ETV Bharat / bharat

ಉತ್ತರಪ್ರದೇಶ ಪೊಲೀಸರಿಂದ ವಿಕಾಸ್ ದುಬೆಯ ಇಬ್ಬರು ಸಹಚರರ ಬಂಧನ

author img

By

Published : Jul 20, 2020, 1:03 PM IST

ಜುಲೈ 1 ರಂದು ಜೈ ಬಾಜಪೇಯಿ ಬಿಕ್ರು ಗ್ರಾಮಕ್ಕೆ ಆಗಮಿಸಿ ದುಬೆಗೆ 2 ಲಕ್ಷ ರೂ. ನೀಡಿದ್ದ. ಅಲ್ಲದೇ ಈತ ದುಬೆಗೆ ಶಸ್ತ್ರಾಸ್ತ್ರ ಮತ್ತು ಐಶಾರಾಮಿ ವಾಹನಗಳನ್ನು ಒದಗಿಸಿದ ಆರೋಪವೂ ಇದೆ.

Uttar Pradesh police arrest two associates of Vikas Dubey
ವಿಕಾಸ್ ದುಬೆಯ ಇಬ್ಬರು ಸಹಚರರ ಬಂಧನ

ಕಾನ್ಪುರ : ಇತ್ತೀಚೆಗೆ ಪೊಲೀಸ್​ ಎನ್​ಕೌಂಟರ್​ಗೆ ಬಲಿಯಾಗಿರುವ ದರೋಡೆಕೋರ ವಿಕಾಸ್​ ದುಬೆಯ ಖಜಾಂಚಿ ಜೈ ಬಾಜಪೇಯಿ ಮತ್ತು ಆತನ ಸಹವರ್ತಿ ಪ್ರಶಾಂತ್​ ಶುಕ್ಲಾ ಅಲಿಯಾಸ್​ ಡಬ್ಬು ಎಂಬಾತನನ್ನು ಬಿಕ್ರು ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಜುಲೈ 1 ರಂದು ಜೈ ಬಾಜಪೇಯಿ ಬಿಕ್ರು ಗ್ರಾಮಕ್ಕೆ ಆಗಮಿಸಿ ದುಬೆಗೆ 2 ಲಕ್ಷ ರೂ. ನೀಡಿದ್ದ. ಇದರ ಜೊತೆಗೆ ಈತನ ಮೇಲೆ ದುಬೆಗೆ ಶಸ್ತ್ರಾಸ್ತ್ರ ಮತ್ತು ಐಶಾರಾಮಿ ವಾಹನಗಳನ್ನು ಒದಗಿಸಿದ ಆರೋಪವೂ ಇದೆ. ಒಂದು ಮಾಹಿತಿಯ ಪ್ರಕಾರ, ಕಾನ್ಪುರದಲ್ಲಿ ನಡೆದ ಪೊಲೀಸರ ಹತ್ಯೆಯ ಮೊದಲು​ ಅಂದರೆ ಜುಲೈ 2 ರಂದು ಜೈ ಬಾಜಪೇಯಿ ಮತ್ತು ಪ್ರಶಾಂತ್ ಶುಕ್ಲಾ ವಿಕಾಸ್ ದುಬೆಯನ್ನು ಭೇಟಿಯಾಗಿದ್ದರು. ಈ ವೇಳೆ, ದುಬೆಗೆ 2 ಲಕ್ಷ ರೂ ದುಡ್ಡು, 25 ಲೈವ್ ಕಾರ್ಟ್ರಿಜ್ ರಿವಾಲ್ವರ್ ನೀಡಿದ್ದರು.

ಪೊಲೀಸರ ಹತ್ಯೆಯ ಬಳಿಕ ಜುಲೈ 4 ರಂದು ವಿಕಾಸ್ ದುಬೆ ಮತ್ತು ಆತನ ಸಹಚರರು ತಪ್ಪಿಸಿಕೊಳ್ಳಲು ಜೈ ಬಾಜಪೇಯಿ ಸಹಾಯ ಮಾಡಿದ್ದ. ಇದಕ್ಕಾಗಿ ಅವರಿಗೆ ಮೂರು ಐಶಾರಾಮಿ ವಾಹನಗಳನ್ನು ಕಳುಹಿಸಿಕೊಟ್ಟಿದ್ದ. ಈ ವಾಹನಗಳಲ್ಲಿ ತಪ್ಪಿಸಿಕೊಂಡಿದ್ದ ದುಬೆ ಮತ್ತು ಆತನ ಸಹಚರರು ಕಾಕದೇವ್ ಪೊಲೀಸ್ ಠಾಣೆ ಪ್ರದೇಶದಲ್ಲಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದರು.

ಸುಮಾರು 60 ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ವಿಕಾಸ್​ ದುಬೆಯನ್ನು ಬಂಧಿಸಲು ಜುಲೈ 3 ರಂದು ಕಾನ್ಪುರದ ಬಿಕ್ರು ಗ್ರಾಮಕ್ಕೆ ತೆರಳಿದ್ದ ಡಿಎಸ್ಪಿ ದೇವೇಂದ್ರ ಮಿಶ್ರಾ ಸೇರಿದಂತೆ ಎಂಟು ಪೊಲೀಸರನ್ನು, ದುಬೆ ಮತ್ತು ಆತನ ಸಹಚರರು ಗುಂಡಿಕ್ಕಿ ಕೊಂದಿದ್ದರು.

ಕಾನ್ಪುರ : ಇತ್ತೀಚೆಗೆ ಪೊಲೀಸ್​ ಎನ್​ಕೌಂಟರ್​ಗೆ ಬಲಿಯಾಗಿರುವ ದರೋಡೆಕೋರ ವಿಕಾಸ್​ ದುಬೆಯ ಖಜಾಂಚಿ ಜೈ ಬಾಜಪೇಯಿ ಮತ್ತು ಆತನ ಸಹವರ್ತಿ ಪ್ರಶಾಂತ್​ ಶುಕ್ಲಾ ಅಲಿಯಾಸ್​ ಡಬ್ಬು ಎಂಬಾತನನ್ನು ಬಿಕ್ರು ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಜುಲೈ 1 ರಂದು ಜೈ ಬಾಜಪೇಯಿ ಬಿಕ್ರು ಗ್ರಾಮಕ್ಕೆ ಆಗಮಿಸಿ ದುಬೆಗೆ 2 ಲಕ್ಷ ರೂ. ನೀಡಿದ್ದ. ಇದರ ಜೊತೆಗೆ ಈತನ ಮೇಲೆ ದುಬೆಗೆ ಶಸ್ತ್ರಾಸ್ತ್ರ ಮತ್ತು ಐಶಾರಾಮಿ ವಾಹನಗಳನ್ನು ಒದಗಿಸಿದ ಆರೋಪವೂ ಇದೆ. ಒಂದು ಮಾಹಿತಿಯ ಪ್ರಕಾರ, ಕಾನ್ಪುರದಲ್ಲಿ ನಡೆದ ಪೊಲೀಸರ ಹತ್ಯೆಯ ಮೊದಲು​ ಅಂದರೆ ಜುಲೈ 2 ರಂದು ಜೈ ಬಾಜಪೇಯಿ ಮತ್ತು ಪ್ರಶಾಂತ್ ಶುಕ್ಲಾ ವಿಕಾಸ್ ದುಬೆಯನ್ನು ಭೇಟಿಯಾಗಿದ್ದರು. ಈ ವೇಳೆ, ದುಬೆಗೆ 2 ಲಕ್ಷ ರೂ ದುಡ್ಡು, 25 ಲೈವ್ ಕಾರ್ಟ್ರಿಜ್ ರಿವಾಲ್ವರ್ ನೀಡಿದ್ದರು.

ಪೊಲೀಸರ ಹತ್ಯೆಯ ಬಳಿಕ ಜುಲೈ 4 ರಂದು ವಿಕಾಸ್ ದುಬೆ ಮತ್ತು ಆತನ ಸಹಚರರು ತಪ್ಪಿಸಿಕೊಳ್ಳಲು ಜೈ ಬಾಜಪೇಯಿ ಸಹಾಯ ಮಾಡಿದ್ದ. ಇದಕ್ಕಾಗಿ ಅವರಿಗೆ ಮೂರು ಐಶಾರಾಮಿ ವಾಹನಗಳನ್ನು ಕಳುಹಿಸಿಕೊಟ್ಟಿದ್ದ. ಈ ವಾಹನಗಳಲ್ಲಿ ತಪ್ಪಿಸಿಕೊಂಡಿದ್ದ ದುಬೆ ಮತ್ತು ಆತನ ಸಹಚರರು ಕಾಕದೇವ್ ಪೊಲೀಸ್ ಠಾಣೆ ಪ್ರದೇಶದಲ್ಲಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದರು.

ಸುಮಾರು 60 ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ವಿಕಾಸ್​ ದುಬೆಯನ್ನು ಬಂಧಿಸಲು ಜುಲೈ 3 ರಂದು ಕಾನ್ಪುರದ ಬಿಕ್ರು ಗ್ರಾಮಕ್ಕೆ ತೆರಳಿದ್ದ ಡಿಎಸ್ಪಿ ದೇವೇಂದ್ರ ಮಿಶ್ರಾ ಸೇರಿದಂತೆ ಎಂಟು ಪೊಲೀಸರನ್ನು, ದುಬೆ ಮತ್ತು ಆತನ ಸಹಚರರು ಗುಂಡಿಕ್ಕಿ ಕೊಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.