ETV Bharat / bharat

ಪ್ರವಾಹ, ಭೂ ಕುಸಿತಕ್ಕೆ 157 ಬಲಿ... ನೆಲಕಚ್ಚಿದ ಬದುಕು, ಮುಳುಗಿದ ಕನಸುಗಳು

author img

By

Published : Aug 11, 2019, 11:19 PM IST

ಕೇರಳದಲ್ಲಿ ಪ್ರವಾಹಕ್ಕೆ 2.27 ಲಕ್ಷ ಜನರು ತತ್ತರಿಸಿದ್ದು, 1,551 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎರಡು ದಿನಗಳ ಬಳಿಕ ಭಾನುವಾರ ಮಧ್ಯಾಹ್ನದಿಂದ ಕಾರ್ಯಾಚರಣೆ ಆರಂಭ ಮಾಡಿದೆ. ಕಣ್ಣೂರು, ಕಾಸರಗೂಡು ಮತ್ತು ವಯನಾಡ್​ನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್​ನಲ್ಲಿನ ಮಹಾಮಳೆಯಿಂದ ಪ್ರವಾಹ ಉಂಟಾಗಿದೆ. ಕಳೆದ ಒಂದು ವಾರದಲ್ಲಿ ದೇಶಾದ್ಯಂತ ನಡೆದ ಮಳೆ ಸಂಬಂಧಿ ಅವಘಡಗಳಿಂದ ಇದುವರೆಗೂ 157 ಜನರು ಮೃತಪಟ್ಟಿದ್ದಾರೆ.

ಪ್ರವಾಹ ಮತ್ತು ಭೂ ಕುಸಿತದಿಂದ ಕೇರಳದಲ್ಲಿ ಅತ್ಯಧಿಕ 60 ಜನ ಸಾವನ್ನಪ್ಪಿದ್ದರೆ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್​ನಲ್ಲಿ ಒಟ್ಟು 97 ಜನ ಬಲಿಯಾಗಿದ್ದಾರೆ.

ತುಂಗಾಭದ್ರ ಜಲಾಶಯದಿಂದ ಭಾನುವಾರ 1.70 ಕ್ಯೂಸೆಕ್​​​ ನೀರು ಹರಿಬಿಟ್ಟಿದ್ದರಿಂದ ಯುನೆಸ್ಕೋ ಪಟ್ಟಿಯಲ್ಲಿರುವ ಹಂಪಿಯಲ್ಲಿ ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿದ್ದರು. ಎನ್​ಡಿಆರ್​ಎಫ್​ ತಂಡದಿಂದ ಪ್ರವಾಸಿಗರನ್ನು ರಕ್ಷಿಸಲಾಗಿದೆ.

ಕೇರಳದಲ್ಲಿ ಪ್ರವಾಹಕ್ಕೆ 2.27 ಲಕ್ಷ ಜನರು ತತ್ತರಿಸಿದ್ದು, 1,551 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎರಡು ದಿನಗಳ ಬಳಿಕ ಭಾನುವಾರ ಮಧ್ಯಾಹ್ನದಿಂದ ಕಾರ್ಯಾಚರಣೆ ಆರಂಭ ಮಾಡಿದೆ. ಕಣ್ಣೂರು, ಕಾಸರಗೂಡು ಮತ್ತು ವಯನಾಡ್​ನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭೂಸೇನೆ, ವಾಯುಪಡೆ, ಕರಾವಳಿ ಪಡೆ, ಎಡಿಆರ್​ಎಫ್​, ಪೊಲೀಸ್ ಪಡೆ, ಸ್ವಯಂ ಸೇವಕರು ಮತ್ತು ಮೀನುಗಾರರರು ಪ್ರವಾಹಕ್ಕೆ ಸಿಲುಕಿರುವ ಜನರ ರಕ್ಷಣೆಯಲ್ಲಿ ನಿರತರಾಗಿದ್ದಾರೆ. ​

ನವದೆಹಲಿ: ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್​ನಲ್ಲಿನ ಮಹಾಮಳೆಯಿಂದ ಪ್ರವಾಹ ಉಂಟಾಗಿದೆ. ಕಳೆದ ಒಂದು ವಾರದಲ್ಲಿ ದೇಶಾದ್ಯಂತ ನಡೆದ ಮಳೆ ಸಂಬಂಧಿ ಅವಘಡಗಳಿಂದ ಇದುವರೆಗೂ 157 ಜನರು ಮೃತಪಟ್ಟಿದ್ದಾರೆ.

ಪ್ರವಾಹ ಮತ್ತು ಭೂ ಕುಸಿತದಿಂದ ಕೇರಳದಲ್ಲಿ ಅತ್ಯಧಿಕ 60 ಜನ ಸಾವನ್ನಪ್ಪಿದ್ದರೆ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್​ನಲ್ಲಿ ಒಟ್ಟು 97 ಜನ ಬಲಿಯಾಗಿದ್ದಾರೆ.

ತುಂಗಾಭದ್ರ ಜಲಾಶಯದಿಂದ ಭಾನುವಾರ 1.70 ಕ್ಯೂಸೆಕ್​​​ ನೀರು ಹರಿಬಿಟ್ಟಿದ್ದರಿಂದ ಯುನೆಸ್ಕೋ ಪಟ್ಟಿಯಲ್ಲಿರುವ ಹಂಪಿಯಲ್ಲಿ ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿದ್ದರು. ಎನ್​ಡಿಆರ್​ಎಫ್​ ತಂಡದಿಂದ ಪ್ರವಾಸಿಗರನ್ನು ರಕ್ಷಿಸಲಾಗಿದೆ.

ಕೇರಳದಲ್ಲಿ ಪ್ರವಾಹಕ್ಕೆ 2.27 ಲಕ್ಷ ಜನರು ತತ್ತರಿಸಿದ್ದು, 1,551 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎರಡು ದಿನಗಳ ಬಳಿಕ ಭಾನುವಾರ ಮಧ್ಯಾಹ್ನದಿಂದ ಕಾರ್ಯಾಚರಣೆ ಆರಂಭ ಮಾಡಿದೆ. ಕಣ್ಣೂರು, ಕಾಸರಗೂಡು ಮತ್ತು ವಯನಾಡ್​ನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭೂಸೇನೆ, ವಾಯುಪಡೆ, ಕರಾವಳಿ ಪಡೆ, ಎಡಿಆರ್​ಎಫ್​, ಪೊಲೀಸ್ ಪಡೆ, ಸ್ವಯಂ ಸೇವಕರು ಮತ್ತು ಮೀನುಗಾರರರು ಪ್ರವಾಹಕ್ಕೆ ಸಿಲುಕಿರುವ ಜನರ ರಕ್ಷಣೆಯಲ್ಲಿ ನಿರತರಾಗಿದ್ದಾರೆ. ​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.