ETV Bharat / bharat

ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ:ಎಐಎಡಿಎಂಕೆಯಿಂದ ಶಾಸಕ ತೊಪ್ಪು ವೆಂಕಟಾಚಲಂ ಔಟ್​

ನಿನ್ನೆ ಎಐಎಡಿಎಂಕೆ ಅಭ್ಯರ್ಥಿ ವಿರುದ್ಧವಾಗಿ ಪೆರುಂಡುರೈ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಾಸಕ ತೊಪ್ಪು ವೆಂಕಟಾಚಲಂ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಎಐಎಡಿಎಂಕೆ ಉಚ್ಛಾಟಿಸಿದೆ.

author img

By

Published : Mar 19, 2021, 5:18 PM IST

Updated : Mar 19, 2021, 5:49 PM IST

venkatachalam
venkatachalam

ಚೆನ್ನೈ(ತಮಿಳುನಾಡು): ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ವೇಳೆ ಎಐಎಡಿಎಂಕೆ ಪಕ್ಷವು ಶಾಸಕ ತೊಪ್ಪು ವೆಂಕಟಾಚಲಂ ಅವರನ್ನು ಉಚ್ಛಾಟಿಸಿದೆ.

ಪಕ್ಷದ ನೀತಿಗೆ ವಿರುದ್ಧವಾಗಿ ನಡೆದುಕೊಂಡಿರುವುದಕ್ಕಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪನ್ನೀರ್​ ಸೆಲ್ವಂ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನಾನು ಮೋದಿ ಅಲ್ಲ, ಸುಳ್ಳು ಹೇಳಲ್ಲ.. ಚಹಾ ಕಾರ್ಮಿಕರಿಗೆ 365 ರೂ. ಪಕ್ಕಾ: ರಾಹುಲ್‌ ಗಾಂಧಿ ಭರವಸೆ

ತೊಪ್ಪು ವೆಂಕಟಾಚಲಂ ಅವರು ನಿನ್ನೆ ಎಐಎಡಿಎಂಕೆ ಅಭ್ಯರ್ಥಿ ವಿರುದ್ಧವಾಗಿ ಪೆರುಂಡುರೈ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

ತಮಿಳುನಾಡಿನಲ್ಲಿ ಏಪ್ರಿಲ್​ 6ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಎಂಕೆ - ಕಾಂಗ್ರೆಸ್​ - ಸಿಪಿಎಂ ಹಾಗೂ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧವಾಗಿವೆ.

ಚೆನ್ನೈ(ತಮಿಳುನಾಡು): ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ವೇಳೆ ಎಐಎಡಿಎಂಕೆ ಪಕ್ಷವು ಶಾಸಕ ತೊಪ್ಪು ವೆಂಕಟಾಚಲಂ ಅವರನ್ನು ಉಚ್ಛಾಟಿಸಿದೆ.

ಪಕ್ಷದ ನೀತಿಗೆ ವಿರುದ್ಧವಾಗಿ ನಡೆದುಕೊಂಡಿರುವುದಕ್ಕಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪನ್ನೀರ್​ ಸೆಲ್ವಂ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನಾನು ಮೋದಿ ಅಲ್ಲ, ಸುಳ್ಳು ಹೇಳಲ್ಲ.. ಚಹಾ ಕಾರ್ಮಿಕರಿಗೆ 365 ರೂ. ಪಕ್ಕಾ: ರಾಹುಲ್‌ ಗಾಂಧಿ ಭರವಸೆ

ತೊಪ್ಪು ವೆಂಕಟಾಚಲಂ ಅವರು ನಿನ್ನೆ ಎಐಎಡಿಎಂಕೆ ಅಭ್ಯರ್ಥಿ ವಿರುದ್ಧವಾಗಿ ಪೆರುಂಡುರೈ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

ತಮಿಳುನಾಡಿನಲ್ಲಿ ಏಪ್ರಿಲ್​ 6ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಎಂಕೆ - ಕಾಂಗ್ರೆಸ್​ - ಸಿಪಿಎಂ ಹಾಗೂ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧವಾಗಿವೆ.

Last Updated : Mar 19, 2021, 5:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.