ETV Bharat / briefs

ಮಳೀನಾ ಆಗವಲ್ತ್‌ರೀ, ಹಿಂಗಾಗೇ ಮಾರಾಕಂತ್‌ ಪ್ಯಾಟಿಗ್‌ ತಂದೇವ್ರೀ.. ಧಾರವಾಡ ರೈತರ ಸ್ಥಿತಿ ಯಾತಕ್ಕೂ ಬ್ಯಾಡ್ರೀ! - ರೈತರ ಗೋಳು

ಮೇವಿನ ಸಮಸ್ಯೆಯಿಂದಾಗಿ ರೈತರು ಎತ್ತುಗಳನ್ನು ಮಾರಾಟ ಮಾಡಲು ಜಾನುವಾರು ಸಂತೆಗೆ ಬರುತ್ತಿದ್ದಾರೆ. ವರ್ಷದ ಹಿಂದೆ 95 ಸಾವಿರ ರೂಪಾಯಿಗೆ ಖರೀದಿಸಿದ್ದ ಜೋಡೆತ್ತುಗಳನ್ನು ಇಂದು 40 ಸಾವಿರ ರೂಪಾಯಿಗೆ ಕೇಳುತ್ತಿದ್ದಾರೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಜಾನುವಾರು ಸಂತೆಗೆ ಮರಾಟಕ್ಕೆ ಬಂದ ಎತ್ತುಗಳು
author img

By

Published : Jun 1, 2019, 8:36 PM IST

ಹುಬ್ಬಳ್ಳಿ: ಉತ್ತರ ಕರ್ನಾಟಕದಾದ್ಯಂತ ಭೀಕರ ಬರಗಾಲಕ್ಕೆ ಜನ ಜಾನುವಾರುಗಳು ತತ್ತರಿಸಿವೆ. ಬಿಸಿಲಿನ ತಾಪಮಾನ ದಿನೇದಿನೆ ಹೆಚ್ಚುತ್ತಿದ್ದು, ಜಾನುವಾರುಗಳಿಗೆ ನೀರು ಹಾಗೂ ಮೇವಿನ ಸಮಸ್ಯೆ ವ್ಯಾಪಕವಾಗಿ ಎದುರಾಗಿದೆ.

ಸಂತೆಗೆ ಮಾರಾಟಕ್ಕೆ ಬಂದ ಜಾನುವಾರುಗಳು

ಜೂನ್​ ಮೊದಲ ವಾರವಾದರೂ ಮುಂಗಾರು ಬಾರದ ಪರಿಣಾಮ ರೈತರು ಜಾನುವಾರುಗಳನ್ನು ಮಾರಾಟ ಮಾಡಲು ತಯಾರಾಗಿದ್ದಾರೆ. ಬಳ್ಳಿ ಶೇಂಗಾ, ಗೋವಿನ ಜೋಳ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಉತ್ಪನ್ನ ಬಂದಿರುವುದರಿಂದ ಜಾನುವಾರುಗಳಿಗೆ ಮೇವು ಹೊಂದಿಸಲು ರೈತರು ಪರದಾಡುತ್ತಿದ್ದಾರೆ. ಇನ್ನೂ ಪಶುಸಂಗೋಪನಾ ಇಲಾಖೆ ಜಿಲ್ಲೆಯ ಹಲವಾರು ಕಡೆ ಮೇವು ಬ್ಯಾಂಕ್‌ ತೆರೆದಿದ್ದರೂ ಇದರಲ್ಲಿ ಲಭ್ಯವಿರುವ ಮೇವು ಕಳಪೆ ಗುಣಮಟ್ಟದ್ದಾಗಿದೆ ಎಂಬ ಕಾರಣಕ್ಕೆ ರೈತರು ಅಲ್ಲಿ ಮೇವು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಮೇವಿನ ಸಮಸ್ಯೆಯಿಂದಾಗಿ ರೈತರು ಎತ್ತುಗಳನ್ನು ಮಾರಾಟ ಮಾಡಲು ಜಾನುವಾರು ಸಂತೆಗೆ ಬರುತ್ತಿದ್ದಾರೆ. ವರ್ಷದ ಹಿಂದೆ 95 ಸಾವಿರ ರೂಪಾಯಿಗೆ ಖರೀದಿಸಿದ್ದ ಜೋಡೆತ್ತುಗಳನ್ನು ಇಂದು 40 ಸಾವಿರ ರೂಪಾಯಿಗೆ ಕೇಳುತ್ತಿದ್ದಾರೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಚುನಾವಣೆಗೆ ಎಂದು ಬಂದ ರಾಜಕಾರಣಿಗಳು ಮತ್ತೆ ನಮ್ಮ ಕಡೆ ತಿರುಗಿಯೂ ನೋಡಿಲ್ಲ. ನಮ್ಮ ಗೋಳು ಕೇಳಲು ಯಾರೂ ತಯಾರಿಲ್ಲ ಎಂದು ರೈತರು ಜಾನುವಾರು ಸಂತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ: ಉತ್ತರ ಕರ್ನಾಟಕದಾದ್ಯಂತ ಭೀಕರ ಬರಗಾಲಕ್ಕೆ ಜನ ಜಾನುವಾರುಗಳು ತತ್ತರಿಸಿವೆ. ಬಿಸಿಲಿನ ತಾಪಮಾನ ದಿನೇದಿನೆ ಹೆಚ್ಚುತ್ತಿದ್ದು, ಜಾನುವಾರುಗಳಿಗೆ ನೀರು ಹಾಗೂ ಮೇವಿನ ಸಮಸ್ಯೆ ವ್ಯಾಪಕವಾಗಿ ಎದುರಾಗಿದೆ.

ಸಂತೆಗೆ ಮಾರಾಟಕ್ಕೆ ಬಂದ ಜಾನುವಾರುಗಳು

ಜೂನ್​ ಮೊದಲ ವಾರವಾದರೂ ಮುಂಗಾರು ಬಾರದ ಪರಿಣಾಮ ರೈತರು ಜಾನುವಾರುಗಳನ್ನು ಮಾರಾಟ ಮಾಡಲು ತಯಾರಾಗಿದ್ದಾರೆ. ಬಳ್ಳಿ ಶೇಂಗಾ, ಗೋವಿನ ಜೋಳ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಉತ್ಪನ್ನ ಬಂದಿರುವುದರಿಂದ ಜಾನುವಾರುಗಳಿಗೆ ಮೇವು ಹೊಂದಿಸಲು ರೈತರು ಪರದಾಡುತ್ತಿದ್ದಾರೆ. ಇನ್ನೂ ಪಶುಸಂಗೋಪನಾ ಇಲಾಖೆ ಜಿಲ್ಲೆಯ ಹಲವಾರು ಕಡೆ ಮೇವು ಬ್ಯಾಂಕ್‌ ತೆರೆದಿದ್ದರೂ ಇದರಲ್ಲಿ ಲಭ್ಯವಿರುವ ಮೇವು ಕಳಪೆ ಗುಣಮಟ್ಟದ್ದಾಗಿದೆ ಎಂಬ ಕಾರಣಕ್ಕೆ ರೈತರು ಅಲ್ಲಿ ಮೇವು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಮೇವಿನ ಸಮಸ್ಯೆಯಿಂದಾಗಿ ರೈತರು ಎತ್ತುಗಳನ್ನು ಮಾರಾಟ ಮಾಡಲು ಜಾನುವಾರು ಸಂತೆಗೆ ಬರುತ್ತಿದ್ದಾರೆ. ವರ್ಷದ ಹಿಂದೆ 95 ಸಾವಿರ ರೂಪಾಯಿಗೆ ಖರೀದಿಸಿದ್ದ ಜೋಡೆತ್ತುಗಳನ್ನು ಇಂದು 40 ಸಾವಿರ ರೂಪಾಯಿಗೆ ಕೇಳುತ್ತಿದ್ದಾರೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಚುನಾವಣೆಗೆ ಎಂದು ಬಂದ ರಾಜಕಾರಣಿಗಳು ಮತ್ತೆ ನಮ್ಮ ಕಡೆ ತಿರುಗಿಯೂ ನೋಡಿಲ್ಲ. ನಮ್ಮ ಗೋಳು ಕೇಳಲು ಯಾರೂ ತಯಾರಿಲ್ಲ ಎಂದು ರೈತರು ಜಾನುವಾರು ಸಂತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Intro:ಹುಬ್ಬಳಿBody:ಸ್ಲಗ್: ಮೇವು ನಿರು ಇಲ್ಲದೇ ಜಾನುವಾರುಗಳ ಮಾರಾಟಕ್ಕೆ ನಿಂತ ರೈತರು...
ಸ್ಥಳ ಹುಬ್ಬಳ್ಳಿ.

ಹುಬ್ಬಳ್ಳಿ:- ಉತ್ತರ ಕರ್ನಾಟಕದ ಜನರು ಒಂದಿಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಒಂದು ಕಡೆ ಸೂರ್ಯ ತನ್ನ ಪ್ರಕಾಶವನ್ನು ಹೆಚ್ಚು ಮಾಡಿ ಬರದ ಚಾಯೇ ಮೂಡುವಂತೆ ಮಾಡಿದ್ದರೇ, ಇತ ಮಳೆರಾಯಾ ರೈತರೊಂದಿಗೆ ತನ್ನ ಆಟವನ್ನು ಪ್ರಾರಂಭಿಸಿದ್ದಾನೆ. ಪರಿಣಾಮ ರೈತರು ತಮ್ಮ ಜಾನುವಾರುಗಳಿಗೆ ಹೊಟ್ಟೆಗೆ ಹಾಕಲು ಹೊಟ್ಟಿಲ್ಲದೇ ಮಾರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಓ: ಒಂದು ಕಡೆ ಸೂರ್ಯನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನ ಜಾನುವಾರುಗಳು ನೀರಿಗಾಗಿ ಆಹಾಕಾರ ಪಡುತ್ತಿದ್ದಾರೆ. ಇದರ ನಡುವೆ ಕೆಲಸ ಮಾಡುವೆವು ಎಂದರೆ ಕೈಗಳಿಗೆ ಕೆಲಸವಿಲ್ಲ. ಪರಿಣಾಮ ಜಾನುವಾರಗಳನ್ನು ಮಾರಿ ಗುಳೇ ಹೋಗುವಂತಹ ಸ್ಥೀತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿ ಕಂಡುಬಂದಿದ್ದು ಉತ್ತರ ಕರ್ನಾಟಕ ಭಾಗದಲ್ಲಿ‌.
ಧಾರವಾಡ ಜಿಲ್ಲೆಯಾದ್ಯಂತ ಬಿಕರ ಬರಗಾಲಕ್ಕೆ ರೈತರು ತತ್ತರಿಸಿ ಹೋಗಿದ್ದು, ಜನಜಾನುವಾರಗಳಿಗೆ ಈ ಹಿಂದೆ ಬೆಳೆದಂತಹ ಬೆಳೆಗಳು ಆಹಾರಕ್ಕೆ ಪ್ರಮುಖ ಆಧಾರವಾಗಿದ್ದವು. ಆದರೆ ಬಳ್ಳಿ ಶೇಂಗಾ, ಗೋವಿನ ಜೋಳ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಉತ್ಪನ್ನ ಬಂದಿರುವುದರಿಂದ ಜಾನುವಾರುಗಳಿಗೆ ಮೇವು ಹೊಂದಿಸಲು ರೈತರು ಪರದಾಡುತ್ತಿದ್ದಾರೆ.ಇನ್ನೂ ಪಶುಸಂಗೋಪನಾ ಇಲಾಖೆ ಜಿಲ್ಲೆಯ ಹಲವಾರು ಕಡೆ ಮೇವು ಬ್ಯಾಂಕ್‌ ತೆರೆದಿದ್ದರೂ, ಇದರಲ್ಲಿ ಲಭ್ಯವಿರುವ ಮೇವು ಕಳಪೆ ಗುಣಮಟ್ಟದ್ದು ಮತ್ತು ಹಳೆಯದು ಎಂಬ ಕಾರಣಕ್ಕೆ ರೈತರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎಬ ಮಾಹಿತಿ ಸಹ ಇದೇ. ಮೇವಿನ ಸಮಸ್ಯೆಯಿಂದಾಗಿ ರೈತರು ಎತ್ತುಗಳನ್ನು ಮಾರಲು ಜಾನುವಾರು ಸಂತೆಗೆ ತಂದು ಮಾರಾಟ ಮಾಡುತ್ತಿದ್ದಾರೆ.ಇನ್ನೆನೂ ಒಂದೆರಡು ಮಳೆ ಆಗುತ್ತದೆ ಅಂತ ರೈತರು ಅಂದುಕೊಳ್ಳುವಷ್ಟರಲ್ಲಿ ಮುಂಗಾರು ಮಳೆ ಕೈಕೊಡುವ ಲಕ್ಷಣ ಕಾಣುತ್ತಿದೆ.ಮತ್ತು ನಮ್ಮ ಭಾಗದಲ್ಲಿ ಮಳೆಯೇ ಆಗಿಲ್ಲ. ಮುಂಗಾರು ಸಂಪೂರ್ಣವಾಗಿ ಕೈಕೊಟ್ಟಿದೆ. ಒಪ್ಪತ್ತಿನ ಊಟಕ್ಕೂ ಚಿಂತಿ ಮಾಡಬೇಕಾದ ಪರಿಸ್ಥಿತಿ ಐತಿ. ಮೇವು ಇಲ್ಲದೆ ದನಕರಗಳು ಸತ್ತ ಹೋಗ್ತಾವಂತ ದನದ ಸಂತಿಗೆ ತಂದೇವಿ ವರ್ಷದ ಹಿಂದೆ ೯೦ ಸಾವಿರಕ್ಕೆ ಖರೀದಿಸಿದ್ದ ಜೋಡಿ ಎತ್ತುಗಳನ್ನು ಈಗ ಬೇಕಾಬಿಟ್ಟಿ ಮಾರಿವ ಪ್ರಸಂಗ ಬಂದಿದೆ ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರ ರೈತರ ಬಗ್ಗೆ ಕಾಳಜಿವಹಿಸಿದೆ ರಾಜಕೀಯದಲ್ಲಿ ಬಿಜಿಯಾಗಿದ್ದಾರೆ ನಮ್ಮ ಅಳಲು ಕೇಳುವವರು ಯಾರು ಅಂತಾರೇ ರೈತ ಶಂಕ್ರಪ್ಪ

ಬೈಟ್:-ಶಂಕ್ರಪ್ಪ ಜಾನುವಾರು ಮಾರಾಟಕ್ಕೆ ಬಂದ ರೈತ.

ಬೈಟ್:- ಅಜ್ಜಪ್ಪ ರಾಯಪುರ ರೈತ

ವಾಓ:- ಇನ್ನೂ ಒಂದು ಸದೃಢ ಜೋಡತ್ತಿಗೆ ೮೦ಸಾವಿರ '' ದರ ಇತ್ತು. ಆದ್ರೆ ಈಗ ೪೦ರಿಂದ 50 ಸಾವಿರಕ್ಕೆ ಜೋಡಿ ಎತ್ತುಗಳು ಕೇಳುತ್ತಿದ್ದಾರೆ. ನೀರು, ಮೇವಿನ ಅಲಭ್ಯತೆ ಕಾರಣ ರೈತರು ಚೌಕಾಸಿಗೆ ಇಳಿಯದೇ, ಕೇಳಿದ ದರಕ್ಕೆ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದೆವೆ ಜೋಡಿ ಎತ್ತುಗಳಿಗೆ ಸರಾಸರಿ ರೂ50 ಸಾವಿರ ದರ ಇತ್ತು. ಬೆಲೆ ಅರ್ಧದಷ್ಟು ಕಡಿಮೆ ಆದರೂ ಅವುಗಳನ್ನು ಕೊಳ್ಳಲು ಯಾರೊಬ್ಬ ರೈತರು ಮುಂದೆ ಬರುತ್ತಿಲ್ಲ. ಒಂದು ವೇಳೆ ಎತ್ತುಗಳನ್ನು ಕೊಂಡರೂ, ಅವುಗಳಿಗೆ ಮೇವು, ನೀರು ಒದಗಿಸು ವುದು ಹೇಗೆ ಎಂಬ ವಿಚಾರ ಮಾಡುತ್ತಿದ್ದವೆ ಎಂದು ಮಾರುಕಟ್ಟೆ ಬಂದ ರೈತ ಅಜ್ಜಪ್ಪ ರಾಯಪುರ ಹೇಳಿದರು..ಒಟ್ಟಿನಲ್ಲಿ ದೇಶದ ಬೆನ್ನಲೆಬು ಅಂತ ಹೇಳುತ್ತಾ ರಾಜಕೀಯದಲ್ಲೇ ಬಿಜಿಯಾಗಿರುವ ಜನಪ್ರತಿನಿಧಿಗಳು ಇನ್ನಾದ್ರೂ ರೈತರ ಕಷ್ಟಕ್ಕೆ ಸ್ಪಂದಿಸಿ ಜಾನುವಾರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಿ ರೈತರು ,ಜಾನುವಾರುಗಳ ಗುಳೆ ಹೋಗುವುದನ್ನು ತಪ್ಪಿಸಬೇಕಾಗಿದೆ....!


_________________________


ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.