ETV Bharat / business

ಮೋದಿ ಸರ್ಕಾರದಿಂದ 18 ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣ: ಬಜೆಟ್​ನಲ್ಲಿ ಪ್ರೈವೇಟೈಸೇಷನ್ ನೀತಿ ಘೋಷಣೆ!

author img

By

Published : Jan 28, 2021, 1:06 PM IST

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ಆರ್ಥಿಕತೆ ಮತ್ತೆ ಸರಿದಾರಿಗೆ ತರಲು ಸರ್ಕಾರ ಕಳೆದ ವರ್ಷ ಘೋಷಿಸಿದ್ದ ನಾಲ್ಕು ಭಾಗಗಳ ಆತ್ಮನಿರ್ಭರ ಭಾರತ ಪ್ಯಾಕೇಜ್‌ನ ಭಾಗವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸರ್ಕಾರಿ ಸ್ವಾಮ್ಯದ ಉದ್ಯಮಗಳ (ಪಿಎಸ್​ಯು) ಖಾಸಗೀಕರಣದ ಕುರಿತು ಹೊಸ ನೀತಿ ಪ್ರಕಟಿಸುವುದಾಗಿ ಹೇಳಿದ್ದರು.

PSU privatisation
PSU privatisation

ನವದೆಹಲಿ: ಕಳೆದ ವರ್ಷ ಆತ್ಮನಿರ್ಭರ ಪ್ಯಾಕೇಜ್‌ನಲ್ಲಿ ಉಲ್ಲೇಖಿಸಿದಂತೆ ಪಿಎಸ್‌ಯು ಮಾರಾಟದ ಕಾರ್ಯ ವ್ಯಾಪ್ತಿ ವಿವರಿಸುವ ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣಕ್ಕೆ ಒಳಪಡಿಸುವ ಕಾರ್ಯತಂತ್ರದ ಕುರಿತು ನೀತಿಗಳು 2021-22ರ ಕೇಂದ್ರ ಬಜೆಟ್​​ನಲ್ಲಿ ಹೊರ ಬರಬಹುದು.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ಆರ್ಥಿಕತೆಯನ್ನು ಮತ್ತೆ ಸರಿದಾರಿಗೆ ತರಲು ಸರ್ಕಾರ ಕಳೆದ ವರ್ಷ ಘೋಷಿಸಿದ್ದ ನಾಲ್ಕು ಭಾಗಗಳ ಆತ್ಮನಿರ್ಭರ ಭಾರತ ಪ್ಯಾಕೇಜ್‌ನ ಭಾಗವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸರ್ಕಾರಿ ಸ್ವಾಮ್ಯದ ಉದ್ಯಮಗಳ (ಪಿಎಸ್​ಯು) ಖಾಸಗೀಕರಣದ ಕುರಿತು ಹೊಸ ನೀತಿ ಪ್ರಕಟಿಸುವುದಾಗಿ ಹೇಳಿದ್ದರು.

ಹಣಕಾಸು ಸಚಿವರು ಒತ್ತುನೀಡಿದ ಪ್ರಸ್ತಾವಿತ ನೀತಿಯಲ್ಲಿ ಸಾರ್ವಜನಿಕ ವಲಯದ ಜಾಗದಲ್ಲಿ ಕನಿಷ್ಠ ಒಂದು ಉದ್ಯಮವನ್ನಾದರೂ ಖಾಸಗಿ ವಲಯದ ಉಪಸ್ಥಿತಿ ಒಳಗೊಂಡಿರುತ್ತದೆ. ಅಲ್ಲದೇ ವ್ಯರ್ಥ ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡಲು ಉದ್ಯಮಗಳ ಸಂಖ್ಯೆ ಒಂದರಿಂದ ನಾಲ್ಕು ಆಗಿರಲಿವೆ. ಇತರವುಗಳನ್ನು ಖಾಸಗೀಕರಣ/ ವಿಲೀನ / ಹಿಡುವಳಿ ಕಂಪನಿಗಳ ಅಡಿಯಲ್ಲಿ ತರಲಾಗುತ್ತದೆ ಎಂದು ಸೀತಾರಾಮನ್ ಹೇಳಿದ್ದರು.

ಅನುಕೂಲಕರವಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾಲಾಂತರದಲ್ಲಿ ಎಲ್ಲ ಇತರ ಪಿಎಸ್‌ಇಗಳನ್ನು ಹೊರತುಪಡಿಸಿ ಖಾಸಗೀಕರಣಗೊಳಿಸಲಾಗುತ್ತದೆ. ಆತ್ಮನಿರ್ಭರ ಭಾರತ ಘೋಷಣೆಯ ಸಮಯದಲ್ಲಿ ಹೈಲೈಟ್ ಮಾಡಲಾಗಿದ್ದ ನೀತಿಗಳನ್ನು ಈಗ ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ. ಫೆಬ್ರವರಿ 1ರಂದು ಹಣಕಾಸು ಸಚಿವರು ಮಂಡಿಸಲಿರುವ ಬಜೆಟ್ ಪ್ರಕಟಣೆಗಳ ಒಂದು ಭಾಗವಾಗಿ ಖಾಸಗೀಕರಣ ನೀತಿ ರೂಪುಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ವಿದ್ಯುತ್ ಮತ್ತು ರಸಗೊಬ್ಬರ, ಟೆಲಿಕಾಂ, ರಕ್ಷಣಾ, ಬ್ಯಾಂಕಿಂಗ್ ಮತ್ತು ವಿಮೆ ಸೇರಿದಂತೆ ಸುಮಾರು 18 ಕ್ಷೇತ್ರಗಳ ಸಾರ್ವಜನಿಕ ವಲಯದ ಉದ್ಯಮಗಳನ್ನು ಕಾರ್ಯತಂತ್ರ ಎಂದು ಸಲಹಾ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (ಡಿಐಪಿಎಎಂ) ವರ್ಗೀಕರಿಸಿದೆ. ಡಿಐಪಿಎಎಂ ರೂಪಿಸಿರುವ ನೀತಿಯ ಕರಡಿನಿಂದಾಗಿ ಪಿಎಸ್‌ಯು ಖಾಸಗೀಕರಣ ನೀತಿ ಹೊರಹೊಮ್ಮಲಿದೆ.

ಇದನ್ನೂ ಓದಿ: ವೇಗವಾಗಿ ಬೆಳೆಯುವ ಆರ್ಥಿಕತೆ ಹಾಳು ಮಾಡುವುದು ಹೇಗೆ ಎಂಬುದನ್ನು ಮೋದಿಯಿಂದ ಕಲಿಬೇಕು: ರಾಗಾ ವ್ಯಂಗ್ಯ

18 ಕಾರ್ಯತಂತ್ರದ ಕ್ಷೇತ್ರಗಳನ್ನು ಗಣಿಗಾರಿಕೆ ಮತ್ತು ಪರಿಶೋಧನೆ, ಉತ್ಪಾದನೆ, ಸಂಸ್ಕರಣೆ ಮತ್ತು ಉತ್ಪಾದನೆ ಹಾಗೂ ಸೇವಾ ವಲಯ ಎಂದು ಮೂರು ವಿಭಾಗಗಳಾಗಿ ವಿಂಗಡಿಸಿದೆ.

ಗಣಿಗಾರಿಕೆ ಮತ್ತು ಪರಿಶೋಧನೆ ವಿಭಾಗದಲ್ಲಿ ಕಲ್ಲಿದ್ದಲು, ಕಚ್ಚಾ ತೈಲ ಮತ್ತು ಅನಿಲ ಮತ್ತು ಖನಿಜಗಳು ಮತ್ತು ಲೋಹಗಳಂತಹ ಪ್ರದೇಶಗಳಲ್ಲಿ ಸರ್ಕಾರವು ಸೀಮಿತ ಉಪಸ್ಥಿತಿಯನ್ನು ಉಳಿಸಿಕೊಳ್ಳುತ್ತದೆ. ಉತ್ಪಾದನೆಯಲ್ಲಿ ರಕ್ಷಣಾ ಉಪಕರಣಗಳು, ಉಕ್ಕು, ಪೆಟ್ರೋಲಿಯಂ (ಸಂಸ್ಕರಣಾಗಾರ ಮತ್ತು ಮಾರುಕಟ್ಟೆ), ರಸಗೊಬ್ಬರಗಳು, ವಿದ್ಯುತ್ ಉತ್ಪಾದನೆ, ಪರಮಾಣು ಶಕ್ತಿ ಮತ್ತು ಹಡಗು ನಿರ್ಮಾಣದಲ್ಲಿ ಸೀಮಿತ ಪಾಲು ಕಾಯ್ದುಕೊಳ್ಳಲಾಗುತ್ತದೆ.

ಸೇವಾ ವಲಯದಲ್ಲಿ ವಿದ್ಯುತ್ ಪ್ರಸಾರ, ಬಾಹ್ಯಾಕಾಶ, ವಿಮಾನ ನಿಲ್ದಾಣ, ಬಂದರು, ಹೆದ್ದಾರಿ, ಗೋದಾಮು, ಗ್ಯಾಸ್ ಸಾಗಣೆ, ಲಾಜಿಸ್ಟಿಕ್ಸ್ (ಅನಿಲ ಮತ್ತು ಪೆಟ್ರೋ-ಕೆಮಿಕಲ್​ ವ್ಯಾಪಾರಬಿಟ್ಟು), ಕಾಂಟ್ರ್ಯಾಕ್ಟ್​ ಮತ್ತು ನಿರ್ಮಾಣ ಹಾಗೂ ಕಾರ್ಯತಂತ್ರಕ್ಕೆ ಸಂಬಂಧಿಸಿದ ತಾಂತ್ರಿಕ ಸಲಹಾ ಸೇವೆಗಳು. ಮೂಲಸೌಕರ್ಯಕ್ಕಾಗಿ ಹಣಕಾಸು ಸೇವೆಗಳು, ರಫ್ತು ಸಾಲ ಖಾತರಿ, ಇಂಧನ ಮತ್ತು ವಸತಿ ಕ್ಷೇತ್ರಗಳು, ದೂರಸಂಪರ್ಕ, ಐಟಿ, ಬ್ಯಾಂಕಿಂಗ್ ಮತ್ತು ವಿಮೆಯಲ್ಲಿ ಸರ್ಕಾರ ಸೀಮಿತ ಪಾಲು ಕಾಯ್ದುಕೊಳ್ಳಲಿದೆ.

ಹೊಸ ಖಾಸಗೀಕರಣ ನೀತಿಯು ನಿರ್ದಿಷ್ಟ ವಲಯಗಳಲ್ಲಿ ಸರ್ಕಾರದ ಹಿಡಿತ ತಗ್ಗಿಸಬಹುದು. ಮಾರಾಟದ ಪ್ರಗತಿಯನ್ನು ಒಂದೇ ಸಮಯದಲ್ಲಿ ಅಥವಾ ಹಂತಗಳಲ್ಲಿ ಮಾಡಬಹುದು. ಕಳೆದ ವರ್ಷ 10 ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳನ್ನು ನಾಲ್ಕು ಹಂತಗಳಲ್ಲಿ ವಿಲೀನಗೊಳಿಸಲಾಯಿತು. ಈ ನಂತರವೂ 2017 ಮತ್ತು 2018ರಲ್ಲಿ ವಿಲೀನಗೊಂಡ ಸಾರ್ವಜನಿಕ ವಲಯದ ಬ್ಯಾಂಕ್​ಗಳ ಮತ್ತಷ್ಟು ಬಲವರ್ಧನೆಗೊಂಡವು. ಖಾಸಗೀಕರಣಕ್ಕೂ ಇದೇ ಮಾರ್ಗಸೂಚಿ ರೂಪಿಸುತ್ತದೆ. ಭಾರತದಲ್ಲಿ ಇನ್ನೂ 12 ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಿವೆ.

ನವದೆಹಲಿ: ಕಳೆದ ವರ್ಷ ಆತ್ಮನಿರ್ಭರ ಪ್ಯಾಕೇಜ್‌ನಲ್ಲಿ ಉಲ್ಲೇಖಿಸಿದಂತೆ ಪಿಎಸ್‌ಯು ಮಾರಾಟದ ಕಾರ್ಯ ವ್ಯಾಪ್ತಿ ವಿವರಿಸುವ ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣಕ್ಕೆ ಒಳಪಡಿಸುವ ಕಾರ್ಯತಂತ್ರದ ಕುರಿತು ನೀತಿಗಳು 2021-22ರ ಕೇಂದ್ರ ಬಜೆಟ್​​ನಲ್ಲಿ ಹೊರ ಬರಬಹುದು.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ಆರ್ಥಿಕತೆಯನ್ನು ಮತ್ತೆ ಸರಿದಾರಿಗೆ ತರಲು ಸರ್ಕಾರ ಕಳೆದ ವರ್ಷ ಘೋಷಿಸಿದ್ದ ನಾಲ್ಕು ಭಾಗಗಳ ಆತ್ಮನಿರ್ಭರ ಭಾರತ ಪ್ಯಾಕೇಜ್‌ನ ಭಾಗವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸರ್ಕಾರಿ ಸ್ವಾಮ್ಯದ ಉದ್ಯಮಗಳ (ಪಿಎಸ್​ಯು) ಖಾಸಗೀಕರಣದ ಕುರಿತು ಹೊಸ ನೀತಿ ಪ್ರಕಟಿಸುವುದಾಗಿ ಹೇಳಿದ್ದರು.

ಹಣಕಾಸು ಸಚಿವರು ಒತ್ತುನೀಡಿದ ಪ್ರಸ್ತಾವಿತ ನೀತಿಯಲ್ಲಿ ಸಾರ್ವಜನಿಕ ವಲಯದ ಜಾಗದಲ್ಲಿ ಕನಿಷ್ಠ ಒಂದು ಉದ್ಯಮವನ್ನಾದರೂ ಖಾಸಗಿ ವಲಯದ ಉಪಸ್ಥಿತಿ ಒಳಗೊಂಡಿರುತ್ತದೆ. ಅಲ್ಲದೇ ವ್ಯರ್ಥ ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡಲು ಉದ್ಯಮಗಳ ಸಂಖ್ಯೆ ಒಂದರಿಂದ ನಾಲ್ಕು ಆಗಿರಲಿವೆ. ಇತರವುಗಳನ್ನು ಖಾಸಗೀಕರಣ/ ವಿಲೀನ / ಹಿಡುವಳಿ ಕಂಪನಿಗಳ ಅಡಿಯಲ್ಲಿ ತರಲಾಗುತ್ತದೆ ಎಂದು ಸೀತಾರಾಮನ್ ಹೇಳಿದ್ದರು.

ಅನುಕೂಲಕರವಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾಲಾಂತರದಲ್ಲಿ ಎಲ್ಲ ಇತರ ಪಿಎಸ್‌ಇಗಳನ್ನು ಹೊರತುಪಡಿಸಿ ಖಾಸಗೀಕರಣಗೊಳಿಸಲಾಗುತ್ತದೆ. ಆತ್ಮನಿರ್ಭರ ಭಾರತ ಘೋಷಣೆಯ ಸಮಯದಲ್ಲಿ ಹೈಲೈಟ್ ಮಾಡಲಾಗಿದ್ದ ನೀತಿಗಳನ್ನು ಈಗ ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ. ಫೆಬ್ರವರಿ 1ರಂದು ಹಣಕಾಸು ಸಚಿವರು ಮಂಡಿಸಲಿರುವ ಬಜೆಟ್ ಪ್ರಕಟಣೆಗಳ ಒಂದು ಭಾಗವಾಗಿ ಖಾಸಗೀಕರಣ ನೀತಿ ರೂಪುಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ವಿದ್ಯುತ್ ಮತ್ತು ರಸಗೊಬ್ಬರ, ಟೆಲಿಕಾಂ, ರಕ್ಷಣಾ, ಬ್ಯಾಂಕಿಂಗ್ ಮತ್ತು ವಿಮೆ ಸೇರಿದಂತೆ ಸುಮಾರು 18 ಕ್ಷೇತ್ರಗಳ ಸಾರ್ವಜನಿಕ ವಲಯದ ಉದ್ಯಮಗಳನ್ನು ಕಾರ್ಯತಂತ್ರ ಎಂದು ಸಲಹಾ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (ಡಿಐಪಿಎಎಂ) ವರ್ಗೀಕರಿಸಿದೆ. ಡಿಐಪಿಎಎಂ ರೂಪಿಸಿರುವ ನೀತಿಯ ಕರಡಿನಿಂದಾಗಿ ಪಿಎಸ್‌ಯು ಖಾಸಗೀಕರಣ ನೀತಿ ಹೊರಹೊಮ್ಮಲಿದೆ.

ಇದನ್ನೂ ಓದಿ: ವೇಗವಾಗಿ ಬೆಳೆಯುವ ಆರ್ಥಿಕತೆ ಹಾಳು ಮಾಡುವುದು ಹೇಗೆ ಎಂಬುದನ್ನು ಮೋದಿಯಿಂದ ಕಲಿಬೇಕು: ರಾಗಾ ವ್ಯಂಗ್ಯ

18 ಕಾರ್ಯತಂತ್ರದ ಕ್ಷೇತ್ರಗಳನ್ನು ಗಣಿಗಾರಿಕೆ ಮತ್ತು ಪರಿಶೋಧನೆ, ಉತ್ಪಾದನೆ, ಸಂಸ್ಕರಣೆ ಮತ್ತು ಉತ್ಪಾದನೆ ಹಾಗೂ ಸೇವಾ ವಲಯ ಎಂದು ಮೂರು ವಿಭಾಗಗಳಾಗಿ ವಿಂಗಡಿಸಿದೆ.

ಗಣಿಗಾರಿಕೆ ಮತ್ತು ಪರಿಶೋಧನೆ ವಿಭಾಗದಲ್ಲಿ ಕಲ್ಲಿದ್ದಲು, ಕಚ್ಚಾ ತೈಲ ಮತ್ತು ಅನಿಲ ಮತ್ತು ಖನಿಜಗಳು ಮತ್ತು ಲೋಹಗಳಂತಹ ಪ್ರದೇಶಗಳಲ್ಲಿ ಸರ್ಕಾರವು ಸೀಮಿತ ಉಪಸ್ಥಿತಿಯನ್ನು ಉಳಿಸಿಕೊಳ್ಳುತ್ತದೆ. ಉತ್ಪಾದನೆಯಲ್ಲಿ ರಕ್ಷಣಾ ಉಪಕರಣಗಳು, ಉಕ್ಕು, ಪೆಟ್ರೋಲಿಯಂ (ಸಂಸ್ಕರಣಾಗಾರ ಮತ್ತು ಮಾರುಕಟ್ಟೆ), ರಸಗೊಬ್ಬರಗಳು, ವಿದ್ಯುತ್ ಉತ್ಪಾದನೆ, ಪರಮಾಣು ಶಕ್ತಿ ಮತ್ತು ಹಡಗು ನಿರ್ಮಾಣದಲ್ಲಿ ಸೀಮಿತ ಪಾಲು ಕಾಯ್ದುಕೊಳ್ಳಲಾಗುತ್ತದೆ.

ಸೇವಾ ವಲಯದಲ್ಲಿ ವಿದ್ಯುತ್ ಪ್ರಸಾರ, ಬಾಹ್ಯಾಕಾಶ, ವಿಮಾನ ನಿಲ್ದಾಣ, ಬಂದರು, ಹೆದ್ದಾರಿ, ಗೋದಾಮು, ಗ್ಯಾಸ್ ಸಾಗಣೆ, ಲಾಜಿಸ್ಟಿಕ್ಸ್ (ಅನಿಲ ಮತ್ತು ಪೆಟ್ರೋ-ಕೆಮಿಕಲ್​ ವ್ಯಾಪಾರಬಿಟ್ಟು), ಕಾಂಟ್ರ್ಯಾಕ್ಟ್​ ಮತ್ತು ನಿರ್ಮಾಣ ಹಾಗೂ ಕಾರ್ಯತಂತ್ರಕ್ಕೆ ಸಂಬಂಧಿಸಿದ ತಾಂತ್ರಿಕ ಸಲಹಾ ಸೇವೆಗಳು. ಮೂಲಸೌಕರ್ಯಕ್ಕಾಗಿ ಹಣಕಾಸು ಸೇವೆಗಳು, ರಫ್ತು ಸಾಲ ಖಾತರಿ, ಇಂಧನ ಮತ್ತು ವಸತಿ ಕ್ಷೇತ್ರಗಳು, ದೂರಸಂಪರ್ಕ, ಐಟಿ, ಬ್ಯಾಂಕಿಂಗ್ ಮತ್ತು ವಿಮೆಯಲ್ಲಿ ಸರ್ಕಾರ ಸೀಮಿತ ಪಾಲು ಕಾಯ್ದುಕೊಳ್ಳಲಿದೆ.

ಹೊಸ ಖಾಸಗೀಕರಣ ನೀತಿಯು ನಿರ್ದಿಷ್ಟ ವಲಯಗಳಲ್ಲಿ ಸರ್ಕಾರದ ಹಿಡಿತ ತಗ್ಗಿಸಬಹುದು. ಮಾರಾಟದ ಪ್ರಗತಿಯನ್ನು ಒಂದೇ ಸಮಯದಲ್ಲಿ ಅಥವಾ ಹಂತಗಳಲ್ಲಿ ಮಾಡಬಹುದು. ಕಳೆದ ವರ್ಷ 10 ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳನ್ನು ನಾಲ್ಕು ಹಂತಗಳಲ್ಲಿ ವಿಲೀನಗೊಳಿಸಲಾಯಿತು. ಈ ನಂತರವೂ 2017 ಮತ್ತು 2018ರಲ್ಲಿ ವಿಲೀನಗೊಂಡ ಸಾರ್ವಜನಿಕ ವಲಯದ ಬ್ಯಾಂಕ್​ಗಳ ಮತ್ತಷ್ಟು ಬಲವರ್ಧನೆಗೊಂಡವು. ಖಾಸಗೀಕರಣಕ್ಕೂ ಇದೇ ಮಾರ್ಗಸೂಚಿ ರೂಪಿಸುತ್ತದೆ. ಭಾರತದಲ್ಲಿ ಇನ್ನೂ 12 ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.