ETV Bharat / bharat

ಭರತನಾಟ್ಯ ಮಾಡುತ್ತಲೇ ಇಹಲೋಕ ತ್ಯಜಿಸಿದ ಕಲಾವಿದ - Bharatanatyam artist died from Heart attack while performing

ವೇದಿಕೆಯ ಮೇಲೆ ನೃತ್ಯ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಭರತನಾಟ್ಯ ಕಲಾವಿದರೊಬ್ಬರು ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

bharatanatyam
ಭರತನಾಟ್ಯ
author img

By

Published : Mar 25, 2022, 7:06 PM IST

Updated : Mar 25, 2022, 10:09 PM IST

ಮಧುರೈ: ವೇದಿಕೆಯ ಮೇಲೆ ಭರತನಾಟ್ಯ ಮಾಡುತ್ತಲೇ ಕಲಾವಿದನೊಬ್ಬ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಕಾಳಿದಾಸ್​(50) ಮೃತಪಟ್ಟ ಕಲಾವಿದರು. ಮಧುರೈನ ದೇವಸ್ಥಾನವೊಂದರಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಾಳಿದಾಸ್​ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಕಾರ್ಯಕ್ರಮದ ಅರ್ಧದಲ್ಲಿ ಸುಸ್ತಾಗಿ ನೃತ್ಯ ಮಾಡುವುದನ್ನು ನಿಲ್ಲಿಸಿ ವೇದಿಕೆಯ ಪಕ್ಕಕ್ಕೆ ಸರಿದಿದ್ದಾರೆ.

ಭರತನಾಟ್ಯ ಮಾಡುತ್ತಲೇ ಇಹಲೋಕ ತ್ಯಜಿಸಿದ ಕಲಾವಿದ

ಈ ವೇಳೆ ಅವರು ಹೃದಯಾಘಾತದ ಮುನ್ಸೂಚನೆ ಪಡೆದಿದ್ದಾರೆ. ಬಳಿಕ ಅಲ್ಲಿಯೇ ಇದ್ದವರಲ್ಲಿ ನೀರು ಕೇಳಿ ಪಡೆದು ಕುಡಿದಿದ್ದಾರೆ. ಬಳಿಕ ವೇದಿಕೆ ಮುಂಭಾಗ ಕುಳಿತುಕೊಂಡಿದ್ದಾರೆ. ಸಂಗೀತ, ನೃತ್ಯದಿಂದ ಮೈಮರೆತಿದ್ದ ಜನರು ಕಾಳಿದಾಸ್​ ಕುಳಿತಿರುವುದನ್ನು ಗಮನಿಸಿಲ್ಲ.

ಹಾಡು ಮುಗಿದ ಬಳಿಕ ಕಲಾವಿದನ ಮಗಳೇ ಹೋಗಿ ಅವರನ್ನು ಅಪ್ಪಾ.. ಅಪ್ಪಾ ಎಂದು ಎಬ್ಬಿಸಲು ಯತ್ನಿಸಿದಾಗ ಅವರು ಮೃತಪಟ್ಟಿದ್ದು ಗೊತ್ತಾಗಿದೆ. ಇದರಿಂದ ಸಂಭ್ರಮದ ಕಾರ್ಯಕ್ರಮದಲ್ಲಿ ನಡೆದ ವಿಲಕ್ಷಣ ಘಟನೆಯು ಅಲ್ಲಿನ ಜನರನ್ನು ದಿಗ್ಭ್ರಾಂತರನ್ನಾಗಿಸಿದೆ. ತಕ್ಷಣವೇ ಆಂಬ್ಯುಲೆನ್ಸ್​ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಇಹಲೋಕ ತ್ಯಜಿಸಿದ್ದರು. ಕಾಳಿದಾಸ್​ ಅವರ ಇಬ್ಬರು ಮಕ್ಕಳೂ ಭರತನಾಟ್ಯದಲ್ಲಿ ತೊಡಗಿಸಿಕೊಂಡಿದ್ದರೆ, ಪತ್ನಿ ಸಂಗೀತ ಶಿಕ್ಷಕಿಯಾಗಿದ್ದಾರೆ.

ಇದನ್ನೂ ಓದಿ: ಉ.ಪ್ರದೇಶ: ಪ್ರತಿಭಟನೆ ಬಳಿಕ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ

ಮಧುರೈ: ವೇದಿಕೆಯ ಮೇಲೆ ಭರತನಾಟ್ಯ ಮಾಡುತ್ತಲೇ ಕಲಾವಿದನೊಬ್ಬ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಕಾಳಿದಾಸ್​(50) ಮೃತಪಟ್ಟ ಕಲಾವಿದರು. ಮಧುರೈನ ದೇವಸ್ಥಾನವೊಂದರಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಾಳಿದಾಸ್​ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಕಾರ್ಯಕ್ರಮದ ಅರ್ಧದಲ್ಲಿ ಸುಸ್ತಾಗಿ ನೃತ್ಯ ಮಾಡುವುದನ್ನು ನಿಲ್ಲಿಸಿ ವೇದಿಕೆಯ ಪಕ್ಕಕ್ಕೆ ಸರಿದಿದ್ದಾರೆ.

ಭರತನಾಟ್ಯ ಮಾಡುತ್ತಲೇ ಇಹಲೋಕ ತ್ಯಜಿಸಿದ ಕಲಾವಿದ

ಈ ವೇಳೆ ಅವರು ಹೃದಯಾಘಾತದ ಮುನ್ಸೂಚನೆ ಪಡೆದಿದ್ದಾರೆ. ಬಳಿಕ ಅಲ್ಲಿಯೇ ಇದ್ದವರಲ್ಲಿ ನೀರು ಕೇಳಿ ಪಡೆದು ಕುಡಿದಿದ್ದಾರೆ. ಬಳಿಕ ವೇದಿಕೆ ಮುಂಭಾಗ ಕುಳಿತುಕೊಂಡಿದ್ದಾರೆ. ಸಂಗೀತ, ನೃತ್ಯದಿಂದ ಮೈಮರೆತಿದ್ದ ಜನರು ಕಾಳಿದಾಸ್​ ಕುಳಿತಿರುವುದನ್ನು ಗಮನಿಸಿಲ್ಲ.

ಹಾಡು ಮುಗಿದ ಬಳಿಕ ಕಲಾವಿದನ ಮಗಳೇ ಹೋಗಿ ಅವರನ್ನು ಅಪ್ಪಾ.. ಅಪ್ಪಾ ಎಂದು ಎಬ್ಬಿಸಲು ಯತ್ನಿಸಿದಾಗ ಅವರು ಮೃತಪಟ್ಟಿದ್ದು ಗೊತ್ತಾಗಿದೆ. ಇದರಿಂದ ಸಂಭ್ರಮದ ಕಾರ್ಯಕ್ರಮದಲ್ಲಿ ನಡೆದ ವಿಲಕ್ಷಣ ಘಟನೆಯು ಅಲ್ಲಿನ ಜನರನ್ನು ದಿಗ್ಭ್ರಾಂತರನ್ನಾಗಿಸಿದೆ. ತಕ್ಷಣವೇ ಆಂಬ್ಯುಲೆನ್ಸ್​ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಇಹಲೋಕ ತ್ಯಜಿಸಿದ್ದರು. ಕಾಳಿದಾಸ್​ ಅವರ ಇಬ್ಬರು ಮಕ್ಕಳೂ ಭರತನಾಟ್ಯದಲ್ಲಿ ತೊಡಗಿಸಿಕೊಂಡಿದ್ದರೆ, ಪತ್ನಿ ಸಂಗೀತ ಶಿಕ್ಷಕಿಯಾಗಿದ್ದಾರೆ.

ಇದನ್ನೂ ಓದಿ: ಉ.ಪ್ರದೇಶ: ಪ್ರತಿಭಟನೆ ಬಳಿಕ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ

Last Updated : Mar 25, 2022, 10:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.