ETV Bharat / bharat

ದೆಹಲಿ ಆಸ್ಪತ್ರೆಗಳಲ್ಲಿ ಸ್ವಲ್ಪ ಹೊತ್ತಲ್ಲೇ ಆಮ್ಲಜನಕ ಖಾಲಿಯಾಗುತ್ತೆ..ತಕ್ಷಣ​ ಪೂರೈಸಲು ಪಿಎಂಗೆ ಕೇಜ್ರಿ ಮನವಿ!

author img

By

Published : Apr 20, 2021, 10:11 PM IST

Updated : Apr 20, 2021, 10:35 PM IST

ದೇಶದಲ್ಲಿ ಇದೀಗ ಬೆಡ್​ ಹಾಗೂ ಆಕ್ಸಿಜನ್ ಕೊರತೆ ಉಂಟಾಗಿದ್ದು, ದೆಹಲಿಯ ಕೆಲವೊಂದು ಆಸ್ಪತ್ರೆಗಳಲ್ಲಿ ಕೆಲ ಗಂಟೆಗಳಿಗೆ ಆಗುವಷ್ಟು ಆಮ್ಲಜನಕ ಮಾತ್ರ ಬಾಕಿ ಉಳಿದುಕೊಂಡಿದೆ.

Serious oxygen crisis in Delhi
Serious oxygen crisis in Delhi

ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಸಾವಿರಾರು ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಅವರಿಗೆ ಬೆಡ್​ ಹಾಗೂ ಆಕ್ಸಿಜನ್ ಕೊರತೆ ಉಂಟಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಆಸ್ಪತ್ರೆಗಳಲ್ಲಿ ಆಮ್ಲಜನಕದ ತೀವ್ರ ಕೊರತೆ ಉಂಟಾಗಿದ್ದು, ಟ್ವೀಟ್ ಮಾಡುವ ಮೂಲಕ ಕೇಜ್ರಿವಾಲ್​ ಕೇಂದ್ರದ ಬಳಿ ಮನವಿ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಆಮ್ಲಜನಕ ಬಿಕ್ಕಟ್ಟು ಉಂಟಾಗಿದೆ ಎಂದು ಅವರು ಟ್ವೀಟ್ ಮಾಡಿದ್ದು, ತಕ್ಷಣವೇ ಆಕ್ಸಿಜನ್​ ಒದಗಿಸುವಂತೆ ಕೇಂದ್ರದ ಬಳಿ ಮನವಿ ಮಾಡಿದ್ದಾರೆ.

  • Serious oxygen crisis persists in Delhi. I again urge centre to urgently provide oxygen to Delhi. Some hospitals are left with just a few hours of oxygen.

    — Arvind Kejriwal (@ArvindKejriwal) April 20, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಲಾಕ್​ಡೌನ್ ಬೇಡವೇ ಬೇಡ: ದೇಶವನ್ನ ಲಾಕ್​ಡೌನ್​ನಿಂದ ರಕ್ಷಿಸುವಂತೆ ನಮೋ ಮನವಿ

ಕೆಲವೊಂದು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳ ಆಕ್ಸಿಜನ್​ ಉಳಿದುಕೊಂಡಿದ್ದು, ತಕ್ಷಣವೇ ನಮಗೆ ಆಕ್ಸಿಜನ್​ ಒದಗಿಸುವಂತೆ ಕೇಂದ್ರದ ಬಳಿ ಒತ್ತಾಯಿಸುತ್ತಿರುವುದಾಗಿ ಅವರು ಮನವಿ ಮಾಡಿಕೊಂಡಿದ್ದಾರೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಡಿಸಿಎಂ ಮನೀಷ್ ಸಿಸೋಡಿಯಾ, ಆಮ್ಲಜನಕ ಕೊರತೆ ವಿಚಾರವಾಗಿ ಎಲ್ಲ ಆಸ್ಪತ್ರೆಗಳಿಂದ ಫೋನ್​ ಕರೆ ಬರುತ್ತಿದ್ದು, ವಿವಿಧ ರಾಜ್ಯಗಳಿಂದ ಸರಬರಾಜು ಸ್ಥಗಿತಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

  • ऑक्सिजन को लेकर सब अस्पतालों से SOS फ़ोन आ रहे हैं. सप्लाई करने वाले लोगों को अलग अलग राज्यों में रोक दिया जा रहा है.

    ऑक्सिजन की सप्लाई को लेकर राज्यों के बीच जंगलराज न हो, इसके लिए केंद्र सरकार को बेहद संवेदनशील और सक्रिय रहना होगा.

    — Manish Sisodia (@msisodia) April 20, 2021 " class="align-text-top noRightClick twitterSection" data=" ">

ಕೆಲವೊಂದು ಆಸ್ಪತ್ರೆಗಳಲ್ಲಿ ಮುಂದಿನ 8 ರಿಂದ 12 ಗಂಟೆಗಳವರೆಗೆ ಮಾತ್ರ ಆಮ್ಲಜನಕ ಲಭ್ಯವಿದ್ದು, ಕಳೆದ ಒಂದು ವಾರದಿಂದ ಇದರ ಪೂರೈಕೆಗೆ ನಾವು ಒತ್ತಾಯಿಸುತ್ತಿದ್ದೇನೆ ಎಂದಿದ್ದಾರೆ. ನಾಳೆ ಬೆಳಗ್ಗೆವರೆಗೆ ಸಾಕಷ್ಟು ಆಸ್ಪತ್ರೆಗಳಿಗೆ ಆಮ್ಲಜನಕ ತಲುಪದಿದ್ದರೆ ಆಕ್ರೋಶ ಉಂಟಾಗಲಿದೆ ಎಂದಿದ್ದಾರೆ.

ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಸಾವಿರಾರು ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಅವರಿಗೆ ಬೆಡ್​ ಹಾಗೂ ಆಕ್ಸಿಜನ್ ಕೊರತೆ ಉಂಟಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಆಸ್ಪತ್ರೆಗಳಲ್ಲಿ ಆಮ್ಲಜನಕದ ತೀವ್ರ ಕೊರತೆ ಉಂಟಾಗಿದ್ದು, ಟ್ವೀಟ್ ಮಾಡುವ ಮೂಲಕ ಕೇಜ್ರಿವಾಲ್​ ಕೇಂದ್ರದ ಬಳಿ ಮನವಿ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಆಮ್ಲಜನಕ ಬಿಕ್ಕಟ್ಟು ಉಂಟಾಗಿದೆ ಎಂದು ಅವರು ಟ್ವೀಟ್ ಮಾಡಿದ್ದು, ತಕ್ಷಣವೇ ಆಕ್ಸಿಜನ್​ ಒದಗಿಸುವಂತೆ ಕೇಂದ್ರದ ಬಳಿ ಮನವಿ ಮಾಡಿದ್ದಾರೆ.

  • Serious oxygen crisis persists in Delhi. I again urge centre to urgently provide oxygen to Delhi. Some hospitals are left with just a few hours of oxygen.

    — Arvind Kejriwal (@ArvindKejriwal) April 20, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಲಾಕ್​ಡೌನ್ ಬೇಡವೇ ಬೇಡ: ದೇಶವನ್ನ ಲಾಕ್​ಡೌನ್​ನಿಂದ ರಕ್ಷಿಸುವಂತೆ ನಮೋ ಮನವಿ

ಕೆಲವೊಂದು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳ ಆಕ್ಸಿಜನ್​ ಉಳಿದುಕೊಂಡಿದ್ದು, ತಕ್ಷಣವೇ ನಮಗೆ ಆಕ್ಸಿಜನ್​ ಒದಗಿಸುವಂತೆ ಕೇಂದ್ರದ ಬಳಿ ಒತ್ತಾಯಿಸುತ್ತಿರುವುದಾಗಿ ಅವರು ಮನವಿ ಮಾಡಿಕೊಂಡಿದ್ದಾರೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಡಿಸಿಎಂ ಮನೀಷ್ ಸಿಸೋಡಿಯಾ, ಆಮ್ಲಜನಕ ಕೊರತೆ ವಿಚಾರವಾಗಿ ಎಲ್ಲ ಆಸ್ಪತ್ರೆಗಳಿಂದ ಫೋನ್​ ಕರೆ ಬರುತ್ತಿದ್ದು, ವಿವಿಧ ರಾಜ್ಯಗಳಿಂದ ಸರಬರಾಜು ಸ್ಥಗಿತಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

  • ऑक्सिजन को लेकर सब अस्पतालों से SOS फ़ोन आ रहे हैं. सप्लाई करने वाले लोगों को अलग अलग राज्यों में रोक दिया जा रहा है.

    ऑक्सिजन की सप्लाई को लेकर राज्यों के बीच जंगलराज न हो, इसके लिए केंद्र सरकार को बेहद संवेदनशील और सक्रिय रहना होगा.

    — Manish Sisodia (@msisodia) April 20, 2021 " class="align-text-top noRightClick twitterSection" data=" ">

ಕೆಲವೊಂದು ಆಸ್ಪತ್ರೆಗಳಲ್ಲಿ ಮುಂದಿನ 8 ರಿಂದ 12 ಗಂಟೆಗಳವರೆಗೆ ಮಾತ್ರ ಆಮ್ಲಜನಕ ಲಭ್ಯವಿದ್ದು, ಕಳೆದ ಒಂದು ವಾರದಿಂದ ಇದರ ಪೂರೈಕೆಗೆ ನಾವು ಒತ್ತಾಯಿಸುತ್ತಿದ್ದೇನೆ ಎಂದಿದ್ದಾರೆ. ನಾಳೆ ಬೆಳಗ್ಗೆವರೆಗೆ ಸಾಕಷ್ಟು ಆಸ್ಪತ್ರೆಗಳಿಗೆ ಆಮ್ಲಜನಕ ತಲುಪದಿದ್ದರೆ ಆಕ್ರೋಶ ಉಂಟಾಗಲಿದೆ ಎಂದಿದ್ದಾರೆ.

Last Updated : Apr 20, 2021, 10:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.