ETV Bharat / bharat

ನಿದ್ರಿಸುತ್ತಿದ್ದ ಅತ್ತಿಗೆಯ ಗುಪ್ತಾಂಗಕ್ಕೆ ಚಾಕುವಿನಿಂದ ಚುಚ್ಚಿ ಮೈದುನನ ವಿಕೃತಿ

author img

By

Published : Apr 29, 2021, 8:27 AM IST

ಉತ್ತರಪ್ರದೇಶದ ಸುಲ್ತಾನ್​ಪುರ ಎಂಬಲ್ಲಿ ನಡೆದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ತಮ್ಮನೊಬ್ಬ ಅಣ್ಣನ ಪತ್ನಿಯ ಗುಪ್ತಾಂಗಕ್ಕೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಹಿಳೆಯ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

Sultanpur news  Uttar Pradesh news  crime in sultanpur  brother in law stabbed knife on sister in law  ನಿದ್ರಿಸುತ್ತಿದ್ದ ಅತ್ತಿಗೆಯ ಖಾಸಗಿ ಭಾಗಕ್ಕೆ ಚಾಕು ಚುಚ್ಚಿದ ಮೈದುನ  ಸುಲ್ತಾನ್​ಪುರದಲ್ಲಿ ನಿದ್ರಿಸುತ್ತಿದ್ದ ಅತ್ತಿಗೆಯ ಖಾಸಗಿ ಭಾಗಕ್ಕೆ ಚಾಕು ಚುಚ್ಚಿದ ಮೈದುನ  ಸುಲ್ತಾನ್​ಪುರ ಅಪರಾಧ ಸುದ್ದಿ  ಸುಲ್ತಾನ್​ಪುರ ಸುದ್ದಿ
ನಿದ್ರಿಸುತ್ತಿದ್ದ ಅತ್ತಿಗೆಯ ಖಾಸಗಿ ಭಾಗಕ್ಕೆ ಚಾಕು ಚುಚ್ಚಿದ ಮೈದುನ

ಸುಲ್ತಾನ್​ಪುರ: ನಿದ್ರಿಸುತ್ತಿದ್ದ ಅತ್ತಿಗೆಯ ಗುಪ್ತಾಂಗಕ್ಕೆ ಮೈದುನನೊಬ್ಬ ಚಾಕುವಿನಿಂದ ಚುಚ್ಚಿ ಹಲ್ಲೆಗೊಳಿಸಿರುವ ಘಟನೆ ಬಲ್ದಿರಿಯಾ ಪೊಲೀಸ್​ ಠಾಣಾ ವ್ಯಾಪ್ತಿಯ ಡಿ ಗ್ರಾಮದಲ್ಲಿ ನಡೆದಿದೆ.

ಘಟನೆಯ ವಿವರ:

ಮಂಗಳವಾರ ಮನೋಜ್​ ಕುಮಾರ್​ ಎಂಬಾತನ ಪತ್ನಿ ಮನೆಯಲ್ಲಿ ನಿದ್ರಿಸುತ್ತಿದ್ದಳು. ಈ ವೇಳೆ ಕಿರಿಯ ಸಹೋದರ ದೀಪಕ್​ ತನ್ನ ಅತ್ತಿಗೆಯ ದೇಹದ ಖಾಸಗಿ ಭಾಗಕ್ಕೆ ತರಕಾರಿ ಕತ್ತರಿಸುವ ಚಾಕುವಿನಿಂದ ಇರಿದಿದ್ದಾನೆ. ಆತನ ವಿಕೃತಿಗೆ ಸದ್ಯ ಕಾರಣ ತಿಳಿದುಬಂದಿಲ್ಲ.

ಗಂಭೀರವಾಗಿ ಗಾಯಗೊಂಡ ಮಹಿಳೆ ಕೂಗಾಡಿದ್ದಾಳೆ. ಈ ವೇಳೆ ಸ್ಥಳಕ್ಕೆ ಕುಟುಂಬಸ್ಥರು ದೌಡಾಯಿಸಿ ಗಾಯಗೊಂಡಿದ್ದ ಮಹಿಳೆಯನ್ನು ತರಾತುರಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ದರು. ವೈದ್ಯರು ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸುವಂತೆ ಸೂಚಿಸಿದ್ದಾರೆ. ಇದೀಗ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಆರೋಪಿ ದೀಪಕ್​ ಮಾನಸಿಕ ಖಿನ್ನತೆಗೊಳಗಾಗಿದ್ದು, ಆತನಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಆತನನ್ನು ಪೊಲೀಸರು ವಶಕ್ಕೆ ಪಡೆದು ಆತ ನಿಜವಾಗಿಯೂ ಮಾನಸಿಕ ರೋಗಿನಾ? ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಸುಲ್ತಾನ್​ಪುರ: ನಿದ್ರಿಸುತ್ತಿದ್ದ ಅತ್ತಿಗೆಯ ಗುಪ್ತಾಂಗಕ್ಕೆ ಮೈದುನನೊಬ್ಬ ಚಾಕುವಿನಿಂದ ಚುಚ್ಚಿ ಹಲ್ಲೆಗೊಳಿಸಿರುವ ಘಟನೆ ಬಲ್ದಿರಿಯಾ ಪೊಲೀಸ್​ ಠಾಣಾ ವ್ಯಾಪ್ತಿಯ ಡಿ ಗ್ರಾಮದಲ್ಲಿ ನಡೆದಿದೆ.

ಘಟನೆಯ ವಿವರ:

ಮಂಗಳವಾರ ಮನೋಜ್​ ಕುಮಾರ್​ ಎಂಬಾತನ ಪತ್ನಿ ಮನೆಯಲ್ಲಿ ನಿದ್ರಿಸುತ್ತಿದ್ದಳು. ಈ ವೇಳೆ ಕಿರಿಯ ಸಹೋದರ ದೀಪಕ್​ ತನ್ನ ಅತ್ತಿಗೆಯ ದೇಹದ ಖಾಸಗಿ ಭಾಗಕ್ಕೆ ತರಕಾರಿ ಕತ್ತರಿಸುವ ಚಾಕುವಿನಿಂದ ಇರಿದಿದ್ದಾನೆ. ಆತನ ವಿಕೃತಿಗೆ ಸದ್ಯ ಕಾರಣ ತಿಳಿದುಬಂದಿಲ್ಲ.

ಗಂಭೀರವಾಗಿ ಗಾಯಗೊಂಡ ಮಹಿಳೆ ಕೂಗಾಡಿದ್ದಾಳೆ. ಈ ವೇಳೆ ಸ್ಥಳಕ್ಕೆ ಕುಟುಂಬಸ್ಥರು ದೌಡಾಯಿಸಿ ಗಾಯಗೊಂಡಿದ್ದ ಮಹಿಳೆಯನ್ನು ತರಾತುರಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ದರು. ವೈದ್ಯರು ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸುವಂತೆ ಸೂಚಿಸಿದ್ದಾರೆ. ಇದೀಗ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಆರೋಪಿ ದೀಪಕ್​ ಮಾನಸಿಕ ಖಿನ್ನತೆಗೊಳಗಾಗಿದ್ದು, ಆತನಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಆತನನ್ನು ಪೊಲೀಸರು ವಶಕ್ಕೆ ಪಡೆದು ಆತ ನಿಜವಾಗಿಯೂ ಮಾನಸಿಕ ರೋಗಿನಾ? ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.