ETV Bharat / briefs

ವಿಶ್ವಕಪ್​​ಗೆ ಕೇದಾರ್​ ಫಿಟ್​,ಮೇ 22ರಂದು ಟೀಂ ಇಂಡಿಯಾ ಜತೆ ಲಂಡನ್​ ಪ್ರಯಾಣ! - ಲಂಡನ್​ ಪ್ರಯಾಣ

ಐಪಿಎಲ್​ ಪಂದ್ಯದ ವೇಳೆ ಭುಜ ನೋವಿಗೆ ಒಳಗಾಗಿ ಹೊರಬಿದ್ದಿದ್ದ ಟೀಂ ಇಂಡಿಯಾದ ಆಲ್​ರೌಂಡರ್​ ಕೇದಾರ್​ ಜಾಧವ್​ ಇದೀಗ ಲಂಡನ್​ ವಿಮಾನವೇರಲು ಸಜ್ಜಾಗಿದ್ದಾರೆ.

ಕೇದಾರ್​ ಜಾಧವ್​
author img

By

Published : May 18, 2019, 5:08 PM IST

ಮುಂಬೈ:ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಸಿಎಸ್​ಕೆ ಪರ ಬ್ಯಾಟ್​ ಬೀಸುತ್ತಿದ್ದ ಕೇದಾರ್​ ಜಾಧವ್​ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಇದರ ಮಧ್ಯೆ ಅವರು ವಿಶ್ವಕಪ್​​ ವೇಳೆಗೆ ತಂಡಕ್ಕೆ ಕಮ್​ಬ್ಯಾಕ್​ ಮಾಡುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಎಲ್ಲ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ.

ಭುಜದ ನೋವಿನಿಂದ ಬಳಲುತ್ತಿದ್ದ ಕೇದಾರ್​ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಮೇ 22ರಂದು ತಂಡದೊಂದಿಗೆ ಲಂಡನ್‌ಗೆ​ ಪ್ರಯಾಣ ಬೆಳೆಸಲಿದ್ದಾರೆ ಎಂದು ತಂಡದ ಫಿಸಿಯೋ ಮಾಹಿತಿ ನೀಡಿದ್ದಾರೆ. ಮುಂಬೈನಲ್ಲಿ ನಡೆಸಿರುವ ಫಿಟ್ನೆಸ್​ ಪರೀಕ್ಷೆಯಲ್ಲೂ ಕೇದಾರ್‌ ಪಾಸ್​ ಆಗಿದ್ದು, ಈಗಾಗಲೇ ಬಿಸಿಸಿಐಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಟೀಂ ಇಂಡಿಯಾ ಪರ 59 ಏಕದಿನ ಪಂದ್ಯಗಳನ್ನಾಡಿರುವ ಈ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ 1,174 ರನ್​ ಹಾಗೂ 27ವಿಕೆಟ್​ ಪಡೆದುಕೊಂಡಿದ್ದಾರೆ.ತಂಡ ಸಂಕಷ್ಟಕ್ಕೀಡಾದಾಗ ವಿಕೆಟ್​ ಪಡೆದುಕೊಳ್ಳುವ ಕಲೆ ಕೂಡ ಇವರಿಗೆ ಕರಗತವಾಗಿದೆ.

ವಿಶ್ವಕಪ್‌ನಲ್ಲಿ ಜೂನ್ 5 ರಂದು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.

ಮುಂಬೈ:ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಸಿಎಸ್​ಕೆ ಪರ ಬ್ಯಾಟ್​ ಬೀಸುತ್ತಿದ್ದ ಕೇದಾರ್​ ಜಾಧವ್​ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಇದರ ಮಧ್ಯೆ ಅವರು ವಿಶ್ವಕಪ್​​ ವೇಳೆಗೆ ತಂಡಕ್ಕೆ ಕಮ್​ಬ್ಯಾಕ್​ ಮಾಡುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಎಲ್ಲ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ.

ಭುಜದ ನೋವಿನಿಂದ ಬಳಲುತ್ತಿದ್ದ ಕೇದಾರ್​ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಮೇ 22ರಂದು ತಂಡದೊಂದಿಗೆ ಲಂಡನ್‌ಗೆ​ ಪ್ರಯಾಣ ಬೆಳೆಸಲಿದ್ದಾರೆ ಎಂದು ತಂಡದ ಫಿಸಿಯೋ ಮಾಹಿತಿ ನೀಡಿದ್ದಾರೆ. ಮುಂಬೈನಲ್ಲಿ ನಡೆಸಿರುವ ಫಿಟ್ನೆಸ್​ ಪರೀಕ್ಷೆಯಲ್ಲೂ ಕೇದಾರ್‌ ಪಾಸ್​ ಆಗಿದ್ದು, ಈಗಾಗಲೇ ಬಿಸಿಸಿಐಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಟೀಂ ಇಂಡಿಯಾ ಪರ 59 ಏಕದಿನ ಪಂದ್ಯಗಳನ್ನಾಡಿರುವ ಈ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ 1,174 ರನ್​ ಹಾಗೂ 27ವಿಕೆಟ್​ ಪಡೆದುಕೊಂಡಿದ್ದಾರೆ.ತಂಡ ಸಂಕಷ್ಟಕ್ಕೀಡಾದಾಗ ವಿಕೆಟ್​ ಪಡೆದುಕೊಳ್ಳುವ ಕಲೆ ಕೂಡ ಇವರಿಗೆ ಕರಗತವಾಗಿದೆ.

ವಿಶ್ವಕಪ್‌ನಲ್ಲಿ ಜೂನ್ 5 ರಂದು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.

Intro:Body:

ವಿಶ್ವಕಪ್​​ಗಾಗಿ ಕೇದಾರ್​ ಫಿಟ್​... ಮೇ 22ರಂದು ಟೀಂ ಇಂಡಿಯಾ ಜತೆ ಲಂಡನ್​ ಪ್ರಯಾಣ!



ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಸಿಎಸ್​ಕೆ ಪರ ಬ್ಯಾಟ್​ ಬೀಸುತ್ತಿದ್ದ ಕೇದಾರ್​ ಜಾಧವ್​ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಇದರ ಮಧ್ಯೆ ಅವರು ವಿಶ್ವಕಪ್​​ ವೇಳೆಗೆ ತಂಡಕ್ಕೆ ಕಮ್​ಬ್ಯಾಕ್​ ಮಾಡುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಎಲ್ಲ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. 



ಭುಜದ ನೋವಿನಿಂದ ಬಳಲುತ್ತಿದ್ದ ಕೇದಾರ್​ ಜಾಧವ್​ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಮೇ 22ರಂದು ತಂಡದೊಂದಿಗೆ ಲಂಡನ್​ ಪ್ರಯಾಣ ಬೆಳೆಸಲಿದ್ದಾರೆ ಎಂದು ತಂಡದ ಫಿಜಿಸಿಯೋ ಮಾಹಿತಿ ನೀಡಿದ್ದಾರೆ. ಕೇದಾರ್​ ಜಾಧವ್​ಗೆ ಮುಂಬೈನಲ್ಲಿ ನಡೆಸಿರುವ ಫಿಟ್ನೆಸ್​ ಪರೀಕ್ಷೆಯಲ್ಲೂ ಪಾಸ್​ ಆಗಿದ್ದು, ಈಗಾಗಲೇ ಬಿಸಿಸಿಐಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. 



ಈಗಾಗಲೇ ಟೀಂ ಇಂಡಿಯಾ ಪರ 59 ಏಕದಿನ ಪಂದ್ಯಗಳನ್ನಾಡಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಕೇದಾರ್​ 1174ರನ್​ ಹಾಗೂ 27ವಿಕೆಟ್​ ಪಡೆದುಕೊಂಡಿದ್ದಾರೆ. ತಂಡ ಸಂಕಷ್ಟಕ್ಕೀಡಾದಾಗ ವಿಕೆಟ್​ ಪಡೆದುಕೊಳ್ಳುವ ಕಲೆ ಕೂಡ ಇವರಿಗೆ ಕರಗತವಾಗಿದೆ. 


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.