ವಿಶಾಖಪಟ್ಟಣ (ಆಂಧ್ರಪ್ರದೇಶ): ಇಲ್ಲಿನ ವಿಶಾಖ ನಗರದ ಜನನಿಬಿಡ ಪ್ರದೇಶದಲ್ಲೇ ಕಳೆದ ರಾತ್ರಿ ಹಾವೊಂದು ಎಲ್ಲರಲ್ಲೂ ಭೀತಿಯನ್ನುಂಟುಮಾಡಿತ್ತು. ರಸ್ತೆ ಬದಿ ನಿಲ್ಲಿಸಿದ್ದ ಕಾರ್ವೊಂದರಲ್ಲಿ ನುಗ್ಗಿ ಎಷ್ಟೊತ್ತಾದರೂ ಹೊರಗೆ ಬಾರದೇ ಜನರನ್ನು ಬೆಚ್ಚಿಬೀಳಿಸಿತ್ತು. ಕೊನೆಗೆ ಹಾವು ಹಿಡಿಯುವವರು ರಕ್ಷಣೆ ಮಾಡಿದ ಬಳಿಕ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ರಸ್ತೆಯ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಹಾವು ಕಾಣಿಸಿಕೊಂಡಿತ್ತು. ಕಾರು ಮುಂಭಾಗದ ಕನ್ನಡಿಯ ಮೇಲೆ ತೆವಳುತ್ತಿತ್ತು. ಇದನ್ನು ಕಂಡ ಜನರು ಗಾಬರಿಯಾಗಿ ಕಿರುಚುತ್ತಾ ಓಡಿದ್ದಾರೆ. ಅಷ್ಟರಲ್ಲಿ ಹಾವು ಕಾರ್ ಬಾನೆಟ್ ಒಳಗೆ ಸೇರಿಕೊಂಡಿತ್ತು. ಎಷ್ಟೇ ಹೊತ್ತಾದರೂ ಹೊರಗೆ ಬರಲಿಲ್ಲ. ಈ ವೇಳೆ ಜನರು ಸ್ನೇಕ್ ಕಿರಣ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಆತ ಹಾವನ್ನು ಹೊರ ಬರುವಂತೆ ಮಾಡಿ ಸೆರೆ ಹಿಡಿದಿದ್ದಾನೆ.
ಈ ವೇಳೆ ಸುತ್ತ ನೆರೆದಿದ್ದ ಜನ ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ. ಹಾವನ್ನು ರಕ್ಷಣೆ ಮಾಡಿದ ಕಿರಣ್ ಬಳಿಕ ಅದನ್ನು ನಗರ ಹೊರವಲಯದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.