ಹೈದರಾಬಾದ್(ತೆಲಂಗಾಣ): ಒಂಬತ್ತು ವರ್ಷಗಳ ಹಿಂದೆ ಸೈಬರ್ ದಾಳಿಯಿಂದ ವಂಚನೆಗೊಳಗಾದ ಗ್ರಾಹಕನಿಗೆ ಬಡ್ಡಿಯೊಂದಿಗೆ 1.46 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಅಧಿಕಾರಿಗಳಿಗೆ ತೆಲಂಗಾಣ ಗ್ರಾಹಕರ ಆಯೋಗವು ಸೂಚಿಸಿದೆ. ಸೈಬರಾಬಾದ್ನ ಚೆರ್ಲಪಲ್ಲಿ ನಿವಾಸಿಯಾಗಿರುವ ಸಂತ್ರಸ್ತ ಎಂ.ಕೆ. ಮಿಶ್ರಾ 2013ರಲ್ಲಿ ಎಸ್ಬಿಐನಿಂದ 3 ಲಕ್ಷ ರೂಪಾಯಿ ವೈಯಕ್ತಿಕ ಸಾಲ ಮತ್ತು ಬ್ಯಾಂಕ್ನಿಂದ ಡೆಬಿಟ್ ಕಾರ್ಡ್ ಪಡೆದಿದ್ದರು.
2013ರ ಮೇ. 5-7ರ ನಡುವೆ ಸೈಬರ್ ದಾಳಿಕೋರರು ಮಿಶ್ರಾ ಅವರ ಡೆಬಿಟ್ ಕಾರ್ಡ್ ಮೂಲಕ 1.46 ರೂ.ಗಳನ್ನು ಲಪಟಾಯಿಸಿದ್ದರು ಎಂದು ತಿಳಿದು ಬಂದಿದೆ. ಬಳಿಕ ಮಿಶ್ರಾ ಅವರು ಎಸ್ಬಿಐ ಅಧಿಕಾರಿಗಳಿಗೆ ಈ ಸಂಬಂಧ ದೂರು ನೀಡಿದ್ದಾರೆ. ಆದ್ರೆ ಅದಕ್ಕೆ ಅಧಿಕಾರಿಗಳು ಸ್ಪಂದಿಸದ ಕಾರಣ ಜಿಲ್ಲಾ ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು. ಆಗ ಮಿಶ್ರಾ ಅವರಿಗೆ ಬಡ್ಡಿ ಸಹಿತ ಮೊತ್ತವನ್ನು ಎಸ್ಬಿಐ ಪಾವತಿಸಬೇಕು ಎಂದು ವೇದಿಕೆ ಆದೇಶಿಸಿತ್ತು.
ಇದನ್ನೂ ಓದಿ: ರಾಜ್ಯದಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ..
ಆದರೆ, ಈ ತೀರ್ಪಿನ ವಿರುದ್ಧ ಎಸ್ಬಿಐ ಅಧಿಕಾರಿಗಳು ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಎಸ್ಬಿಐ ಅರ್ಜಿಯನ್ನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಂಎಸ್ಕೆ ಜೈಸ್ವಾಲ್, ಸದಸ್ಯರಾದ ಮೀನಾ ರಾಮನಾಥನ್ ಮತ್ತು ಕೆ ರಂಗ ರಾವ್ ಅವರನ್ನೊಳಗೊಂಡ ಪೀಠ ತಿರಸ್ಕರಿಸಿದೆ. ಅಲ್ಲದೇ 2013 ರಿಂದ 9 ಪ್ರತಿಶತ ಬಡ್ಡಿಯಲ್ಲಿ ದೂರುದಾರರಿಗೆ ರೂ. 1.46 ಲಕ್ಷ ಪಾವತಿಸುವಂತೆ ಬ್ಯಾಂಕ್ಗೆ ಸೂಚಿಸಲಾಗಿದೆ.