ETV Bharat / briefs

ಪ್ಲೇಆಫ್​ ತಲುಪಿದ ಬೆನ್ನಲ್ಲೇ ಚೆನ್ನೈಗೆ ಗಾಯದ ಬರೆ​.. ಟೂರ್ನಿಯಿಂದ ಪ್ರಮುಖ ಆಟಗಾರ ಔಟ್​ - ಐಪಿಎಲ್​

12ನೇ ಆವೃತ್ತಿಯ ಐಪಿಎಲ್​ನಲ್ಲಿ ಪ್ಲೇಆಫ್​ಗೆ ಎಂಟ್ರಿಕೊಟ್ಟಿರುವ ಸಿಎಸ್​ಕೆ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಕೇದಾರ್​ ಜಾಧವ್​ ನಿನ್ನೆ ನಡೆದ ಪಂಜಾಬ್​ ವಿರುದ್ಧದ ಸಿಎಸ್​ಕೆಯ ಕೊನೆಯ ಲೀಗ್​ ಪಂದ್ಯದ ವೇಳೆ ಬೌಂಡರಿ ತಡೆಯುವ ವೇಳೆ ಭುಜಕ್ಕೆ ನೋವಾಗಿದ್ದು, ಐಪಿಎಲ್​ನಿಂದ ಹೊರಬಿದ್ದಿದ್ದಾರೆ.

ಚೆನ್ನೈ
author img

By

Published : May 6, 2019, 3:24 PM IST

ಚೆನ್ನೈ: ಕಳೆದ ಆವೃತ್ತಿಯ ಐಪಿಎಲ್​ನ ಮೊದಲ ಪಂದ್ಯದಲ್ಲೇ ಸ್ನಾಯುಸೆಳೆತಕ್ಕೊಳಗಾಗಿ ಇಡೀ ಐಪಿಎಲ್​ ಮಿಸ್​ ಮಾಡಿಕೊಂಡಿದ್ದ ಸಿಎಸ್​ಕೆ ತಂಡದ ಕೇದಾರ್​ ಜಾಧವ್​ ಪ್ರಸ್ತುತ 12ನೇ ಆವೃತ್ತಿಯ ಐಪಿಎಲ್​ನಿಂದಲೂ ಹೊರ ಬಿದ್ದಿದ್ದಾರೆ.

ಈ ಐಪಿಎಲ್​ನಲ್ಲಿ ಪ್ಲೇಆಫ್​ಗೆ ಎಂಟ್ರಿಕೊಟ್ಟಿರುವ ಸಿಎಸ್​ಕೆ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಆದ ಕೇದಾರ್​ ಜಾಧವ್​ ನಿನ್ನೆ ನಡೆದ ಪಂಜಾಬ್​ ವಿರುದ್ಧದ ಸಿಎಸ್​ಕೆಯ ಕೊನೆಯ ಲೀಗ್​ ಪಂದ್ಯದ ವೇಳೆ ಬೌಂಡರಿ ತಡೆಯುವ ವೇಳೆ ಭುಜಕ್ಕೆ ಗಾಯ ಮಾಡಿಕೊಂಡು ಮೈದಾನ ತೊರೆದಿದ್ದರು.

34 ವರ್ಷದ ಕೇದಾರ್​ ಜಾಧವ್​ ವಿಶ್ವಕಪ್​ ತಂಡದಲ್ಲೂ ಸ್ಥಾನ ಪಡೆದಿರುವ ಹಿನ್ನಲೆಯಲ್ಲಿ ಗಾಯಗೊಂಡಿರುವುದು ಕೇವಲ ಸಿಎಸ್​ಕೆಗೆ ಮಾತ್ರವಲ್ಲ ಟೀಮ್​ ಇಂಡಿಯಾಕ್ಕೂ ದೊಡ್ಡ ಹೊಡೆತ ತಂದಿದೆ. ಸಿಎಸ್​ಕೆಗೂ ಕೂಡ ಇವರ ಬದಲು ಯಾರನ್ನು ಆಡಿಸಬೇಕೆಂಬುದು ಇದೀಗ ತಲೆ ನೋವು ತಂದಿದೆ.

ಕೇದಾರ್​ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಆದರೆ, ಸ್ಕ್ಯಾನಿಂಗ್​ ನಂತರ ಮುಂದಿನ ಪಂದ್ಯಗಳಲ್ಲಿ ಆಡಿಸಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಕೋಚ್​ ಫ್ಲೆಮಿಂಗ್​ ತಿಳಿಸಿದ್ದಾರೆ.

ಒಂದು ವೇಳೆ ಕೇದಾರ್​ ಜಾಧವ್​ ಗಾಯ ಗಂಭೀರವಾದರೆ ವಿಶ್ವಕಪ್​ ಟೂರ್ನಿಯಿಂದ ಹೊರ ಬೀಳಲಿದ್ದು, ಇವರ ಬದಲಿಗೆ ಬ್ಯಾಕ್​ ಅಪ್​ ಪ್ಲೇಯರ್​ ಆಗಿರುವ ಅಂಬಾಟಿ ರಾಯ್ಡುರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಆದರೆ, ಐಪಿಎಲ್​ನಲ್ಲಿ ರಾಯ್ಡು ಕಳಪೆ ಪ್ರದರ್ಶನ ನೀಡಿದ್ದು 14 ಪಂದ್ಯಗಳಿಂದ ಕೇವಲ 219 ರನ್​ಗಳಿಸಿದ್ದಾರೆ. ಇವರ ಸ್ಟ್ರೈಕ್​ ರೇಟ್​ ಕೂಡ 90 ಇರುವುದರಿಂದ ಬಿಸಿಸಿಐಗೆ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲ ಮೂಡಿಸಿದೆ.

ಚೆನ್ನೈ: ಕಳೆದ ಆವೃತ್ತಿಯ ಐಪಿಎಲ್​ನ ಮೊದಲ ಪಂದ್ಯದಲ್ಲೇ ಸ್ನಾಯುಸೆಳೆತಕ್ಕೊಳಗಾಗಿ ಇಡೀ ಐಪಿಎಲ್​ ಮಿಸ್​ ಮಾಡಿಕೊಂಡಿದ್ದ ಸಿಎಸ್​ಕೆ ತಂಡದ ಕೇದಾರ್​ ಜಾಧವ್​ ಪ್ರಸ್ತುತ 12ನೇ ಆವೃತ್ತಿಯ ಐಪಿಎಲ್​ನಿಂದಲೂ ಹೊರ ಬಿದ್ದಿದ್ದಾರೆ.

ಈ ಐಪಿಎಲ್​ನಲ್ಲಿ ಪ್ಲೇಆಫ್​ಗೆ ಎಂಟ್ರಿಕೊಟ್ಟಿರುವ ಸಿಎಸ್​ಕೆ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಆದ ಕೇದಾರ್​ ಜಾಧವ್​ ನಿನ್ನೆ ನಡೆದ ಪಂಜಾಬ್​ ವಿರುದ್ಧದ ಸಿಎಸ್​ಕೆಯ ಕೊನೆಯ ಲೀಗ್​ ಪಂದ್ಯದ ವೇಳೆ ಬೌಂಡರಿ ತಡೆಯುವ ವೇಳೆ ಭುಜಕ್ಕೆ ಗಾಯ ಮಾಡಿಕೊಂಡು ಮೈದಾನ ತೊರೆದಿದ್ದರು.

34 ವರ್ಷದ ಕೇದಾರ್​ ಜಾಧವ್​ ವಿಶ್ವಕಪ್​ ತಂಡದಲ್ಲೂ ಸ್ಥಾನ ಪಡೆದಿರುವ ಹಿನ್ನಲೆಯಲ್ಲಿ ಗಾಯಗೊಂಡಿರುವುದು ಕೇವಲ ಸಿಎಸ್​ಕೆಗೆ ಮಾತ್ರವಲ್ಲ ಟೀಮ್​ ಇಂಡಿಯಾಕ್ಕೂ ದೊಡ್ಡ ಹೊಡೆತ ತಂದಿದೆ. ಸಿಎಸ್​ಕೆಗೂ ಕೂಡ ಇವರ ಬದಲು ಯಾರನ್ನು ಆಡಿಸಬೇಕೆಂಬುದು ಇದೀಗ ತಲೆ ನೋವು ತಂದಿದೆ.

ಕೇದಾರ್​ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಆದರೆ, ಸ್ಕ್ಯಾನಿಂಗ್​ ನಂತರ ಮುಂದಿನ ಪಂದ್ಯಗಳಲ್ಲಿ ಆಡಿಸಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಕೋಚ್​ ಫ್ಲೆಮಿಂಗ್​ ತಿಳಿಸಿದ್ದಾರೆ.

ಒಂದು ವೇಳೆ ಕೇದಾರ್​ ಜಾಧವ್​ ಗಾಯ ಗಂಭೀರವಾದರೆ ವಿಶ್ವಕಪ್​ ಟೂರ್ನಿಯಿಂದ ಹೊರ ಬೀಳಲಿದ್ದು, ಇವರ ಬದಲಿಗೆ ಬ್ಯಾಕ್​ ಅಪ್​ ಪ್ಲೇಯರ್​ ಆಗಿರುವ ಅಂಬಾಟಿ ರಾಯ್ಡುರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಆದರೆ, ಐಪಿಎಲ್​ನಲ್ಲಿ ರಾಯ್ಡು ಕಳಪೆ ಪ್ರದರ್ಶನ ನೀಡಿದ್ದು 14 ಪಂದ್ಯಗಳಿಂದ ಕೇವಲ 219 ರನ್​ಗಳಿಸಿದ್ದಾರೆ. ಇವರ ಸ್ಟ್ರೈಕ್​ ರೇಟ್​ ಕೂಡ 90 ಇರುವುದರಿಂದ ಬಿಸಿಸಿಐಗೆ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲ ಮೂಡಿಸಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.