ಯಾವುದೂ ಸರಿಯಾಗಿಲ್ಲ. ಗ್ಲುಕೋಸ್ ಹಾಕಿ ಹೋದ ವೈದ್ಯರು ಅದು ಖಾಲಿಯಾಗಿ ನಾಲ್ಕು ಗಂಟೆಗಳಾದರೂ ಇತ್ತ ಮರಳಿಲ್ಲ' ಎಂದು ಆರೋಪಿಸಿರುವ ವಿಡಿಯೊ ತುಣುಕನ್ನು ಸೋಷಿಯಲ್​ ಮಿಡಿಯಾದಲ್ಲಿ ಹರಿಬಿಟ್ಟಿದ್ದಾನೆ.

ಮಾರನೇ ದಿನ ಮತ್ತೊಂದು ವಿಡಿಯೊ ಮಾಡಿರುವ ಆತ, ನಿನ್ನೆ ನನಗೆ ನಾಲ್ಕೈದು ತಾಸು ಸ್ವಲ್ಪ ಸಮಸ್ಯೆ ಆಯಿತು. ಆ ಮೇಲೆ ವೈದ್ಯರು ಬಂದು ಚಿಕಿತ್ಸೆ ನೀಡಿದ್ರು. ನಾನು ಸ್ವಲ್ಪ ಸುಧಾರಿಸಿದೆ. ವೈದ್ಯರಲ್ಲಿ ನಾನು ಕೈಮುಗಿದು ಕೇಳಿಕೊಳ್ಳುವೆ, ಇಲ್ಲಿ ಊಟ ತಿಂಡಿ ಎಲ್ಲವೂ ಸರಿಯಾಗಿ ಕೊಡ್ತಾರೆ. ನನ್ನಿಂದ ಏನಾದ್ರೂ ತಪ್ಪಾದರೆ ದಯವಿಟ್ಟು ಕ್ಷಮೆ ಇರಲಿ ಎಂದು ಪದೇ ಪದೇ ಹೇಳಿದ್ದು, ಅದನ್ನು ವಾಟ್ಸಾಪ್ ಗ್ರೂಪ್​​ಗಳಲ್ಲಿ ಹಂಚಿಕೊಂಡಿದ್ದಾನೆ.

ಮೊದಲಿಗೆ ಈ ಯುವಕ ಪರವಾಗಿ ನಿಂತ ಕರ್ನಾಟಕ ಜನಸೈನ್ಯ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಯರಿಸ್ವಾಮಿ ಅವರು, ಸೋಂಕಿತನು ಮೊದಲು ಹರಿಬಿಟ್ಟ ವಿಡಿಯೊ ಶೇರ್​ ಮಾಡಿ, ಜಿಂದಾಲ್ ವರ್ತನೆಯನ್ನ ಖಂಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.